LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ಜುಲೈ 1ರಿಂದ ‘LPG’ ಗ್ರಾಹಕರಿಗೆ ಹೊಸ ನಿಯಮ ; ಈ ಕೆಲಸ ಮಾಡದಿದ್ದರೆ ಗ್ಯಾಸ್ ಸಂಪರ್ಕ ರದ್ದಾಗಬಹುದು !

ಮನೆಯಲ್ಲೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಿಗೆ ಮಹತ್ವದ ಮಾಹಿತಿ. ಜುಲೈ 1ರಿಂದ ಎಲ್‌ಪಿಜಿ ಸಂಪರ್ಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಕೆಲ ಗ್ರಾಹಕರ ಗ್ಯಾಸ್ ಸಂಪರ್ಕ ರದ್ದಾಗುವ ಸಾಧ್ಯತೆಯಿದ್ದು, ಇ-ಕೆವೈಸಿ ಪೂರ್ಣಗೊಳಿಸದವರು ಹಾಗೂ ಪಿಎನ್‌ಜಿ (ಪೈಪ್ ನ್ಯಾಚುರಲ್ ಗ್ಯಾಸ್) ಸೌಲಭ್ಯ ಇರುವ ಪ್ರದೇಶದ ಗ್ರಾಹಕರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕಿದೆ.

ಪಿಎನ್‌ಜಿ ಇದ್ದರೆ 30 ದಿನಗಳಲ್ಲಿ ಎಲ್‌ಪಿಜಿ ಸಂಪರ್ಕ ರದ್ದು?

ಹೊಸ ನಿಯಮದ ಪ್ರಕಾರ, ಈಗಾಗಲೇ ಮನೆಯಲ್ಲಿ ಪಿಎನ್‌ಜಿ ಸಂಪರ್ಕ ಹೊಂದಿದ್ದು, ಜೊತೆಗೆ ಇಂಡೇನ್, ಭಾರತ್ ಗ್ಯಾಸ್ ಅಥವಾ ಎಚ್‌ಪಿ ಗ್ಯಾಸ್ ಎಲ್‌ಪಿಜಿ ಸಂಪರ್ಕವನ್ನೂ ಬಳಸುತ್ತಿರುವವರಲ್ಲಿ ಒಂದು ಸಂಪರ್ಕ ಮಾತ್ರ ಮುಂದುವರಿಸಲು ಅವಕಾಶ ನೀಡಲಾಗುತ್ತದೆ ಎಂದು ವರದಿಗಳು ಹೇಳುತ್ತಿವೆ. ಸ್ವಯಂಪ್ರೇರಿತವಾಗಿ ಎಲ್‌ಪಿಜಿ ಸಂಪರ್ಕವನ್ನು ಹಿಂತಿರುಗಿಸಿದವರಿಗೆ ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಮತ್ತೆ ಸಂಪರ್ಕ ಪಡೆಯಲು ಕೂಪನ್ ನೀಡಲಾಗುತ್ತದೆ ಎನ್ನಲಾಗಿದೆ.

3 ತಿಂಗಳ ಗಡುವು ಅಂತ್ಯ

ಪಿಎನ್‌ಜಿ ಸೌಲಭ್ಯ ಲಭ್ಯವಿರುವ ಪ್ರದೇಶಗಳ ಎಲ್‌ಪಿಜಿ ಗ್ರಾಹಕರು ಮೂರು ತಿಂಗಳೊಳಗೆ ಪಿಎನ್‌ಜಿಗೆ ಬದಲಾಗಬೇಕು ಎಂದು ಸರ್ಕಾರ ಈ ವರ್ಷದ ಮಾರ್ಚ್‌ನಲ್ಲಿ ಸೂಚಿಸಿತ್ತು. ಈ ಗಡುವು ಜೂನ್ ಅಂತ್ಯದೊಂದಿಗೆ ಮುಕ್ತಾಯವಾಗುತ್ತಿರುವುದರಿಂದ, ಇನ್ನೂ ಬದಲಾವಣೆ ಮಾಡದವರು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಇ-ಕೆವೈಸಿ ಕಡ್ಡಾಯ

ಎಲ್ಲ ಎಲ್‌ಪಿಜಿ ಗ್ರಾಹಕರಿಗೂ ಇ-ಕೆವೈಸಿ ಕಡ್ಡಾಯವಾಗಿದೆ. ಜೂನ್ 30ರೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಜುಲೈ 1ರಿಂದ ಗ್ಯಾಸ್ ಸೇವೆ ಸ್ಥಗಿತವಾಗುವ ಅಥವಾ ಸಿಲಿಂಡರ್ ಬುಕ್ ಮಾಡಲು ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿರುವವರು ಮತ್ತೆ ಮಾಡುವ ಅಗತ್ಯವಿಲ್ಲ.

ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ ಸಾಧ್ಯತೆ

ಪ್ರಸ್ತುತ ನಗರ ಪ್ರದೇಶಗಳಲ್ಲಿ ಒಂದು ಸಿಲಿಂಡರ್ ಬುಕ್ ಮಾಡಿದ ಬಳಿಕ ಮತ್ತೊಂದು ಬುಕ್ ಮಾಡಲು 25 ದಿನ, ಗ್ರಾಮೀಣ ಪ್ರದೇಶಗಳಲ್ಲಿ 45 ದಿನ ಕಾಯಬೇಕಿದೆ. ಈ ಅವಧಿಯನ್ನು ಕಡಿಮೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂಬ ವರದಿಗಳು ಹರಿದಾಡಿವೆ. ಇದು ಜಾರಿಯಾದರೆ ಸಾಮಾನ್ಯ ಗ್ರಾಹಕರಿಗೆ ಅನುಕೂಲವಾಗಲಿದೆ.

ಸೂಚನೆ: ಮೇಲಿನ ಮಾಹಿತಿ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿದೆ. ಜುಲೈ 1ರಿಂದ ಜಾರಿಯಾಗುವ ನಿಯಮಗಳ ಕುರಿತು ಅಧಿಕೃತ ಅಧಿಸೂಚನೆಗಾಗಿ ಸಂಬಂಧಿತ ತೈಲ ಮಾರಾಟ ಕಂಪನಿಗಳು ಅಥವಾ ಕೇಂದ್ರ ಸರ್ಕಾರದ ಪ್ರಕಟಣೆಗಳನ್ನು ಪರಿಶೀಲಿಸುವುದು ಸೂಕ್ತ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜೆಡಿಎಸ್ ದೂರುನಾಳೆಯಿಂದ ರಾಜ್ಯದಲ್ಲಿ ಎಸ್ಐಆರ್: ಮತ ಹಕ್ಕು ಕಳೆದುಕೊಂಡ್ರೆ ಸಿಗಲ್ಲ ಸೌಲಭ್ಯವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು; ವೈರಲ್ ಆಡಿಯೊ ಬಗ್ಗೆ ಸದಾನಂದಗೌಡ ಮೊದಲ ಪ್ರತಿಕ್ರಿಯೆಇಂಧನ ಇಲಾಖೆ ಬಲಿಷ್ಠವಾಗಿದೆ, ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ: ಕೆಜೆ ಜಾರ್ಜ್BREAKING: ಜರ್ಮನಿಯಲ್ಲಿ ಸಾಮೂಹಿಕ ಗುಂಡಿನ ದಾಳಿ: ಕನಿಷ್ಠ 5 ಜನ ಸಾವು: ಇಬ್ಬರು ಶಂಕಿತರು ಅರೆಸ್ಟ್ಸ್ವರ್ಗವೇನೂ ಬಿದ್ದುಹೋಗಲ್ಲ ಸುಮ್ಮನಿರಿ; ರಾಮಮಂದಿರ ಅವ್ಯವಹಾರ ಅರ್ಜಿ ವಿಚಾರಣೆ ಬೇಗ ಮಾಡಿ ಎಂದವರಿಗೆ ಚಾಟಿ ಬೀಸಿದ ಸುಪ್ರೀಂಹೋಟೆಲ್ ನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಖ್ಯಾತ ನಟಿ ಸೇರಿ ಇಬ್ಬರು ನಟಿಯರ ರಕ್ಷಣೆನಾಳೆಯಿಂದ ಮನೆ ಮನೆಗೆ BLO ಗಳು ಭೇಟಿ: SIR ಬಗ್ಗೆ ಮಾಹಿತಿ ನೀಡಿದ ರಾಜ್ಯ ಚುನಾವಣಾಧಿಕಾರಿ ಅನ್ಬುಕುಮಾರ್ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ಷಡ್ಯಂತ್ರ: ರೇಣುಕಾಚಾರ್ಯ ಗುಡುಗುಶರಾವತಿ ಪಂಪ್ಡ್ ಸ್ಟೋರೇಜ್‌, ಕಳಸಾ ಬಂಡೂರಿ ಯೋಜನೆ ಅರಣ್ಯ ಅನುಮತಿ ಪ್ರಕ್ರಿಯೆ ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲು ಸೂಚನೆ