LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ಅವಘಡ: 137 ವರ್ಷದಷ್ಟು ಹಳೆಯ ಗಡಿಯಾರ ಗೋಪುರ ಕುಸಿತ

ತಿರುವನಂತಪುರಂ: ಭಾರಿ ಮಳೆಯಿಂದಾಗಿ ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ಅವಘಡವೊಂದು ಸಂಭವಿಸಿದೆ. ನವೀಕರಣ ಕಾರ್ಯ ನಡೆಯುತ್ತಿರುವಾಗ 137 ವರ್ಷಗಳಷ್ಟು ಹಳೆಯದಾದ ಗಡಿಯಾರ ಗೋಪುರ ಕುಸಿದು ಬಿದ್ದಿದ್ದು, ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.

ಕೋಝಿಕ್ಕೋಡ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿರುವ 137 ವರ್ಷದ ಹಳೆಯ ಗಡಿಯಾರ ಗೋಪುರ ಕುಸಿದಿದೆ. ಪರಿಣಾಮ ಹಲವು ರೈಲು ಸೇವೆಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

ಹಳೆಯ ರಚನೆಯು, ನಿಲ್ದಾಣದ ನವೀಕರಣ ಯೋಜನೆಯ ಭಾಗವಾಗಿ ಪುನರಾಭಿವೃದ್ಧಿ ಕಾರ್ಯ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಹತ್ತಿರದ ರೈಲ್ವೆ ಹಳಿಗೆ ಅಪ್ಪಳಿಸಿದೆ. ಐಕಾನಿಕ್ ಗಡಿಯಾರ ಗೋಪುರವು ಕುಸಿದು ಬೀಳುವ ಮೊದಲು ಎರಡು ಹೋಳಾಗಿದೆ. ಅವಶೇಷಗಳು ಮೂರನೇ ರೈಲ್ವೆ ಮಾರ್ಗ ಮತ್ತು ಪ್ಲಾಟ್‌ಫಾರ್ಮ್‌ನ ಕೆಲವು ಭಾಗಗಳ ಮೇಲೆ ಬಿದ್ದಿವೆ.

ಘಟನೆಯ ಸಮಯದಲ್ಲಿ ಮೂರನೇ ಹಳಿಯಲ್ಲಿ ರೈಲು ನಿಂತಿತ್ತು. ಅದೃಷ್ಟವಶಾತ್‌ ಕುಸಿದ ರಚನೆಯ ಕೆಲವು ಭಾಗಗಳು ನೇರವಾಗಿ ಬೋಗಿಗಳ ಮೇಲೆ ಬಿದ್ದಿಲ್ಲ. ಬದಲಾಗಿ ಪಕ್ಕದಲ್ಲಿ ಬಿದ್ದಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸುತ್ತಮುತ್ತ ಯಾವುದೇ ಪ್ರಯಾಣಿಕರು ಇಲ್ಲದ ಸಮಯದಲ್ಲಿ ಈ ಘಟನೆ ಸಂಭವಿಸಿರುವುದರಿಂದ ಭಾರಿ ಅನಾಹುತ ತಪ್ಪಿದೆ ಎಂದಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ರೈಲು ಮಾರ್ಗದ ಓವರ್ ಹೆಡ್ ವಿದ್ಯುತ್ ತಂತಿಯನ್ನೇ ಕದ್ದ ಕಳ್ಳರು: ರೈಲುಗಳ ಸಂಚಾರಕ್ಕೆ ಅಡ್ಡಿBREAKING: ಚೀನಾ ಶೂ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ: 28 ಮಂದಿ ಸಾವು | VIDEOಕೆರೆಗಳ ತುಂಬಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ನಿರ್ಧಾರಗ್ಯಾರಂಟಿ ಯೋಜನೆಗಳು ನಿಲ್ಲಲ್ಲ, ಪರಿಷ್ಕರಣೆ ಮಾಡಲಿದ್ದೇವೆ: ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆಮನೆಯಲ್ಲಿ ಒಪ್ಪಲ್ಲ ಎಂದು ಪ್ರೀತಿ ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದು ಆತ್ಮಹತ್ಯೆ ಯತ್ನಮದುವೆ ನೆಪದಲ್ಲಿ ಗರ್ಭಿಣಿಯಾಗಿಸಿ ವಂಚನೆ: ದೂರು ದಾಖಲಾಗುತ್ತಿದ್ದಂತೆ ಪರಾರಿBREAKING: ಮಮತಾ ಬ್ಯಾನರ್ಜಿಗೆ ಮತ್ತೆ ಬಿಗ್ ಶಾಕ್: ಬಿಜೆಪಿ ಸೇರಿದ ಟಿಎಂಸಿಯ ಮೂವರು ಮಾಜಿ ಸಂಸದರುಹಿರಿಯೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ: HDK ಸ್ಪಷ್ಟನೆಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸೌಲಭ್ಯ ಕೊಡಿಸುವ ಆಮಿಷ: ದೂರು ನೀಡಿBIG NEWS: ಬರ ನಿರ್ವಹಣೆ, ಕುಡಿಯುವ ನೀರು ಪೂರೈಕೆ , ರೈತರ ರಕ್ಷಣೆ ಬಗ್ಗೆ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ ಸಿಎಂ ಡಿ.ಕೆ.ಶಿವಕುಮಾರ್