ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು 24×7 ಇರಬೇಕು. ರೋಗಿಯನ್ನು ಸಾವಿನಿಂದ ರಕ್ಷಿಸಬಲ್ಲ ಜೀವರಕ್ಷಕ ಔಷಧಗಳು ಕಡ್ಡಾಯವಾಗಿ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.
ನಮಗೆ ಬೇಕಾದ ಊಟ, ತಿಂಡಿ, ವಸ್ತುಗಳು ಆನ್ಲೈನ್ ಮೂಲಕ 10 ನಿಮಿಷಗಳಲ್ಲಿ ಸಿಗುತ್ತದೆ, ಆದರೆ ವಿಪರ್ಯಾಸ ಏನೆಂದರೆ ಹಾರ್ಟ್ ಅಟ್ಯಾಕ್ ಅಥವಾ ಆರೋಗ್ಯದಲ್ಲಿ ಏರು ಪೇರಾದಾಗ, ಹಾವು ಕಚ್ಚಿದ ಸಂದರ್ಭದಲ್ಲಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಹೋಗುವ ವೇಳೆಗೆ ರೋಗಿಯನ್ನು ರಕ್ಷಿಸಬಹುದಾದ Golden Hour ಮೀರಿ ಹೋಗುವ ಮೂಲಕ ಸಾವುಗಳು ಸಂಭವಿಸುತ್ತಿವೆ ಎಂದು ಹೇಳಿದ್ದಾರೆ.
ಅದರಲ್ಲೂ, ಆರೋಗ್ಯವಾಗಿರುವ, ಯುವಕ -ಯುವತಿಯರೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಬಾಹ್ಯಾಕಾಶಕ್ಕೆ ಹೋಗುವಷ್ಟು ತಂತ್ರಜ್ಞಾನ ಮುಂದುವರೆದಿರುವಾಗ ಆರೋಗ್ಯದಲ್ಲಿ ಏರು ಪೇರಾದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಇಲ್ಲ, ಸಿಬ್ಬಂದಿ ಇಲ್ಲ, ವೈದ್ಯರಿಲ್ಲ ಎಂದು ಹೇಳುವುದು ಸಮಾಜಕ್ಕೆ ಮಾಡಿದ ಅವಮಾನ ಹಾಗೂ ನಾವು ಎಷ್ಟು ಅಮಾನವೀಯರಾಗಿದ್ದೇವೆಂದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಎಲ್ಲ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ [PHC] ವೈದ್ಯರು 24×7 ಇರಬೇಕು. ರೋಗಿಯನ್ನು ಸಾವಿನಿಂದ ರಕ್ಷಿಸಬಲ್ಲAnti Snake Venom ಸೇರಿದಂತೆ ಜೀವರಕ್ಷಕ ಔಷಧಗಳು ಕಡ್ಡಾಯವಾಗಿ stock ನಲ್ಲಿರಬೇಕು. ರೋಗಿಯ ಜೀವ ರಕ್ಷಿಸುವುದು ಆಸ್ಪತ್ರೆಗಳ ಪ್ರಾಥಮಿಕ ಕರ್ತವ್ಯ ಎಂಬುದನ್ನು ಮರೆಯಬಾರದು. 10 ನಿಮಿಷದಲ್ಲಿ ನಿಮ್ಮ ಮನೆಗೆ ನಿಮಗೆ ಬೇಕಾದ ತಿಂಡಿ ತಲುಪಬಹುದಾದರೆ, ಅದೇ ಸಮಯದಲ್ಲಿ ರೋಗಿಯನ್ನು ಖಂಡಿತ ರಕ್ಷಿಸಬಹುದು. ಇದಕ್ಕೆ ತಕ್ಕಂತೆ ಸರ್ಕಾರ SoP ಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.