LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಲ್ಲ ಆಸ್ಪತ್ರೆಗಳಲ್ಲಿ 24×7 ವೈದ್ಯರು, ಜೀವರಕ್ಷಕ ಔಷಧಗಳು ಕಡ್ಡಾಯ: SoP ರಚಿಸಲು ಯತ್ನಾಳ್ ಒತ್ತಾಯ

ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು 24×7 ಇರಬೇಕು. ರೋಗಿಯನ್ನು ಸಾವಿನಿಂದ ರಕ್ಷಿಸಬಲ್ಲ ಜೀವರಕ್ಷಕ ಔಷಧಗಳು ಕಡ್ಡಾಯವಾಗಿ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ನಮಗೆ ಬೇಕಾದ ಊಟ, ತಿಂಡಿ, ವಸ್ತುಗಳು ಆನ್ಲೈನ್ ಮೂಲಕ 10 ನಿಮಿಷಗಳಲ್ಲಿ ಸಿಗುತ್ತದೆ, ಆದರೆ ವಿಪರ್ಯಾಸ ಏನೆಂದರೆ ಹಾರ್ಟ್ ಅಟ್ಯಾಕ್ ಅಥವಾ ಆರೋಗ್ಯದಲ್ಲಿ ಏರು ಪೇರಾದಾಗ, ಹಾವು ಕಚ್ಚಿದ ಸಂದರ್ಭದಲ್ಲಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಹೋಗುವ ವೇಳೆಗೆ ರೋಗಿಯನ್ನು ರಕ್ಷಿಸಬಹುದಾದ Golden Hour ಮೀರಿ ಹೋಗುವ ಮೂಲಕ ಸಾವುಗಳು ಸಂಭವಿಸುತ್ತಿವೆ ಎಂದು ಹೇಳಿದ್ದಾರೆ.

ಅದರಲ್ಲೂ, ಆರೋಗ್ಯವಾಗಿರುವ, ಯುವಕ -ಯುವತಿಯರೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಬಾಹ್ಯಾಕಾಶಕ್ಕೆ ಹೋಗುವಷ್ಟು ತಂತ್ರಜ್ಞಾನ ಮುಂದುವರೆದಿರುವಾಗ ಆರೋಗ್ಯದಲ್ಲಿ ಏರು ಪೇರಾದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಇಲ್ಲ, ಸಿಬ್ಬಂದಿ ಇಲ್ಲ, ವೈದ್ಯರಿಲ್ಲ ಎಂದು ಹೇಳುವುದು ಸಮಾಜಕ್ಕೆ ಮಾಡಿದ ಅವಮಾನ ಹಾಗೂ ನಾವು ಎಷ್ಟು ಅಮಾನವೀಯರಾಗಿದ್ದೇವೆಂದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಎಲ್ಲ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ [PHC] ವೈದ್ಯರು 24×7 ಇರಬೇಕು. ರೋಗಿಯನ್ನು ಸಾವಿನಿಂದ ರಕ್ಷಿಸಬಲ್ಲAnti Snake Venom ಸೇರಿದಂತೆ ಜೀವರಕ್ಷಕ ಔಷಧಗಳು ಕಡ್ಡಾಯವಾಗಿ stock ನಲ್ಲಿರಬೇಕು. ರೋಗಿಯ ಜೀವ ರಕ್ಷಿಸುವುದು ಆಸ್ಪತ್ರೆಗಳ ಪ್ರಾಥಮಿಕ ಕರ್ತವ್ಯ ಎಂಬುದನ್ನು ಮರೆಯಬಾರದು. 10 ನಿಮಿಷದಲ್ಲಿ ನಿಮ್ಮ ಮನೆಗೆ ನಿಮಗೆ ಬೇಕಾದ ತಿಂಡಿ ತಲುಪಬಹುದಾದರೆ, ಅದೇ ಸಮಯದಲ್ಲಿ ರೋಗಿಯನ್ನು ಖಂಡಿತ ರಕ್ಷಿಸಬಹುದು. ಇದಕ್ಕೆ ತಕ್ಕಂತೆ ಸರ್ಕಾರ SoP ಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ನಿರ್ಗಮಿತ ಮುಖ್ಯಂತ್ರಿ ಪಿಣರಾಯಿ ವಿಜಯನ್ ಆಯ್ಕೆಟಾಪರ್ ಆಗಲೇಬೇಕಿಲ್ಲ…! ಪುತ್ರ ಶೇ. 55 ಅಂಕ ಪಡೆದರೂ ‘ಮಾರ್ಕ್ಸ್ ಕಾರ್ಡ್ ಕೇಕ್’ ಸಹಿತ ಸಂಭ್ರಮಿಸಿದ ಕುಟುಂಬ  ಎಲ್ಲ ಆಸ್ಪತ್ರೆಗಳಲ್ಲಿ 24×7 ವೈದ್ಯರು, ಜೀವರಕ್ಷಕ ಔಷಧಗಳು ಕಡ್ಡಾಯ: SoP ರಚಿಸಲು ಯತ್ನಾಳ್ ಒತ್ತಾಯಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ‘ಅರಿವು’ ಯೋಜನೆಯಡಿ ಶೈಕ್ಷಣಿಕ ಸಾಲರಾಜ್ಯದಲ್ಲಿ ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ ಮೊದಲ ಎಕ್ಸ್‌ ಪೀರಿಯೆನ್ಸ್ ಸೆಂಟರ್ ಆರಂಭರೈತರಿಗೆ ಮುಖ್ಯ ಮಾಹಿತಿ: ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ಅವಧಿ 17ಕ್ಕೆ ಅಂತ್ಯಮಂಗಳೂರಲ್ಲಿ ಹವಾಮಾನ ವೈಪರೀತ್ಯದಿಂದ 2 ವಿಮಾನ ಲ್ಯಾಂಡಿಂಗ್ ಗೆ ಸಮಸ್ಯೆ: ವಿಟ್ಲದಲ್ಲಿ ಕಡಿಮೆ ಎತ್ತರದಲ್ಲಿ ಹಾರಾಟಚಿನ್ನದ ದರ ಏರಿಕೆ ನಾಗಾಲೋಟ: ₹1.62 ಲಕ್ಷ ದಾಟಿದ ಅಪರಂಜಿ; ಆಭರಣ ಪ್ರಿಯರಿಗೆ ಶಾಕ್ ನೀಡಿದ ಕೇಂದ್ರಇದು ಚರಿತ್ರೆ ಸೃಷ್ಟಿಸೋ ಅವತಾರ…! ಹೈಕೋರ್ಟ್‌ ನಲ್ಲಿ ವಕೀಲರಾಗಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ವಾದ ಮಂಡನೆ  BIG NEWS: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: ನಾಲ್ವರು ದುರ್ಮರಣ; 12ಕ್ಕೂ ಹೆಚ್ಚು ಜನರಿಗೆ ಗಾಯ