ಮೇ 28ರ ಗುರುವಾರದಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹೈಕಮಾಂಡ್ ಸೂಚನೆ ಮೇರೆಗೆ ಅಧಿಕಾರ ಹಂಚಿಕೆಗೆ ಸಮ್ಮತಿಸಿದ್ದಾರೆ. ಇನ್ನೂ ಎರಡು ವರ್ಷಗಳ ಅಧಿಕಾರ ಬಾಕಿ ಇರುವಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಳಿದ ಅವಧಿಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ.
ಹೀಗೆ 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿ ಸಂಪೂರ್ಣ ಅವಧಿ ಪೂರೈಸಿದ್ದ ಸಿದ್ದರಾಮಯ್ಯ ಈ ಬಾರಿ ಪೂರ್ಣ ಅವಧಿ ಅಧಿಕಾರದಲ್ಲಿರುವಲ್ಲಿ ವಿಫಲರಾಗಿದ್ದು, ಈ ರೀತಿ 2005ರಿಂದ ಇಲ್ಲಿಯವರೆಗೆ ಹಲವು ಮುಖ್ಯಮಂತ್ರಿಗಳು ವಿವಿಧ ಕಾರಣಕ್ಕೆ ಸಂಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿರದೇ ರಾಜೀನಾಮೆ ನೀಡಿದ್ದಾರೆ.
ಹೀಗೆ ಐದು ವರ್ಷಕ್ಕೂ ಮುನ್ನ ರಾಜೀನಾಮೆ ನೀಡಿದ ರಾಜಕಾರಣಿಗಳ ಪಟ್ಟಿ ಮುಂದಿದೆ.
ಧರಂ ಸಿಂಗ್: ಕಾಂಗ್ರೆಸ್ನ ಧರಂ ಸಿಂಗ್ ಜೆಡಿಎಸ್ ಬೆಂಬಲದೊಂದಿಗೆ 2004ರ ಮೇ 28ರಲ್ಲಿ ಮುಖ್ಯಮಂತ್ರಿಯಾದರು. ಆದರೆ ಜೆಡಿಎಸ್ ಮೈತ್ರಿಯಿಂದ ಹಿಂದೆ ಸರಿದ ಕಾರಣ 2006ರ ಫೆಬ್ರವರಿ 3ರಂದು ರಾಜೀನಾಮೆ ನೀಡಿ ಅಧಿಕಾರ ಕಳೆದುಕೊಂಡರು. ಈ ಮೂಲಕ 1 ವರ್ಷ 251 ದಿನಗಳ ಕಾಲ ಮಾತ್ರ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದರು.
ಎಚ್ಡಿ ಕುಮಾರಸ್ವಾಮಿ: ಕಾಂಗ್ರೆಸ್ನಿಂದ ಮೈತ್ರಿ ಹಿಂಪಡೆದುಕೊಂಡ ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಫೆಬ್ರವರಿ 3, 2006ರಿಂದ 2007ರ ಅಕ್ಟೋಬರ್ 8ರವರೆಗೆ ಕೇವಲ 1 ವರ್ಷ 247 ದಿನಗಳಖ ಕಾಲ ಮಾತ್ರ ಕುಮಾರಸ್ವಾಮಿ ಸಿಎಂ ಆಗಿದ್ದರು. ಬಳಿಕ ಬಿಜೆಪಿ ಮೈತ್ರಿ ಮುರಿದುಕೊಂಡ ಕಾರಣ ಎಚ್ಡಿಕೆ ಅಧಿಕಾರ ಕಳೆದುಕೊಂಡರು.
ಈ ನಂತರ 35 ದಿನಗಳ ಕಾಲ ರಾಷ್ಟ್ರಪತಿ ಆಡಳಿತ ರಾಜ್ಯದಲ್ಲಿತ್ತು.
ಬಿಎಸ್ವೈ: 2007ರ ನವೆಂಬರ್ 12ರಂದು ಮುಖ್ಯಮಂತ್ರಿಯಾದ ಯಡಿಯೂರಪ್ಪ ಬಹುಮತ ಸಾಬೀತುಪಡಿಸದ ಕಾರಣ 7 ದಿನಗಳ ಬಳಿಕ ನವೆಂಬರ್ 19ರಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು.
ಈ ದಿನದಂದ 2008ರ ಮೇ 29ರವರೆಗೆ 193 ದಿನಗಳವರೆಗೆ ರಾಷ್ಟ್ರಪತಿ ಆಡಳಿತ ರಾಜ್ಯದಲ್ಲಿತ್ತು.
ಬಿಎಸ್ವೈ: ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ಯಡಿಯೂರಪ್ಪ2008ರ ಮೇ 30ರಿಂದ 2011ರ ಆಗಸ್ಟ್ 5ರವರೆಗೆ 3 ವರ್ಷ 67 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಭ್ರಷ್ಟಾಚಾರದ ಆರೋಪದ ಕಾರಣ ಅಧಿಕಾರದಿಂದ ಕೆಳಗಿಳಿದರು.
ಸದಾನಂದ ಗೌಡ: 2011ರ ಆಗಸ್ಟ್ 5ರಿಂದ 2012ರ ಜುಲೈ 12ರವರೆಗೆ ಡಿವಿ ಸದಾನಂದಗೌಡ 342 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಮುಂಬರುವ ಚುನಾವಣೆಯ ಕಾರಣ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಮಾಡಿತು.
ಜಗದೀಶ್ ಶೆಟ್ಟರ್: 2012ರ ಜುಲೈ 12ರಿಂದ 2013ರ ಮೇ 13ರವರೆಗೆ 305 ದಿನಗಳ ಕಾಲ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು.
ಬಿಎಸ್ವೈ: ಪುನಃ 2018ರ ಮೇ 17ರಂದು ಮುಖ್ಯಮಂತ್ರಿಯಾದ ಬಿಎಸ್ ಯಡಿಯೂರಪ್ಪ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ 6 ದಿನಗಳ ಬಳಿಕ ಮೇ 23ರಂದು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿದರು.
ಎಚ್ಡಿಕೆ: ಬಿಎಸ್ವೈ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ ಬೆನ್ನಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಎಚ್ಡಿ ಕುಮಾರಸ್ವಾಮಿ 2018ರ ಮೇ 23ರಂದು ಅಧಿಕಾರಕ್ಕೆ ಬಂದರು. ಆದರೆ 1 ವರ್ಷ 64 ದಿನಗಳ ಬಳಿಕ ಆಪರೇಷನ್ ಕಮಲದ ಪರಿಣಾಮ ಜೆಡಿಎಸ್ ಹಾಗೂ ಕಾಂಗ್ರೆಸ್ನ ಕೆಲ ಶಾಸಕರು ಬಿಜೆಪಿ ಸೇರಿದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಬಹುಮತ ಕಳೆದುಕೊಂಡು ಕುಮಾರಸ್ವಾಮಿ 2019ರ ಜುಲೈ 26ರಂದು ರಾಜೀನಾಮೆ ನೀಡಿದರು.
ಯಡಿಯೂರಪ್ಪ: ಬಳಿಕ 2019ರ ಜುಲೈ 26ರಿಂದ 2021ರ ಜುಲೈ 28ರವರೆಗೆ 2 ವರ್ಷ 2 ದಿನಗಳ ಕಾಲ ಬಿಎಸ್ವೈ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದರು.
ಬಸವರಾಜ ಬೊಮ್ಮಾಯಿ: 2021ರ ಜುಲೈ 28ರಿಂದ 2023ರ ಮೇ 20ರವರೆಗೆ ಬಸವರಾಜ ಬೊಮ್ಮಾಯಿ 1 ವರ್ಷ 296 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.
ಸಿದ್ದರಾಮಯ್ಯ: 2023ರ ಮೇ 20ರಿಂದ 2026ರ ಜೂನ್ 3ರವರೆಗೆ 3 ವರ್ಷ 14 ದಿನಗಳ ಕಾಲ ಸಿಎಂ ಆಗಿದ್ದರು.