ಶಿವಮೊಗ್ಗ: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ 7 ಲಕ್ಷ ರೂ. ನಗದು ದೋಚಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 5.13 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದಾರೆ.
ದಿನಾಂಕ 26/05/2026 ರಂದು ಮದ್ಯಾಹ್ನ 12-30 ಪಿಎಂ ಗಂಟೆಯಿಂದ ಸಂಜೆ 04-30 ಪಿಎಂ ಗಂಟೆಯ ಸಮಯದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶಿಪುರ ಲಕ್ಕಪ್ಪ ಲೇ ಔಟ್ 2ನೇ ಕ್ರಾಸ್ ನಲ್ಲಿರುವ ಒಂದು ಮನೆಯಲ್ಲಿ 7 ಲಕ್ಷ ನಗದು ಹಣ ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಪಿರ್ಯಾದುದಾರ ಹೆಚ್.ಎಲ್. ಸೋಮಶೇಖರ್ ದಿನಾಂಕ 27/05/2026 ರಂದು ರಾತ್ರಿ 10 ಗಂಟೆಗೆ ದೂರು ನೀಡಿದ್ದು, ವಿನೋಬನಗರ ಪೊಲೀಸ್ ಠಾಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಈ ಪ್ರಕರಣದಲ್ಲಿ ಕಳವು ಮಾಡಿಕೊಂಡು ಹೋದ ನಗದು ಹಣ ಮತ್ತು ಆರೋಪಿತರನ್ನು ಪತ್ತೆ ಮಾಡಲು ಎಸ್ಪಿ ನಿಖಿಲ್ ಬಿ., ಎಎಸ್ಪಿ ಕಾರಿಯಪ್ಪ ಎ.ಜಿ., ಡಿವೈಎಸ್ಪಿ ಸಂಜೀವ್ ಕುಮಾರ್ ಟಿ. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನೀರಿಕ್ಷಕ ಸಂತೋಷಕುಮಾರ್ ಡಿ.ಕೆ. ಉಸ್ತುವಾರಿಯಲ್ಲಿ ಪಿಎಸ್ಐ ತಿರುಮಲೇಶ್ ಜಿ ಮತ್ತು ಸಿಬ್ಬಂದಿಗಳಾದ ರಾಜು ಕೆ.ಆರ್,, ಚಂದ್ರಾನಾಯ್ಕ ಬಿ., ಮಲ್ಲಪ್ಪ ಎಸ್.ಜಿ., ಅರುಣಕುಮಾರ್ ಎನ್.ಕೆ., ಮನುಶಂಕರ ಅವರ ತಂಡ ರಚಿಸಿದ್ದರು.
ಆರೋಪಿತರ ಪತ್ತೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರಾದ ಶಿವಮೊಗ್ಗ ಟಿಪ್ಪುನಗರದ ಮೊಹಮದ್ ಸಲೀಮ್(27), ಮೊಹಮದ್ ರಜಾಕ್(26) ಅವರುಗಳನ್ನು ಬಂಧಿಸಿ ಅವರು ಕಳವು ಮಾಡಿಕೊಂಡು ಹೋದ 5,13,000- ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.