LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಂಬೈನಲ್ಲಿ ಹೆಚ್ಚುತ್ತಿರುವ ಆತಂಕ : ಮುುಂಬೈನಲ್ಲಿ ವರ್ಷದಲ್ಲೇ 716 ಹದಿಹರೆಯದ ಬಾಲಕಿಯರಿಗೆ ಗರ್ಭಪಾತ: ವ್ಯವಸ್ಥೆಗೆ ಎಚ್ಚರಿಕೆ ನೀಡಿದ ಆರ್‌ಟಿಐ ದತ್ತಾಂಶ

ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಾಗರಿಕ ಸಮಾಜ ಮತ್ತು ಆರೋಗ್ಯ ವಲಯದ ಕಣ್ಣು ಕೆಂಪಾಗಿಸುವಂತಹ ಆಘಾತಕಾರಿ ದತ್ತಾಂಶವೊಂದು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಬಹಿರಂಗವಾಗಿದೆ. ಮಹಾನಗರದಲ್ಲಿ ಅಪ್ರಾಪ್ತರು ಹಾಗೂ ಹದಿಹರೆಯದ ಹುಡುಗಿಯರಲ್ಲಿ ಗರ್ಭಪಾತದ (Abortion) ಪ್ರಕರಣಗಳು ಗಂಭೀರ ಮಟ್ಟದಲ್ಲಿ ಹೆಚ್ಚುತ್ತಿರುವುದು ಬೆಳಕಿಗೆ ಬಂದಿದ್ದು, ಇದು ಇಂದಿನ ಆಧುನಿಕ ಜೀವನಶೈಲಿ ಮತ್ತು ಲೈಂಗಿಕ ಶಿಕ್ಷಣದ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.

ಪ್ರಸಿದ್ಧ ಆರ್‌ಟಿಐ ಕಾರ್ಯಕರ್ತ ಚೇತನ್ ಕೊಠಾರಿ ಅವರು ಮುಂಬೈನ ಗರ್ಭಪಾತ, ತಾಯಂದಿರ ಸಾವುಗಳ ಕುರಿತು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (BMC) ಅರ್ಜಿ ಸಲ್ಲಿಸಿದ್ದರು. ಬಿಎಂಸಿಯ ಕುಟುಂಬ ಕಲ್ಯಾಣ ಘಟಕ ನೀಡಿರುವ ಅಧಿಕೃತ ಲಿಖಿತ ಅಂಕಿ-ಅಂಶಗಳು ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

20,950 ಗರ್ಭಪಾತ: ಮುಂಚೂಣಿಯಲ್ಲಿದೆ ಗರ್ಭನಿರೋಧಕಗಳ ವೈಫಲ್ಯ

ಬಿಎಂಸಿ ನೀಡಿರುವ ದತ್ತಾಂಶಗಳ ಪ್ರಕಾರ, ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗಿನ ಒಂದೇ ವರ್ಷದ ಅವಧಿಯಲ್ಲಿ ಮುಂಬೈನಲ್ಲಿ ಒಟ್ಟು 20,950 ವೈದ್ಯಕೀಯ ಗರ್ಭಧಾರಣೆಯ ಮುಕ್ತಾಯ (MTP) ಕಾರ್ಯವಿಧಾನಗಳು ನಡೆದಿವೆ.

ಅತ್ಯಂತ ಶಾಕಿಂಗ್ ಅಂಶವೆಂದರೆ, ಈ ಒಟ್ಟು ಪ್ರಕರಣಗಳಲ್ಲಿ ಸಿಂಹಪಾಲು ಅಂದರೆ 19,495 ಪ್ರಕರಣಗಳಿಗೆ ಗರ್ಭನಿರೋಧಕಗಳ ವೈಫಲ್ಯ ಅಥವಾ ಅವುಗಳನ್ನು ಬಳಸುವಲ್ಲಿನ ತಪ್ಪು ಮತ್ತು ನಿರ್ಲಕ್ಷ್ಯವೇ ನೇರ ಕಾರಣ ಎಂದು ಸರ್ಕಾರಿ ದಾಖಲೆಗಳು ಉಲ್ಲೇಖಿಸಿವೆ

ವಯೋಮಾನ ದಾಖಲಾದ ಗರ್ಭಪಾತ ಪ್ರಕರಣಗಳು

25 – 29 ವರ್ಷ 7,296 (ಅತಿ ಹೆಚ್ಚು ಪ್ರಕರಣ)

30 – 34 ವರ್ಷ 5,673

20 – 24ವರ್ಷ 3,314

19 ವರ್ಷಕ್ಕಿಂತ ಕಡಿಮೆ (ಹದಿಹರೆಯದವರು)716 (ತೀವ್ರ ಕಳವಳಕಾರಿ)

ಹೆಣ್ಣುಮಕ್ಕಳ ಜೀವಕ್ಕೆ ಕಂಟಕವಾಗುತ್ತಿರುವ ಇತರ ಪ್ರಮುಖ ಕಾರಣಗಳು:
ಕೇವಲ ಅನ್-ವಾಂಟೆಡ್ ಪ್ರೆಗ್ನೆನ್ಸಿ ಮಾತ್ರವಲ್ಲದೆ, ಇನ್ನುಳಿದ ಗರ್ಭಪಾತದ ಕೇಸ್‌ಗಳ ಹಿಂದೆ ಹೆಣ್ಣುಮಕ್ಕಳ ಆರೋಗ್ಯ ಮತ್ತು ಸಾಮಾಜಿಕ ದುಸ್ಥಿತಿಯ ಕಥೆಗಳಿವೆ.

ಮಾನಸಿಕ ಆರೋಗ್ಯದ ಮೇಲಿನ ಪರಿಣಾಮ: 358 ಪ್ರಕರಣಗಳು

ದೈಹಿಕ ಆರೋಗ್ಯಕ್ಕೆ ತೊಂದರೆ: 288 ಪ್ರಕರಣಗಳು

ಗರ್ಭಿಣಿಯ ಜೀವಕ್ಕೆ ಅಪಾಯ: 271 ಪ್ರಕರಣಗಳು

ಭ್ರೂಣದ ಅಸಹಜತೆಗಳು (ಬೆಳವಣಿಗೆ ಕೊರತೆ): 246 ಪ್ರಕರಣಗಳು

ಅತ್ಯಾಚಾರದಂತಹ ಭೀಕರ ಪ್ರಕರಣಗಳು: 27 ಪ್ರಕರಣಗಳು

ಕೇವಲ ಗರ್ಭನಿರೋಧಕಗಳ ವೈಫಲ್ಯವನ್ನೇ ನಾವು ನೇರ ಕಾರಣ ಅನ್ನಲು ಬರಲ್ಲ. ಇಂದಿಗೂ ಅನೇಕ ಮಹಿಳೆಯರಿಗೆ ಸುರಕ್ಷಿತ ವಿಧಾನಗಳ ಸರಿಯಾದ ಬಳಕೆ ಗೊತ್ತಿಲ್ಲ. ಇನ್ನು ಕೆಲವು ಮಹಿಳೆಯರು ಸಾಮಾಜಿಕ ಕಳಂಕ ಮತ್ತು ಸಮಾಜದ ಭಯದಿಂದಾಗಿ ಕೌನ್ಸೆಲಿಂಗ್ ವೇಳೆ ನಿಜವಾದ ಸತ್ಯ ಮುಚ್ಚಿಟ್ಟು, ವೈದ್ಯರ ಮುಂದೆ ಸುಳ್ಳು ಕಾರಣಗಳನ್ನು ದಾಖಲಿಸಿರಬಹುದು. ಎಂದು ಬಿಎಂಸಿ ಆರೋಗ್ಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನ ಬಹುತೇಕ ವಾರ್ಡ್‌ಗಳ ಪೈಕಿ ಕೆ-ವೆಸ್ಟ್ (K-West) ವಾರ್ಡ್‌ನಲ್ಲಿಯೇ ಅತಿ ಹೆಚ್ಚು ಅಂದರೆ 3,248 ಗರ್ಭಪಾತದ ಪ್ರಕರಣಗಳು ವರದಿಯಾಗಿವೆ. ಇನ್ನು ಧರ್ಮ ಆಧಾರಿತವಾಗಿ ನೋಡುವುದಾದರೆ ಹಿಂದೂ ಮಹಿಳೆಯರಲ್ಲಿ 15,765, ಮುಸ್ಲಿಂ ಮಹಿಳೆಯರಲ್ಲಿ 3,442, ಕ್ರಿಶ್ಚಿಯನ್ ಮಹಿಳೆಯರಲ್ಲಿ 649 ಮತ್ತು ಸಿಖ್ ಮಹಿಳೆಯರಲ್ಲಿ 354 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಇದೇ ಅವಧಿಯಲ್ಲಿ 4,226 ಸ್ವಾಭಾವಿಕ ಗರ್ಭಪಾತಗಳು (Miscarriages) ಕೂಡ ಸಂಭವಿಸಿವೆ.

ಹಿಂದಿನ ವರ್ಷಗಳಿಗೆ (2017-18ರಲ್ಲಿ 35,358 ಪ್ರಕರಣಗಳು, 19 ಸಾವು) ಹೋಲಿಸಿದರೆ ಒಟ್ಟು ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆಯಾದರೂ, ಅಪ್ರಾಪ್ತ ಹೆಣ್ಣುಮಕ್ಕಳು ಗರ್ಭಪಾತದ ದವಡೆಗೆ ಸಿಲುಕುತ್ತಿರುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರ ಭವಿಷ್ಯಕ್ಕೆ ದೊಡ್ಡ ಕಂಟಕವಾಗಿದೆ. ತಾಯಂದಿರ ರಕ್ತಹೀನತೆ, ಅಪೌಷ್ಟಿಕತೆ ಮತ್ತು ಸುರಕ್ಷಿತವಲ್ಲದ ವಿಧಾನಗಳಿಂದ ಹೊಟ್ಟೆ ಒಡೆಯುವ ಪರಿಸ್ಥಿತಿ ತಾಯಂದಿರ ಸಾವಿಗೆ ದಾರಿಯಾಗುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ