LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಗರದ ನಾಡಕಲಸಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ₹8.93 ಲಕ್ಷ ನಿವ್ವಳ ಲಾಭ: ಸದಸ್ಯರಿಗೆ ಶೇ.5 ಡಿವಿಡೆಂಡ್‌ ಘೋಷಣೆ

ಸಾಗರ: ತಾಲೂಕಿನ ಪ್ರಮುಖ ಗ್ರಾಮೀಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ನಾಡಕಲಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ₹8,93,603 ನಿವ್ವಳ ಲಾಭ ಗಳಿಸುವ ಮೂಲಕ ಆರ್ಥಿಕ ಸದೃಢತೆಯ ಹಾದಿಯಲ್ಲಿ ಮುನ್ನಡೆದಿದೆ.

ಬುಧವಾರ ಸಂಘದ ಆವರಣದಲ್ಲಿ ಜರುಗಿದ 24ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀಧರ ಭಟ್ ಕಲಸಿ, "ಸಂಸ್ಥೆಯು ಹಿಂದಿನ ವರ್ಷಕ್ಕಿಂತಲೂ ಉತ್ತಮ ಪ್ರಗತಿ ದಾಖಲಿಸಿದೆ. ಪ್ರಸ್ತುತ ಸಂಘದಲ್ಲಿ 932 ಮಂದಿ ಸದಸ್ಯರಿದ್ದು, ₹48.75 ಲಕ್ಷಕ್ಕೂ ಮಿಕ್ಕಿ ಶೇರು ಬಂಡವಾಳ ಸಂಗ್ರಹವಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸದಸ್ಯರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ₹3 ಕೋಟಿಗೂ ಅಧಿಕ ಮೊತ್ತದ ಕೆಸಿಸಿಎಲ್ (KCCL) ಸಾಲ ಹಾಗೂ ₹75 ಲಕ್ಷ ಮಧ್ಯಮಾವಧಿ ಸಾಲ ವಿತರಿಸಲಾಗಿದೆ," ಎಂದು ಮಾಹಿತಿ ನೀಡಿದರು.

ಇದೇ ವೇಳೆ ಷೇರುದಾರರಿಗೆ ಶೇಕಡಾ ಐದರಷ್ಟು ಲಾಭಾಂಶ (ಡಿವಿಡೆಂಡ್) ವಿತರಿಸಲು ತೀರ್ಮಾನಿಸಲಾಗಿದ್ದು, ಸದಸ್ಯರು ಸಂಘದೊಂದಿಗೆ ಹೆಚ್ಚಿನ ಆರ್ಥಿಕ ವಹಿವಾಟು ನಡೆಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.

news_1789033598_0_404.webp

ಸನ್ಮಾನ ಮತ್ತು ಪುರಸ್ಕಾರ:

ಸಂಘಕ್ಕೆ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಕಾರ್ಯದರ್ಶಿ ವೆಂಕಟರಮಣ ಅವರನ್ನು ಸಮಾರಂಭದಲ್ಲಿ ಸಾರ್ವಜನಿಕವಾಗಿ ಗೌರವಿಸಲಾಯಿತು. ಜತೆಗೆ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಉಪಾಧ್ಯಕ್ಷ ವೆಂಕಟೇಶ ಸ್ವಾಗತಿಸಿದರೆ, ನಿರ್ದೇಶಕ ಉಮೇಶ್ ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ನೂರಾರು ಸದಸ್ಯರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಾಧ್ಯಂತ ಗಣೇಶ ಹಬ್ಬಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್: ಜಿಲ್ಲೆಗಳಿಗೆ ಹಿರಿಯ ಅಧಿಕಾರಿಗಳನ್ನು ನಿಯೋಜನೆBIG NEWS: ಜೈಲಲ್ಲಿ ಪ್ರಜ್ವಲ್​​​​ ರೇವಣ್ಣ ಕರೆ ಮಾಡಿದ್ದು ಯಾರಿಗೆ ಗೊತ್ತಾ?ದೇವನಹಳ್ಳಿ ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರದಿಂದ ವರ್ಷಕ್ಕೆ 10,000 ಮಂದಿಗೆ ಆಧುನಿಕ ಕೌಶಲ್ಯ ತರಬೇತಿ: ರೋಹಿಣಿ ಸಿಂಧೂರಿBIG NEWS: ಇದು ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಡಿಕೆಶಿ ನೀಲನಕ್ಷೆ: ಆಡಳಿತದ 100ನೇ ದಿನಕ್ಕೆ 3 ಮಹಾಸಂಕಲ್ಪ, 9 ಯೋಜನೆಗಳ ಘೋಷಣೆಹೇಮಾವತಿ ಕಾಲುವೆಗೆ ಉರುಳಿದ ಅಕ್ಕಿ ಲಾರಿ: ಕ್ಲೀನರ್ ಸಾವು, ಚಾಲಕ ಗಂಭೀರಇದು 100 ದಿನಗಳ ಸಂಭ್ರಮಾಚರಣೆಯಲ್ಲ, ದೃಢ ಕರ್ನಾಟಕದ ಸಂಕಲ್ಪ: ಡಿಸಿಎಂ ಡಾ.ಜಿ.ಪರಮೇಶ್ವರ್BREAKING: ದಕ್ಷಿಣ ಭಾರತದಲ್ಲೂ ನೇಪಾಳದಂತ ದುರಂತ ಮರುಕಳಿಸಲಿದೆ: ಕೋಡಿಮಠ ಶ್ರೀಗಳ ಸ್ಪೋಟಕ ಭವಿಷ್ಯಭಾರತೀಯ ಮೂಲದ ದಂಪತಿಗಳಿಂದ ಅಮೆರಿಕದ ವಿಶ್ವವಿದ್ಯಾಲಯಕ್ಕೆ ₹167 ಕೋಟಿಗೂ ಅಧಿಕ ದೇಣಿಗೆ₹2.5 ಲಕ್ಷ ಸಾಲಕ್ಕೆ ಸಿವಿಲ್ಸ್ ವಿದ್ಯಾರ್ಥಿ ಬಲಿ; 19 ಮಂದಿಯ ಹೆಸರು ಬರೆದಿಟ್ಟು ಆತ್ಮಹತ್ಯೆ20 ದಿನ ಗೆಸ್ಟ್‌ಹೌಸ್‌ನಲ್ಲಿ ವಾಸವಿದ್ದ ನವವಿವಾಹಿತ ಜೋಡಿ ಕೊನೆಗೆ ಶವವಾಗಿ ಪತ್ತೆ! ನಡೆದಿದ್ದೇನು..?