LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಿಯಕರನೊಂದಿಗೆ ಓಡಿ ಹೋಗಲು ಪತಿ ಮನೆಯಲ್ಲಿಯೇ ಚಿನ್ನಾಭರಣ ಕಳ್ಳತನ ಮಾಡಿದ ನವವಿವಾಹಿತೆ

ಬೆಳಗಾವಿ: ನವವಿವಾಹಿತೆಯೊಬ್ಬಳು ತನ್ನ ಪ್ರಿಯತಮನೊಂದಿಗೆ ಓಡಿಹೋಗಲು ಪತಿ ಮನೆಯಲ್ಲಿಯೇ ಕಳ್ಳತನ ಮಾಡಿರುವ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಹಸೀನಾ ಎಂಬಾಕೆ ಎರಡು ತಿಂಗಳ ಹಿಂದಷ್ಟೆ ಶರೀಫ್ ಎಂಬಾತನ ಜೊತೆ ವಿವಾಹವಾಗಿ ಗಂಡನ ಮನೆಗೆ ಬಂದಿದ್ದಾಳೆ. ವಿವಾಹಕ್ಕೂ ಮುನ್ನವೇ ಹಸೀನಾ ಬೇರೊಬ್ಬನ ಪ್ರೀತಿಯಲ್ಲಿ ಬಿದ್ದಿದ್ದಳು. ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಪತಿಯ ಮನೆಗೆ ಕನ್ನ ಹಾಕಿದ್ದಾಳೆ.

ಹಸೀನಾ ತನ್ನ ಪ್ರಿಯಕರ ಹಣಮಂತ ಮಾರಾಪೂರ ಜೊತೆ ಸೇರಿ ಪತಿ ಶರೀಫ್ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ.‌

ಹಸೀನಾ ಪತಿಯ ಮನೆಯಲ್ಲಿದ್ದ 21 ಲಕ್ಷ ಮೌಲ್ಯದ ‌154.6 ಗ್ರಾಂ ಚಿನ್ನಾಭರಣ. 11 ಸಾವಿರ ಮೌಲ್ಯದ 45ಗ್ರಾಂ ಬೆಳ್ಳಿಯ ಆಭರಣ ಕಳ್ಳತನ ಮಾಡಿದ್ದಾಳೆ. ಕೂಡಲೆ ಕಳ್ಳತನದ ಬಗ್ಗೆ ದಿಲಶಾದ್ ನದಾಫ್ ಎಂಬುವವರಿಂದ ಕಟಕೋಳ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕೇವಲ 48 ಗಂಟೆಯಲ್ಲಿ ಕಳ್ಳರನ್ನು ಬಂಧಿಸಿದ್ದಾರೆ.

ಮೂಲತಃ ಮೂಡಲಗಿ ತಾಲೂಕಿನ ನಿವಾಸಿಯಾಗಿರುವ ಹಸೀನಾ ನದಾಫ್ ಕಳೆದ ಎರಡು ತಿಂಗಳ ಹಿಂದೆ ಹೊಸಕೋಟಿ ಗ್ರಾಮದ ಶರೀಫ್ ಜೊತೆ ವಿವಾಹವಾಗಿದ್ದಳು. ಆದರೆ ಮದುವೆಯಾದ ಬಳಿಕವೂ ತನ್ನ ಪ್ರೀಯಕರ ಹಣಮಂತನ ಸಂಪರ್ಕದಲ್ಲಿದ್ದಳು. ಇಬ್ಬರೂ ಸೇರಿ ಶರೀಫ್ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಹೊಳೆಯುವ ಮುಖದ ಚರ್ಮಕ್ಕಾಗಿ ಆಲೂಗಡ್ಡೆ ಫೇಸ್ ಪ್ಯಾಕ್: ಮನೆಯಲ್ಲೇ ಸಿಗುವ ಈ ವಸ್ತುವಿನಿಂದ ಪಡೆಯಿರಿ ಇನ್‌ಸ್ಟಂಟ್ ಗ್ಲೋಪ್ರವಾಸದ ಸಮಯದಲ್ಲಿ ಕಾಂತಿ ಕಳೆದುಕೊಳ್ಳುವ ಕೂದಲಿಗೆ ‘ಆಯಿಲಿಂಗ್’ ಸಂಜೀವಿನಿ: ಕೂದಲು ಉದುರುವಿಕೆಗೆ ಇಲ್ಲಿದೆ ಬ್ರೇಕ್BREAKING: ಗೊಬ್ಬರ ತುಂಬಿದ್ದ ಲಾರಿ-ಕಾರಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣBIG NEWS: ಯಾವುದೇ ಹುದ್ದೆ ಹಾಗೂ ಅಧಿಕಾರಕ್ಕಾಗಿ ವಿಸಿಕೆ ಬೇಡಿಕೆ ಇಟ್ಟಿಲ್ಲ: ಪಕ್ಷದ ಘನತೆಗೆ ಕುಂದು ತರಲು ಅಪಪ್ರಾಚಾರ ನಡೆಸಲಾಗುತ್ತಿದೆ: ವಿಸಿಕೆ ನಾಯಕ ರವಿಕುಮಾರ್ ಸ್ಪಷ್ಟನೆಬಾಲಿವುಡ್ ನಟಿಯರ ಮುಖವಾಡ ಕಳಚಿದ ಅಮೀಶಾ ಪಟೇಲ್: ಹಣ ನೀಡಿ ನಂಬರ್ 1 ಪಟ್ಟ ಪಡೆಯುವವರ ಬಗ್ಗೆ ಆಕ್ರೋಶBREAKING: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿಜಯ್ ಅಭಿಮಾನಿ: ವ್ಯಕ್ತಿ ಸ್ಥಿತಿ ಗಂಭಿರBREAKING: ವಿಜಯ್ ಗೆ ಬೆಂಬಲ ನೀಡುವಂತೆ ಒತ್ತಾಯಿಸಿ ಕೈ ಕೊಯ್ದುಕೊಂಡ ವಿಸಿಕೆ ಕಾರ್ಯಕರ್ತ: ಚೆನ್ನೈ ಕಚೇರಿ ಮುಂದೆ ಹೈಡ್ರಾಮಾBREAKING: 6 ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರ ಮೇಲೆ ವ್ಯಕ್ತಿಯಿಂದ ಆಸಿಡ್ ದಾಳಿಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ನೋರಾ ಫತೇಹಿ ಎಂಟ್ರಿ: ಮೈಕೆಲ್ ಬಬಲ್ ಮತ್ತು ಕಟಿ ಪೆರ್ರಿ ಸಾಲಿಗೆ ಸೇರಿದ ಬಾಲಿವುಡ್ ಬೆಡಗಿದೇಶದ ಅತಿ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ: ದೀದಿಯ ಒಟ್ಟು ಆಸ್ತಿ ಎಷ್ಟು ಗೊತ್ತಾ?