LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೈಕೊಟ್ಟ ಯುವತಿ: ಹೈಟೆನ್ಶನ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಆನೇಕಲ್: ಪ್ರೀತಿಸಿದ ಹುಡುಗಿ ಕೈಕೊಟ್ಟ ಕಾರಣಕ್ಕೆ ಮನನೊಂದ ಯುವಕ ಹೈಟೆನ್ಶನ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ಚಿನ್ನಯ್ಯನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಚಿನ್ನಯ್ಯನಪಾಳ್ಯದ ನಿವಾಸಿ ಸೋಮಶೇಖರ್ ಎಂಬಾತ ವಿದ್ಯುತ್ ಕಂಬದ ಮೇಲೇರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಈತನ ಹುಚ್ಚಾಟದಿಂದಾಗಿ ಇಡೀ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಗಂಟೆಗಟ್ಟಲೆ ಆತಂಕದಲ್ಲಿ ಕಳೆಯುವಂತಾಯಿತು.

ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಯುವತಿಯು ಮದುವೆಗೆ ನಿರಾಕರಿಸಿ, ಪ್ರೇಮ ಸಂಬಂಧವನ್ನು ಮುರಿದುಕೊಳ್ಳಲು ಮುಂದಾಗಿದ್ದಾಳೆ. ಇದರಿಂದ ನೊಂದ ಸೋಮಶೇಖರ್, ಮೊದಲು ತನ್ನ ಮನೆಯ ಮೇಲ್ಛಾವಣಿಯ ಶೀಟ್‌ಗಳನ್ನು ಒಡೆದು ದಾಂಧಲೆ ನಡೆಸಿದ್ದಾನೆ. ಅದಾದ ಬಳಿಕವೂ ಆಕ್ರೋಶ ಕಡಿಮೆಯಾಗಿಲ್ಲ. ಮನೆ ಸಮೀಪದಲ್ಲೇ ಇದ್ದ ಭಾರಿ ಗಾತ್ರದ ಹೈಟೆನ್ಷನ್ ವಿದ್ಯುತ್ ಕಂಬದ ಮೇಲೇರಿದ್ದಾನೆ. ‘ತಾನು ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರುವವರೆಗೂ ತಾನು ಯಾವುದೇ ಕಾರಣಕ್ಕೂ ಕೆಳಗೆ ಇಳಿಯುವುದಿಲ್ಲ’ ಎಂದು ಪಟ್ಟು ಹಿಡಿದಿದ್ದಾನೆ.

ಆನೇಕಲ್ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮನವೊಲಿಕೆಗೆ ಯತ್ನಿಸಿದರೂ ಯುವಕ ಕೆಳಗೆ ಇಳಿದಿಲ್ಲ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಯುವಕ ಮಾತ್ರ ಕೆಳಗಿಳಿಯಲು ಒಪ್ಪದೆ ಹಠ ಹಿಡಿದಿದ್ದಾನೆ. ಕಂಬದಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಆಪಾಯವಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BIG NEWS: ಬೆಂಗಳೂರಿನಲ್ಲಿ 35 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ; 8 ಆರೋಪಿಗಳು ಅರೆಸ್ಟ್ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು ಮಂಜೂರು: ಬಿಡುಗಡೆ ವೇಳೆ ಸನ್ಮಾನ ಮಾಡಲು ಹೋದವರು ಪೊಲೀಸ್ ವಶಕ್ಕೆಕಾನ್ ಫೆಸ್ಟಿವಲ್‌ನಲ್ಲಿ ಗುಜರಾತಿ ಪಟೋಲಾ ಉಡುಪಿನಲ್ಲಿ ಮಿಂಚಿದ ಮೌನಿ ರಾಯ್: ಭಾರತೀಯ ಸಂಸ್ಕೃತಿಗೆ ಜಾಗತಿಕ ವೇದಿಕೆಯಲ್ಲಿ ಗೌರವಸ್ಯಾಂಡಲ್‌ವುಡ್ ಬ್ಯೂಟಿ ನಿಶ್ವಿಕಾ ನಾಯ್ಡುಗೆ ಹುಟ್ಟುಹಬ್ಬದ ಸಂಭ್ರಮ: ನೆಚ್ಚಿನ ನಟಿಗೆ ಶುಭ ಕೋರಿದ ಅಭಿಮಾನಿಗಳು‘ಲೋ ನವೀನಾ’ ಚಿತ್ರದ ಮನಸೆಳೆಯುವ ‘ಮಾತು ಕಥೆ’ ಲಿರಿಕಲ್ ಹಾಡು ರಿಲೀಸ್ಕಾಕ್‌ಟೇಲ್ 2 ಗ್ಯಾಂಗ್ ಅನ್ನು ‘ಬ್ಯೂಟಿಫುಲ್ ಮೆಸ್’ ಎಂದ ರಶ್ಮಿಕಾ ಮಂದಣ್ಣ: ವೈರಲ್ ಆದ ಪೋಸ್ಟ್!ಮತ್ತೆ ಗನಕ್ಕೇರಿದ ಹಳದಿ ಲೋಹದ ದರ: 10 ಗ್ರಾಂ ಚಿನ್ನಕ್ಕೆ ₹1,310 ಜಿಗಿತ: ಆದ್ರೆ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಇಂದಿನ ಲೇಟೆಸ್ಟ್ ರೇಟ್ ಇಲ್ಲಿದೆಬಿಜೆಪಿಗೆ ಬಕೆಟ್ ಹಿಡಿಯುವ ಗೋಧಿ ಮೀಡಿಯಾ ಆಂಕರ್‌ಗಳೇ ನಿಮಗೆ ನಾವು ಇಂಟರ್‌ವ್ಯೂ ಕೊಡಲ್ಲ ತಲೆ ತಿನ್ನಬೇಡಿ; ತಿವಿದ ಜಿರಳೆ ಪಕ್ಷ!ನಿಮ್ಮ ಮಗಳು ಶ್ರೀಲೀಲಾ ಮುಂಬೈ ಇಂಡಿಯನ್ಸ್‌ ಆಟಗಾರನ ಜತೆ ಲವ್‌ನಲ್ಲಿದ್ದಾರಂತೆ, ಅವರು ನಿಮ್ಮ ಅಳಿಯ ಅಂತೆ ಹೌದಾ? ಕೊನೆಗೂ ತುಟಿಬಿಚ್ಚಿದ ಶ್ರೀಲೀಲಾ ತಾಯಿನಾಲಿಗೆಗೆ ಹೊಸ ರುಚಿ ನೀಡುವ ರಾಜಸ್ಥಾನದ ಪ್ರಸಿದ್ಧ ಕಢಿ ಕಚೋರಿ: ಈ ಸರಳ ಹಂತಗಳನ್ನು ಪಾಲಿಸಿ ಸವಿಯಿರಿ