LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿಗೆ ಬಕೆಟ್ ಹಿಡಿಯುವ ಗೋಧಿ ಮೀಡಿಯಾ ಆಂಕರ್‌ಗಳೇ ನಿಮಗೆ ನಾವು ಇಂಟರ್‌ವ್ಯೂ ಕೊಡಲ್ಲ ತಲೆ ತಿನ್ನಬೇಡಿ; ತಿವಿದ ಜಿರಳೆ ಪಕ್ಷ!

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಿರಳೆ ಪಕ್ಷದ್ದೇ ಹಾವಳಿ. ಇದೇನಿದು ಹೊಸದಾಗಿ ಜಿರಳೆ ಪಕ್ಷ ಎಂದು ಗೊಂದಲಕ್ಕೀಡಾದರೆ ಅದರ ಹಿಂದಿನ ಮಾಹಿತಿಯನ್ನು ಚಿಕ್ಕದಾಗಿ ಹೇಳಿಬಿಡುತ್ತೇವೆ ಕೇಳಿ.

ಸುಪ್ರೀಂ ಕೋರ್ಟ್‌ನ ವಕೀಲನೊಬ್ಬ ಹಿರಿಯ ವಕೀಲನಾಗುವ ಸಲುವಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಹಿರಿಯ ವಕೀಲನ ಸ್ಥಾನ ಪಡೆಯಲು ವಕೀಲ ಅನುಸರಿಸಿದ್ದ ಮಾರ್ಗದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.

ಅಲ್ಲದೇ ‘ಕೆಲವು ಯುವಕರು ಜಿರಳೆಗಳು ಇದ್ದಂತೆ. ಯಾವುದೇ ಉದ್ಯೋಗ ಪಡೆದುಕೊಳ್ಳಲಾಗದೇ ಅಥವಾ ಕೆಲಸದಲ್ಲಿ ಸರಿಯಾದ ಸ್ಥಾನ ಪಡೆದುಕೊಳ್ಳಲಾಗದೇ ವಿಫಲರಾಗುತ್ತಾರೆ. ಅಂಥಹ ಯುವಕರು ತಾವೇ ಮಾಧ್ಯಮಗಳಾಗಿ, ಸಾಮಾಜಿಕ ಮಾಧ್ಯಮಗಳಾಗಿ, ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಸಮಾಜದ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ’ ಎಂದು ಹೇಳಿಕೆ ನೀಡಿದ್ದರು.

ಹೀಗೆ ಸುಪ್ರೀಂ ನ್ಯಾಯಮೂರ್ತಿ ಸೂರ್ಯ ಕಾಂತ್ ಭಾರತದ ಯುವ ಜನತೆಯ ಕಾಲೆಳೆದಿದ್ದೇ ತಡ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಪಬ್ಲಿಕ್ ರಿಲೇ‍ಷನ್ ವಿದ್ಯಾರ್ಥಿಯಾಗಿರುವ ಅಭಿಜಿತ್ ಜಿಪ್ಕೆ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಆರಂಭಿಸಿಯೇಬಿಟ್ಟರು. ಈ ಪಕ್ಷದ ಖಾತೆಗೆ ನಾಲ್ಕೇ ದಿನಕ್ಕೆ 40 ಲಕ್ಷ ಹಿಂಬಾಲಕರು ಬಂದಿದ್ದು ಭಾರೀ ಸಂಚಲನ ಮೂಡಿಸಿದೆ.

ಹೀಗೆ ಸ್ಥಾಪನೆಯಾದ ಕಾಕ್ರೋಚ್ ಜನತಾ ಪಾರ್ಟಿ ತಾವು ಯಾವ ಪಕ್ಷದ ಪರವೂ ಅಲ್ಲ ಎಂದು ಘೋಷಣೆ ಮಾಡಿಕೊಂಡಿದ್ದು, ಸದ್ಯ ತನ್ನ ಅಧಿಕೃತ ಖಾತೆಯಲ್ಲಿ ತಮ್ಮನ್ನು ಸಂದರ್ಶನ ಮಾಡಲು ಸಂಪರ್ಕಿಸಿದ ಕೆಲ ಮಾಧ್ಯಮಗಳನ್ನು ಗೋಧಿ ಮೀಡಿಯಾಗಳೆಂದು ಉಲ್ಲೇಖಿಸಿ ಕಾಲೆಳೆದಿದೆ. ಬಿಜೆಪಿ ಪಕ್ಷದ ಪರ ಸುದ್ದಿ ಮಾಡುವ ಮಾಧ್ಯಮಗಳನ್ನು ಗೋಧಿ ಮೀಡಿಯಾ ಎಂದು ಕರೆಯಲಾಗುತ್ತದೆ ಎಂದು ಎಲ್ಲ ಎಐಗಳು ತಿಳಿಸಿವೆ.

ಈ ಮಾಧ್ಯಮಗಳು ತಮ್ಮನ್ನು ಸಂಪರ್ಕಿಸಿಸುತ್ತಿರುವುದರ ಕುರಿತು ಬರೆದುಕೊಂಡಿರುವ ಕಾಕ್ರೋಚ್ ಜನತಾ ಪಾರ್ಟಿ ‘ನಮ್ಮ ಪಕ್ಷವು ಗೋಧಿ ಮೀಡಿಯಾದ ಯಾವ ಆಂಕರ್ ಜತೆಗೂ ಚರ್ಚೆ ನಡೆಸಲು ಇಚ್ಛಿಸುವುದಿಲ್ಲ. ಹೀಗಾಗಿ ನೀವು ನಮ್ಮ ಜತೆ ಸಂದರ್ಶನ ನಡೆಸಲು ಅಥವಾ ಚರ್ಚೆ ನಡೆಸುವ ತೊಂದರೆ ತೆಗೆದುಕೊಳ್ಳಬೇಡಿ’ ಎಂದು ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ ಖಾತೆಗಳಲ್ಲಿ ಬರೆದುಕೊಂಡು ಚಾಟಿ ಬೀಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BIG NEWS : ಜೂ. 1ಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಚಾಲನೆ : 15,000 ಶಿಕ್ಷಕರ ನೇಮಕಾತಿಗೆ CM ಸಿದ್ದರಾಮಯ್ಯ ಸೂಚನೆನನ್ನ ವಿರುದ್ಧ FIR ದಾಖಲು ಮಾಡಿರುವುದರ ಹಿಂದೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೈವಾಡವಿದೆ: ಹೆಚ್.ವಿಶ್ವನಾಥ್ ಆರೋಪBREAKING: ಹೃದಯಾಘಾತ: ಕೋರ್ಟ್ ಆವರಣದಲ್ಲೇ ಕುಸಿದು ಬಿದ್ದು ವಕೀಲ ಸಾವು|Heart AttackBREAKING: ಪಾಕಿಸ್ತಾನದಲ್ಲಿ ಜೆಎಫ್-17 ಯುದ್ಧ ವಿಮಾನ ಪತನಪಿಹೆಚ್ ಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್: ಡೆತ್ ನೋಟ್ ಬರೆದಿಟ್ಟು ಸಂತ್ರಸ್ತ ಯುವತಿ ಆತ್ಮಹತ್ಯೆSHOCKING : ಹಗಲಲ್ಲೇ ಅಜ್ಜ-ಅಜ್ಜಿಯ ಮೇಲೆ ಹಲ್ಲೆ ನಡೆಸಿ 4 ವರ್ಷದ ಬಾಲಕಿಯ ಕಿಡ್ನ್ಯಾಪ್ ; CCTV ದೃಶ್ಯ ವೈರಲ್ |WATCH VIDEOBIG NEWS: ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕೋಲೇಟ್ ನೀಡಿದ ಪ್ರಧಾನಿ ಮೋದಿ ಟೀಕಿಸಿದ ರಾಹುಲ್ ಗಾಂಧಿದೇಶದ ಜನತೆಗೆ ಕೇಂದ್ರದಿಂದ ಬಂಪರ್ ಸಿಹಿ ಸುದ್ದಿ ; ಖಾತೆಗೆ ರೂ. 5 ಲಕ್ಷ..! ಕೂಡಲೇ ಅರ್ಜಿ ಸಲ್ಲಿಸಿ..!SHOCKING : ‘ಬಿಯರ್ ಬಾಟಲಿ’ಯಲ್ಲಿ ಕಾಂಡೋಮ್ ಪ್ಯಾಕೆಟ್ ಪತ್ತೆ ; ಬೆಚ್ಚಿಬಿದ್ದ ಗ್ರಾಹಕ |WATCH VIDEOBIG NEWS: ಬೆಂಗಳೂರಿನಲ್ಲಿ 35 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ; 8 ಆರೋಪಿಗಳು ಅರೆಸ್ಟ್