LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ದೇವರನ್ನು ಪೂಜೆ ಮಾಡದೇ ಕೇರಳಕ್ಕೆ ಬಂದು ಶೋಕಿ ಮಾಡೋದು ಬಿಡಿ; ಕೊಟ್ಟಿಯೂರು ದೇವಾಲಯದ ವಿರುದ್ಧ ಕಿಡಿಕಾರಿದ ಕನ್ನಡಿಗರಿಗೆ ಮಲಯಾಳಿಗಳ ಪಾಠ!

ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಕೊಟ್ಟಿಯೂರು ದೇವಾಲಯದ್ದೇ ಸುದ್ದಿ. ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಕರ್ನಾಟಕದ ಹಲವಾರು ಭಕ್ತರು ಈ ದೇವಾಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರಯಾಣ ಕೈಗೊಂಡಿದ್ದಾರೆ.

ಇನ್ನು ಕೊಟ್ಟಿಯೂರು ದೇವಾಲಯಕ್ಕೆ ಭೇಟಿ ನೀಡಿದ ಕನ್ನಡಿಗರ ಪೈಕಿ ಅನೇಕರು ದೇವಾಲಯದ ವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದ್ದು, ಇಲ್ಲಿ ಭದ್ರತೆ ಇಲ್ಲ, ಸರಿಯಾದ ಸರತಿ ಸಾಲಿಲ್ಲ, ಸಾವಿರ ರೂ ಕೊಟ್ಟು ಟಿಕೆಟ್ ಪಡೆದರೂ ನೂಕಾಟದಲ್ಲೇ ಸಾಗಿ ದರ್ಶನ ಪಡೆಯಬೇಕು, ಇದನ್ನು ಪ್ರಶ್ನೆ ಮಾಡಲು ಹೋದರೆ ಸಿಬ್ಬಂದಿ ದರ್ಪ ತೋರಿಸುತ್ತಾರೆ, ಹೆಣ್ಣು ಮಕ್ಕಳು ಎಂಬುದನ್ನೂ ಸಹ ನೋಡದೇ ದೈಹಿಕ ಹಲ್ಲೆ ಮಾಡಿದ್ದಾರೆ ಎಂದೆಲ್ಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸ್ಥಳೀಯರ ಜತೆ ಚೆನ್ನಾಗಿಯೇ ನಡೆದುಕೊಳ್ಳುವ ಸಿಬ್ಬಂದಿ ಕನ್ನಡಿಗರ ಜತೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕನ್ನಡಿಗರು ಹಲವು ವಿಡಿಯೊಗಳಲ್ಲಿ ಆರೋಪ ಮಾಡಿದ್ದಾರೆ. ಇನ್ನು ಅತ್ತ ಕನ್ನಡಿಗರ ಈ ಆರೋಪಗಳಿಗೆ ಕೇರಳದ ಹಲವು ಜನರು ವಿಡಿಯೊಗಳನ್ನು ಮಾಡಿ ಉತ್ತರ ನೀಡಿದ್ದು, ಇಲ್ಲಿ ಯಾರೂ ಭಾಷೆಯನ್ನು ನೋಡಿ ನಡೆದುಕೊಳ್ಳುತ್ತಿಲ್ಲ, ಮೊದಲು ಒಂದೇ ಸಾರಿ ಹಲವಾರು ಮಂದಿ ಆಗಮಿಸುವುದನ್ನು ಬಿಡಿ, ಇದು ಯಾತ್ರಾಸ್ಥಳವಲ್ಲ, ಸ್ಥಳೀಯರು ಆರಾಧಿಸಲು ಇರುವ ಸ್ಥಳ, ಇದರ ಇತಿಹಾಸ ತಿಳಿಯದೇ ಮಾತನಾಡಬೇಡಿ ಎಂದಿದ್ದಾರೆ.

ಇಷ್ಟೇ ಅಲ್ಲದೇ ಇಲ್ಲಿಗೆ ಬರುವ ಕನ್ನಡಿಗರೇ ಇಲ್ಲಿ ಇಷ್ಟರ ಮಟ್ಟಿಗೆ ಜನ ಸೇರಲು ಕಾರಣ ನೀವೇ, ನಿಮ್ಮ ರಾಜ್ಯದಿಂದಲೇ ಹೆಚ್ಚಿನ ಜನ ಹರಿದುಬಂದು ಈ ರೀತಿಯ ಸಮಸ್ಯೆ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಕನ್ನಡಿಗರು ದೇವಾಲಯದ ವಿರುದ್ಧ ದೂರುತ್ತಿರುವ ವಿಡಿಯೊವನ್ನು ಶೇರ್ ಮಾಡಿ ತಮ್ಮ ಮನೆ ದೇವರ ದೇವಾಲಯಗಳಿಗೆ ಭೇಟಿ ನೀಡದ ಕನ್ನಡಿಗರು ಆನ್‌ಲೈನ್‌ನಲ್ಲಿ ವೈರಲ್ ಆದ ದೇವಾಲಯಗಳಿಗೆ ಭೇಟಿ ನೀಡುವ ಶೋಕಿ ಮಾಡುವುದನ್ನು ಬಿಡಬೇಕು ಎಂದು ಬರೆದುಕೊಂಡಿದ್ದಾರೆ.

ಮತ್ತೋರ್ವ ವ್ಯಕ್ತಿ ಕನ್ನಡಿಗರು ದೂರುವ ಮುನ್ನ ಕೇರಳದ ನಿಯಮವನ್ನು ಅನುಸರಿಸುವುದನ್ನು ಕಲಿಯಿರಿ. ಶಿಸ್ತಿನಿಂದ ಸರತಿ ಸಾಲಿನಲ್ಲಿ ನಿಲ್ಲದೇ ತಳ್ಳಾಟ ಮಾಡುತ್ತೀರ, ರಸ್ತೆಗಳಲ್ಲಿ ಅನಗತ್ಯವಾಗಿ ಓವರ್‌ ಟೇಕ್ ಮಾಡುತ್ತೀರ ಇದನ್ನೆಲ್ಲ ಬಿಟ್ಟು ಸರಿಯಾಗಿ ನಡೆದುಕೊಳ್ಳಿ ಎಂದು ಪಾಠ ಮಾಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ