LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು ದೇವರಂತೆ ರಕ್ಷಿಸಿದ ಕೆಎಸ್‌ಆರ್‌ಟಿಸಿ ಡ್ರೈವರ್ ವಿಡಿಯೋ ವೈರಲ್

ನೆರೆರಾಜ್ಯ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಒಂದು ಮೈ ನಡುಗಿಸುವ ರೋಮಾಂಚನಕಾರಿ ಘಟನೆ ನಡೆದಿದೆ ಬಿಡುವಿಲ್ಲದ ಹೆದ್ದಾರಿಯ ಮಧ್ಯೆ ಒಂಟಿಯಾಗಿ ಕುಳಿತಿದ್ದ ಪುಟಾಣಿ ಕಂದಮ್ಮನನ್ನು ಖಾಸಗಿ ಬಸ್ಸೊಂದರ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕನ ಈ ಅದ್ಭುತ ಸಮಯಪ್ರಜ್ಞೆಯಿಂದಾಗಿ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಸಂಭವಿಸಬಹುದಾಗಿದ್ದ ಭೀಕರ ರಸ್ತೆ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ

ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಸಮೀಪದ ಪುಲಿಕ್ಕಲ್ನ ಕಿನಾರಪಡಿ ಬಳಿಯ ಒಲವತ್ತೂರು-ಫಾರೂಕ್ ಪಿಡಬ್ಲ್ಯೂಡಿ ರಸ್ತೆಯಲ್ಲಿ ಬೆಳಗ್ಗೆ ಸುಮಾರು 8.30ಕ್ಕೆ ಈ ಘಟನೆ ಸಂಭವಿಸಿದೆ. ಒಲವತ್ತೂರಿನಿಂದ ಫಾರೂಕ್ಗೆ ಸಫಾ ಮರ್ವಾ ಎಂಬ ಖಾಸಗಿ ಬಸ್ ಸಂಚರಿಸುತ್ತಿತ್ತು. ಆ ಸಮಯದಲ್ಲಿ ಲಘು ಮಳೆಯಾಗುತ್ತಿತ್ತು ಮತ್ತು ರಸ್ತೆಯ ತಿರುವಿನಲ್ಲಿ ದೃಷ್ಟಿ ಗೋಚರತೆ ಅತ್ಯಂತ ಕಡಿಮೆ ಇತ್ತು.

ದೇವದೂತರಾದ ಚಾಲಕ-ಕಂಡಕ್ಟರ್:

ಬಸ್ ವೇಗವಾಗಿ ತಿರುವಿನಲ್ಲಿ ಬರುತ್ತಿದ್ದಂತೆ, ಚಾಲಕ ರಾಮಚಂದ್ರನ್ ಅವರಿಗೆ ರಸ್ತೆಯ ಮಧ್ಯದಲ್ಲಿ ಏನೋ ಒಂದು ಮಗು ಒಂಟಿಯಾಗಿ ಕುಳಿತಿರುವುದು ತಕ್ಷಣವೇ ಕಣ್ಣಿಗೆ ಬಿದ್ದಿದೆ. ಜಾಗರೂಕರಾಗಿದ್ದ ಚಾಲಕ ಕ್ಷಣಾರ್ಧದಲ್ಲಿ ಭೀಕರ ಬ್ರೇಕ್ ಹಾಕಿ ಬಸ್ಸನ್ನು ಮಗುವಿನ ಅತ್ಯಂತ ಹತ್ತಿರದಲ್ಲಿ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ

ಕಂಡಕ್ಟರ್ ಮ್ಯಾರಥಾನ್ ರನ್: ಬಸ್ ನಿಲ್ಲುತ್ತಿದ್ದಂತೆ ಸೀಟಿನಿಂದ ಜಿಗಿದ ನಿರ್ವಾಹಕ (ಕಂಡಕ್ಟರ್) ನವಾಸ್ ಅಲಿ, ರಸ್ತೆಗೆ ಓಡಿಹೋಗಿ ಮಗುವನ್ನು ಎತ್ತಿಕೊಂಡು ಮುದ್ದಾಡಿ, ಸುರಕ್ಷಿತವಾಗಿ ಅವರ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ರಕ್ಷಿಸಲ್ಪಟ್ಟ ಈ ಅದೃಷ್ಟವಂತ ಮಗು ರಮೀಸ್ ಎಂಬುವವರ ಮಗಳಾಗಿದ್ದು, ಇನ್ನು ಒಂದು ವರ್ಷ ಕೂಡ ತುಂಬಿಲ್ಲ ಮನೆಯ ಕಂಪೌಂಡ್ ಗೇಟ್ ತೆರೆದಿದ್ದರಿಂದ ಪೋಷಕರ ಕಣ್ಣು ತಪ್ಪಿಸಿ ಸದ್ದಿಲ್ಲದೆ ತೆವಳುತ್ತಾ ಹೆದ್ದಾರಿಯ ಮಧ್ಯಕ್ಕೆ ಬಂದು ಕುಳಿತಿತ್ತು. ಆ ಸಮಯದಲ್ಲಿ ಪೋಷಕರು ವರಂಡಾದಲ್ಲಿ ಕೂತು ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದರು ಎನ್ನಲಾಗಿದೆ. ಬಸ್ ಸಿಬ್ಬಂದಿ ಮಗುವನ್ನು ಮರಳಿ ಮನೆಗೆ ತಂದು ಒಪ್ಪಿಸಿದಾಗಲೇ ಪೋಷಕರಿಗೆ ಅಸಲಿ ವಿಷಯ ಗೊತ್ತಾಗಿದ್ದು

ಸಕಾಲದಲ್ಲಿ ಮಗುವಿನ ಪ್ರಾಣ ಉಳಿಸಿದ ಬಸ್ ಚಾಲಕ ಮತ್ತು ನಿರ್ವಾಹಕನ ಸಾಹಸಕ್ಕೆ ಇಡೀ ದೇಶವೇ ಸೆಲ್ಯೂಟ್ ಹೊಡೆಯುತ್ತಿದೆ. ಕೇರಳದ ಸಾರಿಗೆ ಸಚಿವರು ಹಾಗೂ ಕಾರ್ಮಿಕ ಸಚಿವರು ಖುದ್ದಾಗಿ ಚಾಲಕ ರಾಮಚಂದ್ರನ್ ಹಾಗೂ ಕಂಡಕ್ಟರ್ ನವಾಸ್‌ಗೆ ಫೋನ್ ಮಾಡಿ ಅಭಿನಂದಿಸಿದ್ದಾರೆ. ಇತ್ತ ಮೋಟಾರು ವಾಹನ ಇಲಾಖೆ (MVD) ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದೆ

“ವಾಹನ ಚಾಲನೆ ಮಾಡುವಾಗ ‘ಯಾವಾಗ ಏನು ಬೇಕಾದರೂ ಸಂಭವಿಸಬಹುದು’ ಎಂಬ ಜಾಗರೂಕತೆಯನ್ನು ಚಾಲಕರು ಹೊಂದಿರಬೇಕು. ಯಾವುದೇ ಅಪಘಾತಕ್ಕೆ ಆಸ್ಪದ ನೀಡದೆ ಬಸ್ ನಿಲ್ಲಿಸಿ, ಮಗುವಿನ ಜೀವ ಉಳಿಸಿದ ರಾಮಚಂದ್ರನ್ ಮತ್ತು ನವಾಸ್ ಅವರ ಸಮಯಪ್ರಜ್ಞೆಗೆ ನಮ್ಮ ಅಭಿನಂದನೆಗಳು.” ಎಂದು ತಿಳಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ