LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾವು ಯಾವ ತಂತ್ರಗಾರಿಕೆಯನ್ನೂ ಮಾಡಿಲ್ಲ; ಅಡ್ಡಮತದಾನದ ಬಗ್ಗೆ ಗೊತ್ತಿಲ್ಲ ಎಂದ ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ವಿಧಾನ ಪರಿಷತ್ ಮತದಾನ ಮುಗಿದಿದೆ.‌ ನಾವು ಯಾವ ತಂತ್ರಗಾರಿಕೆ ಮಾಡಿಲ್ಲ.‌ ತಂತ್ರಗಾರಿಕೆ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ‌ ಮತದಾನ ಮುಗಿದಿದೆ.‌ ನಾವು ಯಾವ ತಂತ್ರಗಾರಿಕೆ ಮಾಡಿಲ್ಲ.‌ ಎಲ್ಲರೂ, ಬುದ್ಧಿವಂತರಿದ್ದಾರೆ, ಪ್ರಜ್ಞಾವಂತರಿದ್ದಾರೆ.‌ ಸ್ವಇಚ್ಛೆಯಿಂದ ಶಾಸಕರು ಮತ ಹಾಕಿದ್ದಾರೆ ಎಂದರು.

ಶಾಸಕರ ಜೊತೆ ಎರಡು ದಿನ‌ ರೆಸಾರ್ಟ್​ನಲ್ಲಿ ಕೂತಿದ್ದೆ. ಯಾವ ತಂತ್ರಗಾರಿಕೆ ಮಾಡಿಲ್ಲ. ಅಡ್ಡ ಮತದಾನದ ಬಗ್ಗೆ ಗೊತ್ತಿಲ್ಲ.‌ ಅಡ್ಡ ಮತದಾನ ಆಗುವ ಅಗತ್ಯ ಇಲ್ಲ. ನಮ್ಮ ಮತ ನಮಗೆ ಹಾಕಿ ಅಂತ‌ ಕೇಳಿದ್ದೇವೆ ಅಷ್ಟೇ. ನಮ್ಮ ಶಾಸಕರಿಗೆ ತರಬೇತಿ ನೀಡಲು ರೆಸಾರ್ಟ್​ಗೆ ಹೋಗಿದ್ದೆವು. ಪ್ರಾಶಸ್ತ್ಯದ ಮತಗಳನ್ನು ಹುಷಾರಾಗಿ ಹಾಕಬೇಕಾಗಿದೆ. ಆ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ ಎಂದರು.

ನನಗೆ 224 ಜನ ಆತ್ಮೀಯರಾಗಿದ್ದಾರೆ. ಎಲ್ಲರೂ ನನ್ನ ಬ್ರದರ್ಸ್. ನಾನು ಸಿಎಂ ಆಗಿರುವುದು 224 ಶಾಸಕರಿಗೆ. ಅಡ್ಡಮತದಾನ ಬಗ್ಗೆ ನನಗೆ ಗೊತ್ತಿಲ್ಲ.‌ ಕನ್ನಡಿ ಹಾಕಿ ನೋಡಲು ಆಗಲ್ಲ.‌ ಗುಪ್ತ‌ ಮತದಾನ ಇದು ಎಂದು ಹೇಳಿದರು.

ಇದೇ ವೇಳೆ ಮೇಕೆದಾಟು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೇಕೆದಾಟು ಹಾರ್ಟ್ ಆಫ್ ಡಿ.ಕೆ. ಶಿವಕುಮಾರ್ ಅಲ್ಲ. ಮೇಕೆದಾಟು ಹಾರ್ಟ್ ಆಫ್ ದಕ್ಷಿಣ ಕರ್ನಾಟಕವಾಗಿದೆ. ಈ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗ ಆಗುತ್ತದೆ. ಇದರಿಂದ ತಮಿಳುನಾಡು ರೈತರಿಗೆ ರಕ್ಷಣೆ ಸಿಗುತ್ತದೆ ಎಂದರು.

ಮೇಕೆದಾಟು ಯೋಜನೆಯ ಒಂದು ಹನಿ ನೀರನ್ನೂ, ನೀರಾವರಿಗೆ ಬಳಸುವುದಿಲ್ಲ. ಅದನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುತ್ತೇವೆ. ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯ ಇದೆ. ತಮಿಳುನಾಡಿಗೆ ಒಂದು ಅಜೆಂಡಾ ಇದೆ. ಅದರಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ಈ ವಿಚಾರ ಕೋರ್ಟ್​ನಲ್ಲಿದೆ. 400 ಟಿಎಂಸಿ ಕಾವೇರಿ ನೀರು ಸಮುದ್ರಕ್ಕೆ ಹೋಗಿದೆ. ಅವರು ಅನೇಕ ಅಣೆಕಟ್ಟು ಕಟ್ಟುತ್ತಿದ್ದಾರೆ. ಅದಕ್ಕೆ ನಮ್ಮ ತಕರಾರು ಏನೂ ಇಲ್ಲ. ಅದು ಅವರ ಭೂಮಿ ಕಟ್ಟಲಿ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ನಮ್ಮ ಕರ್ತವ್ಯವಾಗಿದೆ. ಇಂಧನ ಕ್ಷೇತ್ರಕ್ಕೆ ಈ ಯೋಜನೆಯಿಂದ ರಾಜ್ಯಕ್ಕೆ ನೆರವಾಗಲಿದೆ. ಇದು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸುವ ಯೋಜನೆಯಾಗಿದೆ‌. ತ‌ಮಿಳುನಾಡಿನವರ ಬಳಿ ಮಾತನಾಡಲು ಸಿದ್ಧ. ನಮಗೆ ಯಾವ ತಕರಾರು ಇಲ್ಲ. ಅನೇಕರು ತಮಿಳುನಾಡಿನಿಂದ ಇಲ್ಲಿಗೆ ಬಂದು, ಕನ್ನಡಿಗರು ಅಲ್ಲಿಗೆ ಹೋಗಿ ವೃತ್ತಿ ಮಾಡುತ್ತಾರೆ. ಕಷ್ಟ ಕಾಲದಲ್ಲಿ ನಾವು ಸುಮಾರು 171 ಟಿಎಂಸಿ ನೀರು ಅವರಿಗೆ ಕೊಡುತ್ತೇವೆ. ಕರ್ನಾಟಕದವರು ಬದುಕಬೇಕು, ತಮಿಳುನಾಡಿನವರೂ ಬದುಕಬೇಕು ಎಂದರು.

ತಮಿಳುನಾಡಿನ ಪರಿಶೀಲನಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿದೆ. ರಾಜ್ಯಕ್ಕೆ ಸಂಬಂಧ‌ಪಟ್ಟ ಎಲ್ಲಾ ಸಂಸದರು ರಾಜ್ಯದ ಹಿತಾಸಕ್ತಿ ಕಾಪಾಡುತ್ತಾರೆ. 170 ಟಿಎಂಸಿ ಬಿಡಬೇಕು ಅಂದಾಗ ನಾವು ಒಪ್ಪಿಲ್ಲವಾ?. ಖಂಡಿತವಾಗಿ ಅವರಿಗೆ ಮನವಿ ಮಾಡುತ್ತೇವೆ. ರಾಜಕಾರಣ ಏನಿಲ್ಲ.‌ ಇಬ್ಬರಿಗೂ ಒಳ್ಳೆಯದಾಗುವ ಯೋಜನೆ. ತಾಳ್ಮೆಯಿಂದ ಇರಬೇಕು. ಜನರ ಹಿತ ಕಾಪಾಡಿಕೊಂಡು ಹೋಗೋಣ ಎಂದು ತಿಳಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ ಮತ ಹಾಕಿ ಉಲ್ಟಾ ಹೊಡೆದ ಬಿಜೆಪಿ, ಜೆಡಿಎಸ್ ಶಾಸಕರು; 5 ಸ್ಥಾನ ಗೆದ್ದ ಕಾಂಗ್ರೆಸ್!5 ನಗರ ಪಾಲಿಕೆಗಳ ರಸ್ತೆಗಳ ಅಭಿವೃದ್ಧಿಗೆ 2000 ಕೋಟಿ ರೂ ವಿಶೇಷ ಅನುದಾನ ಬಿಡುಗಡೆ: ಕೃಷ್ಣಬೈರೇಗೌಡಮೇಕೆದಾಟು ದಕ್ಷಿಣ ಭಾರತದ ಹೃದಯದಂತಹ ಯೋಜನೆ, ಇದರಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಹಿತ ಅಡಗಿದೆ: ಡಿಕೆಶಿBIG NEWS: ‘ಕರ್ತವ್ಯ’ ಆ್ಯಪ್ ನೋಂದಣಿಯಲ್ಲಿ ಶೇ. 70.6 ರಷ್ಟು ಪ್ರಗತಿ ಸಾಧನೆ: ಸರ್ಕಾರ ಸ್ಪಷ್ಟನೆ ​ಮಹಿಷಿ ಉತ್ತರಾಧಿ ಮಠದಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನ ದೋಚಿದ್ದ ಕಳ್ಳ ಅರೆಸ್ಟ್ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ: ನಕಲಿ ವೈದ್ಯ ಮುಕ್ತ ಜಿಲ್ಲೆಯಾಗಿಸಲು ಸೂಚನೆಮನೆಯ ಹೊರಗೆ ಮಲಗಿದ್ದ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ ಪುತ್ರBREAKING NEWS: MLC ಚುನಾವಣೆಯಲ್ಲಿ ಕಾಂಗ್ರೆಸ್ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು, ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಪರಾಭವಮಂಡ್ಯ ಮೇಡಂಗೂ ಟೋಪಿ ಹಾಕಿದ್ರು; ಅವರಿಗಾದರೂ ರಾಜ್ಯಸಭೆ ಟಿಕೆಟ್ ಕೊಟ್ಟಿದ್ರೆ ನಾವೇನು ಬೇಡಾ ಅಂತಿದ್ವಾ? ರೇವಣ್ಣ ಅಚ್ಚರಿ ಹೇಳಿಕೆಮುಖ್ಯಮಂತ್ರಿಯಾಗಿ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ರಣತಂತ್ರಕ್ಕೆ ಬೆಚ್ಚಿದ ‘ದೋಸ್ತಿ’