LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದ್ಯದ ಅಮಲಿನಲ್ಲಿ ಮದುವೆ ಮಂಟಪಕ್ಕೆ ಬಂದ ವರ ; ಕಪಾಳಕ್ಕೆ ಬಾರಿಸಿ ಮದುವೆಯನ್ನೇ ರದ್ದು ಮಾಡಿದ ವಧು..!

ಜೀವನದ ಅತ್ಯಂತ ಮಹತ್ವದ ಕ್ಷಣದಲ್ಲಿ ಯುವತಿಯೊಬ್ಬಳು ತೆಗೆದುಕೊಂಡ ಧೈರ್ಯದ ನಿರ್ಧಾರ ಈಗ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಮದುವೆ ದಿನವೇ ಮದ್ಯದ ಅಮಲಿನಲ್ಲಿ ತೂಗಾಡುತ್ತಾ ಮಂಟಪಕ್ಕೆ ಬಂದ ವರನನ್ನು ಕಂಡ ವಧು ಎಲ್ಲರ ಎದುರೇ ಕಪಾಳಕ್ಕೆ ಬಾರಿಸಿ, ಮದುವೆಗೆ ನಿರಾಕರಿಸಿದ್ದಾಳೆ. ಈ ಘಟನೆ ಛತ್ತೀಸ್‌ಗಢದ ಜಂಜ್ಗೀರ್-ಚಂಪಾ ಜಿಲ್ಲೆಯ ಕೋಸ್ಮಾಂಡಾ ಗ್ರಾಮದಲ್ಲಿ ನಡೆದಿದೆ.

ಜೂನ್ 23ರಂದು ಕೋಸ್ಮಾಂಡಾ ಗ್ರಾಮದ ಮುಸ್ಕಾನ್ ಪ್ರಧಾನ (22) ಹಾಗೂ ಖೋಖ್ರಾ ಗ್ರಾಮದ ಸಂತ್ ರಾಮ್ (24) ಅವರ ವಿವಾಹ ನಿಗದಿಯಾಗಿತ್ತು. ನಿಗದಿತ ಸಮಯಕ್ಕೆ ಮೆರವಣಿಗೆಯೊಂದಿಗೆ ವರ ಮದುವೆ ಮಂಟಪಕ್ಕೆ ಬಂದಿದ್ದ. ಆದರೆ ಆತ ಅತಿಯಾಗಿ ಮದ್ಯ ಸೇವಿಸಿ ನಿಲ್ಲಲೂ ಆಗದ ಸ್ಥಿತಿಯಲ್ಲಿದ್ದನು. ಇದನ್ನು ಗಮನಿಸಿದ ವಧು ಮುಸ್ಕಾನ್ ಎಲ್ಲರ ಎದುರೇ ವರನಿಗೆ ಕಪಾಳಕ್ಕೆ ಬಾರಿಸಿ, “ಮದ್ಯಪಾನಿಯೊಂದಿಗೆ ನಾನು ಮದುವೆಯಾಗುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿ ವಿವಾಹವನ್ನು ರದ್ದುಪಡಿಸಿದ್ದಾಳೆ.

ಮುಸ್ಕಾನ್ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ನಿಶ್ಚಿತಾರ್ಥದ ದಿನವೂ ವರ ಮದ್ಯ ಸೇವಿಸಿ ಬಂದಿದ್ದ. ಆಗ ಎಚ್ಚರಿಕೆ ನೀಡಿದಾಗ ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಎಂದು ಆತ ಭರವಸೆ ನೀಡಿದ್ದ. ಆದರೆ ಮದುವೆ ದಿನವೇ ಮತ್ತೆ ಕುಡಿದು ಬಂದಿದ್ದರಿಂದ ಮದುವೆ ನಿರಾಕರಿಸುವ ನಿರ್ಧಾರ ಕೈಗೊಂಡಿದ್ದಾಳೆ.

ವಧುವಿನ ನಿರ್ಧಾರದಿಂದ ಮದುವೆ ಸ್ಥಳದಲ್ಲಿ ಎರಡೂ ಕುಟುಂಬಗಳ ನಡುವೆ ವಾಗ್ವಾದ ಉಂಟಾಗಿ, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ವೇಳೆ ಎರಡೂ ಕಡೆಯ ಯುವಕರ ನಡುವೆ ನಡೆದ ಗಲಾಟೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆ ಸಿದ್ಧತೆಗಾಗಿ ಮಾಡಿದ ವೆಚ್ಚವನ್ನು ಪರಿಗಣಿಸಿ, ವಧು ಕುಟುಂಬಕ್ಕೆ ಸುಮಾರು ₹3 ಲಕ್ಷ ಪರಿಹಾರ ನೀಡಲು ವರನ ಕುಟುಂಬ ಒಪ್ಪಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. 10ನೇ ತರಗತಿವರೆಗೆ ಶಿಕ್ಷಣ ಪಡೆದಿರುವ ಮುಸ್ಕಾನ್ ಇದೀಗ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿದ್ದಾಳೆ. ಮದ್ಯದ ದುಶ್ಚಟದ ವಿರುದ್ಧ ಧೈರ್ಯದಿಂದ ನಿಂತು ಮಾದರಿಯಾದ ಆಕೆಯನ್ನು ಜಂಜ್ಗೀರ್-ಚಂಪಾ ಜಿಲ್ಲಾ ಪೊಲೀಸ್ ಅಧೀಕ್ಷಕರು ಸಮಾಜಸೇವಕರು ಹಾಗೂ ಮಹಿಳಾ ಪ್ರತಿನಿಧಿಗಳ ಸಮ್ಮುಖದಲ್ಲಿ ಸನ್ಮಾನಿಸಿದ್ದಾರೆ.

ಈ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮದ್ಯ ವ್ಯಸನ ಹಾಗೂ ಜವಾಬ್ದಾರಿಯಿಲ್ಲದ ವರ್ತನೆಗೆ ಮನ್ನಣೆ ನೀಡಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮುಸ್ಕಾನ್ ಅವರ ಧೈರ್ಯದ ನಿರ್ಧಾರ ಅನೇಕ ಯುವತಿಯರಿಗೆ ಪ್ರೇರಣೆಯಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BIG NEWS : ರಾಜ್ಯದ ರೈತರೇ ಗಮನಿಸಿ ; ಕೃಷಿ ಇಲಾಖೆಯಿಂದ ಸಿಗುವ ಎಲ್ಲಾ ಯೋಜನೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.!72,000 ಹುದ್ದೆಗಳ ನೇಮಕಾತಿಗೆ ಇಲಾಖೆಗಳಿಗೆ ನೋಟಿಫಿಕೇಷನ್: ಸ್ಪಷ್ಟನೆ ನೀಡಿದ ಡಿಸಿಎಂ ಪರಮೇಶ್ವರ್JOB ALERT : ಅಂಗನವಾಡಿ ಕಂ-ಕ್ರಷ್ ಕೇಂದ್ರಗಳ ಹುದ್ದೆಗಳಿಗೆ ಆಫ್‌ಲೈನ್ ಅರ್ಜಿ ಆಹ್ವಾನBIG NEWS : ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆ , ಪ್ರಸಾರಕ್ಕೆ ಅಲ್ಲ’ ; ಖಾಸಗಿ ವಿಡಿಯೋ ಹಂಚಿದರೆ ಕಡ್ಡಾಯ FIR.!CBSE ಶಾಲೆಗಳಲ್ಲಿ ತ್ರಿಭಾಷಾ ನೀತಿ ಗೊಂದಲಗಳಿಗೆ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ತೆರೆ: ನಿಯಮ 6ನೇ ತರಗತಿಯ ಹೊಸ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯBIG NEWS : ರೈಲ್ವೇ ಪ್ರಯಾಣಿಕರೇ ಗಮನಿಸಿ : ಲಗೇಜ್ ನಿಯಮಗಳಲ್ಲಿ ಹಲವು ಬದಲಾವಣೆ , ಕ್ರೀಡಾಪಟುಗಳಿಗೆ ಬಿಗ್ ರಿಲೀಫ್ !ನಮ್ಮ ಮೆಟ್ರೋ ಮೂರು ವರ್ಷದಲ್ಲಿ 21 ಬಾರಿ ಎಡವಟ್ಟು: BMRCLಗೆ 5 ಪ್ರಶ್ನೆಗಳು: ರೈಲ್ವೆ ಸುರಕ್ಷತಾ ಕಮಿಷನರ್ ಹಾಗೂ ಸಚಿವ ಕೃಷ್ಣಬೈರೇಗೌಡಗೆ ಪತ್ರ ಬರೆದ ಸಂಸತ ತೇಜಸ್ವಿ ಸೂರ್ಯBIG NEWS : ನಿಮ್ಮ ತಾಲ್ಲೂಕಿಗೆ ಯಾರೆಲ್ಲಾ ಶಿರಸ್ತೇದಾರ್ , ಉಪ ತಹಸೀಲ್ದಾರ್ ಬಂದಿದ್ದಾರೆ.? ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ.!ಬಾಹುಬಲಿ : ದಿ ಟಾರ್ಚ್ ಬೇರರ್’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ; ‘ಬಾಹುಬಲಿ-3’ ಬಗ್ಗೆ ಬಿಗ್ ಹಿಂಟ್, ಫ್ಯಾನ್ಸ್ ಫುಲ್ ಖುಷ್.!ಮದ್ಯದ ಅಮಲಿನಲ್ಲಿ ಮದುವೆ ಮಂಟಪಕ್ಕೆ ಬಂದ ವರ ; ಕಪಾಳಕ್ಕೆ ಬಾರಿಸಿ ಮದುವೆಯನ್ನೇ ರದ್ದು ಮಾಡಿದ ವಧು..!