LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಫ್ರಿಕಾದ ಕಾಡಿನಿಂದ ರಾಮಾಯಣದವರೆಗೆ: ಮಹೇಶ್ ಬಾಬು ನಟನೆಯ ‘ವಾರಣಾಸಿ’ ಚಿತ್ರದ ರೋಚಕ ಕಥಾಹಂದರ ರಿವೀಲ್

ಭಾರತೀಯ ಚಿತ್ರರಂಗದ ಖ್ಯಾತ ದರ್ಶಕ ಎಸ್‌ಎಸ್ ರಾಜಮೌಳಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ವಾರಣಾಸಿ’ ಸದ್ಯ ಇಡೀ ಸಿನಿಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸದ್ಯ ಪ್ಯಾರಿಸ್‌ನಲ್ಲಿ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ರಾಜಮೌಳಿ, ತಮ್ಮ ಹಿಂದಿನ ಸೂಪರ್ ಹಿಟ್ ಚಿತ್ರಗಳಾದ ‘ಬಾಹುಬಲಿ’ ಮತ್ತು ‘ಆರ್‌ಆರ್‌ಆರ್’ ಪ್ರದರ್ಶನದ ವೇಳೆ ಈ ಹೊಸ ಚಿತ್ರದ ಬಗ್ಗೆ ಹಲವು ರೋಮಾಂಚಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವು ಕೇವಲ ಒಂದು ಸಾಧಾರಣ ಕಥೆಯಲ್ಲ, ಬದಲಿಗೆ ಪ್ರೇಕ್ಷಕರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯುವ ದೃಶ್ಯ ವೈಭವವಾಗಿದೆ ಎಂದು ಅವರು ಹೇಳಿದ್ದಾರೆ.

ಆಫ್ರಿಕಾದ ಕಾಡುಗಳಿಂದ ಅಂಟಾರ್ಕ್ಟಿಕಾದ ಮಂಜಿನವರೆಗೆ ಈ ಚಿತ್ರದ ಕಥಾಹಂದರವು ಪ್ರೇಕ್ಷಕರನ್ನು ಆಫ್ರಿಕಾದ ದಟ್ಟ ಕಾಡುಗಳು, ಅಂಟಾರ್ಕ್ಟಿಕಾದ ಹಿಮದ ಮಡಿಲು, ರಾಮಾಯಣದ ದೈವಿಕ ಜಗತ್ತು ಹಾಗೂ ಭೀಕರ ನೈಸರ್ಗಿಕ ವಿಕೋಪಗಳ ದೃಶ್ಯಗಳ ಮೂಲಕ ಒಂದು ಅದ್ಭುತ ಲೋಕಕ್ಕೆ ಕರೆದೊಯ್ಯಲಿದೆ. ಚಿತ್ರದಲ್ಲಿ ಹತ್ತು ಹಲವು ಫ್ಯಾಂಟಸಿ ಅಂಶಗಳಿದ್ದರೂ, ತಂದೆ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯವೇ ಈ ಸಿನಿಮಾದ ಪ್ರಮುಖ ಜೀವಾಳ ಎಂದು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್ ಅಂತ್ಯಕ್ಕೆ ಶೂಟಿಂಗ್ ಮುಕ್ತಾಯ ಚಿತ್ರದ ಚಿತ್ರೀಕರಣದ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕರು, ಮುಂಬರುವ ಸೆಪ್ಟೆಂಬರ್ ತಿಂಗಳ ಕೊನೆಯ ವೇಳೆಗೆ ಸಿನಿಮಾದ ಬಹುತೇಕ ಪ್ರಮುಖ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಆ ನಂತರ ಪೋಸ್ಟ್ ಪ್ರೊಡಕ್ಷನ್ ಮತ್ತು ಗ್ರಾಫಿಕ್ಸ್ ಕೆಲಸಗಳು ತೇಜಸ್ವಿಯಾಗಿ ಸಾಗಲಿವೆ ಎಂದು ತಿಳಿಸಿದ್ದಾರೆ.

ಈ ದೃಶ್ಯ ವೈಭವದ ಚಿತ್ರದಲ್ಲಿ ಹಿರಿಯ ನಟ ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡುತ್ತಿದ್ದು, ಕೆಎಲ್ ನಾರಾಯಣ ಮತ್ತು ಎಸ್‌ಎಸ್ ಕಾರ್ತಿಕೇಯ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಐಮ್ಯಾಕ್ಸ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ 2027ರ ಏಪ್ರಿಲ್ 7 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜೆಡಿಎಸ್ ದೂರುನಾಳೆಯಿಂದ ರಾಜ್ಯದಲ್ಲಿ ಎಸ್ಐಆರ್: ಮತ ಹಕ್ಕು ಕಳೆದುಕೊಂಡ್ರೆ ಸಿಗಲ್ಲ ಸೌಲಭ್ಯವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು; ವೈರಲ್ ಆಡಿಯೊ ಬಗ್ಗೆ ಸದಾನಂದಗೌಡ ಮೊದಲ ಪ್ರತಿಕ್ರಿಯೆಇಂಧನ ಇಲಾಖೆ ಬಲಿಷ್ಠವಾಗಿದೆ, ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ: ಕೆಜೆ ಜಾರ್ಜ್BREAKING: ಜರ್ಮನಿಯಲ್ಲಿ ಸಾಮೂಹಿಕ ಗುಂಡಿನ ದಾಳಿ: ಕನಿಷ್ಠ 5 ಜನ ಸಾವು: ಇಬ್ಬರು ಶಂಕಿತರು ಅರೆಸ್ಟ್ಸ್ವರ್ಗವೇನೂ ಬಿದ್ದುಹೋಗಲ್ಲ ಸುಮ್ಮನಿರಿ; ರಾಮಮಂದಿರ ಅವ್ಯವಹಾರ ಅರ್ಜಿ ವಿಚಾರಣೆ ಬೇಗ ಮಾಡಿ ಎಂದವರಿಗೆ ಚಾಟಿ ಬೀಸಿದ ಸುಪ್ರೀಂಹೋಟೆಲ್ ನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಖ್ಯಾತ ನಟಿ ಸೇರಿ ಇಬ್ಬರು ನಟಿಯರ ರಕ್ಷಣೆನಾಳೆಯಿಂದ ಮನೆ ಮನೆಗೆ BLO ಗಳು ಭೇಟಿ: SIR ಬಗ್ಗೆ ಮಾಹಿತಿ ನೀಡಿದ ರಾಜ್ಯ ಚುನಾವಣಾಧಿಕಾರಿ ಅನ್ಬುಕುಮಾರ್ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ಷಡ್ಯಂತ್ರ: ರೇಣುಕಾಚಾರ್ಯ ಗುಡುಗುಶರಾವತಿ ಪಂಪ್ಡ್ ಸ್ಟೋರೇಜ್‌, ಕಳಸಾ ಬಂಡೂರಿ ಯೋಜನೆ ಅರಣ್ಯ ಅನುಮತಿ ಪ್ರಕ್ರಿಯೆ ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಲು ಸೂಚನೆ