LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾತ್ರಿ ಮಲಗುವ ಭಂಗಿ ಬದಲಾಯಿಸಿ ನೋಡಿ: ಅಂಗಾತ ಮಲಗುವುದರಿಂದ ಸಿಗುವ ದೈಹಿಕ ಪ್ರಯೋಜನಗಳು ಅಪಾರ

ನಮ್ಮ ದೈನಂದಿನ ಆರೋಗ್ಯದಲ್ಲಿ ನಾವು ಸೇವಿಸುವ ಆಹಾರ ಮತ್ತು ವ್ಯಾಯಾಮ ಎಷ್ಟು ಮುಖ್ಯವೋ ನಾವು ರಾತ್ರಿ ಮಲಗುವ ಭಂಗಿ ಅಥವಾ ಶೈಲಿ ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಬಹುತೇಕರು ತಮಗೆ ಇಷ್ಟಬಂದಂತೆ ಮಲಗಲು ಬಯಸುತ್ತಾರೆ. ಕೆಲವರು ಕುಡಿಕಲು ಮಲಗಿದರೆ ಇನ್ನು ಕೆಲವರು ಎಡ ಅಥವಾ ಬಲ ಮಗ್ಗುಲಿಗೆ ಮಲಗುತ್ತಾರೆ. ಆದರೆ ವೈದ್ಯಕೀಯ ಲೋಕದ ಪ್ರಕಾರ ಬೆನ್ನಿನ ಮೇಲೆ ಅಂದರೆ ಅಂಗಾತ ಮಲಗುವ ಅಭ್ಯಾಸವು ದೇಹಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ನಿರಂತರವಾಗಿ ಕಾಡುವ ದೇಹದ ಹಲವು ಸಣ್ಣಪುಟ್ಟ ನೋವುಗಳಿಗೆ ಮತ್ತು ಸೌಂದರ್ಯ ವೃದ್ಧಿಗೆ ಈ ಮಲಗುವ ಶೈಲಿ ರಾಮಬಾಣವಾಗಿದೆ.

ಅಂಗಾತ ಮಲಗುವುದರಿಂದ ನಮ್ಮ ದೇಹದ ಮೇಲಾಗುವ ಧನಾತ್ಮಕ ಬದಲಾವಣೆಗಳ ವಿವರ ಇಲ್ಲಿದೆ.

ಬೆನ್ನು ಮತ್ತು ಕುತ್ತಿಗೆ ನೋವಿಗೆ ಪರಿಹಾರ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರಲ್ಲಿ ಬೆನ್ನು ಮತ್ತು ಕುತ್ತಿಗೆ ನೋವು ಸಾಮಾನ್ಯವಾಗಿದೆ. ನಾವು ಅಂಗಾತ ಮಲಗಿದಾಗ ನಮ್ಮ ಬೆನ್ನುಮೂಳೆ, ಕುತ್ತಿಗೆ ಮತ್ತು ತಲೆ ನೈಸರ್ಗಿಕವಾದ ನೇರ ಸ್ಥಿತಿಯಲ್ಲಿ ಇರುತ್ತವೆ. ಇದರಿಂದ ದೇಹದ ಯಾವುದೇ ಭಾಗದ ಮೇಲೆ ಅನಗತ್ಯ ಒತ್ತಡ ಬೀಳುವುದಿಲ್ಲ. ಇದು ಮಾಂಸಖಂಡಗಳ ಬಿಗಿತವನ್ನು ಕಡಿಮೆ ಮಾಡಿ ದೀರ್ಘಕಾಲದ ದೇಹದ ನೋವುಗಳಿಂದ ಮುಕ್ತಿ ನೀಡಲು ಸಹಕಾರಿಯಾಗಿದೆ.

ಮುಖದ ಸೌಂದರ್ಯ ಮತ್ತು ಸುಕ್ಕುಗಳ ನಿಯಂತ್ರಣ ಮಗ್ಗುಲಾಗಿ ಅಥವಾ ಬೋರಲಾಗಿ ಮಲಗಿದಾಗ ಮುಖದ ಚರ್ಮವು ದಿಂಬಿಗೆ ಒತ್ತುವುದರಿಂದ ಮುಖದ ಮೇಲೆ ಸುಕ್ಕುಗಳು ಬೇಗನೆ ಮೂಡುತ್ತವೆ. ಆದರೆ ಬೆನ್ನಿನ ಮೇಲೆ ಮಲಗುವುದರಿಂದ ಮುಖದ ಚರ್ಮವು ಮುಕ್ತವಾಗಿ ಗಾಳಿಯಾಡಲು ಸಹಾಯವಾಗುತ್ತದೆ. ಚರ್ಮದ ಮೇಲೆ ಯಾವುದೇ ಘರ್ಷಣೆ ಇಲ್ಲದಿರುವುದರಿಂದ ಮುಖದ ಬಿಗಿತ ಕಾಪಾಡಿಕೊಳ್ಳಬಹುದು. ಅಲ್ಲದೆ ಕಣ್ಣಿನ ಕೆಳಗೆ ಬರುವ ಕಪ್ಪು ವರ್ತುಲಗಳು ಹಾಗೂ ಮುಖದ ಉಬ್ಬರವನ್ನು ಕಡಿಮೆ ಮಾಡಲು ಇದು ಅತ್ಯಂತ ಸರಳ ವಿಧಾನವಾಗಿದೆ.

ಆಮ್ಲೀಯತೆ ಮತ್ತು ಜೀರ್ಣಕ್ರಿಯೆ ಸುಧಾರಣೆ ರಾತ್ರಿ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಎದೆಯುರಿ ಅಥವಾ ಆಮ್ಲೀಯತೆ ಸಮಸ್ಯೆಯಿಂದ ಬಳಲುವವರಿಗೆ ಅಂಗಾತ ಮಲಗುವುದು ಉತ್ತಮ ಪರಿಹಾರ ನೀಡುತ್ತದೆ. ಈ ಭಂಗಿಯಲ್ಲಿ ನಮ್ಮ ಹೊಟ್ಟೆಯು ಅನ್ನನಾಳಕ್ಕಿಂತ ಕೆಳಗಿನ ಮಟ್ಟದಲ್ಲಿ ಇರುವುದರಿಂದ ಜಠರದಲ್ಲಿರುವ ಆಮ್ಲಗಳು ಮೇಲಕ್ಕೆ ಬರುವುದು ತಪ್ಪುತ್ತದೆ. ಇದು ರಾತ್ರಿಯ ಸಮಯದಲ್ಲಿ ಕಾಡುವ ಗ್ಯಾಸ್ಟ್ರಿಕ್ ಅಥವಾ ಎದೆಯುರಿಯನ್ನು ತಡೆಯಲು ನೆರವಾಗುತ್ತದೆ.

ಉಸಿರಾಟ ಪ್ರಕ್ರಿಯೆ ಸುಲಭವಾಗುತ್ತದೆ ಅಂಗಾತ ಮಲಗಿದಾಗ ನಮ್ಮ ಶ್ವಾಸಕೋಶ ಮತ್ತು ಡಯಾಫ್ರಾಮ್ ಭಾಗಕ್ಕೆ ಯಾವುದೇ ಒತ್ತಡ ಇರುವುದಿಲ್ಲ. ಇದರಿಂದಾಗಿ ಉಸಿರಾಟದ ಪ್ರಕ್ರಿಯೆಯು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ನಡೆಯುತ್ತದೆ. ದೇಹಕ್ಕೆ ಆಮ್ಲಜನಕದ ಪೂರೈಕೆ ಸರಿಯಾಗಿ ಆದಾಗ ನರಮಂಡಲವು ಶಾಂತಗೊಂಡು ಆಳವಾದ ಮತ್ತು ನೆಮ್ಮದಿಯ ನಿದ್ದೆ ನಮ್ಮದಾಗುತ್ತದೆ.

ಪ್ರತಿದಿನ ನಾವು ಮಲಗುವ ಸಣ್ಣ ಬದಲಾವಣೆಯು ನಮ್ಮ ದಿನನಿತ್ಯದ ಚಟುವಟಿಕೆಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಆರಂಭದಲ್ಲಿ ಅಂಗಾತ ಮಲಗುವುದು ಸ್ವಲ್ಪ ಕಷ್ಟ ಎನಿಸಿದರೂ ದಿನ ನಿರಂತರವಾಗಿ ಅಭ್ಯಾಸ ಮಾಡಿಕೊಳ್ಳುವುದರಿಂದ ಉತ್ತಮ ದೈಹಿಕ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BIG NEWS: ಸುರಕ್ಷತಾ ಕ್ರಮಗಳೊಂದಿಗೆ ಬಂಡಿಪುರ–ನಾಗರಹೊಳೆ ಸಫಾರಿ ಆರಂಭಿಸಲು ಸಿಎಂ ಡಿ.ಕೆ. ಶಿವಕುಮಾರ್ ಸೂಚನೆತಕ್ಷಣವೇ ಬಂಡೀಪುರ, ನಾಗರಹೊಳೆ ಸಫಾರಿ ಪುನಾರಂಭಿಸಿ; ಅಧಿಕಾರಿಗಳಿಗೆ ಡಿಕೆಶಿ ನಿರ್ದೇಶನಪರಿಶಿಷ್ಟ ಜಾತಿ, ಪಂಗಡ ಮೀಸಲಾತಿ ಹೆಚ್ಚಳ ಪರಿಣಾಮಕಾರಿ ಜಾರಿ ಬಗ್ಗೆ ಮಹತ್ವದ ಚರ್ಚೆಎತ್ತಿನಹೊಳೆ ಯೋಜನೆ ವೆಚ್ಚಕ್ಕೆ ಜಲಜೀವನ್ ಮಿಷನ್ ಅಡಿಯಲ್ಲಿ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ: ಈಶ್ವರ್ ಖಂಡ್ರೆಮಾದಕವಸ್ತು ಸೇವಿಸುವವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ: ಡಿಕೆಶಿ2028ರ ವೇಳೆಗೆ ಮಾದಕ ವಸ್ತು ಮುಕ್ತ-ನಶೆ ಮುಕ್ತ ಕರ್ನಾಟಕ ನಮ್ಮ ಗುರಿ: ಡ್ರಗ್ಸ್ ಜಾಲ; ಸೇವನೆ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ: ಸಿಎಂ ಘೋಷಣೆBREAKING: ಪರೀಕ್ಷೆ ಮುಗಿದ ಕೇವಲ 5 ನಿಮಿಷದಲ್ಲೇ ಫಲಿತಾಂಶ ಪ್ರಕಟಿಸಿದ ವಿಟಿಯು ದಾಖಲೆSIR ಪ್ರಕ್ರಿಯೆಯಲ್ಲಿ ಲೋಪದೋಷ ಆರೋಪ; ನ್ಯಾಯಾಂಗ ಮಧ್ಯಪ್ರವೇಶಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ವಿರೋಧ ಪಕ್ಷಗಳುಕುಡಿದು ಬಂದು ಹಲ್ಲೆ ಮಾಡಿದ ಗಂಡನ ಮೇಲೆ ಬಿಸಿ ನೀರು ಸುರಿದ ಪತ್ನಿ…!ಚಲಿಸುತ್ತಿದ್ದ ಕಾರ್ ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ: ಆರೋಪಿ ವಶಕ್ಕೆ