ಬಾಲಿವುಡ್ನ ಸ್ಟಾರ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಸಲ್ಮಾನ್ ಖಾನ್ ನಡುವಿನ ಪ್ರೇಮ ಕಥೆ ಹಾಗೂ ನಂತರ ನಡೆದ ಬ್ರೇಕಪ್ ಇಂದಿಗೂ ಸಿನಿರಂಗದಲ್ಲಿ ದೊಡ್ಡ ಚರ್ಚೆಯ ವಿಷಯ. ಸಲ್ಮಾನ್ ಖಾನ್ ಜೊತೆಗಿನ ಆ ಕಹಿ ಬ್ರೇಕಪ್ ನಂತರವೂ ಐಶ್ವರ್ಯಾ ರೈ ತಮ್ಮ ವೃತ್ತಿಪರ ಜೀವನದ ಮೇಲೆ ಅದರ ಪ್ರಭಾವ ಬೀರದಂತೆ ಹೇಗೆ ಮ್ಯಾನೇಜ್ ಮಾಡಿದ್ದರು ಎಂಬುದನ್ನು ಸಹನಟಿ ಸಾದಿಯಾ ಸಿದ್ದಿಕಿ ನೆನಪಿಸಿಕೊಂಡಿದ್ದಾರೆ.
೨೦೦೫ರಲ್ಲಿ ತೆರೆಕಂಡ ‘ಶಬ್ದ್’ ಸಿನಿಮಾದಲ್ಲಿ ಐಶ್ವರ್ಯಾ ರೈ ಜೊತೆ ಕೆಲಸ ಮಾಡಿದ್ದ ಜನಪ್ರಿಯ ನಟಿ ಸಾದಿಯಾ ಸಿದ್ದಿಕಿ, ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಸಾರ್ವಜನಿಕ ಬ್ರೇಕಪ್ ನಂತರವೂ ಐಶ್ವರ್ಯಾ ತಮ್ಮ ವೈಯಕ್ತಿಕ ಜೀವನದ ನೋವು ಕೆಲಸದ ಮೇಲೆ ಪರಿಣಾಮ ಬೀರದಂತೆ ನೋಡಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
“ಚಿತ್ರದಲ್ಲಿ ನನಗೆ ಐಶ್ವರ್ಯಾ ಜೊತೆ ಒಂದೂ ದೃಶ್ಯ ಇರಲಿಲ್ಲ. ಹಾಗಾಗಿ ಅವರ ವೈಯಕ್ತಿಕ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ಹತ್ತಿರದಿಂದ ತಿಳಿಯುವ ಅವಕಾಶ ಸಿಗಲಿಲ್ಲ ಮತ್ತು ವೈಯಕ್ತಿಕವಾಗಿ ಅವರು ನನಗೆ ಪರಿಚಯವಿರಲಿಲ್ಲ. ಆದರೆ ಶೂಟಿಂಗ್ ಸೆಟ್ನಲ್ಲಿ ನಾನು ಗಮನಿಸಿದ ಮಟ್ಟಿಗೆ, ಅವರು ತಮ್ಮ ಮನಸ್ಸಿನ ನೋವನ್ನು ಹೊರಗೆಲ್ಲೂ ತೋರಿಸಿಕೊಳ್ಳುತ್ತಿರಲಿಲ್ಲ. ಯಾವಾಗಲೂ ಸಂಪೂರ್ಣ ಸಿದ್ಧತೆಯೊಂದಿಗೆ ಸೆಟ್ಗೆ ಬರುತ್ತಿದ್ದರು. ತಮ್ಮ ಸಂಭಾಷಣೆಗಳನ್ನು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಿದ್ದರು ಮತ್ತು ಚಿತ್ರಕಥೆಯನ್ನು ಸಂಪೂರ್ಣವಾಗಿ ಓದಿಕೊಂಡಿರುತ್ತಿದ್ದರು. ತಮ್ಮ ವೈಯಕ್ತಿಕ ಬದುಕಿನ ಏರುಪೇರುಗಳನ್ನು ಅವರು ಕೆಲಸದ ಮಧ್ಯೆ ತರುತ್ತಿರಲಿಲ್ಲ” ಎಂದು ಸಾದಿಯಾ ಸಿದ್ದಿಕಿ ಐಶ್ವರ್ಯಾ ಅವರ ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ.
ಇಡೀ ಚಿತ್ರರಂಗ ಸಲ್ಮಾನ್ ಪರ ನಿಂತಿದ್ದಕ್ಕೆ ಐಶ್ವರ್ಯಾ ಬೇಸರಗೊಂಡಿದ್ದರು: ಪ್ರಹ್ಲಾದ್ ಕಕ್ಕರ್
ಐಶ್ವರ್ಯಾ ರೈ ಅವರ ಮಾಡೆಲಿಂಗ್ ದಿನಗಳಿಂದಲೂ ಹತ್ತಿರದಿಂದ ಬಲ್ಲ ಪ್ರಸಿದ್ಧ ಜಾಹೀರಾತು ನಿರ್ಮಾಪಕ ಪ್ರಹ್ಲಾದ್ ಕಕ್ಕರ್ ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಬ್ರೇಕಪ್ ಸಮಯದಲ್ಲಿ ತಾವು ಐಶ್ವರ್ಯಾಗೆ ಬೆಂಬಲವಾಗಿ ನಿಂತಿದ್ದನ್ನು ನೆನಪಿಸಿಕೊಂಡಿರುವ ಅವರು, “ಬ್ರೇಕಪ್ ಆದಾಗ ನಾನು ಅವರಿಗೆ ಧೈರ್ಯ ತುಂಬಿದೆ. ಆದರೆ ಆ ಸಮಯದಲ್ಲಿ ಇಡೀ ಚಿತ್ರರಂಗ ಸಲ್ಮಾನ್ ಖಾನ್ ಪರವಾಗಿ ನಿಂತು, ತಮ್ಮನ್ನು ಕೈಬಿಟ್ಟಿದ್ದಕ್ಕೆ ಐಶ್ವರ್ಯಾ ತೀವ್ರವಾಗಿ ನೊಂದಿದ್ದರು. ತಾವು ನಂಬಿದ ಚಿತ್ರರಂಗವೇ ತಮಗೆ ದ್ರೋಹ ಮಾಡಿದೆ ಎಂದು ಅವರು ಭಾವಿಸಿದ್ದರು. ನಿಜ ಹೇಳಬೇಕೆಂದರೆ, ಆ ಸಂಬಂಧದಿಂದ ಹೊರಬಂದಿದ್ದು ಅವರಿಗೆ ದೊಡ್ಡ ರಿಲೀಫ್ ನೀಡಿತ್ತು” ಎಂದಿದ್ದಾರೆ.
ಸಲ್ಮಾನ್ ಖಾನ್ ಅವರ ಅತಿಯಾದ ಸ್ವಾಧೀನಪಡಿಸಿಕೊಳ್ಳುವ ಗುಣದ ಬಗ್ಗೆ ಮಾತನಾಡಿದ ಪ್ರಹ್ಲಾದ್ ಕಕ್ಕರ್, “ನಾವಿಬ್ಬರೂ ಒಂದೇ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರಿಂದ ನನಗೆ ವಿಷಯ ಗೊತ್ತಿತ್ತು. ಸಲ್ಮಾನ್ ಬಂದು ಬಿಲ್ಡಿಂಗ್ ಮುಂಭಾಗದಲ್ಲಿ ಗಲಾಟೆ ಮಾಡುತ್ತಿದ್ದರು, ಗೋಡೆಗೆ ತಲೆ ಚಚ್ಚಿಕೊಳ್ಳುತ್ತಿದ್ದರು. ಆ ಸಂಬಂಧ ಅಧಿಕೃತವಾಗಿ ಕೊನೆಗೊಳ್ಳುವ ಮುನ್ನವೇ ಮುರಿದುಬಿದ್ದಿತ್ತು. ಅದು ಕೊನೆಗೊಂಡಿದ್ದು ಅವರ ಪೋಷಕರಿಗೆ ಹಾಗೂ ಇಡೀ ಜಗತ್ತಿಗೆ ನಿರಾಳತೆ ತಂದಿತ್ತು” ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ೨೦೦೧ರಲ್ಲೇ ಸಲ್ಮಾನ್ ಮತ್ತು ಐಶ್ವರ್ಯಾ ದೂರಾಗಿದ್ದರೂ, ೨೦೦೨ರಲ್ಲಿ ಐಶ್ವರ್ಯಾ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಂತರ ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.