ಬೆಂಗಳೂರು: ಅನುಮತಿ ಇಲ್ಲದೆ ಶುಭಾಶಯ ಕೋರುವ ಪೋಸ್ಟರ್ ಅಂಟಿಸಿದ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವ ಕೃಷ್ಣ ಬೈರೇಗೌಡರ ಅನುಮತಿ ಇಲ್ಲದೆ ಸ್ವಾತಂತ್ರೋತ್ಸವದ ಶುಭಾಶಯ ಕೋರುವ ಪೋಸ್ಟರ್ ಅಂಟಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆದುಕೊಂಡಿರಲಿಲ್ಲ. ಜಿಬಿಎ ಅನುಮತಿ ಕೂಡ ಪಡೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೋಸ್ಟರ್ ಅಂಟಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನನ್ನ ಪೋಸ್ಟರ್ ಅಂಟಿಸಿದ್ದಕ್ಕಾಗಿ 3 ಪ್ರಕರಣಗಳು (ಎಫ್ಐಆರ್) ದಾಖಲಾಗಿವೆ. ಕಾರ್ಪೊರೇಷನ್(ಜಿಬಿಎ) ಅಧಿಕಾರಿಗಳಿಂದ ಕರ್ನಾಟಕ ಓಪನ್ ಪ್ಲೇಸಸ್ ಡಿಸ್ ಫಿಗರ್ ಮೆಂಟ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಸ್ಥಳಗಳು ಮತ್ತು ಗೋಡೆಗಳ ಮೇಲೆ ನನ್ನ ಪೋಸ್ಟರ್ಗಳನ್ನು ಅಂಟಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ನಿಗಮದ ಸಿಬ್ಬಂದಿ ಗೋಡೆಗಳಿಂದ ಈ ಪೋಸ್ಟರ್ಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
https://twitter.com/krishnabgowda/status/2090386970312573245