LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವ ಎಂ.ಬಿ.ಪಾಟೀಲರ ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸ: ಸಾಫ್ರಾನ್, ನೆಕ್ಸ್ಪೀರಿಯಾ ಜತೆ ಹೂಡಿಕೆ ಮಾತುಕತೆ

ಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಸೆಳೆಯುವ ಉದ್ದೇಶದಿಂದ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್‌ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಗುರುವಾರ ಸ್ಯಾಫ್ರಾನ್, ಎಲ್ ಎಫ್ ಬಿ, ನೆಕ್ಸ್ಪೀರಿಯಾ, ರಾಯಲ್ ಡಿ ಹ್ಯೂಸ್, ಎಸ್ಸಿಲಾರ್-ಲಕ್ಸೋಟಿಕ ಮುಂತಾದ‌ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಜತೆಗೆ ಈ ಎಲ್ಲಾ ಕಂಪನಿಗಳನ್ನು ಮುಂದಿನ ವರ್ಷ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಏರೋಸ್ಪೇಸ್ ಕಂಪನಿಯಾಗಿರುವ ಸಾಫ್ರಾನ್ ಗೆ ರಾಜ್ಯದಲ್ಲಿ ಏವಿಯಾನಿಕ್ಸ್, ಬಾಹ್ಯಾಕಾಶ ವಿದ್ಯುನ್ಮಾನ ಮತ್ತಿತರ ಅಡ್ವಾನ್ಸ್ಡ್ ಏರೋಸ್ಪೇಸ್ ಮತ್ತು ರಕ್ಷಣಾ ತಂತ್ರಜ್ಞಾನಗಳಲ್ಲಿ ಬಂಡವಾಳ ಹೂಡಿಕೆಯನ್ನು ಪರಿಗಣಿಸುವಂತೆ ಕೋರಲಾಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಕಂಪನಿಯ ಪ್ರತಿನಿಧಿಗಳು, 2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿದ್ದ ಒಡಂಬಡಿಕೆಯಂತೆ ಬೆಂಗಳೂರಿನಲ್ಲಿ 12 ಸಾವಿರ ಚದರ ಮೀಟರ್ ವಿಸ್ತಾರದ ಎಲೆಕ್ಟ್ರಾನಿಕ್ ಉತ್ಪಾದನಾ ಘಟಕ ಮತ್ತು ಕಲ್ಯಾಣಿ ಟೆಕ್ ಪಾರ್ಕ್ ನಲ್ಲಿ 3,000 ಚ.ಮೀ. ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳ ನಿರ್ಮಾಣ ಮುಕ್ತಾಯದ ಹಂತಕ್ಕೆ ಬಂದಿರುವುದಾಗಿ ತಿಳಿಸಿದರು.

ಎಸ್ಸಿಲಾರ್-ಲಕ್ಸೋಟಿಕ ಕಂಪನಿಯು ಕನ್ನಡಕ ಮತ್ತು ಮೆಡ್-ಟೆಕ್ ವಲಯಗಳಲ್ಲಿ ಹೆಸರು ಮಾಡಿದೆ. ರಾಜ್ಯದಲ್ಲಿ ಅಡ್ವಾನ್ಸಡ್ ಲೆನ್ಸ್ ತಯಾರಿಕೆಯನ್ನು ಪರಿಗಣಿಸುವಂತೆ ಕಂಪನಿಗೆ ಕೋರಲಾಗಿದೆ. ಇದೇ ರೀತಿಯಲ್ಲಿ ಡಚ್ ಹೈನುಗಾರಿಕೆ ಕಂಪನಿಯಾದ ಡೇ ಹ್ಯೂಸ್ ರಾಜ್ಯದ ಹಾಲು ಮಹಾಮಂಡಳಿ ಜತೆ ಸಹಭಾಗಿತ್ವ ಹೊಂದಲು ಒಲವು ವ್ಯಕ್ತಪಡಿಸಿದೆ ಎಂದು ಅವರು ವಿವರಿಸಿದ್ದಾರೆ.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ನೆಕ್ಸ್ ಪೀರಿಯಾ ಕಂಪನಿಗೆ ರಾಜ್ಯದಲ್ಲಿ ಎಟಿಎಂಪಿ (ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕಿಂಗ್) ಸ್ಥಾವರ ಸ್ಥಾಪನೆಗೆ ಮುಂದಾಗುವಂತೆ ಪ್ರಸ್ತಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಾತುಕತೆಯಲ್ಲಿ ನೆಕ್ಸ್ ಪೀರಿಯಾ ಕಂಪನಿಯ ಹಿರಿಯ ನಿರ್ದೇಶಕ ಹೇನ್ಸ್ ವ್ಯಾನ್ ರೆಮ್ಡೋಂಕ್, ಡೇ ಹ್ಯೂಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಟ್ಜರ್ ಔಡ್ಜೆನಸ್, ಎಸ್ಸಿಲಾರ್-ಲಕ್ಸೋಟಿಕ ಕಂಪನಿಯ ಸಿಇಒ ಪಾಲ್ ಡು ಸೈಲಾಂಟ್, ವೇಣು ಅಂಬಟಿ, ಸಾಫ್ರಾನ್ ಕಂಪನಿಯ ಸಿಇಒ ಫ್ರಾಂಕ್ ಸೌದೊ, ಅಲೆಕ್ಸಾಂಡರ್ ಡೆರ್ವಾಕ್ಸ್ ಮುಂತಾದವರು ಭಾಗವಹಿಸಿದ್ದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಖುಷ್ಬು ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS: ಕರ್ನಾಟಕ SIR ಪರಿಷ್ಕರಣೆ: ನೋಟಿಸ್ ಪಟ್ಟಿಯಲ್ಲಿ ನಿಲೇಕಣಿ, ಕಾಮತ್ ಬ್ರದರ್ಸ್ ಹೆಸರು!ಸ್ತ್ರೀ ಶಕ್ತಿ ಒಕ್ಕೂಟ/ ಸ್ವಯಂ ಸೇವಾ ಸಂಸ್ಥೆಗಳಿಂದ ಶಿಶುಪಾಲನಾ ಕೇಂದ್ರಗಳ ತೆರೆದು ನಿರ್ವಹಣೆ ಮಾಡಲು ಅರ್ಜಿ ಆಹ್ವಾನ‘ಬಾಂಬ್’ ಇದೆ ಎಂದು ಬರೆದ ಟಿಶ್ಯೂ ಪೇಪರ್ ಪತ್ತೆ: ಅಹಮದಾಬಾದ್ ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶಚಿತ್ರದುರ್ಗ: ಹಿರಿಯೂರಲ್ಲಿ ಮಹಿಳೆ ಹತ್ಯೆ, ಅಪ್ರಾಪ್ತ ಸೇರಿ ಒಂದೇ ಕುಟುಂಬದ ನಾಲ್ವರು ಅರೆಸ್ಟ್!'ED ದಾಳಿ'ಯ ವೇಳೆ ಸಿಕ್ಕ ಹಣಕ್ಕೆ ದಾಖಲೆ ಸಮೇತ ಲೆಕ್ಕ ನೀಡುತ್ತೇವೆ: ಸಚಿವ ಸತೀಶ್ ಜಾರಕಿಹೊಳಿಶಾಲಾ ಮಕ್ಕಳಿಗೆ ಕಳಪೆ ಶೂ ವಿತರಣೆ: ಉಪಲೋಕಾಯುಕ್ತರಿಂದ ಸುಮೋಟೋ ಕೇಸ್ ದಾಖಲುಪ್ಯಾರಿಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆ: ಇಸ್ರೋ ಸಾಧನೆ ಕೊಂಡಾಡಿ ಜಾಗತಿಕ ಸಹಭಾಗಿತ್ವಕ್ಕೆ ಪ್ರಧಾನಿ ಮೋದಿ ಕರೆBREAKING: ಶಿವಮೊಗ್ಗದಲ್ಲಿ ತುಂಗಾ ನದಿಗೆ ಜಿಗಿದ ಯುವತಿ ಆತ್ಮಹತ್ಯೆಗೆ ಯತ್ನ, ರಕ್ಷಣೆಸಚಿವ ಎಂ.ಬಿ.ಪಾಟೀಲರ ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸ: ಸಾಫ್ರಾನ್, ನೆಕ್ಸ್ಪೀರಿಯಾ ಜತೆ ಹೂಡಿಕೆ ಮಾತುಕತೆದೆಹಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾಗಿ: 7 ವರ್ಷಗಳ ನಂತರ ಭಾರತಕ್ಕೆ ಭೇಟಿ