LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ‘ಆಧಾರ್ ಸಂಖ್ಯೆ’ ಗೊತ್ತಿದ್ದರೆ ಖಾತೆಯ ಹಣ ಕದಿಯಬಹುದಾ ? UIDAI ಮಹತ್ವದ ಸ್ಪಷ್ಟನೆ

ಡಿಜಿಟಲ್ ವ್ಯವಹಾರಗಳು  ಹೆಚ್ಚಾದ ನಂತರ ಸೈಬರ್ ಅಪರಾಧಿಗಳು ಹೊಸಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಸಂಖ್ಯೆಯ ಆಧಾರದ ಮೇಲೆ ಬ್ಯಾಂಕ್ ಖಾತೆಗಳಿಂದ ಹಣ ಕಳವಾಗುತ್ತಿದೆ ಎಂಬ ಸುದ್ದಿಗಳು ಜನರಲ್ಲಿ ಆತಂಕ ಮೂಡಿಸಿವೆ. ಹಾಗಾದರೆ ಕೇವಲ ಆಧಾರ್ ಸಂಖ್ಯೆ ತಿಳಿದಿದ್ದರೆ ಖಾತೆಯಲ್ಲಿರುವ ಹಣವನ್ನು ಕಸಿದುಕೊಳ್ಳಬಹುದೇ? ಈ ಕುರಿತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಹತ್ವದ ಸ್ಪಷ್ಟನೆ ನೀಡಿದೆ.

ನಿಮ್ಮ ಆಧಾರ್ ಸಂಖ್ಯೆಯಿಂದ ಬೇರೆ ಯಾರಾದರೂ ನಿಮ್ಮ ಖಾತೆಯಿಂದ ಹಣ ತೆಗೆಯಬಹುದೇ?

ಇಲ್ಲ, ಖಂಡಿತವಾಗಿಯೂ ಸಾಧ್ಯವಿಲ್ಲ ಎಂದು UIDAI ಸ್ಪಷ್ಟಪಡಿಸಿದೆ. ನಿಮ್ಮ ATM ಕಾರ್ಡ್ ಸಂಖ್ಯೆ ಗೊತ್ತಿದ್ದರೂ PIN ಇಲ್ಲದೆ ಹಣ ತೆಗೆಯಲು ಸಾಧ್ಯವಿಲ್ಲದಂತೆ, ಕೇವಲ ಆಧಾರ್ ಸಂಖ್ಯೆ ತಿಳಿದಿದ್ದರಿಂದ ಮಾತ್ರ ನಿಮ್ಮ ಬ್ಯಾಂಕ್ ಖಾತೆಯಿಂದ ಯಾರೂ ಹಣ ವಿತ್ಡ್ರಾ ಮಾಡಲು ಸಾಧ್ಯವಿಲ್ಲ.ಅಆಧಾರ್ ಆಧಾರಿತ ವಹಿವಾಟುಗಳಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ದೃಢೀಕರಣ (Fingerprint/Iris) ಅಥವಾ ಮೊಬೈಲ್ಗೆ ಬರುವ OTP ಅಗತ್ಯವಿರುತ್ತದೆ.

ಹಾಗಾದರೆ AePS ವಂಚನೆ ಹೇಗೆ ನಡೆಯುತ್ತದೆ?
ಆಧಾರ್ ಸಂಖ್ಯೆ ಮಾತ್ರ ಸಾಕಾಗದಿದ್ದರೂ, ವಂಚಕರು AePS (Aadhaar Enabled Payment System) ಮೂಲಕ ಮೋಸ ಮಾಡಲು ಪ್ರಯತ್ನಿಸುತ್ತಾರೆ.ಭೂಮಿ ಅಥವಾ ಆಸ್ತಿ ನೋಂದಣಿ ದಾಖಲೆಗಳಲ್ಲಿ ಇರುವ ಬೆರಳಚ್ಚು ಹಾಗೂ ಆಧಾರ್ ಮಾಹಿತಿಯನ್ನು ಕಳ್ಳರು ಸಂಗ್ರಹಿಸುತ್ತಾರೆ.

ಸಿಲಿಕಾನ್ ಕ್ಲೋನಿಂಗ್
ಸಂಗ್ರಹಿಸಿದ ಬೆರಳಚ್ಚುಗಳನ್ನು ಸಿಲಿಕಾನ್ ಅಥವಾ ಜೆಲ್ ಸಹಾಯದಿಂದ ನಕಲಿ ರೂಪದಲ್ಲಿ ತಯಾರಿಸುತ್ತಾರೆ. ಬಳಿಕ ಮೈಕ್ರೋ-ಎಟಿಎಂ ಸಾಧನಗಳಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ, ಈ ನಕಲಿ ಬೆರಳಚ್ಚುಗಳ ನೆರವಿನಿಂದ ಹಣವನ್ನು ವಿತ್ಡ್ರಾ ಮಾಡುತ್ತಾರೆ.ಬಯೋಮೆಟ್ರಿಕ್ ಆಧಾರಿತ ವಹಿವಾಟುಗಳಿಗೆ OTP ಅಗತ್ಯವಿಲ್ಲದ ಕಾರಣ, ಹಣ ಕಡಿತವಾಗುವವರೆಗೆ ಬಳಕೆದಾರರಿಗೆ ತಿಳಿಯದೇ ಹೋಗಬಹುದು.

ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?

* ಬಯೋಮೆಟ್ರಿಕ್ಸ್ ಲಾಕ್ ಮಾಡಿ
UIDAI ಅಧಿಕೃತ ಪೋರ್ಟಲ್ ಅಥವಾ mAadhaar ಆ್ಯಪ್ ಮೂಲಕ ನಿಮ್ಮ ಫಿಂಗರ್ಪ್ರಿಂಟ್ ಮತ್ತು ಐರಿಸ್ ಡೇಟಾವನ್ನು ಲಾಕ್ ಮಾಡಬಹುದು. ಒಮ್ಮೆ ಲಾಕ್ ಮಾಡಿದರೆ, ನೀವು ಅನ್ಲಾಕ್ ಮಾಡುವವರೆಗೆ ಯಾರೂ ಅದನ್ನು ಬಳಸಲು ಸಾಧ್ಯವಿಲ್ಲ.

* Masked Aadhaar ಬಳಸಿ
ಎಲ್ಲೆಲ್ಲಿ ಆಧಾರ್ ಪ್ರತಿಯನ್ನು ನೀಡಬೇಕಾಗುತ್ತದೆಯೋ ಅಲ್ಲಿ ಸಂಪೂರ್ಣ ಸಂಖ್ಯೆಯ ಬದಲು ಕೊನೆಯ ನಾಲ್ಕು ಅಂಕೆಗಳು ಮಾತ್ರ ಕಾಣುವ Masked Aadhaar ಬಳಸುವುದು ಉತ್ತಮ.

* SMS ಅಲರ್ಟ್ಗಳನ್ನು ಗಮನಿಸಿ
ಬ್ಯಾಂಕ್ ಖಾತೆಯಲ್ಲಿ ನಡೆಯುವ ಪ್ರತಿಯೊಂದು ವಹಿವಾಟಿನ SMS ಸಂದೇಶಗಳನ್ನು ನಿಯಮಿತವಾಗಿ ಪರಿಶೀಲಿಸಿ.

* OTP ಯಾರೊಂದಿಗೂ ಹಂಚಿಕೊಳ್ಳಬೇಡಿ
ಬ್ಯಾಂಕ್ ಅಥವಾ UIDAI ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡುವವರಿಗೂ OTP ನೀಡಬೇಡಿ.


ಮೋಸ ನಡೆದರೆ ಏನು ಮಾಡಬೇಕು?
ನಿಮ್ಮ ಖಾತೆಯಿಂದ ಅನಧಿಕೃತವಾಗಿ AePS ಮೂಲಕ ಹಣ ಕಡಿತಗೊಂಡಿರುವುದು ಕಂಡುಬಂದರೆ:
• ತಕ್ಷಣವೇ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.
• ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ಗೆ ಕರೆ ಮಾಡಿ.
• ಅಥವಾ cybercrime.gov.in ವೆಬ್ಸೈಟ್ನಲ್ಲಿ ದೂರು ದಾಖಲಿಸಿ.

    Author
    All About Belagavi
    is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
    WhatsApp

    Don't Miss Out! Join Our WhatsApp Group!

    Get latest news updates delivered straight to your WhatsApp.

    LATEST
    BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ