LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇರಾನ್ ನೂತನ ಸರ್ವಾಧಿಕಾರಿ ಮೊಜ್ತಾಬಾ ಖಮೇನಿ ಎಲ್ಲಿ? Iran Conflict

ಅಮೆರಿಕ & ಇಸ್ರೇಲ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳನ್ನು ಎದುರು ಹಾಕಿಕೊಂಡು ಯುದ್ಧ ಮಾಡುತ್ತಿರುವ ಇರಾನ್ ದೇಶ ಈಗಾಗಲೇ ತನ್ನ ದೊಡ್ಡ ದೊಡ್ಡ ನಾಯಕರನ್ನು ಕಳೆದುಕೊಂಡಿದೆ. ಇರಾನ್ ಸೇನಾಧಿಕಾರಿಗಳ ಸಾವು ಸೈನಿಕರಲ್ಲಿ ಆತಂಕ ಹೆಚ್ಚು ಮಾಡುತ್ತಿದ್ದರೆ, ಇರಾನ್‌ನ ರಾಜಕೀಯ ನಾಯಕರು ಕೂಡ ಒಬ್ಬೊಬ್ಬರಾಗಿ ಇದೀಗ ಜೀವ ಕಳೆದುಕೊಳ್ಳುತ್ತಾ ಇದ್ದಾರೆ. ಅದರಲ್ಲೂ ಇರಾನ್ ಸರ್ವಾಧಿಕಾರಿ ಆಗಿದ್ದ ಖಮೇನಿ ಸಾವು ಇಡೀ ಮಧ್ಯಪ್ರಾಚ್ಯ ಭಾಗದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಹೀಗಾಗಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿಗೆ ಇರಾನ್ ದೇಶ ನೂತನ ಸರ್ವಾಧಿಕಾರಿ ಪಟ್ಟ ಕಟ್ಟಿತ್ತು. ಆದರೆ ಇದೀಗ ಮೊಜ್ತಾಬಾ ಖಮೇನಿ ಜೀವಂತವಾಗಿ ಇರುವ ಬಗ್ಗೆಯು ಕೂಡ ಅನುಮಾನ ಶುರುವಾಗಿದೆ.

ಮೊಜ್ತಾಬಾ ಖಮೇನಿ ಇರಾನ್ ದೇಶದ ನೂತನ ಸರ್ವಾಧಿಕಾರಿ ಪಟ್ಟಕ್ಕೆ ಆಯ್ಕೆ ಆಗಿ ಈಗಾಗಲೇ ಹತ್ತಿರ, ಹತ್ತಿರ 1 ತಿಂಗಳು ತುಂಬುತ್ತಿದೆ. ಹೀಗಿದ್ದರೂ ಮೊಜ್ತಾಬಾ ಖಮೇನಿ ಮಾತ್ರ ಒಂದು ಕಡೆಯೂ ಬಹಿರಂಗವಾಗಿ ಕಾಣಿಸಿ ತನ್ನ ದೇಶದ ಪ್ರಜೆಗಳಿಗೆ ಧೈರ್ಯ ತುಂಬಿಲ್ಲ. ಅದು ಬಿಡಿ, ಮೊಜ್ತಾಬಾ ಖಮೇನಿ ಮಾಡಿರುವ ಒಂದೇ ಒಂದು ಭಾಷಣದ ತುಣುಕು ಕೂಡ ಪ್ರಸಾರ ಆಗಿಲ್ಲ. ಹೀಗಿದ್ದಾಗ ಇರಾನ್ ಜನರು ಕೂಡ ಮೊಜ್ತಾಬಾ ಖಮೇನಿ ಕುರಿತು ಚಿಂತಿತರಾಗಿದ್ದು, ಇರಾನ್ ಸೇನೆ ಈ ವಿಚಾರದಲ್ಲಿ ಸಾಕಷ್ಟು ರಹಸ್ಯ ಕಾಪಾಡಿಕೊಂಡು ಬಂದಿದೆ. ಅಕಸ್ಮಾತ್, ಮೊಜ್ತಾಬಾ ಖಮೇನಿ ಕೂಡ ಮೃತಪಟ್ಟಿದ್ದರೆ ಆ ಸುದ್ದಿ ಹೊರಗೆ ಗೊತ್ತಾದರೆ ಅದು ಇರಾನ್ ದೇಶದ ಆಂತರಿಕ ಸುರಕ್ಷತೆಗೆ ಧಕ್ಕೆ ತರುವ ಭೀತಿ ಇದೆ. ಹೀಗಾಗಿ ಈ ವಿಚಾರದಲ್ಲಿ ಇರಾನ್ ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಿಲ್ಲ ಎನ್ನಲಾಗಿದೆ.

Iran Conflict And Mojtaba Khamenei Name Is On Trend For This Reason Now

ಮೊಜ್ತಾಬಾ ಖಮೇನಿ ಕೂಡ ಸಾವು?
ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಈಗಾಗಲೇ ಘೋಷಣೆ ಮಾಡಿರುವಂತೆ, ಇರಾನ್ ದೇಶಕ್ಕೆ ಯಾರೇ ಹೊಸ ಸರ್ವಾಧಿಕಾರಿ ಆಯ್ಕೆಯಾಗಿ ಬಂದರೂ ಮೊದಲು ಆ ವ್ಯಕ್ತಿಯ ಕಥೆ ಮುಗಿಸಲು ಪ್ಲಾನ್ ಮಾಡುವುದಾಗಿ ಭಾರಿ ಮಹತ್ವದ ಹೇಳಿಕೆ ನೀಡಿದ್ದವು ಎರಡೂ ದೇಶಗಳು. ಅದರಂತೆ, ಮೊಜ್ತಾಬಾ ಖಮೇನಿ ಇರಾನ್ ಸರ್ವಾಧಿಕಾರಿ ಆಗಿ ಆಯ್ಕೆಯಾದ ಮರುದಿನವೇ ದಾಳಿ ಮಾಡಲಾಗಿತ್ತು. ದಾಳಿಯಲ್ಲಿ ಮೊಜ್ತಾಬಾ ಖಮೇನಿಗೆ ಗಂಭೀರ ಗಾಯ ಆಗಿರುವ ಸುದ್ದಿ ಹಬ್ಬಿದ್ದು, ರಷ್ಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಮಾಹಿತಿ ಕೂಡ ಇದೆ. ಆದರೆ ಈ ವಿಚಾರದಲ್ಲಿ ಈವರೆಗೂ ಇರಾನ್ ಮಾತ್ರ ಯಾವುದೇ ಅಧಿಕೃತ ಮಾಹಿತಿ ಹೊರಹಾಕಲು ಸಿದ್ಧವೇ ಇಲ್ಲ, ಆ ಮೂಲಕ ತನ್ನ ದೇಶದ ನಾಯಕನನ್ನು ಇರಾನ್ ಸೇನೆಯ ಅಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ.

ಸರ್ವಾಧಿಕಾರಿ ಖಮೇನಿ ನಿಗೂಢ ಸ್ಥಳದಲ್ಲಿ?
ಒಟ್ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಈ ಯುದ್ಧ ಸದ್ಯಕ್ಕೆ ನಿಲ್ಲುವ ಸಾಧ್ಯತೆಯೇ ಕಾಣಿಸುತ್ತಿಲ್ಲ ಈಗ. ಇರಾನ್ ವಿರುದ್ಧ ಅಮೆರಿಕ & ಅದರ ಪಟಾಲಂ ಮುಗಿಬಿದ್ದು ದಾಳಿ ಮಾಡಿದರೂ ಯುದ್ಧ ಗೆಲ್ಲಲು ಆಗ್ತಾನೇ ಇಲ್ಲ. ಒಂದೆಡೆ ಇರಾನ್ ದೇಶವನ್ನು ಕೆಲವೇ ಗಂಟೆಗಳಲ್ಲಿ ಸೋಲಿಸಿ, ಅಲ್ಲಿರುವ ಸಂಪತ್ತು ಹಾಗೂ ತೈಲವನ್ನ ವಶಕ್ಕೆ ಪಡೆಯಬಹುದು ಎಂಬ ಕೆಲವರ ಲೆಕ್ಕಾಚಾರಗಳು ಉಲ್ಟಾ ಆಗಿಬಿಟ್ಟಿವೆ.

ಹೀಗಿದ್ದಾಗ ಇರಾನ್ ಕೊಡುತ್ತಿರುವ ಏಟಿಗೆ ಆ ಕಡೆ ಇಸ್ರೇಲ್ ಸುಸ್ತಾಗಿ ಹೋಗಿದ್ದರೆ ಇನ್ನೊಂದೆಡೆ ಅಮೆರಿಕ ಸಾಕಪ್ಪಾ ಇವರ ಸಹವಾಸ ಅಂತಿದೆ. ಹೀಗಿದ್ದಾಗಲೇ, ಅತ್ತ ಇರಾನ್ ದೇಶದ ನೂತನ ಸರ್ವಾಧಿಕಾರಿ ನಿಗೂಢ ಸ್ಥಳದಲ್ಲಿ ಇರುವ ಬಗ್ಗೆ ಮಾಹಿತಿ ಇದ್ದು ಯುದ್ಧವು ಕುತೂಹಲ ಕೆರಳಿಸುತ್ತಿದೆ. ಹಾಗೇ ಇನ್ನು ಕೆಲವೇ ದಿನಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದೊಡ್ಡ ಮಟ್ಟದ ದಾಳಿಯನ್ನು ಇರಾನ್ ವಿರುದ್ಧ ನಡೆಸುವ ಸಾಧ್ಯತೆ ಇದೀಗ ದಟ್ಟವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸಿಇಟಿ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಕ್ರೀಡೆ, ರಕ್ಷಣೆ, ಎನ್.ಸಿ.ಸಿ. ಇತ್ಯಾದಿ ವಿಶೇಷ ವರ್ಗಗಳ ಕ್ಲೇಮ್ ಗೆ ಮೇ 5ರಿಂದ 15ರವರೆಗೆ ಮೂಲ ದಾಖಲೆ ಸಲ್ಲಿಸಿBREAKING NEWS: ಬೆಂಗಳೂರಲ್ಲಿ ಭಾರಿ ಮಳೆಗೆ 7 ಜನ ಬಲಿ: ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯರಾಗಿಯಲ್ಲ, ಗೋಧಿಯಲ್ಲ ಈ ಮುದ್ದೆ ತಿಂದ್ರೆ ಮಹಿಳೆಯರಾಗ್ತಾರೆ ಸ್ಟ್ರಾಂಗ್ ಬೊಜ್ಜು ಕರಗಿಸಲು ಇಲ್ಲಿದೆ ಮ್ಯಾಜಿಕ್ ರೆಸಿಪಿಬೇಸಿಗೆಯ ಆರೋಗ್ಯಕ್ಕೆ ಮೊಸರೇ ಮದ್ದು: ಮನೆಯಲ್ಲೇ ಮಾಡಿ 5 ಬಗೆಯ ರುಚಿಕರ ರೈತಾಜೇಬಿನಲ್ಲಿ ಈರುಳ್ಳಿ ಇಟ್ಟರೆ ಬಿಸಿಲ ಬೇಗೆ ತಟ್ಟಲ್ವಾ ? ಕೇಂದ್ರ ಸಚಿವರ ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ |WATCH VIDEOALERT : ಚಿಕನ್ ಪ್ರಿಯರೇ ಎಚ್ಚರ ; ಅಪ್ಪಿತಪ್ಪಿಯೂ ಕೋಳಿಯ ಈ 10 ಭಾಗಗಳನ್ನು ತಿನ್ನಬೇಡಿ !ಎಸ್​ಟಿ ಯುವಕನನ್ನು ಪ್ರೀತಿಸಿದ್ದಕ್ಕೆ ಕುರುಬ ಸಮಾಜದವರಿಂದಲೇ ಕುರುಬ ಕುಟುಂಬಕ್ಕೆ ಬಹಿಷ್ಕಾರ! ಮನೆಯ ಮೇಲೆ ಕಲ್ಲು ತೂರಾಟರಾಬರಿ ಪ್ರಕರಣದ ಆರೋಪಿ ಹೈಡ್ರಾಮ: ಪೊಲೀಸರ ಮೇಲೆ ಹಲ್ಲೆ ಯತ್ನ!BREAKING NEWS: ಬೆಂಗಳೂರಿನಲ್ಲಿ ಮಹಾಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಘೋರ ದುರಂತ: ಮೂವರು ಮಕ್ಕಳು ಸೇರಿ 7 ಜನ ಬಲಿರಾಜ್ಯ ಸರ್ಕಾರವೇ ಕೇಂದ್ರದ ಪಾಲಿನ ಹಣ ಭರಿಸಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ: ಸಿಎಂ ಸಿದ್ಧರಾಮಯ್ಯ