LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಬ್ಬಬ್ಬಾ ಅಜೇಯ 66 ರನ್, 3 ವಿಕೆಟ್: ಏನ್ ಗುರು ಕ್ರಿಕೆಟ್ ದೇವರು ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಅಬ್ಬರ!

ನಿನ್ನೆ ( ಜೂನ್ 8 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ ಟ್ವೆಂಟಿ ಮುಂಬೈ 2026 ಲೀಗ್ ಟೂರ್ನಿಯ ಲೀಗ್ ಹಂತದ 16ನೇ ಪಂದ್ಯದಲ್ಲಿ ಎಆರ್‌ಸಿಎಸ್ ಅಂಧೇರಿ ಹಾಗೂ ಬಾಂದ್ರಾ ಬ್ಲಾಸ್ಟರ್ಸ್ ತಂಡಗಳು ಮುಖಾಮಖಿಯಾಗಿದ್ದವು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂದ್ರಾ ಬ್ಲಾಸ್ಟರ್ಸ್ ಆಲ್‌ರೌಂಡರ್‌ಗಳಾದ ಓಂ ಕೇಶ್‌ಕಾಮತ್ ಹಾಗೂ ಸಾಗರ್ ಛಬ್ರಿಯಾ ಆಟದ ಸಹಾಯದಿಂದ ಭಾರೀ ಮುಖಭಂಗದಿಂದ ಪಾರಾಗಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿ ಎಆರ್‌ಸಿಎಸ್ ಅಂಧೇರಿ ತಂಡಕ್ಕೆ 145 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಎಆರ್‌ಸಿಎಸ್ ಅಂಧೇರಿ ಆರಂಭಿಕರ ಅಬ್ಬರದ ಆರಂಭ ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅರ್ಜುನ್ ತೆಂಡೂಲ್ಕರ್ ಆರ್ಭಟದ ನೆರವಿನಿಂದ 13.5 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ಗೆ 148 ರನ್ ಕಲೆಹಾಕಿ ಬರೋಬ್ಬರಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಬಾಂದ್ರಾ ಬ್ಲಾಸ್ಟರ್ಸ್ ಕೇವಲ 27 ರನ್‌ಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಆರಂಭ ಪಡೆದುಕೊಂಡಿತು. ಹೀಗೆ ಕಳಪೆ ಆರಂಭ ಪಡೆದುಕೊಂಡ ತಂಡಕ್ಕೆ ಓಂ ಕೇಶ್‌ಕಾಮತ್ 49 ರನ್ ಹಾಗೂ ಸಾಗರ್ ಛಬ್ರಿಯಾ ಅಜೇಯ 44 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿದರೆ ತಂಡದ ಮೂವರು ಆಟಗಾರರು ಡಕ್‌ಔಟ್ ಆದರು, ಐವರು ಕೇವಲ ಒಂದಂಕಿ ಗಳಿಸಿದರು.

ಎಆರ್‌ಸಿಎಸ್ ಅಂಧೇರಿ ಪರ ಅರ್ಜುನ್ ತೆಂಡೂಲ್ಕರ್ ಮೂರು ವಿಕೆಟ್, ಪ್ರಸೂನ್ ಸಿಂಗ್ ಎರಡು ವಿಕೆಟ್, ಶಿವಮ್ ದುಬೆ, ಅಜಯ್ ಬಿ ಮಿಶ್ರಾ, ಮುಶೀರ್ ಖಾನ್ ಹಾಗೂ ಪ್ರಗ್ನೇಶ್ ಕನ್ಪಿಲ್ಲೆವಾರ್ ತಲಾ ಒಂದೊಂದು ವಿಕೆಟ್ ಪಡೆದರು.

ಬಾಂದ್ರಾ ನೀಡಿದ ಗುರಿಯನ್ನು ಬೆನ್ನಟ್ಟಿದ ಎಆರ್‌ಸಿಎಸ್ ಅಂಧೇರಿ ಪರ ಆರಂಭಿಕರಾಗಿ ಕಣಕ್ಕಿಳಿದ ದಿವ್ಯಾನ್ಶ್ 11 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 26 ರನ್ ಬಾರಿಸಿದರೆ, ಮುಶೀರ್ ಖಾನ್ 38 ಎಸೆತಗಳಲ್ಲಿ ಅಜೇಯ 54 ರನ್ ಹಾಗೂ ಅರ್ಜುನ್ ತೆಂಡೂಲ್ಕರ್ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 66 ರನ್ ಚಚ್ಚಿದರು.

ಹೀಗೆ ಆಲ್‌ರೌಂಡರ್ ಆಟವನ್ನಾಡಿ ಮೂರು ವಿಕೆಟ್ ಹಾಗೂ ಅಜೇಯ ಅರ್ಧಶತಕ ಬಾರಿಸಿ ಅಬ್ಬರಿಸಿದ ಅರ್ಜುನ್ ತೆಂಡೂಲ್ಕರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕ್ರಿಕೆಟ್ ಪ್ರಿಯರು ಅರ್ಜುನ್ ತೆಂಡೂಲ್ಕರ್‌ ಆಟಕ್ಕೆ ಮಾರುಹೋದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಪೋಷಕರಿಗೆ ಗುಡ್ ನ್ಯೂಸ್ : ಮಕ್ಕಳನ್ನು ಆರ್‌ಟಿಇ ಅಡಿ ಶಾಲೆಗೆ ಸೇರಿಸಲು ಎರಡನೇ ಸುತ್ತಿನ ಸೀಟು ಹಂಚಿಕೆಪೋಷಕರಿಗೆ ಗುಡ್ ನ್ಯೂಸ್: ಆರ್.ಟಿ.ಇ. ಅಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಅರ್ಜಿಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ ಹಗರಣ: ಬಾಲಿವುಡ್ ನಟಿ ಸನ್ನಿ ಲಿಯೋನ್ ಗೆ ಕರ್ನಾಟಕ CID ನೋಟಿಸ್ ಜಾರಿವಿಶೇಷ ಸಂಪನ್ಮೂಲ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಶಾಸಕ ಯಶ್ ಪಾಲ್ ಸುವರ್ಣ ವಿರುದ್ಧದ ಎಫ್ಐಆರ್ ರದ್ದು: ಹೈಕೋರ್ಟ್ ಆದೇಶBREAKING: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್: ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ, ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಇಂಧನ ಬೆಲೆ ಸ್ಥಿರವಾಗಿಡಲು ತೈಲ ಕಂಪನಿ ಗಳಿಗೆ 1.23 ಲಕ್ಷ ಕೋಟಿ ರೂ. ನೀಡಿದ ಕೇಂದ್ರ ಸರ್ಕಾರಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಭೇಟಿಯಾದ ಮಮತಾ ಬ್ಯಾನರ್ಜಿ: ಕುತೂಹಲ ಮೂಡಿಸಿದ ಚರ್ಚೆBREAKING: ಜೇನುಗೂಡಿಗೆ ಕಲ್ಲು ಹೊಡೆದ ವಿದ್ಯಾರ್ಥಿ: ಜೇನು ಹುಳಗಳ ದಾಳಿಗೆ ಶಾಲೆಯ 21 ಮಕ್ಕಳು ಅಸ್ವಸ್ಥಕೊಡಗು ಜಿಲ್ಲೆಯಲ್ಲಿ ವಿಪತ್ತು ಎದುರಿಸಲು ಪರಿಕರ ಸಹಿತ ಸಜ್ಜಾದ NDRF