LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ಬೆಂಗಳೂರಿನ ವಾಹನ ಸವಾರರೇ ಗಮನಿಸಿ ; ಮುಂದಿನ 1 ತಿಂಗಳು ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ಬೆಂಗಳೂರು: ನಗರದಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಹತ್ವದ ಮಾಹಿತಿ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೈಗೊಂಡಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ಜೂನ್ 15ರಿಂದ ಜುಲೈ 15ರವರೆಗೆ ನಂದಿದುರ್ಗಾ ಮುಖ್ಯರಸ್ತೆಯ ಕೆಲ ಭಾಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ.

ಯಾವ ರಸ್ತೆಯಲ್ಲಿ ಸಂಚಾರ ನಿರ್ಬಂಧ ?

ಜೂನ್ 15ರಿಂದ ಒಂದು ತಿಂಗಳ ಕಾಲ ಜೆ.ಸಿ. ನಗರ ಪೊಲೀಸ್ ಠಾಣೆ ಜಂಕ್ಷನ್‌ನಿಂದ ಹಜ್ ಭವನ ಜಂಕ್ಷನ್‌ವರೆಗೆ ಇರುವ ನಂದಿದುರ್ಗಾ ಮುಖ್ಯರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹಜ್ ಭವನದಿಂದ ಜೆ.ಸಿ. ನಗರ ಕಡೆಗೆ ತೆರಳುವವರಿಗೆ

ವಾಹನ ಸವಾರರು ಹಜ್ ಭವನ ಜಂಕ್ಷನ್ – ಕಂಟೋನ್‌ಮೆಂಟ್ ರೈಲ್ವೆ ನಿಲ್ದಾಣ – ಜಯಮಹಲ್ ಮುಖ್ಯರಸ್ತೆ – ಪ್ರಿಯದರ್ಶಿನಿ ಕಂಟೋನ್‌ಮೆಂಟ್ ಬ್ರಿಡ್ಜ್ – ದರ್ಗಾ – ಜೆ.ಸಿ. ನಗರ ಪೊಲೀಸ್ ಠಾಣೆ ಜಂಕ್ಷನ್ ಮಾರ್ಗವನ್ನು ಬಳಸಬಹುದು. ಅಗತ್ಯವಿದ್ದಲ್ಲಿ ಕ್ಯೂ.ಎ.ಎಲ್ ಕ್ರಾಸ್ ಹಾಗೂ ಮೇಕ್ರಿ ಸರ್ಕಲ್ ಮೂಲಕವೂ ಸಂಚರಿಸಬಹುದು.

ಬೆನ್ಸನ್ ಟೌನ್ ಕಡೆಗೆ ಹೋಗುವವರಿಗೆ

ಮಿಲ್ಲರ್ ರಸ್ತೆಯ ಹಜ್ ಭವನದಿಂದ ಬೆನ್ಸನ್ ಟೌನ್ ಕಡೆಗೆ ತೆರಳುವವರು ಮಿಲ್ಲರ್ ರಸ್ತೆ ಮೂಲಕ ನೇರವಾಗಿ ಬೆನ್ಸನ್ ಟೌನ್ ರಸ್ತೆಯನ್ನು ಬಳಸಬಹುದು.

ಇನ್ನೊಂದು ಪರ್ಯಾಯವಾಗಿ ಕಂಟೋನ್‌ಮೆಂಟ್ ರೈಲ್ವೆ ಸ್ಟೇಷನ್ – ಕಂಟೋನ್‌ಮೆಂಟ್ ಬ್ರಿಡ್ಜ್ – ಜಯಮಹಲ್ ಮುಖ್ಯರಸ್ತೆ – ಜಯಮಹಲ್ 1ನೇ ಮೆೈನ್ – ವಿಷ್ಣುವಿಹಾರ್ ಹೋಟೆಲ್ – ನಂದಿದುರ್ಗಾ ರಸ್ತೆ ಮಾರ್ಗದ ಮೂಲಕ ಬೆನ್ಸನ್ ಟೌನ್ ತಲುಪಬಹುದು.

ಚಿನ್ನಪ್ಪ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ

ನಂದಿದುರ್ಗಾ ರಸ್ತೆ, ಪೆಮ್ಮೇಗೌಡ ರಸ್ತೆ, ಮುನಿಮಾರಪ್ಪ ರಸ್ತೆ ಹಾಗೂ ಚಿನ್ನಪ್ಪ ಗಾರ್ಡನ್ ಕಡೆಗೆ ತೆರಳುವ ವಾಹನಗಳು ಮಿಲ್ಲರ್ ರಸ್ತೆ – ಬೆನ್ಸನ್ ಟೌನ್ ರಸ್ತೆ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.

ಇನ್ನೊಂದು ಪರ್ಯಾಯ ಮಾರ್ಗವಾಗಿ ಹಜ್ ಭವನ – ಕಂಟೋನ್‌ಮೆಂಟ್ ರೈಲ್ವೆ ಸ್ಟೇಷನ್ – ಜಯಮಹಲ್ ಮುಖ್ಯರಸ್ತೆ – ಪ್ರಿಯದರ್ಶಿನಿ ಜಂಕ್ಷನ್ – ಆನೇ ಪಾರ್ಕ್ – ಗುಲಾಬಿ ಜಂಕ್ಷನ್ – ನಂದಿದುರ್ಗಾ ರಸ್ತೆ – ಮುನಿಮಾರಪ್ಪ ರಸ್ತೆ – ಪೆಮ್ಮೇಗೌಡ ರಸ್ತೆ – ಚಿನ್ನಪ್ಪ ಗಾರ್ಡನ್ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.

ವಾಹನ ಸವಾರರಿಗೆ ಸೂಚನೆ

ಕಾಮಗಾರಿ ಅವಧಿಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳಬೇಕು. ಸಂಚಾರಿ ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ