LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ಬೆಂಗಳೂರಿನ ವಾಹನ ಸವಾರರೇ ಗಮನಿಸಿ ; ಮುಂದಿನ 1 ತಿಂಗಳು ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ಬೆಂಗಳೂರು: ನಗರದಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಹತ್ವದ ಮಾಹಿತಿ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೈಗೊಂಡಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ಜೂನ್ 15ರಿಂದ ಜುಲೈ 15ರವರೆಗೆ ನಂದಿದುರ್ಗಾ ಮುಖ್ಯರಸ್ತೆಯ ಕೆಲ ಭಾಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ.

ಯಾವ ರಸ್ತೆಯಲ್ಲಿ ಸಂಚಾರ ನಿರ್ಬಂಧ ?

ಜೂನ್ 15ರಿಂದ ಒಂದು ತಿಂಗಳ ಕಾಲ ಜೆ.ಸಿ. ನಗರ ಪೊಲೀಸ್ ಠಾಣೆ ಜಂಕ್ಷನ್‌ನಿಂದ ಹಜ್ ಭವನ ಜಂಕ್ಷನ್‌ವರೆಗೆ ಇರುವ ನಂದಿದುರ್ಗಾ ಮುಖ್ಯರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹಜ್ ಭವನದಿಂದ ಜೆ.ಸಿ. ನಗರ ಕಡೆಗೆ ತೆರಳುವವರಿಗೆ

ವಾಹನ ಸವಾರರು ಹಜ್ ಭವನ ಜಂಕ್ಷನ್ – ಕಂಟೋನ್‌ಮೆಂಟ್ ರೈಲ್ವೆ ನಿಲ್ದಾಣ – ಜಯಮಹಲ್ ಮುಖ್ಯರಸ್ತೆ – ಪ್ರಿಯದರ್ಶಿನಿ ಕಂಟೋನ್‌ಮೆಂಟ್ ಬ್ರಿಡ್ಜ್ – ದರ್ಗಾ – ಜೆ.ಸಿ. ನಗರ ಪೊಲೀಸ್ ಠಾಣೆ ಜಂಕ್ಷನ್ ಮಾರ್ಗವನ್ನು ಬಳಸಬಹುದು. ಅಗತ್ಯವಿದ್ದಲ್ಲಿ ಕ್ಯೂ.ಎ.ಎಲ್ ಕ್ರಾಸ್ ಹಾಗೂ ಮೇಕ್ರಿ ಸರ್ಕಲ್ ಮೂಲಕವೂ ಸಂಚರಿಸಬಹುದು.

ಬೆನ್ಸನ್ ಟೌನ್ ಕಡೆಗೆ ಹೋಗುವವರಿಗೆ

ಮಿಲ್ಲರ್ ರಸ್ತೆಯ ಹಜ್ ಭವನದಿಂದ ಬೆನ್ಸನ್ ಟೌನ್ ಕಡೆಗೆ ತೆರಳುವವರು ಮಿಲ್ಲರ್ ರಸ್ತೆ ಮೂಲಕ ನೇರವಾಗಿ ಬೆನ್ಸನ್ ಟೌನ್ ರಸ್ತೆಯನ್ನು ಬಳಸಬಹುದು.

ಇನ್ನೊಂದು ಪರ್ಯಾಯವಾಗಿ ಕಂಟೋನ್‌ಮೆಂಟ್ ರೈಲ್ವೆ ಸ್ಟೇಷನ್ – ಕಂಟೋನ್‌ಮೆಂಟ್ ಬ್ರಿಡ್ಜ್ – ಜಯಮಹಲ್ ಮುಖ್ಯರಸ್ತೆ – ಜಯಮಹಲ್ 1ನೇ ಮೆೈನ್ – ವಿಷ್ಣುವಿಹಾರ್ ಹೋಟೆಲ್ – ನಂದಿದುರ್ಗಾ ರಸ್ತೆ ಮಾರ್ಗದ ಮೂಲಕ ಬೆನ್ಸನ್ ಟೌನ್ ತಲುಪಬಹುದು.

ಚಿನ್ನಪ್ಪ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ

ನಂದಿದುರ್ಗಾ ರಸ್ತೆ, ಪೆಮ್ಮೇಗೌಡ ರಸ್ತೆ, ಮುನಿಮಾರಪ್ಪ ರಸ್ತೆ ಹಾಗೂ ಚಿನ್ನಪ್ಪ ಗಾರ್ಡನ್ ಕಡೆಗೆ ತೆರಳುವ ವಾಹನಗಳು ಮಿಲ್ಲರ್ ರಸ್ತೆ – ಬೆನ್ಸನ್ ಟೌನ್ ರಸ್ತೆ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.

ಇನ್ನೊಂದು ಪರ್ಯಾಯ ಮಾರ್ಗವಾಗಿ ಹಜ್ ಭವನ – ಕಂಟೋನ್‌ಮೆಂಟ್ ರೈಲ್ವೆ ಸ್ಟೇಷನ್ – ಜಯಮಹಲ್ ಮುಖ್ಯರಸ್ತೆ – ಪ್ರಿಯದರ್ಶಿನಿ ಜಂಕ್ಷನ್ – ಆನೇ ಪಾರ್ಕ್ – ಗುಲಾಬಿ ಜಂಕ್ಷನ್ – ನಂದಿದುರ್ಗಾ ರಸ್ತೆ – ಮುನಿಮಾರಪ್ಪ ರಸ್ತೆ – ಪೆಮ್ಮೇಗೌಡ ರಸ್ತೆ – ಚಿನ್ನಪ್ಪ ಗಾರ್ಡನ್ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.

ವಾಹನ ಸವಾರರಿಗೆ ಸೂಚನೆ

ಕಾಮಗಾರಿ ಅವಧಿಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳಬೇಕು. ಸಂಚಾರಿ ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಬರ ಪರಿಸ್ಥಿತಿ ಎದುರಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಸೂಚನೆಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ಲೂಟಿ ನಡೆದಿದ್ದು ರಾಜಕಾರಣಿಗಳ ಗ್ಯಾಂಗ್ ಇದೆ ಎಂದ ಅಶೋಕ್ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತರ ಖಾತೆಗೆ ಸಂದಾಯವಾಗಿದ್ದ 15.24 ಕೋಟಿ ರೂ. ವಾಪಸ್BIG NEWS: ಪಾಸ್‌ ಪೋರ್ಟ್ ಶುಲ್ಕ ಭಾರೀ ಹೆಚ್ಚಳ: ಜುಲೈ 1 ರಿಂದ ಪರಿಷ್ಕೃತ ದರ ಜಾರಿವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರಆರ್.ಅಶೋಕ್ ಕೇಳಿದ್ದ ಮನೆ ಯು.ಟಿ.ಖಾದರ್ ಗೆ ಹಂಚಿಕೆBREAKING: ಬೆಂಗಳೂರು ಮೆಟ್ರೋದಲ್ಲಿ ಮತ್ತೆ ಸಮಸ್ಯೆ: ಡೋರ್ ಲಾಕ್ ಆಗದೇ ಕಬ್ಬನ್ ಪಾರ್ಕ್ ನಿಲ್ದಾಣದಲ್ಲೇ ಕೆಟ್ಟು ನಿಂತ ಮೆಟ್ರೋ ರೈಲು: ಕೆಲ ಸಮಯದ ನಂತರ ಸಂಚಾರ ಪುನಾರಂಭತುಂಗಭದ್ರಾ ಗೇಟ್ ತುಂಡರಿಸಿದಾಗ ಡ್ಯಾಂ ನಡುಗುತ್ತಿದೆ ಎಂದು ರಾತ್ರೋರಾತ್ರಿ ಕರೆ ಬಂದಿತ್ತು: ಡಿಕೆಶಿBREAKING: ಪಶ್ಚಿಮ ಏಷ್ಯಾ ಬಿಕ್ಕಟ್ಟು ಸಡಿಲ: ವಾಣಿಜ್ಯ LPG ಸಿಲಿಂಡರ್ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ತೆಗೆದುಹಾಕಿದ ಕೇಂದ್ರ ಸರ್ಕಾರBIG NEWS: ಅಬಕಾರಿ ಅಧಿಕಾರಿ ಮಂಜುನಾಥ್, ಆಪ್ತರ ನಿವಾಸದಲ್ಲಿ 5.5 ಕೋಟಿ ರೂ. ನಗದು, 7 ಕೋಟಿಯ ಚಿನ್ನಾಭರಣ ವಶಕ್ಕೆ