ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕೇಳಿದ್ದ ನಿವಾಸವನ್ನು ಸಚಿವ ಯು.ಟಿ. ಖಾದರ್ ಅವರಿಗೆ ಹಂಚಿಕೆ ಮಾಡಲಾಗಿದೆ.
ಕುಮಾರಕೃಪ ಪೂರ್ವ ನಂಬರ್ 1 ನಿವಾಸವನ್ನು ಖಾದರ್ ಗೆ ಹಂಚಿಕೆ ಮಾಡಲಾಗಿದೆ. ಸ್ಯಾಂಕಿ ರಸ್ತೆಯಲ್ಲಿರುವ ನಂಬರ್ 31ರ ಮನೆಯನ್ನು ಆರ್. ಅಶೋಕ ಅವರಿಗೆ ಹಂಚಿಕೆ ಮಾಡಲಾಗಿದೆ.
ಕುಮಾರಕೃಪ ಪೂರ್ವ ನಂಬರ್ 1 ಮನೆಯನ್ನು ಅಶೋಕ್ ಕೇಳಿದ್ದರು. ಆದರೆ, ಅವರ ಬದಲಿಗೆ ಖಾದರ್ ಅವರಿಗೆ ಆ ಮನೆ ನೀಡಲಾಗಿದೆ. ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದಾಗ ಇದ್ದ ನಿವಾಸವನ್ನು ಅಶೋಕ್ ಕೇಳಿದ್ದರು. ಇದೀಗ ಆ ಸರ್ಕಾರಿ ನಿವಾಸವನ್ನು ಸಚಿವ ಖಾದರ್ ಅವರಿಗೆ ಹಂಚಿಕೆ ಮಾಡಲಾಗಿದೆ.
ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಇದ್ದ ಮನೆಯನ್ನು ಕೂಡ ಅಶೋಕ್ ಕೇಳಿದ್ದರು. ಆದರೆ ಎಂ.ಬಿ. ಪಾಟೀಲ್ ಮತ್ತು ಪ್ರಿಯಾಂಖ್ ಖರ್ಗೆ ಮನೆ ಹಂಚಿಕೆ ಯಥಾವತ್ತಾಗಿ ಮುಂದುವರೆದಿವೆ.