ಹೊಸದಿಲ್ಲಿ: ವಿರೋಧ ಪಕ್ಷಗಳು ತಮ್ಮ ಆಂತರಿಕ ಸಮಸ್ಯೆಗಳಲ್ಲಿ ಮುಳುಗಿರುವಾಗ, ಕೇಂದ್ರ ಸರ್ಕಾರವು ‘ನಾರಿಶಕ್ತಿ ವಂದನ್ ಅಧಿನಿಯಮ’ (ಮಹಿಳಾ ಮೀಸಲಾತಿ ಮಸೂದೆ) ವಿಷಯವನ್ನು ಮುನ್ನೆಲೆಗೆ ತರುವ ಮೂಲಕ ರಾಜಕೀಯವಾಗಿ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿದೆ.
ಇದು ಸರ್ಕಾರಕ್ಕೆ ಸಾರ್ವಜನಿಕವಾಗಿ ಉತ್ತಮ ಸಂದೇಶ ರವಾನಿಸಲು ಮತ್ತು ಮಹಿಳಾ ಮತದಾರರನ್ನು ಸೆಳೆಯಲು ನೆರವಾಗಲಿದ್ದು, ಮಹಿಳಾ ಮೀಸಲಾತಿಯು ದಶಕಗಳಿಂದ ಬಾಕಿ ಉಳಿದಿದ್ದ ವಿಷಯ. ಇದನ್ನು ಮಂಡಿಸುವುದರಿಂದ ಕೇಂದ್ರ ಸರ್ಕಾರವು ತನ್ನನ್ನು ‘ಬದ್ಧತೆಯುಳ್ಳ ಸರ್ಕಾರ’ ಎಂದು ಬಿಂಬಿಸಿಕೊಳ್ಳಲು ಮುಂದಾಗಿದೆ.
ವಿರೋಧ ಪಕ್ಷಗಳು ಮೀಸಲಾತಿಯನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ, ಸರ್ಕಾರ ಈ ಮಸೂದೆಯನ್ನು ಮಂಡಿಸಿದಾಗ ಅದನ್ನು ಬೆಂಬಲಿಸಬೇಕೋ ಅಥವಾ ಮಸೂದೆಯ ಕೆಲವೊಂದು ನಿಬಂಧನೆಗಳ ಬಗ್ಗೆ ಚರ್ಚೆ ಆರಂಭಿಸಿ ಗೊಂದಲ ಸೃಷ್ಟಿಸಬೇಕೋ ಎಂಬ ಇಕ್ಕಟ್ಟಿನಲ್ಲಿ ಅವರು ಸಿಲುಕಿದ್ದಾರೆ.
ಪ್ರತಿಪಕ್ಷಗಳ ಆಂತರಿಕ ಕಲಹದ ಸುದ್ದಿಗಳು ಪ್ರಚಲಿತದಲ್ಲಿರುವಾಗ, ಈ ರೀತಿಯ ರಾಷ್ಟ್ರೀಯ ಮಹತ್ವದ ಮಸೂದೆಯನ್ನು ತರುವ ಮೂಲಕ ಸರ್ಕಾರವು ಚರ್ಚೆಯ ದಿಕ್ಕನ್ನೇ ಬದಲಿಸುತ್ತಿದೆ.ಈ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೆ ತರುವಲ್ಲಿ ಅಥವಾ ಅದರ ಅನುಷ್ಠಾನದ ಹಂತಗಳಲ್ಲಿ ಎದುರಾಗಬಹುದಾದ ಸಾಂವಿಧಾನಿಕ ಮತ್ತು ರಾಜಕೀಯ ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.
ಉದ್ದೇಶ
ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33 (ಒಂದು-ಮೂರಾಂಶ) ಸ್ಥಾನಗಳನ್ನು ಮೀಸಲಿಡುವುದು. ಈ ಮೀಸಲಾತಿಯು ಜನಗಣತಿ ಮತ್ತು ಕ್ಷೇತ್ರ ಪುನವಿರ್ಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಜಾರಿಗೆ ಬರಲಿದೆ.ಮೀಸಲಾತಿಯು ಆರಂಭದಲ್ಲಿ 15 ವರ್ಷಗಳ ಕಾಲ ಜಾರಿಯಲ್ಲಿರುತ್ತದೆ, ನಂತರ ಸಂಸತ್ತು ಅಗತ್ಯಕ್ಕೆ ತಕ್ಕಂತೆ ಇದನ್ನು ವಿಸ್ತರಿಸಬಹುದು.ಮಹಿಳಾ ಮೀಸಲಾತಿಯ ಒಳಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಅನ್ವಯವಾಗುವಂತೆ ಮೀಸಲಾತಿ ನೀಡಲಾಗಿದೆ.
ನಾರಿಶಕ್ತಿ ವಂದನ್ ಅಧಿನಿಯಮ
ನಾರಿಶಕ್ತಿ ವಂದನ್ ಅಧಿನಿಯಮ’ ( ಅಥವಾ ಮಹಿಳಾ ಮೀಸಲಾತಿ ಮಸೂದೆಯು ಭಾರತದ ಸಂಸದೀಯ ಇತಿಹಾಸದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ.ಭಾರತದ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 (ಮೂರನೇ ಒಂದು ಭಾಗ) ಸ್ಥಾನಗಳನ್ನು ಮೀಸಲಿಡುವುದು ಈ ಮಸೂದೆಯ ಮೂಲ ಉದ್ದೇಶವಾಗಿದೆ.ಇದನ್ನು ಅಧಿಕೃತವಾಗಿ ‘ಸಂವಿಧಾನ (ನೂರಾ ಇಪ್ಪತ್ತೆಂಟನೇ ತಿದ್ದುಪಡಿ) ಮಸೂದೆ, 2023’ ಎಂದು ಕರೆಯಲಾಗುತ್ತದೆ.ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಜೊತೆಗೆ, ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ವಿಧಾನಸಭೆಯಲ್ಲೂ ಮಹಿಳೆಯರಿಗೆ ಮೀಸಲಾತಿ ಅನ್ವಯವಾಗಲಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡ
ಮಹಿಳೆಯರಿಗಾಗಿ ಮೀಸಲಿಟ್ಟಿರುವ ಶೇ. 33 ಸ್ಥಾನಗಳಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಅಸ್ತಿತ್ವದಲ್ಲಿರುವ ಮೀಸಲಾತಿಯೊಳಗೆ ಉಪ-ಮೀಸಲಾತಿಯನ್ನು ಒದಗಿಸಲಾಗುತ್ತದೆ. ಮೀಸಲಾತಿಯು 15 ವರ್ಷಗಳ ಅವಧಿಗೆ ಮಾತ್ರ ಜಾರಿಯಲ್ಲಿರುತ್ತದೆ. ನಂತರ ಸಂಸತ್ತು ಬಯಸಿದರೆ ಅದನ್ನು ವಿಸ್ತರಿಸಬಹುದು.
ಜಾರಿ ಪ್ರಕ್ರಿಯೆ:
ಈ ಮೀಸಲಾತಿಯು ಜನಗಣತಿ ಮತ್ತು ಕ್ಷೇತ್ರ ಪುನವಿರ್ಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಜಾರಿಗೆ ಬರಲಿದೆ ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.ಈ ಮಸೂದೆಯನ್ನು 2023ರ ಸೆಪ್ಟೆಂಬರ್ನಲ್ಲಿ ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಿತು.ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಈ ಮಸೂದೆಯು ಬಹುಮತದಿಂದ ಅಂಗೀಕಾರಗೊಂಡಿತು.ಸೆಪ್ಟೆಂಬರ್ 28, 2023 ರಂದು ರಾಷ್ಟ್ರಪತಿಗಳ ಅಂಕಿತದೊಂದಿಗೆ ಇದು ಕಾಯಿದೆಯಾಗಿ ರೂಪಾಂತರಗೊಂಡಿತು.
ಈ ಕಾಯಿದೆಯ ಮಹತ್ವ
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಇದು ದೊಡ್ಡ ಉತ್ತೇಜನವಾಗಿದೆ.: ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಧ್ವನಿಯನ್ನು ಬಲಪಡಿಸುವ ಮೂಲಕ, ಇದು ಲಿಂಗ ಸಮಾನತೆಯ ಕಡೆಗೆ ಎತ್ತಿದ ಒಂದು ಪ್ರಮುಖ ಹೆಜ್ಜೆಯಾಗಿದೆ.ಈ ಕಾಯಿದೆಯು ಜಾರಿಗೆ ಬಂದ ನಂತರ, ಭಾರತದ ಶಾಸನ ಸಭೆಗಳಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ, ಇದು ದೇಶದ ಸಾಮಾಜಿಕ ಮತ್ತು ರಾಜಕೀಯ ನೀತಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.
ಸರ್ಕಾರದ ಮುಂದಿನ ಯೋಜನೆ
2029ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಈ ಕಾಯಿದೆಯನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಸರ್ಕಾರವು ಕೆಲವು ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ಮೀಸಲಾತಿಯನ್ನು ತ್ವರಿತವಾಗಿ ಜಾರಿಗೊಳಿಸಲು 2026ರ ಏಪ್ರಿಲ್ನಲ್ಲಿ ಸರ್ಕಾರವು ಹೊಸದಾಗಿ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026’ ಅನ್ನು ಮಂಡಿಸಿದೆ. ಕ್ಷೇತ್ರ ಪುನವಿರ್ಂಗಡಣೆಗೆ ಅಗತ್ಯವಾದ ಜನಗಣತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಡಿಲಿಮಿಟೇಶನ್ ಮೂಲಕ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇದರಿಂದ ಉತ್ತರದ ಮತ್ತು ದಕ್ಷಿಣದ ರಾಜ್ಯಗಳ ನಡುವಿನ ರಾಜಕೀಯ ಶಕ್ತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.2023ರಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾದ ಈ ಮಸೂದೆಯನ್ನು, ಮುಂದಿನ ಚುನಾವಣೆಗಳ ಹೊತ್ತಿಗೆ ಪೂರ್ಣಪ್ರಮಾಣದಲ್ಲಿ ಕಾರ್ಯಗತಗೊಳಿಸುವುದು ಪ್ರಸ್ತುತ ಸರ್ಕಾರದ ಗುರಿಯಾಗಿದೆ.
ಪ್ರತಿಪಕ್ಷಗಳಲ್ಲಿನ ಆಂತರಿಕ ಬಿಕ್ಕಟ್ಟು
ಟಿಎಂಸಿ , ಉದ್ಧವ್ ಠಾಕ್ರೆ ಅವರ ಶಿವಸೇನೆ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳಲ್ಲಿ ಉಂಟಾಗಿರುವ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಒಡಕುಗಳು ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತಿವೆ. ಇದು ವಿರೋಧ ಪಕ್ಷಗಳ ಸಂಘಟಿತ ಹೋರಾಟದ ಸಾಮಥ್ರ್ಯವನ್ನು ದುರ್ಬಲಗೊಳಿಸುತ್ತಿದೆ.