LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾತು ಕೇಳದ ಅಧಿಕಾರಿಗಳಿಗೆ ಸಚಿವ ಬಸವರಾಜ ರಾಯರೆಡ್ಡಿ ಖಡಕ್ ಎಚ್ಚರಿಕೆ: ಕೆಲಸದಿಂದ ವಜಾಗೊಳಿಸುವ ವಾರ್ನಿಂಗ್

ಕೊಪ್ಪಳ ಜಿಲ್ಲೆಯ ಗುನ್ನಾಳ ಗ್ರಾಮದಲ್ಲಿ ನೂತನ ಪದವಿಪೂರ್ವ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ತಮ್ಮ ಮಾತು ಕೇಳದ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಕೆಲಸದಿಂದ ವಜಾಗೊಳಿಸುವುದಾಗಿ (ಫೈರ್) ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯು ಅತ್ಯಂತ ಹೆಚ್ಚಿನ ಕಾರ್ಯಭಾರವಿರುವ ಇಲಾಖೆಯಾಗಿದ್ದು, ರಾಜ್ಯದಲ್ಲಿ 96 ವಿಶ್ವವಿದ್ಯಾಲಯಗಳು ಹಾಗೂ 1.52 ಕೋಟಿ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ತಾವು ಸದಾ ಕೆಲಸದೊತ್ತಡದಲ್ಲಿ ಇರುತ್ತೇನೆ. ಆದ್ದರಿಂದ ಪತ್ರಗಳಿಗೆ ಡಿಜಿಟಲ್ ಸಿಗ್ನೇಚರ್ (ಡಿಜಿಟಲ್ ಸಹಿ) ಬಳಸಿ ನೀಡುವಂತೆ ವೇದಿಕೆ ಮೇಲಿಂದಲೇ ತಮ್ಮ ಆಪ್ತ ಸಹಾಯಕರಿಗೆ (ಪಿಎ) ಸೂಚನೆ ನೀಡಿದರು. ಅಲ್ಲದೆ, ಯಲಬುರ್ಗಾ ತಹಶೀಲ್ದಾರ್ ಪ್ರಕಾಶ್ ನಾಶಿ ಅವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ತಾವು ಸದಾ ಕಾರ್ಯನಿರತರಾಗಿರುವುದರಿಂದ ತಹಶೀಲ್ದಾರ್ ಅವರೇ ತಮ್ಮ ಸಾರ್ವಜನಿಕ ಸಂಪರ್ಕಾಧಿಕಾರಿಯಂತೆ (ಪಿಆರ್‌ಓ) ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು. ಇದೇ ವೇಳೆ ಇಲಾಖೆಯಲ್ಲಿ ಯಾರು ಮಾತು ಕೇಳುವುದಿಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರುವಂತೆಯೂ ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿದ್ದ ಗೊಂದಲಗಳಿಗೆ ಸಚಿವರು ತೆರೆ ಎಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಕಾರಣಕ್ಕೂ ನಿಲ್ಲಿಸುವುದಿಲ್ಲ ಹಾಗೂ ಆ ಎಲ್ಲಾ ಯೋಜನೆಗಳು ಮುಂದೆಯೂ ನಿರಂತರವಾಗಿ ಮುಂದುವರಿಯಲಿವೆ ಎಂದು ಅವರು ವೇದಿಕೆ ಮೂಲಕ ಜನತೆಗೆ ಸ್ಪಷ್ಟಪಡಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆಪ್ಟೆಂಬರ್ 21 ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ: ಸಭಾಪತಿ ಸಲೀಂ ಅಹಮದ್ಕೆಪಿಎಸ್ಸಿ ಗ್ರೂಪ್ 'ಸಿ' ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಮತ್ತು ಕಟ್-ಆಫ್ ಅಂಕ ಪ್ರಕಟ: ರಿಸಲ್ಟ್ ನೋಡುವುದು ಹೇಗೆ?ಮಾತು ಕೇಳದ ಅಧಿಕಾರಿಗಳಿಗೆ ಸಚಿವ ಬಸವರಾಜ ರಾಯರೆಡ್ಡಿ ಖಡಕ್ ಎಚ್ಚರಿಕೆ: ಕೆಲಸದಿಂದ ವಜಾಗೊಳಿಸುವ ವಾರ್ನಿಂಗ್ಒಡಿಶಾದ ಬಾಲಸೋರ್ ಅರಣ್ಯದಲ್ಲಿ ಇಂಡೋನೇಷ್ಯಾ ಮೂಲದ 5 ಅಪರೂಪದ ಒರಾಂಗುಟನ್‌ಗಳು ಪತ್ತೆ: ಅಂತಾರಾಷ್ಟ್ರೀಯ ಕಳ್ಳಸಾಗಣೆ ಶಂಕೆಗೃಹ ಜ್ಯೋತಿ ಯೋಜನೆ ಪರಿಷ್ಕರಣೆ: ಸೆಪ್ಟೆಂಬರ್ 30ಕ್ಕೆ ಗಡುವು ವಿಸ್ತರಣೆ, ಬೇಕಾದ ದಾಖಲೆ ಹಾಗೂ ನಿಯಮಗಳ ಸಂಪೂರ್ಣ ಮಾಹಿತಿಕರ್ನಾಟಕಕ್ಕೆ ಮತ್ತೆ ಹಿನ್ನಡೆ: CWRC ಆದೇಶ ಎತ್ತಿಹಿಡಿದ CWMA, ತಮಿಳುನಾಡಿಗೆ ನಿತ್ಯ 6,000 ಕ್ಯೂಸೆಕ್ ನೀರು ಹರಿಸಲು ಸೂಚನೆBIG NEWS: 108 ಆಂಬುಲೆನ್ಸ್ ಸೇವೆ ಖಾಸಗೀಕರಣಕ್ಕೆ ಸಂಪುಟ ಅಂಕಿತ: ಸಿಬ್ಬಂದಿ ಮುಷ್ಕರದ ಎಚ್ಚರಿಕೆ ನಡುವೆಯೇ ಸರ್ಕಾರದ ನಿರ್ಧಾರದಕ್ಷಿಣ ವಲಯದ ರೈಲ್ವೇ ಸುರಕ್ಷತಾ ಆಯುಕ್ತರಾಗಿ ವಿ.ವೆಂಕಟಸುಬ್ರಹ್ಮಣ್ಯನ್ ಅಧಿಕಾರ ಸ್ವೀಕಾರನಗರ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ-ಗ್ರಾಮೀಣ ಬದುಕಿನ ಪರಿಚಯ: 'ಗ್ರಾಮಾನುಭವ' ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆBREAKING: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಗೆ ಹೈಕೋರ್ಟ್ ಬಿಗ್ ರಿಲೀಫ್: ಪ್ರದೋಷ್ ಮಾಫಿಸಾಕ್ಷಿಗೆ ತಡೆ, ಮರು ಆದೇಶಕ್ಕೆ ಸೂಚನೆ