LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿಯವರು ಟೆಲಿಪ್ರಾಮ್ಟ್ ಇಲ್ಲದೆ 'ವಂದೇ ಮಾತರಂ' ಪೂರ್ತಿ ಹಾಡಲಿ ಇಂದೇ ರಾಜೀನಾಮೆ ಕೊಡ್ತೇನೆ : ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: 'ವಂದೇ ಮಾತರಂ' ಗೀತೆಯ ಪೂರ್ಣ ಚರಣಗಳನ್ನು ಹಾಡುವಂತೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಶಾಸನಸಭೆ ಹಾಗೂ ಸಾರ್ವಜನಿಕ ವೇದಿಕೆಯಲ್ಲಿ ಕಡಾಖಂಡಿತವಾಗಿ ಬಹಿರಂಗ ಸವಾಲು ಎಸೆದಿದ್ದಾರೆ. "ಬಿಜೆಪಿ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಜವಾಹರ್‌ಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್ ಮತ್ತು ರವೀಂದ್ರನಾಥ್ ಟ್ಯಾಗೋರ್ ಅವರಿಗಿಂತ ದೊಡ್ಡವರೇ? ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ನಾನು ಸವಾಲು ಹಾಕುತ್ತೇನೆ. ಸಾರ್ವಜನಿಕ ಸಭೆಯಲ್ಲಿ ಯಾವುದೇ ಕಾಗದ ಅಥವಾ ಟೆಲಿಪ್ರಾಂಪ್ಟರ್ ನೆರವಿಲ್ಲದೆ ವಂದೇ ಮಾತರಂ ಗೀತೆಯನ್ನು ಪೂರ್ತಿಯಾಗಿ ಹಾಡಿ ತೋರಿಸಲಿ. ಅವರು ಹಾಡಿದರೆ ನಾನೇ ತಕ್ಷಣ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಗೃಹ ಸಚಿವರು ತಿರುಗೇಟು ನೀಡಿದ್ದಾರೆ.

"ನಮಗೆ ಯಾವಾಗಲೂ ಗೀತೆಯ ಮೊದಲ ಎರಡು ಪ್ಯಾರಾಗಳನ್ನಷ್ಟೇ ಹಾಡಿ ಅಭ್ಯಾಸವಿದ್ದು, ನನಗೂ ಕೊನೆಯ ಸಾಲುಗಳು ಬರುವುದಿಲ್ಲ. ಹೀಗಿರುವಾಗ ಬಿಜೆಪಿಗರು ತಮಗೆ ಪೂರ್ತಿ ಬರುತ್ತದೆ ಎನ್ನುವುದಾದರೆ ಅದನ್ನು ನಿರೂಪಿಸಲಿ" ಎಂದ ಖರ್ಗೆ, ಮುಂಬರುವ ಅಧಿವೇಶನದಲ್ಲಿ ಈ ಕುರಿತು ವಿಶೇಷ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು. "ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಸಭಾಧ್ಯಕ್ಷರಲ್ಲಿ ಪ್ರತ್ಯೇಕ ಸಮಯ ಕೇಳುತ್ತೇನೆ. ಬಿಜೆಪಿ ಶಾಸಕರೆಲ್ಲರೂ ಯಾವುದೇ ಕಾಗದದ ನೆರವಿಲ್ಲದೆ ಸಭೆಯಲ್ಲಿ ಪೂರ್ಣ ವಂದೇ ಮಾತರಂ ಹಾಡಲಿ, ಅವರು ಹೇಗೆ ಹಾಡುತ್ತಾರೆ ಎಂಬುದನ್ನು ನಾವೂ ನೋಡುತ್ತೇವೆ" ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರದೋಷ್ ಮಾಫಿಸಾಕ್ಷಿ ಅರ್ಜಿ ಹಿನ್ನೆಲೆ ದರ್ಶನ್ಗೆ ಶುರುವಾಯ್ತಾ ಆತಂಕ?BREAKING : ಬೆಳಗಾವಿಯಲ್ಲಿ ಹಾಡ ಹಗಲೇ ಡಬಲ್ ಮರ್ಡರ್ : ಗ್ರಾಂ.ಪಂ ಒಳಗಡೆಯೇ ತಂದೆ-ಮಗಳ ಬರ್ಬರ ಹತ್ಯೆ!GOOD NEWS : ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ 1,505 ಹುದ್ದೆಗಳ ಬೃಹತ್ ನೇಮಕಾತಿ: ಸರ್ಕಾರದಿಂದ ವಿಶೇಷ ನಿಯಮಾವಳಿ ಪ್ರಕಟಬಿಜೆಪಿಯವರು ಟೆಲಿಪ್ರಾಮ್ಟ್ ಇಲ್ಲದೆ 'ವಂದೇ ಮಾತರಂ' ಪೂರ್ತಿ ಹಾಡಲಿ ಇಂದೇ ರಾಜೀನಾಮೆ ಕೊಡ್ತೇನೆ : ಪ್ರಿಯಾಂಕ್ ಖರ್ಗೆ ಸವಾಲುಮಂಗಳೂರು ಜೈಲು ಜಾಮರ್ ವಿವಾದ: ತಾಂತ್ರಿಕ ಪರಿಹಾರಕ್ಕೆ ಒತ್ತು ನೀಡಲು ವಕೀಲ ಮನೋರಾಜ್ ರಾಜೀವ ಅಗ್ರಹಹುಬ್ಬಳ್ಳಿ : ಗಣೇಶ ಮೆರವಣಿಗೆ ವೇಳೆ ನಿಯಮ ಉಲ್ಲಂಘನೆ : 6 ಜನ ಡಿಜೆ ಮಾಲೀಕರು, ಆಪರೇಟರ್ ವಿರುದ್ಧ 'FIR' ದಾಖಲುBREAKING : ಮಂಡ್ಯದಲ್ಲಿ ಕಸದ ತೊಟ್ಟಿಯಲ್ಲಿ, ಪತ್ತೆಯಾದ ತಾಲೂಕು ಕಂದಾಯ ಇಲಾಖೆಯ ಕಡತಗಳು!ಸಚಿವ ಸತೀಶ್ ಜಾರಕಿಹೊಳಿಗೆ ಹೆಚ್ಚಿದ ಸಂಕಷ್ಟ : ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲು 'ED' ಸಿದ್ಧತೆಹೊನ್ನಾವರ ಪೊಲೀಸರ ಕಾರ್ಯಾಚರಣೆ: ವೀಸಾ ಮುಗಿದರೂ ಅಕ್ರಮ ವಾಸ್ತವ್ಯ ಹೂಡಿದ್ದ ಇಸ್ರೇಲ್ ಪ್ರಜೆ ವಶಕ್ಕೆBREAKING : ಮಹಿಳಾ ಸಚಿವರ ನೇಮಕದ ತಪ್ಪೊಪ್ಪಿಕೊಂಡ ರಣದೀಪ್ ಸಿಂಗ್ ಸುರ್ಜೇವಾಲಾ: ಶೀಘ್ರವೇ ಸಚಿವ ಸಂಪುಟಕ್ಕೆ ಸೇರ್ಪಡೆ ಸುಳಿವು