LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

SHOCKING : ಸತ್ತ ಹಸುವಿನ ಶವವನ್ನು ವಾಹನಕ್ಕೆ ಕಟ್ಟಿ 1 ಕಿ.ಮೀ. ಎಳೆದೊಯ್ದ ನಗರಸಭೆ ಸಿಬ್ಬಂದಿ ; ವಿಡಿಯೋ ವೈರಲ್ |WATCH VIDEO

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಝಲ್ಲಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸತ್ತ ಹಸುವಿನ ಶವವನ್ನು ನಗರಸಭೆಯ ಕಸ ಸಂಗ್ರಹಿಸುವ ವಾಹನಕ್ಕೆ ಕಟ್ಟಿ ಸುಮಾರು 1 ಕಿಲೋಮೀಟರ್‌ವರೆಗೆ ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹಿಂದೂ ಸೇನೆ, ಗೋ ರಕ್ಷಣಾ ಸಂಘಟನೆಗಳು ಹಾಗೂ ಸ್ಥಳೀಯರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ನ್ಯಾಯಸಮ್ಮತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಸ್ಥಳೀಯ ಆಡಳಿತದ ಮಾಹಿತಿ ಪ್ರಕಾರ, ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಸು ಮೃತಪಟ್ಟಿತ್ತು. ಅದು ಅನಾಥ ಹಸುವಾಗಿದ್ದರಿಂದ ಮಾಲೀಕರು ಯಾರೂ ಮುಂದೆ ಬಂದಿರಲಿಲ್ಲ. ಹೀಗಾಗಿ ರಸ್ತೆ ಬದಿಯಲ್ಲೇ ಸುಮಾರು ಎರಡು ದಿನಗಳ ಕಾಲ ಶವ ಬಿದ್ದಿದ್ದು, ಕೊಳೆತು ದುರ್ವಾಸನೆ ಹರಡತೊಡಗಿತ್ತು.

ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆ ದೃಷ್ಟಿಯಿಂದ ಶವವನ್ನು ತೆರವುಗೊಳಿಸುವ ಅಗತ್ಯ ಎದುರಾದರೂ, ಸ್ಥಳದಲ್ಲೇ ಟ್ರ್ಯಾಕ್ಟರ್ ಅಥವಾ ಟ್ರಾಲಿ ಲಭ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಹಸುವಿನ ಶವಕ್ಕೆ ಹಗ್ಗ ಕಟ್ಟಿ ಗ್ರಾಮದ ಕಸ ಸಂಗ್ರಹಿಸುವ ವಾಹನದ ಮೂಲಕ ಶವವನ್ನು ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ಸಾಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸೋಮವಾರದಿಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ನಿಂದ ಗುಡ್ ನ್ಯೂಸ್ ಡ್ಯಾಡ್ ಚಿತ್ರತಂಡದ ಭಾವುಕ ಪೋಸ್ಟ್ ವೈರಲ್ಅಮೆರಿಕದ ಉದ್ಯೋಗ ತೊರೆದು.. ಹೈದರಾಬಾದ್‌ನಲ್ಲಿ ₹2 ಕೋಟಿ ‘ಲಡ್ಡು’ ಸಾಮ್ರಾಜ್ಯ ಕಟ್ಟಿದ ಸಾಫ್ಟ್‌ವೇರ್ ದಂಪತಿ!‘ಅಸ್ಸಲಾಮ್‌ಅಲೈಕುಂ’ಗೆ ಚೆನ್ನಾಗಿ ರಿಪ್ಲೈ ಮಾಡುವ ಐಫೋನ್ ಸಿರಿ ‘ಜೈಶ್ರೀರಾಮ್’ ಎಂದಾಗ ಕೊಟ್ಟ ರಿಪ್ಲೈ ನೋಡಿ ಕಿಡಿಕಾರಿದ ಭಕ್ತ; ವಿಡಿಯೊBREAKING : ಬೆಂಗಳೂರಲ್ಲಿ ಘೋರ ದುರಂತ ; ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕೂಲಿ ಕಾರ್ಮಿಕರು ದುರ್ಮರಣ.!Rain Alert: ಭಾರಿ ಮಳೆ ಮುನ್ಸೂಚನೆ: ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ; ದಕ್ಷಿಣ ಕನ್ನಡದಲ್ಲಿ ಶಾಲಾ-ಕಾಲೇಜಿಗೆ ರಜೆGOOD NEWS: ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ನಾಲ್ಕು ನಿಗಮಗಳ ವೇತನ ಹೆಚ್ಚಳ ಮಾಡಿದ ರಾಜ್ಯ ಸರ್ಕಾರBREAKING : ಬೆಂಗಳೂರಿನ ಮಾದಪಟ್ಟಣದ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಘೋರ ದುರಂತ ; 7 ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವುBIG NEWS : ‘EPFO’ ಖಾತೆದಾರರಿಗೆ ಬಿಗ್ ಅಲರ್ಟ್  : ಇಂದು ಮಧ್ಯರಾತ್ರಿವರೆಗೆ ಎಲ್ಲಾ ಆನ್’ಲೈನ್ ಸೇವೆಗಳು ಬಂದ್ !ALERT : ಪ್ರತಿದಿನ ಗಂಟೆಗಟ್ಟಲೆ ‘ಕಂಪ್ಯೂಟರ್’ ಮುಂದೆ ಕುಳಿತು ಕೆಲಸ ಮಾಡುತ್ತೀರಾ..? ತಪ್ಪದೇ ಈ ಸುದ್ದಿಯನ್ನೊಮ್ಮೆ ಓದಿBREAKING: ಗಾಂಜಾ ಅಮಲಲ್ಲಿ ಅಜ್ಜಿಯ ಕೊಂದ ಮೊಮ್ಮಗನ ಮೇಲೆ ಫೈರಿಂಗ್