LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೈವಸ್ಥಾನಗಳ ಸಮಸ್ಯೆಗಳು, ಕುಟುಂಬದ ಪಿತೃದೋಷ ಅಥವಾ ಗಂಭೀರ ಸಂಕಷ್ಟಗಳಿಗೆ ಇಲ್ಲಿದೆ ಪರಿಹಾರ!

ಅಷ್ಟಮಂಗಲ ಪ್ರಶ್ನೆ ಎಂಬ ವಿಶೇಷ ಜೋತಿಷ್ಯ ಪದ್ಧತಿ ಪರಶುರಾಮ ಸೃಷ್ಟಿಯ ಕರಾವಳಿ ತೀರ ಪ್ರದೇಶದ ವಿಶಿಷ್ಟ ಸಾಂಸ್ಕೃತಿಕ ಮತ್ತು ಜ್ಯೋತಿಷ್ಯ ಪರಂಪರೆಯಾಗಿಯೇ ಉಳಿದುಕೊಂಡಿದೆ.

 ಈಗ ಅಷ್ಟಮಂಗಲ ಪ್ರಶ್ನೆ ಕೇರಳ ಮತ್ತು ಕರಾವಳಿ ದಾಟಿ ವಿಸ್ತರಿಸಿದೆ, ಎಲ್ಲಾ ಕಡೆ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಿಸಿ ಅದರ ಮಾಹಿತಿಯನ್ವಯ ದೇವಾಲಯದ ಅಭಿವೃದ್ಧಿ ಕೈಗೊಳ್ಳುತ್ತಾರೆ.

 ನಾನು ಒಮ್ಮೆ ಕುಂದಾಪುರ ಸಮೀಪದ ಹಟ್ಟಿಯಂಗಡಿಯ ಮಾರಲ ದೇವಿ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ನೋಡಲು ಹೋಗಿದ್ದೆ ಅದನ್ನು ನೆರವೇರಿಸಿದವರು ಕೇರಳದ ನಂಬೂದರಿಗಳು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

  ಅಷ್ಟಮಂಗಲ ಪ್ರಶ್ನೆಯು ಕೇರಳ ಮತ್ತು ಕರಾವಳಿ ಕರ್ನಾಟಕದ ತುಳುನಾಡಿನಿ ಜ್ಯೋತಿಷ್ಯ ಪದ್ಧತಿಯಲ್ಲಿ ಅತ್ಯಂತ ಪ್ರಸಿದ್ಧವಾದ, ನಿಖರವಾದ ಫಲಜ್ಯೋತಿಷ್ಯ ವಿಧಾನವಾಗಿದೆ.

  ದೇವಾಲಯಗಳ ಜೀರ್ಣೋದ್ಧಾರ, ದೈವಸ್ಥಾನಗಳ ಸಮಸ್ಯೆಗಳು, ಕುಟುಂಬದ ಪಿತೃದೋಷ ಅಥವಾ ಗಂಭೀರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಈ ಪ್ರಶ್ನಾವಳಿಯನ್ನು ಇರಿಸಲಾಗುತ್ತದೆ.

 ​ಅಷ್ಟಮಂಗಲದ ಎಂಟು ಮಂಗಲ ದ್ರವ್ಯಗಳು
​ಪ್ರಶ್ನಾಚಿಂತನೆಯ ಸಮಯದಲ್ಲಿ ಈ ಕೆಳಗಿನ ಎಂಟು ಪವಿತ್ರ ವಸ್ತುಗಳನ್ನು ಮಂಡಲದಲ್ಲಿ ಇಡಲಾಗುತ್ತದೆ.

  ​ದರ್ಪಣ (ಕನ್ನಡಿ),
​ಪೂರ್ಣಕುಂಭ (ನೀರು ತುಂಬಿದ ಕಳಶ), ​ದೀಪ,
​ಚಿನ್ನ (ಬಂಗಾರ),​ಅಕ್ಷತೆ,
​ತಾಂಬೂಲ (ವೀಳ್ಯದೆಲೆ ಮತ್ತು ಅಡಿಕೆ),​ಧೋವಸ್ತ್ರ (ಬಿಳಿ ವಸ್ತ್ರ),
​ಕನ್ನಿಕೆ (ಚಿಕ್ಕ ಹೆಣ್ಣುಮಗು)
​ಪ್ರಶ್ನೆಯ ಮುಖ್ಯ ವಿಧಿವಿಧಾನಗಳು.

  ​ಆರೂಢ ಲಗ್ನ ನಿರ್ಣಯ, ಚಿಕ್ಕ ಹೆಣ್ಣುಮಗುವಿನ ಕೈಯಿಂದ ಅಥವಾ ಯಜಮಾನನಿಂದ ಮಂಡಲದ ಮೇಲೆ ಚಿನ್ನದ ನಾಣ್ಯ ಹಾಗೂ ಅಕ್ಷತೆಯನ್ನು ಹಾಕಿಸಿ ಆ ನಾಣ್ಯ ಬೀಳುವ ಸ್ಥಾನದ ಆಧಾರದ ಮೇಲೆ 'ಆರೂಢ'ವನ್ನು ನಿರ್ಧರಿಸಲಾಗುತ್ತದೆ.

  108 ಹರಳು ಅಥವಾ ಕವಡೆಗಳನ್ನು ಬಳಸಿ ಸಂಕೀರ್ಣ ಲೆಕ್ಕಾಚಾರದ ಮೂಲಕ ಗ್ರಹಸ್ಥಿತಿ ಮತ್ತು ದೈವಿಕ ಸೂಚನೆಗಳನ್ನು ತಿಳಿಯಲಾಗುತ್ತದೆ.

​ ಪ್ರಶ್ನೆ ಕೇಳಲು ಬರುವ ವ್ಯಕ್ತಿಯ ನಡವಳಿಕೆ, ಅವರು ಉಟ್ಟ ವಸ್ತ್ರ, ಕುಳಿತ ದಿಕ್ಕು ಮತ್ತು ಆ ಸಮಯದಲ್ಲಿ ಸುತ್ತಮುತ್ತ ನಡೆಯುವ ಘಟನೆಗಳನ್ನು (ಶಕುನ) ಗಮನಿಸಲಾಗುತ್ತದೆ ಇದಕ್ಕೆ ಶಕುನ ಮತ್ತು ದೂತ ಲಕ್ಷಣ ಎನ್ನುತ್ತಾರೆ.

 ​ತಾಂಬೂಲ ಪ್ರಶ್ನೆ ಹೇಗೆಂದರೆ ತಂದ ವೀಳ್ಯದೆಲೆಗಳ ಸಂಖ್ಯೆ, ಅವುಗಳ ಸ್ಥಿತಿ (ಹರಿದಿರುವುದು, ಕಲೆಗಳಿರುವುದು ಇತ್ಯಾದಿ) ನೋಡಿ ದೋಷದ ಸ್ವರೂಪವನ್ನು ಲೆಕ್ಕ ಹಾಕಲಾಗುತ್ತದೆ.

  #ಇದನ್ನು_ಯಾವ_ಉದ್ದೇಶಗಳಿಗಾಗಿ_ನಡೆಸಲಾಗುತ್ತದೆ? ಗೊತ್ತಾ...

  ​ದೇವಾಲಯಗಳ ಸಮಸ್ಯೆಗಳಲ್ಲಿ, ದೇವತಾ ಸಾನಿಧ್ಯದ ಕೊರತೆ, ಪೂಜಾ ಲೋಪಗಳು ಅಥವಾ ಜೀರ್ಣೋದ್ಧಾರದ ಕಾಲ ನಿರ್ಣಯದ ಸಂದರ್ಭಗಳಲ್ಲಿ ಅಷ್ಟ ಮಂಗಲ ಪ್ರಶ್ನೆ ಇಡಿಸುತ್ತಾರೆ.

  ​ಕುಟುಂಬದ ದೋಷಗಳನ್ನ ತಿಳಿಯಲು, ಸಂತಾನ ಸಮಸ್ಯೆ, ಅಕಾಲಿಕ ಮರಣ, ವಂಶಪಾರಂಪರ್ಯ ದೋಷಗಳು ಮತ್ತು ಪಿತೃಶಾಪಗಳ ಪತ್ತೆಗಾಗಿ, ​ದೈವ-ನಾಗದೋಷ, ತುಳುನಾಡಿನ ನಾಗಮಂಡಲ, ದೈವಾರಾಧನೆ ಹಾಗೂ ಕುಲದೇವತೆಯ ಅಸಮಾಧಾನದ ಕಾರಣಗಳನ್ನು ತಿಳಿದುಕೊಂಡು ಪರಿಹಾರ ಕೈಗೊಳ್ಳಲು ಅಷ್ಟಮಂಗಲ ಇಡಿಸುತ್ತಾರೆ.

  ​ಈ ಪ್ರಕ್ರಿಯೆಯಲ್ಲಿ ಕೇವಲ ಸಮಸ್ಯೆಗಳನ್ನು ಗುರುತಿಸುವುದು ಮಾತ್ರವಲ್ಲದೆ ಅದಕ್ಕೆ ಸೂಕ್ತವಾದ ಪ್ರಾಯಶ್ಚಿತ್ತ, ಪೂಜೆ ಅಥವಾ ಶಾಂತಿ ಹೋಮಗಳ ಪರಿಹಾರವನ್ನೂ ಜ್ಯೋತಿಷಿಗಳು ಸೂಚಿಸುತ್ತಾರೆ.

 ಅಷ್ಟಮಂಗಲ ಪ್ರಶ್ನೆಯು ಕನಿಷ್ಠ 1500 ರಿಂದ 2000 ವರ್ಷಗಳಿಗಿಂತಲೂ ಪುರಾತನವಾದ ಜ್ಯೋತಿಷ್ಯ ಪದ್ಧತಿಯಾಗಿದೆ. 

  ಇದರ ಮೂಲ ವೈದಿಕ ಕಾಲದ "ಹೋರಾ ಶಾಸ್ತ್ರ" ಮತ್ತು "ಪ್ರಶ್ನಾ ಶಾಸ್ತ್ರ"ದಲ್ಲಿದ್ದರೂ ಪ್ರಸ್ತುತ ಚಾಲ್ತಿಯಲ್ಲಿರುವ ರೂಪವು ಪ್ರಾಚೀನ ಕೇರಳ ಮತ್ತು ಪರಶುರಾಮ ಕ್ಷೇತ್ರ (ತುಳುನಾಡು) ಭಾಗದಲ್ಲಿ ಕ್ರಿ.ಶ. 7ನೇ–8ನೇ ಶತಮಾನದ ವೇಳೆಗೆ ಶಾಸ್ತ್ರೀಯವಾಗಿ ರೂಪುಗೊಂಡಿತು.

 ​#ಪ್ರಾಚೀನ_ಗ್ರಂಥಗಳ_ಆಧಾರ
​ಬೃಹತ್ ಸಂಹಿತಾ (ಕ್ರಿ.ಶ. 6ನೇ ಶತಮಾನ) ಜ್ಯೋತಿಷ್ಯ ದಿಗ್ಗಜ ವರಾಹಮಿಹಿರನು ತನ್ನ ಗ್ರಂಥದಲ್ಲಿ ಪ್ರಶ್ನಾಶಾಸ್ತ್ರ, ಶಕುನ ಮತ್ತು ಅಷ್ಟಮಂಗಲ ದ್ರವ್ಯಗಳ ಮಹತ್ವವನ್ನು ವಿವರವಾಗಿ ದಾಖಲಿಸಿದ್ದಾನೆ.

 ​ಪ್ರಶ್ನ ಮಾರ್ಗ (1650 ರ ಸುಮಾರಿಗೆ) ಕೇರಳದ #ಎಡಕ್ಕಾಡ್_ನಾರಾಯಣನಂಬೂದಿರಿ ಬರೆದ '#ಪ್ರಶ್ನ_ಮಾರ್ಗ_ಗ್ರಂಥವು ಅಷ್ಟಮಂಗಲ ಪ್ರಶ್ನೆಗೆ ಅತ್ಯಂತ ಮುಖ್ಯವಾದ ಪ್ರಮಾಣ ಗ್ರಂಥವಾಗಿದೆ ಆದರೆ ಆತನೇ ತನ್ನ ಕೃತಿಯಲ್ಲಿ "ನಾನು ಪೂರ್ವಿಕ ಆಚಾರ್ಯರಾದ ವರಾಹಮಿಹಿರ, ಪರಾಶರ ಮತ್ತು ಮಾಧವಾಚಾರ್ಯರ ಸಾವಿರಾರು ವರ್ಷಗಳ ಹಳೆಯ ಜ್ಞಾನವನ್ನು ಸಂಗ್ರಹಿಸಿ ಬರೆಯುತ್ತಿದ್ದೇನೆ" ಎಂದು ಉಲ್ಲೇಖಿಸಿದ್ದಾರೆ.

 ​ಪ್ರಶ್ನಾನುಷ್ಠಾನ ಪದ್ಧತಿ ಮತ್ತಷ್ಟು ಹಳೆಯ ಸಂಸ್ಕೃತ ಗ್ರಂಥಗಳಲ್ಲೂ ಈ ವಿಧಾನದ ಪ್ರಸ್ತಾಪವಿದೆ.

  ​ಪರಶುರಾಮ ಸೃಷ್ಟಿಯ ನಂಟು (ಪೌರಾಣಿಕ ಹಿನ್ನೆಲೆ)​ಕರಾವಳಿ ಮತ್ತು ಕೇರಳದ ನಂಬಿಕೆಯ ಪ್ರಕಾರ, ಪರಶುರಾಮರು ಸಮುದ್ರದಿಂದ ಭೂಮಿಯನ್ನು ಸೃಷ್ಟಿಸಿ ದೇವಸ್ಥಾನಗಳನ್ನು ಪ್ರತಿಷ್ಠಾಪಿಸಿದ ನಂತರ, ದೇವತಾ ಸಾನಿಧ್ಯಗಳಲ್ಲಿ ಲೋಪದೋಷಗಳು ಉಂಟಾದರೆ ಮಾರ್ಗದರ್ಶನ ಪಡೆಯಲು 'ಪ್ರಶ್ನಾ ಪದ್ಧತಿ'ಯನ್ನು ರಚಿಸಿದರು ಎಂದು ಐತಿಹ್ಯವಿದೆ.

 ​ಈ ವಿದ್ಯೆಯ ಪ್ರಾಚೀನ ಲಕ್ಷಣಗಳು ​ಆರಂಭಿಕ ಕಾಲದ ಆಚರಣೆ, ಜಾತಕ ಬರೆಯುವ ಮುನ್ನ ಕೇವಲ ಆಕಾಶದಲ್ಲಿ ಗ್ರಹಗಳ ಸ್ಥಿತಿ ಮತ್ತು ತತ್ಕಾಲದ ಶಕುನಗಳನ್ನು ಆಧರಿಸಿ ಭವಿಷ್ಯ ಹೇಳುತ್ತಿದ್ದ ಪ್ರಾಚೀನ ಋಷಿ ಪರಂಪರೆಯೇ ಇದರ ಬೇರು.

 ​ಗುರು-ಶಿಷ್ಯ ಪರಂಪರೆ,ಲಿಖಿತ ರೂಪಕ್ಕಿಂತ ಹೆಚ್ಚಾಗಿ ಬಾಯಿಮಾತಿನ ಶ್ಲೋಕಗಳ ಮೂಲಕ ನೂರಾರು ತಲೆಮಾರುಗಳಿಂದ ಇದು ಹರಿದುಬಂದಿದೆ.

 ​ಸಂಕ್ಷಿಪ್ತವಾಗಿ ಹೇಳುವುದಾದರೆ ವೈದಿಕ ಶಾಸ್ತ್ರಗಳಷ್ಟೇ ಹಳೆಯದಾದ ಈ ವಿದ್ಯೆಯು ಕಳೆದ 15 ರಿಂದ 20 ಶತಮಾನಗಳಿಂದ ನಿರಂತರವಾಗಿ ಬಳಕೆಯಲ್ಲಿದೆ.

 ಕವಡೆ ಯಿಂದ ಬಂದ ಒಟ್ಟು ಮೊತ್ತಕ್ಕೆ ಹೆಚ್ಚುವರಿಯಾಗಿ 1 ನ್ನು ಸೇರಿಸಿ ನಂತರ ಆ ಸಂಖ್ಯೆಯನ್ನು 8 ರಿಂದ ಭಾಗಿಸಲಾಗುತ್ತದೆ
​ಕೊನೆಗೆ ಉಳಿಯುವ ಶೇಷ ಸಂಖ್ಯೆಯನ್ನು ಪ್ರಧಾನ ಅಷ್ಟಮಂಗಲ ಅಂಕ ಎಂದು ಕರೆಯಲಾಗುತ್ತದೆ.

​ #ಫಲ_ನಿರ್ಣಯ
​ಆರೂಢ ಮತ್ತು ಕವಡೆ ಸಮನ್ವಯ,ಕವಡೆ ಗಣಿತದಿಂದ ಬಂದ ಗ್ರಹ ಫಲವನ್ನು, ಪ್ರಶ್ನೆ ಹಾಕಿದ ಸಮಯದ 'ಆರೂಢ ಲಗ್ನ' ಮತ್ತು ಗೋಚಾರ ಗ್ರಹಗಳೊಂದಿಗೆ ತಾಳೆ ನೋಡಲಾಗುತ್ತದೆ.

  ​ದೋಷ ಅಥವಾ ಶುಭ ಸೂಚನೆ ಉದಾಹರಣೆಗೆ ಪ್ರಥಮ ರಾಶಿಯಲ್ಲಿ 1 (ಸೂರ್ಯ) ಬಂದು, ತೃತೀಯ ರಾಶಿಯಲ್ಲಿ 8 (ರಾಹು) ಬಂದರೆ, ಪೂರ್ವಜರ ಕಾಲದಿಂದ ಬಂದ ನಾಗದೋಷ ಅಥವಾ ಪಿತೃದೋಷದಿಂದ ಪ್ರಸ್ತುತ ಸಮಸ್ಯೆ ಕಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತದೆ.

  ಅಷ್ಟಮಂಗಲ ಪ್ರಶ್ನೆಯು ಭಾರತದ ಇತರ ಭಾಗಗಳಲ್ಲಿ ಹೆಚ್ಚು ಪ್ರಚಲಿತವಿಲ್ಲದೆ ಕೇವಲ ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ (ತುಳುನಾಡು) ಮಾತ್ರ ಕೇಂದ್ರೀಕೃತವಾಗಿರಲು ಪ್ರಮುಖ ಐತಿಹಾಸಿಕ, ಭೌಗೋಳಿಕ ಮತ್ತು ಸಂಸ್ಕೃತಿ ಆಧಾರಿತ ಕಾರಣಗಳಿವೆ.

​ ಪ್ರಾದೇಶಿಕ ಗ್ರಂಥ ಪರಂಪರೆ ಮತ್ತು ಶಾಸ್ತ್ರ ರಚನೆ
​ಭಾರತದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಪರಾಶರ, ಜೈಮಿನಿ ಮತ್ತು ಭೃಗು ಸಂಹಿತೆಗಳ ಆಧಾರದ ಜಾತಕ ಪದ್ಧತಿ ಪ್ರಧಾನವಾಯಿತು ​ಆದರೆ ಕೇರಳದಲ್ಲಿ ಪ್ರಶ್ನಾ ಶಾಸ್ತ್ರಕ್ಕೆ ವಿಶೇಷ ಒತ್ತು ನೀಡಲಾಯಿತು.

 17ನೇ ಶತಮಾನದಲ್ಲಿ ರಚಿತವಾದ ಪ್ರಶ್ನ ಮಾರ್ಗ, ಪ್ರಶ್ನಾನುಷ್ಠಾನ ಪದ್ಧತಿ ಮುಂತಾದ ಮಹತ್ವದ ಗ್ರಂಥಗಳು ಮಲಯಾಳಂ ಮತ್ತು ಸಂಸ್ಕೃತ ಮಿಶ್ರಿತ ಮಣಿಪ್ರವಾಳ ಶೈಲಿಯಲ್ಲಿ ರಚನೆಯಾಗಿ, ಆಯಾ ಪ್ರದೇಶದ ಗುರು-ಶಿಷ್ಯ ಪರಂಪರೆಯಲ್ಲೇ ರಹಸ್ಯ ವಿದ್ಯೆಯಾಗಿ ಉಳಿದುಕೊಂಡವು.

​ ತಾಂತ್ರಿಕ ಮತ್ತು ಕೌಲ ಆರಾಧನಾ ಪದ್ಧತಿಯಲ್ಲಿ ​ಕರಾವಳಿ ಮತ್ತು ಕೇರಳದ ದೇವಾಲಯ ಸಂಸ್ಕೃತಿಯು ತಂತ್ರ ಸಮುಚ್ಚಯ ಹಾಗೂ ಕೇರಳೀಯ ತಾಂತ್ರಿಕ ವಿಧಿಗಳನ್ನು ಆಧರಿಸಿದೆ.

 ​ಈ ಭಾಗದಲ್ಲಿ ಕೇವಲ ಗ್ರಹಗತಿಗಳಲ್ಲದೆ, ನಾಗಾರಾಧನೆ, ಭೂತ-ದೈವಾರಾಧನೆ, ಯಕ್ಷಿ, ಮಾತ್ರಿಕಾ ಪೂಜೆಗಳು ಬಲವಾಗಿವೆ. 

  ಅದೃಶ್ಯ ಶಕ್ತಿಗಳು, ದೇವತಾ ಸಾನಿಧ್ಯದ ಲೋಪ ಮತ್ತು ಪಿತೃಗಳ ಇಂಗಿತವನ್ನು ತಿಳಿಯಲು ಅಷ್ಟಮಂಗಲದಂತಹ ಸೂಕ್ಷ್ಮ ಪ್ರಶ್ನಾವಳಿ ಅನಿವಾರ್ಯವಾಗಿತ್ತು.

  ಉತ್ತರ ಭಾರತದ ವೈದಿಕ ದೇವಾಲಯ ಪದ್ಧತಿಯಲ್ಲಿ ಈ ರೀತಿಯ ದೈವಾರಾಧನಾ ಮಾದರಿಗಳಿಲ್ಲ.

​ ಭೌಗೋಳಿಕ ಪ್ರತ್ಯೇಕತೆ (ಪಶ್ಚಿಮ ಘಟ್ಟಗಳ ರಕ್ಷಣೆ)
​ಪಶ್ಚಿಮ ಘಟ್ಟಗಳು ದಕ್ಷಿಣ ಕರಾವಳಿ ತೀರವನ್ನು ದೇಶದ ಇತರ ಭಾಗಗಳಿಂದ ನೈಸರ್ಗಿಕವಾಗಿ ಪ್ರತ್ಯೇಕಿಸಿದ್ದವು.

 ​ಉತ್ತರ ಭಾರತವು ನಿರಂತರ ವಿದೇಶಿ ಆಕ್ರಮಣಗಳಿಗೆ ಒಳಗಾಗಿ ಪ್ರಾಚೀನ ಜ್ಞಾನ ಪರಂಪರೆಗಳು ನಾಶವಾದಾಗ, ಪಶ್ಚಿಮ ಘಟ್ಟಗಳ ಆಚೆಗಿನ ತುಳುನಾಡು ಮತ್ತು ಕೇರಳ ಪ್ರದೇಶಗಳು ತಮ್ಮ ಪ್ರಾಚೀನ ಆಚರಣೆ, ಶಾಸ್ತ್ರ ಮತ್ತು ತಂತ್ರ ವಿದ್ಯೆಗಳನ್ನು ಅಖಂಡವಾಗಿ ಉಳಿಸಿಕೊಂಡು ಬಂದವು.

​  ಕಠಿಣ ಕಲಿಕೆ ಮತ್ತು ರಹಸ್ಯ ಗುರು ಪರಂಪರೆ ​ಅಷ್ಟಮಂಗಲ ಪ್ರಶ್ನೆಯು ಕೇವಲ ಜ್ಯೋತಿಷ್ಯವಲ್ಲ ಇದರಲ್ಲಿ ಸಂಕೀರ್ಣ ಕವಡೆ ಗಣಿತ, ಶಕುನ ಶಾಸ್ತ್ರ, ತಂತ್ರ ಶಾಸ್ತ್ರ, ಮಂತ್ರ ಸಿದ್ಧಿ ಮತ್ತು ಅಂತಃಪ್ರಜ್ಞೆ  ಎಲ್ಲವೂ ಒಟ್ಟಿಗೆ ಬೇಕು.

 ​ಇದನ್ನು ಮುಕ್ತವಾಗಿ ಎಲ್ಲರಿಗೂ ಕಲಿಸದೆ ಅರ್ಹ ಶಿಷ್ಯರಿಗೆ ಮಾತ್ರ ತಲೆಮಾರಿನಿಂದ ತಲೆಮಾರಿಗೆ ದೀಕ್ಷೆಯ ಮೂಲಕ ಕಲಿಸುತ್ತಿದ್ದ ಕಾರಣ ಇದು ದೇಶಾದ್ಯಂತ ಪಸರಿಸಲಿಲ್ಲ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

​ ಇತರ ಭಾಗಗಳಲ್ಲಿ ಬೇರೆ ಪರ್ಯಾಯ ಪದ್ಧತಿಗಳ ಬಳಕೆಯಿಂದ ​ದೇಶದ ಇತರ ಭಾಗಗಳಲ್ಲಿ ಪ್ರಶ್ನೆಗಳಿಗೆ ಪರಿಹಾರ ಕಾಣಲು ಬೇರೆ ಪದ್ಧತಿಗಳು ಬೆಳೆದುಬಂದವು.

  ​ಉತ್ತರ ಭಾರತದಲ್ಲಿ ಪ್ರಶ್ನ ಕುಂಡಲಿ (ಹೋರಾರಿ ಆಸ್ಟ್ರಾಲಜಿ), ರಾಮಶಲಾಕಾ ಪ್ರಶ್ನಾವಳಿ, ತಾಜಿಕ ಪದ್ಧತಿ ಬಳಕೆಯಲ್ಲಿದ್ದರೆ,​ತಮಿಳುನಾಡುವಿನಲ್ಲಿ ನಾಡಿ ಜ್ಯೋತಿಷ್ಯ, ಸೋಳಿ (ಕವಡೆ) ಪ್ರಸನ್ನಂ ಇದೆ.

  ​ಮಹಾರಾಷ್ಟ್ರ/ಗುಜರಾತ್ ನಲ್ಲಿ ಕೃಷ್ಣಮೂರ್ತಿ ಪದ್ಧತಿ (KP System - ಇದು ಆಧುನಿಕ ಕಾಲದಲ್ಲಿ ಬಂದದ್ದು) ಬಳಸುತ್ತಾರೆ.

 ​ಈ ಎಲ್ಲಾ ಕಾರಣಗಳಿಂದಾಗಿ ಅಷ್ಟಮಂಗಲ ಪ್ರಶ್ನೆಯು ಪರಶುರಾಮ ಸೃಷ್ಟಿಯ ಕರಾವಳಿ ತೀರ ಪ್ರದೇಶದ ವಿಶಿಷ್ಟ ಸಾಂಸ್ಕೃತಿಕ ಮತ್ತು ಜ್ಯೋತಿಷ್ಯ ಪರಂಪರೆಯಾಗಿಯೇ ಉಳಿದುಕೊಂಡಿದೆ.

   ನೀವು ಅಷ್ಟಮಂಗಲ ಜೋತಿಷ್ಯ ನಡೆಯುವುದು ನೋಡಿದ್ದೀರಾ ನಿಮ್ಮ ಅಭಿಪ್ರಾಯ ತಿಳಿಸಿ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ