LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರಾವಣ ಮಾಸದಲ್ಲಿ ಈ ರೀತಿಯಲ್ಲಿ ಮಂಗಳಗೌರಿ ವ್ರತ ಆಚರಿಸಿ, ನಿಮ್ಮ ಮನೆಯಲ್ಲಿ ಸಿರಿಸಂಪತ್ತು ವೃದ್ಧಿ!

ಮಂಗಳಗೌರಿ ವ್ರತದ ಕಥೆ

ಒಂದಾನೊಂದು ಕಾಲದಲ್ಲಿ ಜಯಪಾಲನೆಂಬ ರಾಜನು ಮಹಿಷ್ಮತಿ ನಗರವನ್ನು ಆಳುತ್ತಿದ್ದನು. ಆ ರಾಜನು ನಿತ್ಯವೂ ಪ್ರಜೆಗಳ ಯೋಗಕ್ಷೇಮವನ್ನು ತಿಳಿದುಕೊಂಡು ಪ್ರಜೆಗಳ ಅಭಿವೃದ್ಧಿಗಾಗಿಯೇ ಸತ್ಕಾರ್ಯಗಳನ್ನು ಮಾಡಿ ಆದರ್ಶನೆನಿಸಿಕೊಂಡಿದ್ದನು. ಅವನ ರಾಣಿಯೂ ಸಾಧ್ವಿ ಮತ್ತು ಸದ್ಗುಣಸಂಪನ್ನೆಯಾಗಿದ್ದಳು. ಹಾಲು-ಜೇನಿನಂತೆ ಅವರಿಬ್ಬರ ದಾಂಪತ್ಯ. ಸತಿ-ಪತಿಯರಿಬ್ಬರೂ ಅಪಾರ ದೈವಭಕ್ತಿಯುಳ್ಳವರು. ಇಂತಹ ರಾಜನ ಪ್ರಜೆಗಳು ನಿಜವಾಗಿಯೂ ಸಂತಸದ ಧನ್ಯತಾಭಾವವನ್ನು ಹೊಂದಿದ್ದರು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಜಯಪಾಲ ರಾಜನಿಗೆ ಎಷ್ಟೆಲ್ಲ ಐಶ್ವರ್ಯ ಸುಖ ಸಂಪತ್ತುಗಳಿದ್ದರೂ ಕಾಡುತ್ತಿದ್ದ ಒಂದೇಒಂದು ಚಿಂತೆಯೆಂದರೆ ರಾಣಿಗೆ ಇನ್ನೂ ಸಂತಾನಪ್ರಾಪ್ತಿಯಾಗದಿದ್ದುದು. ಮಕ್ಕಳಾಗಬೇಕೆಂದು ಅವರು ಎಷ್ಟೋ ವ್ರತನೇಮಗಳನ್ನು ಮಾಡಿದರು, ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದರು, ಹರಕೆಹೊತ್ತರು, ಅತಿಥಿಸತ್ಕಾರ ದಾನಧರ್ಮಗಳನ್ನೂ ಮಾಡಿದರು. ಕೊನೆಗೂ ಪರಮೇಶ್ವರನಿಗೆ ಆ ಅರಸುದಂಪತಿಯ ಮೇಲೆ ಕನಿಕರ ಹುಟ್ಟಿತು. ಶಿವನು ಒಬ್ಬ ವೃದ್ಧ ಭಿಕ್ಷುಕನ ವೇಷದಲ್ಲಿ ಮಧ್ಯಾಹ್ನದ ಹೊತ್ತಲ್ಲಿ ಅಂತಃಪುರದ ಸನಿಹದಲ್ಲಿ ಬಂದು `ಭವತಿ ಭಿಕ್ಷಾಂ ದೇಹಿ...' ಎಂದು ಕೂಗಿದನು. ಆದರೆ ಅಂತಃಪುರದಿಂದ ರಾಣಿಯು ಭಿಕ್ಷೆಯನ್ನು ತರುವುದರೊಳಗಾಗಿಯೇ ಮುನ್ನಡೆದು ಬಿಟ್ಟನು!

ಮಾರನೆ ದಿನವೂ ಇದೇ ರೀತಿಯಾಯಿತು. ಭಿಕ್ಷೆಯನ್ನು ಸ್ವೀಕರಿಸದೆಯೇ ಭಿಕ್ಷುಕನು ತೆರಳಿದ್ದನ್ನು ಗಮನಿಸಿದ ರಾಣಿ ತುಂಬ ದುಃಖಿತಳಾಗಿ ರಾಜನಲ್ಲೂ ಅದನ್ನು ತೋಡಿಕೊಂಡಳು. ಅದಕ್ಕೆ ರಾಜನು ``ನಾಳೆ ಅದೇ ಹೊತ್ತಿಗೆ ಒಂದಿಷ್ಟು ಸುವರ್ಣನಾಣ್ಯಗಳನ್ನು ಹಿಡಕೊಂಡು ಬಾಗಿಲಿನ ಸಂದಿಯಲ್ಲೇ ನಿಂತಿರು. ಭಿಕ್ಷುಕನು ಬರುತ್ತಲೇ ನಾಣ್ಯಗಳನ್ನು ಅವನ ಜೋಳಿಗೆಗೆ ಹಾಕಿಬಿಡು!" ಎಂದು ಸಲಹೆಯಿತ್ತನು. ಮಾರನೆದಿನ ರಾಣಿ ಹಾಗೆಯೇ ಮಾಡಿದಳು. ಭಿಕ್ಷುಕ ಬಂದು ಭವತಿ ಭಿಕ್ಷಾಂದೇಹಿ ಎನ್ನುವಷ್ಟರಲ್ಲೇ ಅವಳು ಮೊರದ ತುಂಬ ನಾಣ್ಯಗಳನ್ನು ಇನ್ನೇನು ಭಿಕ್ಷುಕನ ಜೋಳಿಗೆಗೆ ಹಾಕುವುದರಲ್ಲಿದ್ದಾಗಲೇ ಭಿಕ್ಷುಕನು ತಡೆದು, ``ಮಕ್ಕಳಿಲ್ಲದ ಹೆಂಗಸು ಕೊಟ್ಟ ಭಿಕ್ಷೆಯನ್ನು ನಾನು ಸ್ವೀಕರಿಸುವುದಿಲ್ಲ" ಎಂಬ ಕಠೋರ ಮಾತುಗಳನ್ನಾಡಿಬಿಟ್ಟನು.

ತನ್ನ ಮುಖನೋಡಿಯೇ ಬಂಜೆಹೆಂಗಸಿವಳು ಎಂಬುದನ್ನು ಕಂಡುಕೊಂಡ ಆ ಭಿಕ್ಷುಕ ಸಾಮಾನ್ಯನಲ್ಲ ಯಾರೋ ಮಹಾಮಹಿಮನಿರಬೇಕು ಎಂದು ಗ್ರಹಿಸಿದ ರಾಣಿಯು ಭಿಕ್ಷುಕನ ಪಾದಗಳಿಗೆರಗಿ, ``ಸ್ವಾಮಿ, ತೇಜೋಮಯರಾದ ನೀವು ಬಡಭಿಕ್ಷುಕರಲ್ಲ, ಜಗದೊಡೆಯ ಜಗದೀಶ್ವರನೇ ಇರಬೇಕು. ನನ್ನ ಅಪರಾಧವನ್ನು ಮನ್ನಿಸಿ ನನಗೆ ಈಗಲಾದರೂ ಮಕ್ಕಳಾಗುವಂತೆ ಅನುಗ್ರಹಿಸಿ" ಎಂದು ಬಿನ್ನವಿಸಿಕೊಂಡಳು.

ಭಿಕ್ಷುಕರೂಪದ ಶಿವನು, ``ತಾಯೇ, ಚಿಂತಿಸಬೇಡ. ನಿನ್ನ ಗಂಡ ಕಪ್ಪುಕುದುರೆಯನ್ನೇರಿ ಕಾಳರಾತ್ರಿಯಲ್ಲಿ ಇಲ್ಲೇ ಸಮೀಪದಲ್ಲಿರುವ ಕಾಡಿನತ್ತ ಸಾಗಲಿ. ಕುದುರೆ ಎಲ್ಲಿ ನಿಲ್ಲುತ್ತದೋ ಅಲ್ಲಿ ಅಗೆದುನೋಡಿದರೆ ಭವಾನಿ ದೇಗುಲ ಕಾಣಬರುವುದು. ಭಯಭಕ್ತಿಗಳಿಂದ ಭವಾನಿಯನ್ನು ಅರ್ಚಿಸಿದರೆ ಅವಳು ವರಪ್ರದಾನ ಮಾಡುವಳು" ಎಂದುಹೇಳಿ ಅಂತರ್ಧಾನನಾದನು. ರಾಜರಾಣಿಯರ ಸಂತಸಕ್ಕೆ ಪಾರವೇ ಇಲ್ಲ. ಅಂದುರಾತ್ರಿಯೇ ಕಪ್ಪುಕುದುರೆಯನ್ನೇರಿ ಜಯಪಾಲ ಅರಣ್ಯಕ್ಕೆ ಹೊರಟನು. ಕುದುರೆ ನಿಂತುಬಿಟ್ಟ ಸ್ಥಳವನ್ನು ಅಗೆಸಿದಾಗ ಭಿಕ್ಷುಕ ಹೇಳಿದ್ದಂತೆಯೇ ಸುಂದರವಾದ ಭವಾನಿ ದೇಗುಲ ಕಂಡುಬಂತು. ಜಯಪಾಲ ಆ ದೃಶ್ಯವೈಭವದಿಂದ ಮೂಕವಿಸ್ಮಿತನಾದನು. ಭಕ್ತಿಯಿಂದ ಭವಾನಿದೇವಿಯನ್ನು ಪೂಜಿಸಿದ ರಾಜನಿಗೆ ದೇವಿ ಪ್ರತ್ಯಕ್ಷಳಾದಳು. ವರವನ್ನು ಬೇಡುವಂತೆ ಕೇಳಿದಳು.

ತಂದೆಯಾಗಬೇಕೆಂಬ ಹಂಬಲದ ರಾಜ ಬೇರೇನನ್ನು ತಾನೆ ಬೇಡಿಯಾನು? ಅದಾದರೂ ಅವನಿಗೆ ಸುಗಮವಾಗಿ ಸಿಕ್ಕಲಿಲ್ಲ. ಮಗು ಹುಟ್ಟುತ್ತದೆ ಎಂದು ದೇವಿಯೇನೊ ವರಕೊಟ್ಟಳು, ಆದರೆ ಅದರಲ್ಲೇ ಕೊಂಚ ಕಸಿವಿಸಿಯನ್ನೂ! ``ಅಲ್ಪಕಾಲದಲ್ಲೇ ವಿಧವೆಯಾಗುವ ಹೆಣ್ಮಗಳು ಬೇಕಾ ಅಥವಾ ಅಲ್ಪಾಯುಷ್ಯಿಯಾದ ಗಂಡುಮಗ ಬೇಕಾ?" ಎಂಬ ದೇವಿಯ ಪ್ರಶ್ನೆಗೆ ಉತ್ತರವಾಗಿ ಗಂಡುಮಗು ಹುಟ್ಟುವಂತೆ ವರವನ್ನೇ ಕೋರಿಕೊಂಡನು ಜಯಪಾಲ. ದೇವಿ ``ತಥಾಸ್ತು. ಈ ದೇವಾಲಯದ ಹಿಂಬದಿಯಲ್ಲಿ ಒಂದು ಮಾವಿನಮರವಿದೆ. ಅದರ ಹಣ್ಣನ್ನು ಕೊಯ್ದು ನಿನ್ನ ರಾಣಿಗೆ ತಿನ್ನಲುಕೊಡು. ಅವಳಿಗೆ ಪುತ್ರಭಾಗ್ಯ ಪ್ರಾಪ್ತಿಯಾಗುತ್ತದೆ" ಎಂದು ಆಶೀರ್ವದಿಸಿ ಮಾಯವಾದಳು.

ಒಡನೆಯೇ ದೇಗುಲದ ಹಿಂಭಾಗಕ್ಕೆ ಧಾವಿಸಿದ ರಾಜ ಅಲ್ಲಿ ಮರದ ತುಂಬ ಪಕ್ವವಾದ ಮಾವಿನಹಣ್ಣುಗಳನ್ನು ಕಂಡು ನಲಿದಾಡಿದನು. ಹಣ್ಣುಗಳನ್ನು ಕೊಯ್ದು, ತಾನೂ ತಿಂದು, ಚೀಲದಲ್ಲಿ ಒಂದಿಷ್ಟನ್ನು ಮಡದಿಗೆ ಒಯ್ಯುವವನಿದ್ದನು. ಆಗಲೂ ಅಲ್ಲೊಂದು ಚಮತ್ಕಾರ ನಡೆಯಿತು. ಚೀಲದಲ್ಲಿ ತುಂಬ ಹಣ್ಣುಗಳನ್ನು ತುಂಬಿಸಿದ್ದರೂ ಅರಮನೆಗೆ ತಲುಪಿದಾಗ ಅದರಲ್ಲಿದ್ದದ್ದು ಒಂದೇ ಒಂದು ಹಣ್ಣು! ಅಷ್ಟಾದರೂ ಇದೆಯಲ್ಲಾ ಅದೇ ಭಾಗ್ಯ ಎಂದುಕೊಂಡು ಅದನ್ನು ರಾಣಿಗೆ ಕೊಟ್ಟನು. ದೇವಿಪ್ರಸಾದವೆಂದು ರಾಣಿ ಅದನ್ನು ಸೇವಿಸಿದಳು.

ಭವಾನಿದೇವಿಯ ಆಶೀರ್ವಾದ ಸುಳ್ಳಾಗಲಿಲ್ಲ. ರಾಣಿ ಗರ್ಭವತಿಯಾದಳು. ನವಮಾಸಗಳ ನಂತರ ಅಂದವಾದ ಗಂಡುಮಗು ಹುಟ್ಟಿತು. `ಶಿವಧರ್ಮ'ವೆಂಬ ಹೆಸರನ್ನು ಮಗುವಿಗಿಟ್ಟು ಇದು ಶಿವಪಾರ್ವತಿಯರ ಅನುಗ್ರಹರೂಪವೆಂದು ರಾಜರಾಣಿ ಸಂತೃಪ್ತರಾದರು. ಮಕ್ಕಳಿಲ್ಲ ಮಕ್ಕಳಿಲ್ಲ... ಎಂಬ ಚಿಂತೆಯಾವರಿಸಿದ್ದ ಅರಮನೆ ಅಂತಃಪುರಗಳಲ್ಲಿ ಶಿವಧರ್ಮನ ಬಾಲಲೀಲೆಗಳಿಂದಾಗಿ ಸಂಭ್ರಮೋಲ್ಲಾಸಗಳ ಬೆಳದಿಂಗಳು ಹರಿಯಿತು. ಪುಟ್ಟ ಬಾಲಕನಿಗೆ ಎಂಟು ವರ್ಷಗಳಾದಾಗ ಅವನ ಉಪನಯನವನ್ನೂ ಮಾಡಿದರು.

ಆದರೆ... ಅಲ್ಪಾಯುಷ್ಯಿಯಾದ ಮಗನನ್ನು ತಾನೆ ಭವಾನಿದೇವಿ ಅನುಗ್ರಹಿಸಿದ್ದು? ರಾಣಿಯ ಕನಸಲ್ಲಿ ಒಂದುದಿನ ಅಜ್ಞಾತವ್ಯಕ್ತಿಯೊಬ್ಬ ಕಾಣಿಸಿಕೊಂಡು ``ನಿನ್ನ ಕುಮಾರನ ಆಯುಷ್ಯ ಇನ್ನೇನು ಮುಗಿಯುತ್ತ ಬಂತು. ಇನ್ನು ಒಂದು ವರ್ಷ ಮಾತ್ರ ಅವನು ಬದುಕಬಹುದು" ಎಂದು ಹೇಳಿದಂತೆ ಭಾಸವಾಯಿತು. ಮತ್ತೆ ದಿಗಿಲುಗೊಂಡ ರಾಣಿ ಇದೇನಪ್ಪಾ ಘೋರ ಅನ್ಯಾಯ ಎಂದು ಹಲುಬಿದಳು. ಮಗನನ್ನು ಅಪ್ಪಿಕೊಂಡು ಮಮ್ಮಲಮರುಗಿದಳು, ಅವಳ ಕಣ್ಣೀರಿನ ಹನಿಗಳು ಶಿವಧರ್ಮನಿಗೆ ಸೋಕಿದವು. ``ಯಾಕಮ್ಮಾ ಅಳುತ್ತಿದ್ದೀ?" ಎಂದು ಆತ ಕೇಳಲು ವಿಧಿಯೋಜಿತವನ್ನೆಲ್ಲ ಅವನಿಗೆ ತಿಳಿಸಿಹೇಳಿದಳು.

``ಅದಕ್ಕೇಕೆ ಚಿಂತಿಸಬೇಕು. ನಾನು ಕಾಶಿಯಾತ್ರೆಗೆ ಹೋಗುತ್ತೇನೆ. ನನ್ನ ಮೆಚ್ಚಿನ ಸೋದರಮಾವನೂ ನನ್ನ ಜತೆಗಿರಲಿ. ನಾವಿಬ್ಬರೂ ಅಲ್ಲಿ ಹೋಗಿ ಗಂಗಾಸ್ನಾನ ಮಾಡಿ ವಿಶ್ವೇಶ್ವರನನ್ನು ಧ್ಯಾನಿಸಿ ಪುಣ್ಯ ಸಂಪಾದಿಸಿ ಆಯುಷ್ಯವನ್ನು ವೃದ್ಧಿಸಿ ಬರುತ್ತೇನೆ" ಎಂದು ಸಮಾಧಾನಿಸಿದ ಶಿವಧರ್ಮ. ಹಾಗೇ ಆಗಲೆಂದು ರಾಜರಾಣಿಯರು ಮಗನನ್ನು ಸೋದರಮಾವನ ಜತೆಯಲ್ಲಿ ಕಾಶಿಯಾತ್ರೆಗೆ ಕಳಿಸಿದರು.

ದಾರಿಯಲ್ಲಿ ಪ್ರತಿಷ್ಠಾಪುರವೆಂಬ ಊರಿನ ಉದ್ಯಾನದಲ್ಲಿ ಅವರು ವಿಶ್ರಾಂತಿಗಾಗಿ ನಿಂತರು. ಆ ಉದ್ಯಾನದ ಒಂದು ಪಕ್ಕದಲ್ಲೇ ಕೆಲವು ಕನ್ನಿಕೆಯರು ಆಟ ಆಡುತ್ತ ಇದ್ದರು. ಕೊನೆಯಲ್ಲಿ ಸಲಿಗೆಯ ಆಟ ಜಗಳವಾಗಿ ಮಾರ್ಪಟ್ಟು ಬೈಗುಳ, ಅವಾಚ್ಯಶಬ್ದಗಳಿಂದ ನಿಂದನೆಗಳೆಲ್ಲ ಶುರುವಾದುವು. ಒಬ್ಬಾಕೆಯಂತೂ `ರಂಡೆ ಮುಂಡೆ...' ಎಂದು ಅರಚುವಷ್ಟು ವ್ಯಗ್ರಳಾಗಿದ್ದಳು. ಅವಳು ಹಾಗೆ ಬೈಯುವುದಕ್ಕೂ, ಸುಶೀಲಾ ಎಂಬ ಕನ್ನಿಕೆ ತನ್ನ ತಂದೆಯೊಡನೆ ಉದ್ಯಾನಕ್ಕೆ ಬರುವುದಕ್ಕೂ ಸರಿಯಾಯಿತು. ``ಹಾಗೆಲ್ಲ ಕೆಟ್ಟ ಮಾತಾಡಬೇಡ. ನನ್ನಮ್ಮ ಮಂಗಳಗೌರಿಯ ಭಕ್ತೆ. ನಮ್ಮ ಮನೆಯಲ್ಲಿ ಅಂಥ ನೀಚರಾರೂ ಇಲ್ಲ" ಎಂದುಬಿಟ್ಟಳು ಸುಶೀಲೆ.

ಸುಶೀಲೆಯ ತಂದೆಗೆ ಅವಳ ವಿವಾಹದ ಬಗ್ಗೆ ಯೋಚನೆ ಇತ್ತು. ಆಗಲೇ ಆಕಾಶವಾಣಿಯೊಂದು ``ಇದೇ ಉದ್ಯಾನದಲ್ಲಿ ಶಿವಧರ್ಮನೆಂಬ ತರುಣನು ವಿಶ್ರಮಿಸುತ್ತಿದ್ದಾನೆ. ಅವನೇ ಸುಶೀಲೆಗೆ ಯೋಗ್ಯನಾದ ವರ!" ಎಂದು ಕೇಳಿಬಂತು. ಸುಶೀಲೆಯ ತಂದೆ ಶಿವಧರ್ಮನನ್ನು ಭೇಟಿಯಾಗಿ ಅವನನ್ನು ವಿವಾಹಕ್ಕೆ ಒಲಿಸಿ, ಅವನ ಸೋದರಮಾವನ ಒಪ್ಪಿಗೆಯನ್ನೂ ಪಡೆದು, ಮಗಳನ್ನು ಧಾರೆಯೆರೆದುಕೊಟ್ಟನು.

ಅಂದು ಸುಶೀಲಾ-ಶಿವಧರ್ಮರ `ಮೊದಲ ರಾತ್ರಿ'. ಸುಶೀಲೆಯ ಕಣ್ಣೆದುರು ಮಂಗಳಗೌರಿ ಪ್ರತ್ಯಕ್ಷಳಾದಂತಾಗಿ ``ನಿನ್ನ ಕೈಹಿಡಿದವ ಅಲ್ಪಾಯುಷ್ಯಿ. ಇವತ್ತಿಗೆ ಅವನ ಇಹಲೋಕಯಾತ್ರೆ ಸಮಾಪ್ತವಾಗುವುದು. ಇನ್ನು ಕೆಲವೇ ಕ್ಷಣಗಳಲ್ಲಿ ಕೃಷ್ಣಸರ್ಪವೊಂದು ಬಂದು ಅವನನ್ನು ಕಚ್ಚಿ ಸಾಯಿಸುತ್ತದೆ. ಆದರೆ ನೀನು ಹಾಗಾಗದಂತೆ ನೋಡಿಕೋ. ಸರ್ಪ ಬಂದಾಗ ಹಾಲು ತುಂಬಿದ ಕಲಶವನ್ನು ಅದರೆದುರಿಗೆ ಹಿಡಿ. ಹಾಲು ಕುಡಿಯಲು ಅದರೊಳಗೆ ಸರ್ಪ ಇಣುಕಿಗಾಗ ಬಟ್ಟೆಯಿಂದ ಬಿಗಿಯಾಗಿ ಅದನ್ನು ಮುಚ್ಚಿ ಬಂಧಿಸಿಬಿಡು. ನಾಳೆ ಬೆಳಿಗ್ಗೆ ಆ ಕಲಶವನ್ನು ನಿನ್ನ ಅಮ್ಮನಿಗೆ ಬಾಗಿನವಾಗಿ ಕೊಡು. ಹೀಗೆ ಮಾಡುವುದರಿಂದ ನಿನ್ನ ಗಂಡನ ಅಯುಷ್ಯ ನವೀಕರಣಗೊಳ್ಳುತ್ತದೆ!" ಎಂದಳು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಅದಾದಮೇಲೆ ಕೆಲ ಕ್ಷಣಗಳಲ್ಲೇ ಬಂದೇಬಿಟ್ಟಿತು ಭುಸುಗುಡುತ್ತ ಹೆಡೆಯೆತ್ತುತ್ತ ಕೃಷ್ಣಸರ್ಪ! ಸುಶೀಲೆಯಾದರೂ ಒಂದಿನಿತೂ ಭಯಪಡದೆ ಮಂಗಳಗೌರಿಯ ಆಜ್ಞೆಯಂತೆಯೇ ಆ ಸರ್ಪವನ್ನು ಕಲಶದೊಳಗೆ ಬಂಧಿಸುವುದರಲ್ಲಿ ಯಶಸ್ವಿಯಾದಳು. ಅದುವರೆಗೂ ಮೂರ್ಛೆಹೋದಂತಿದ್ದ ಶಿವಧರ್ಮ ಮೆಲ್ಲಗೆ ಚೇತರಿಸಿ ತನಗೆ ಹಸಿವೆಯಾಗುತ್ತಿದೆ ಎಂದನು. ಬೆಳ್ಳಿಬಟ್ಟಲಲ್ಲಿ ಲಡ್ಡು ಮತ್ತಿತರ ಉಪಾಹಾರವನ್ನು ಅವನಿಗೆ ತಂದುಕೊಟ್ಟಳು ಸುಶೀಲೆ. ಉಪಾಹಾರ ತಿಂದು ಸಂತೃಪ್ತನಾದ ಶಿವಧರ್ಮನು ತನ್ನ ಉಂಗುರವನ್ನು ಸುಶೀಲೆಗೆ ಉಡುಗೊರೆಯಾಗಿ ಕೊಟ್ಟನು. ಅದನ್ನು ಬಟ್ಟಲಲ್ಲೇ ಇಟ್ಟು ಆಮೇಲೆ ಸುಖಿಸಿ ಶಯನಗೈದರು ಸತಿಪತಿಯರು.

ಥಟ್ಟನೆ ಕಾಶಿಯಾತ್ರೆಯ ನೆನಪಾದ ಶಿವಧರ್ಮ ನಸುಕಾಗುವುದರೊಳಗೆ ಎದ್ದು ದಡಬಡನೆ ಓಡಿ ತನ್ನ ಸೋದರಮಾವನನ್ನೂ ಹುಡುಕಿಕೊಂಡು ಹೊರನಡೆದೇ ಬಿಟ್ಟ. ಸುಶೀಲೆ ಎದ್ದಾಗ ಗಂಡನ ಪತ್ತೆಯೇ ಇಲ್ಲ. ಅವಳಿಗೆ ಗಾಬರಿಯಾಯಿತು. ಜತೆಯಲ್ಲೇ ಹಿಂದಿನರಾತ್ರಿ ಮಂಗಳಗೌರಿದೇವಿಯು ಹೇಳಿದ್ದ ಬಾಗಿನದ ನೆನಪಾಯಿತು. ಹಾವನ್ನು ಹಿಡಿದಿಟ್ಟಿದ್ದ ಕಲಶವನ್ನು ದೇವಿಯಪ್ಪಣೆ ಪ್ರಕಾರ ತನ್ನ ಅಮ್ಮನಿಗೆ ಒಯ್ದುಕೊಟ್ಟಳು. ಆಗ ಅಲ್ಲಿ ಮತ್ತೊಂದು ಚಮತ್ಕಾರ ನಡೆಯಿತು. ಸುಶೀಲೆಯ ಅಮ್ಮ ಆ ಕಲಶವನ್ನು ತೆರೆದುನೋಡಿದಾಗ ಅದರೊಳಗೆ ಹಾವಿನ ಬದಲಿಗೆ ರತ್ನದ ಹಾರ ಇತ್ತು! ಇದೆಲ್ಲ ದೇವಿಯ ಮಹಿಮೆ ಎಂದು ಧನ್ಯಭಾವದಿಂದ ಅದನ್ನವಳು ಸುಶೀಲೆಗೇ ತೊಡಿಸಿದಳು.

ಗಂಡನ ಸುಳಿವಿಲ್ಲದೆ ಚಿಂತಾಕ್ರಾಂತಳಾದ ಸುಶೀಲೆ ತನ್ನ ತಂದೆಯೊಡನೆ ಸಮಾಲೋಚಿಸಿದಳು. ಅವರಿಬ್ಬರು ಒಂದು ಅನ್ನಛತ್ರವನ್ನು ಆರಂಭಿಸುವ ನಿರ್ಧಾರ ಕೈಗೊಂಡರು. ಅಲ್ಲಿಗೆ ಬರುವ ಅತಿಥಿ-ಅಭ್ಯಾಗತರನ್ನು ಅನ್ನ-ವಸ್ತ್ರ-ತಾಂಬೂಲಗಳಿಂದ ಸತ್ಕರಿಸುವ ಕೈಂಕರ್ಯ ಮಾಡತೊಡಗಿದರು. ಒಂದಲ್ಲ ಒಂದು ದಿನ ಆ ದಾರಿಯಾಗಿ ಶಿವಧರ್ಮ ಬರಬಹುದು, ಆಗ ಮತ್ತೆ ಅವನನ್ನು ತಾನು ಸೇರಬಹುದು ಎಂಬುದು ಸುಶೀಲೆಯ ನಿರೀಕ್ಷೆ. ಹಾಗೆಯೇ ಆಯಿತು, ಕಾಶಿಯಾತ್ರೆ ಮುಗಿಸಿದ ಶಿವಧರ್ಮ ತನ್ನ ಸೋದರಮಾವನೊಂದಿಗೆ ಹಿಂದಿರುಗುತ್ತ ಮತ್ತೆ ಪ್ರತಿಷ್ಠಾಪುರದ ಅದೇ ಉದ್ಯಾನಕ್ಕೆ ವಿಶ್ರಾಂತಿಗಾಗಿ ಬಂದನು. ಈ ಸಮಾಚಾರವನ್ನು ತಿಳಿದ ಸುಶೀಲೆ ಅವನನ್ನು ಗುರುತಿಸಿ ಅನ್ನಛತ್ರಕ್ಕೆ ಬರಮಾಡಿಕೊಂಡಳು.

ಸುಶೀಲೆ ಯಾರೆಂದು ಶಿವಧರ್ಮನಿಗೆ ಒಂದೊಮ್ಮೆ ಗುರುತು ಸಿಗಲಿಲ್ಲವಾದರೂ ಶೋಭನರಾತ್ರಿಯಂದು ಅವನು ಕೊಟ್ಟಿದ್ದ ಉಂಗುರವನ್ನು ತೋರಿಸಿದಾಗ ಎಲ್ಲವೂ ನೆನಪಾಯಿತು. ಸುಶೀಲೆ ಶಿವಧರ್ಮನೊಂದಿಗೆ ತನ್ನ ತಂದೆತಾಯಿ ಇದ್ದಲ್ಲಿಗೆ ಹೋಗಿ ಅವರಿಗೆ ವಿಷಯವನ್ನೆಲ್ಲ ತಿಳಿಸಿದಳು. ದೇವಿಮಹಿಮೆಯಿಂದ ಹೃದಯತುಂಬಿ ಬಂದ ಅವರು ಇನ್ನೊಮ್ಮೆ ಮಂಗಳಗೌರಿ ಪೂಜೆಯನ್ನೇರ್ಪಡಿಸಿದರು. ಆಮೇಲೆ ಸುಶೀಲೆಯನ್ನು ಗಂಡ ಶಿವಧರ್ಮನೊಂದಿಗೆ ಅತ್ತೆ-ಮಾವರ ಮನೆಗೆ ಹರಸಿ ಕಳಿಸಿದರು. ಮಹಿಷ್ಮತಿ ನಗರದಲ್ಲೂ ರಾಜ ಜಯಪಾಲ ತನ್ನ ರಾಣಿಯೊಂದಿಗೆ ಮಗ-ಸೊಸೆಯನ್ನು ಪ್ರೀತಿಯಿಂದ ಬರಮಾಡಿಕೊಂಡನು. ಕಳೆದ ಒಂದು ವರ್ಷದಲ್ಲಿ ನಡೆದ ಘಟನೆಗಳನ್ನೆಲ್ಲ ಶಿವಧರ್ಮ-ಸುಶೀಲೆಯರಿಂದ ತಿಳಿದುಕೊಂಡನು.

ಮದುವೆಯಾಗಿ ಐದು ವರ್ಷಗಳಾಗುವವರೆಗೂ ಶ್ರಾವಣಮಾಸದ ಪ್ರತಿ ಮಂಗಳವಾರದಂದು ಸುಶೀಲೆ ಮಂಗಳಗೌರಿ ವ್ರತವನ್ನಾಚರಿಸಿದಳು. ಅಷ್ಟೈಶ್ವರ್ಯ ಸಕಲ ಸೌಭಾಗ್ಯಗಳು ಅವಳಿಗೆ ಮತ್ತು ಅವಳ ಕುಟುಂಬವರ್ಗಕ್ಕೆಲ್ಲ ಪ್ರಾಪ್ತಿಯಾದುವು. ಸುಶೀಲೆಯ ನಂತರ, ನವಿವಿವಾಹಿತ ಹೆಣ್ಣು ಮೊದಲ ಐದು ವರ್ಷ ಮಂಗಳಗೌರಿ ವ್ರತವನ್ನಾಚರಿಸುವ ಸಂಪ್ರದಾಯ ಲೋಕರೂಢಿಗೆ ಬಂತು. ಭಕ್ತಿಭಾವಗಳಿಂದ ವ್ರತವನಾಚರಿಸುವವರಿಗೆ ಮಂಗಳಗೌರಿಯ ಅನುಗ್ರಹ ಕಟ್ಟಿಟ್ಟ ಬುತ್ತಿಯೆಂದು ಪ್ರತೀತಿಯಾಯಿತು.

ಶ್ರಾವಣ ಮಾಸದಲ್ಲಿ ಸಂಭವಿಸುವ ಪ್ರತಿ ಮಂಗಳವಾರದಂದು ಮಂಗಳಗೌರೀ ವ್ರತಾಚರಣೆಯನ್ನು ಆಚರಿಸಲಾಗುತ್ತದೆ. ಮದುವೆಯಾದ ಸುಮಂಗಲಿಯರಿಂದ ಆಚರಿಸಲ್ಪಡುವ ಈ ವ್ರತವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು  ತಾಯಿ ಪಾರ್ವತಿಯ ರೂಪವಾಗಿರುವ ಶ್ರೀ ಮಂಗಳ ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. 

ಐದು ವರ್ಷಗಳ ಪರ್ಯಂತ ಆಚರಿಸಲ್ಪಡುವ ಈ ವ್ರತದಿಂದ ಕುಟುಂಬದವರ ಆಯುರಾರೋಗ್ಯಗಳು ಉತ್ತಮವಾಗುತ್ತದೆ ಎಂಬ ನಂಬಿಕೆ ಭಕ್ತರದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಪೂಜಾ ವಿಧಾನ;

• ಪ್ರಾತಃ ಕಾಲದಲ್ಲಿ ಎದ್ದು ಮಂಗಳಸ್ನಾನವನ್ನಾಚರಿಸಿ ಶುಚಿರ್ಭೂತರಾಗಬೇಕು.

• ಸೂಕ್ತ ಸ್ಥಳದಲ್ಲಿ ಅರಿಶಿನದಿಂದ ಮಾಡಿದ ಮಂಗಳಗೌರಿಯನ್ನು ಪ್ರತಿಷ್ಠಾಪಿಸಬೇಕು.

•ದೇವಿಯನ್ನು ಧೂಪ, ದೀಪ, ನೈವೇದ್ಯಗಳನ್ನೊಳಗೊಂಡಂತೆ ಕಲ್ಪೋಕ್ತ ರೀತಿಯಲ್ಲಿ ಪೂಜಿಸಬೇಕು.

• ತಂಬಿಟ್ಟಿನಿಂದ ಮಾಡಿದ ಹದಿನಾರು ದೀಪಗಳಿಂದ ದೇವಿಗೆ ಆರತಿಯನ್ನು ಬೆಳಗಬೇಕು.

• ಅಷ್ಟೇ ಅಲ್ಲದೆ, ಪೂಜಿಸಿದ ದೀಪಗಳನ್ನು ಹದಿನಾರು ಸುವಾಸಿನಿಯರಿಗೆ ಕೊಡಬೇಕು.

• ವ್ರತ ಕಥೆಯನ್ನು ಪಠಿಸುವಾಗ ದೀಪದಿಂದ ತೆಗೆದ ಕಾಡಿಗೆಯನ್ನು ಲೇಪಿಸಿಕೊಳ್ಳಬೇಕು ಹಾಗೂ ಇತರರಿಗೂ ಕೊಡಬೇಕು.

ಮುತೈದೆಯರಿಗೆ ಬಾಗಿನ ಕೊಡಬೇಕು.

    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು

         ಸರ್ವಜನಾಃ ಸುಖಿನೋಭವತು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ