LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ ; KGID ದಾಖಲೆಗಳ ತಿದ್ದುಪಡಿಗೆ ವಿಮಾ ಇಲಾಖೆ ಸೂಚನೆ |Govt Employee

ಬೆಂಗಳೂರು: ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (KGID) ತನ್ನ ಆನ್‌ಲೈನ್ ತಂತ್ರಾಂಶದಲ್ಲಿರುವ ಜೀವ ವಿಮಾ ಪಾಲಿಸಿ ದತ್ತಾಂಶದಲ್ಲಿನ ದೋಷಗಳನ್ನು ಸರಿಪಡಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಿರ್ದೇಶಕಿ ಅನ್ನಪೂರ್ಣ ಕೆ. ಅವರು ಜುಲೈ 13, 2026ರಂದು ಸುತ್ತೋಲೆ-04/2026-27 ಹೊರಡಿಸಿದ್ದು, ರಾಜ್ಯದ ಸರ್ಕಾರಿ ನೌಕರರ ಜೀವ ವಿಮಾ ಪಾಲಿಸಿ ಮಾಹಿತಿಯನ್ನು ತ್ವರಿತವಾಗಿ ಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಎಲ್ಲಾ ಜಿಲ್ಲಾ ವಿಮಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಮಾ ಇಲಾಖೆಯ ಪರಿಶೀಲನೆಯಲ್ಲಿ ಒಟ್ಟು 4,732 ಪ್ರಕರಣಗಳಲ್ಲಿ ವಿವಿಧ ರೀತಿಯ ದತ್ತಾಂಶದ ದೋಷಗಳು ಪತ್ತೆಯಾಗಿದ್ದು, ಅವುಗಳನ್ನು ಹಂತ ಹಂತವಾಗಿ ಸರಿಪಡಿಸಲು ಪ್ರಮಾಣಿತ ಕಾರ್ಯವಿಧಾನ (SOP) ಪ್ರಕಟಿಸಲಾಗಿದೆ.

ಪತ್ತೆಯಾದ ಪ್ರಮುಖ ದೋಷಗಳು

  • 1,062 ಪ್ರಕರಣಗಳಲ್ಲಿ HRMS ತಂತ್ರಾಂಶದಲ್ಲಿ ಪ್ರಥಮ KGID ಪಾಲಿಸಿ ಸಂಖ್ಯೆ ತಪ್ಪಾಗಿ ದಾಖಲಾಗಿರುವುದು.
  • 503 ಪ್ರಕರಣಗಳಲ್ಲಿ HRMS ಮತ್ತು KGID ತಂತ್ರಾಂಶಗಳಲ್ಲಿನ ನೌಕರರ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದಿರುವುದು.
  • 205 ಪ್ರಕರಣಗಳಲ್ಲಿ ಜನ್ಮದಿನಾಂಕದ ಮಾಹಿತಿ ಹೊಂದಿಕೆಯಾಗದಿರುವುದು.
  • 1,962 ಪ್ರಕರಣಗಳಲ್ಲಿ HRMSನಲ್ಲಿ ಇರುವ KGID ಸಂಖ್ಯೆ, KGID ದತ್ತಾಂಶದಲ್ಲಿ ಲಭ್ಯವಿಲ್ಲದಿರುವುದು.

ಯಾವ ಕ್ರಮ ಕೈಗೊಳ್ಳಬೇಕು?

ವಿಮಾ ಇಲಾಖೆ ಸಂಬಂಧಿತ ಜಿಲ್ಲಾ ಕಚೇರಿಗಳು, ಮೇಲಧಿಕಾರಿಗಳು ಹಾಗೂ ವೇತನ ಬಟವಾಡೆ ಅಧಿಕಾರಿಗಳ (DDO) ಮೂಲಕ ನೌಕರರನ್ನು ಸಂಪರ್ಕಿಸಿ ತಪ್ಪು ಮಾಹಿತಿಯನ್ನು ಸರಿಪಡಿಸಲು ಸೂಚಿಸಿದೆ.

  • ಪ್ರಥಮ ಪಾಲಿಸಿ ಸಂಖ್ಯೆ ತಪ್ಪಿದ್ದರೆ DDO ಮೂಲಕ ತಿದ್ದುಪಡಿ ಮಾಡಬೇಕು.
  • ಸಾಧ್ಯವಾಗದಿದ್ದರೆ ನಿಖರ ಮಾಹಿತಿಯನ್ನು Excel ಶೀಟ್ ಹಾಗೂ ಪೂರಕ ದಾಖಲೆಗಳೊಂದಿಗೆ ವಿಮಾ ನಿರ್ದೇಶನಾಲಯಕ್ಕೆ ಇ-ಮೇಲ್ ಮೂಲಕ ಕಳುಹಿಸಬೇಕು.
  • ಹೆಸರು ಹಾಗೂ ಜನ್ಮದಿನಾಂಕದ ವ್ಯತ್ಯಾಸಗಳಿದ್ದರೆ ಭೌತಿಕ ಪಾಲಿಸಿ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣದೊಂದಿಗೆ ಮಾಹಿತಿ ಸಲ್ಲಿಸಬೇಕು.
  • ಜನ್ಮದಿನಾಂಕ ಬದಲಾವಣೆಯಿಂದ ವಿಮಾ ಮೊತ್ತದಲ್ಲಿ ವ್ಯತ್ಯಾಸವಾದರೆ ಮರುಲೆಕ್ಕಾಚಾರ ಮಾಡಿ Data Verification Portalನಲ್ಲಿ ತಿದ್ದುಪಡಿ ಮಾಡಬೇಕು.
  • HRMSನಲ್ಲಿ ಮಾತ್ರ ದಾಖಲಾಗಿರುವ KGID ಸಂಖ್ಯೆಗಳಿಗೆ ಸಂಬಂಧಿಸಿದ ಪಾಲಿಸಿಗಳನ್ನು ಪ್ರಥಮ ಪಾಲಿಸಿಗೆ ಲಿಂಕ್ ಮಾಡಿ ಅಥವಾ ಹೊಸದಾಗಿ ದತ್ತಾಂಶ ಪರಿಶೀಲನೆ ನಡೆಸಬೇಕು.

ಅಧಿಕಾರಿಗಳಿಗೆ ಸೂಚನೆ

ಜಿಲ್ಲಾ ವಿಮಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳು ಶೀಘ್ರ ಸಂಪರ್ಕ ಮಾರ್ಗದ ಮೂಲಕ ನೌಕರರನ್ನು ಸಂಪರ್ಕಿಸಿ, ಭೌತಿಕ ದಾಖಲೆಗಳ ಪರಿಶೀಲನೆ ನಡೆಸಿ, ಅಗತ್ಯ ದಾಖಲೆಗಳೊಂದಿಗೆ ಮಾಹಿತಿಯನ್ನು ವಿಮಾ ನಿರ್ದೇಶನಾಲಯದ ಗಣಕ ವಿಭಾಗಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಕ್ರಮದಿಂದ KGID ಆನ್‌ಲೈನ್ ತಂತ್ರಾಂಶದಲ್ಲಿನ ದತ್ತಾಂಶವನ್ನು ನಿಖರಗೊಳಿಸಿ, ಸರ್ಕಾರಿ ನೌಕರರ ಜೀವ ವಿಮಾ ಪಾಲಿಸಿಗಳ ಮಾಹಿತಿಯಲ್ಲಿ ಇರುವ ಗೊಂದಲಗಳನ್ನು ನಿವಾರಿಸುವುದು ಇಲಾಖೆಯ ಉದ್ದೇಶವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ