LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನನ್ನನ್ನು ತೃತೀಯಲಿಂಗಿ ಎಂದವರಿಗೆ ಇದೇ ನನ್ನ ಉತ್ತರ: ಟ್ರೋಲಿಗರಿಗೆ ಖಡಕ್ ಟಾಂಗ್ ನೀಡಿದ ಖುಷ್ಬೂ ಮಗಳು ಆನಂದಿತಾ

ಖ್ಯಾತ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಮತ್ತು ನಿರ್ದೇಶಕ ಸುಂದರ್ ಸಿ ಅವರ ಪುತ್ರಿ ಆನಂದಿತಾ ಸುಂದರ್ ಅವರು ತಮ್ಮ ದೈಹಿಕ ಬದಲಾವಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿರುವ ಟ್ರೋಲಿಂಗ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅವರು, ತೂಕ ಇಳಿಸಿಕೊಳ್ಳಲು ತಾವು ಯಾವುದೇ ಶಾರ್ಟ್‌ಕಟ್ ಅಥವಾ ಔಷಧಿಗಳನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏಳು ವರ್ಷಗಳ ಕಠಿಣ ಪರಿಶ್ರಮ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಓಜೆಂಪಿಕ್ ಅಥವಾ ಮೌಂಜಾರೋದಂತಹ ತೂಕ ಇಳಿಸುವ ಔಷಧಿಗಳ ಬಳಕೆ ಹಾಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ವದಂತಿಗಳನ್ನು ಆನಂದಿತಾ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ತಮ್ಮ ಈ ಬದಲಾವಣೆ ಒಂದೇ ರಾತ್ರಿಯಲ್ಲಿ ಆಗಿದ್ದಲ್ಲ, ಇದರ ಹಿಂದೆ ಏಳು ವರ್ಷಗಳ ಸುದೀರ್ಘ ಪರಿಶ್ರಮವಿದೆ ಎಂದು ಅವರು ಹೇಳಿದ್ದಾರೆ. ೨೦೧೮ ಮತ್ತು ೨೦೧೯ ರ ಅವಧಿಯಲ್ಲೇ ತಾವು ತೂಕ ಇಳಿಸುವ ಪ್ರಯಾಣವನ್ನು ಆರಂಭಿಸಿದ್ದು, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ ಜನರು ಇದು ತಕ್ಷಣಕ್ಕೆ ನಡೆದ ಪವಾಡ ಎಂದು ಭಾವಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಾಲ್ಯದಲ್ಲಿ ತಮಗಿದ್ದ ಅತಿಯಾದ ತೂಕದ ಸಮಸ್ಯೆಯಿಂದಾಗಿ ಆರೋಗ್ಯ ಕಾಪಾಡಿಕೊಳ್ಳಲು ಜೀವನಶೈಲಿಯನ್ನು ಬದಲಾಯಿಸಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.

ಟೀಕಾಕಾರರ ಮನಸ್ಥಿತಿಗೆ ಬೇಸರ

ತಾವು ದಪ್ಪಗಿದ್ದಾಗಲೂ ಟೀಕಿಸುತ್ತಿದ್ದ ಜನರು, ಈಗ ತೂಕ ಇಳಿಸಿಕೊಂಡ ಮೇಲೆಯೂ ಸುಮ್ಮನಿರದೆ ಸರ್ಜರಿ ಆರೋಪ ಮಾಡುತ್ತಿದ್ದಾರೆ ಎಂದು ಆನಂದಿತಾ ಹೇಳಿದ್ದಾರೆ. ಇದೇ ವೇಳೆ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ತೃತೀಯಲಿಂಗಿಗಳಿಗೆ ಹೋಲಿಸಿ ನಿಂದಿಸಲು ಯತ್ನಿಸುವವರ ವಿರುದ್ಧವೂ ಅವರು ಆಕ್ರೋಶ ಹೊರಹಾಕಿದ್ದಾರೆ. ತೃತೀಯಲಿಂಗಿಗಳನ್ನು ಅತ್ಯಂತ ಸುಂದರ ಮತ್ತು ದಯಾಪರ ವ್ಯಕ್ತಿಗಳು ಎಂದು ಕರೆದಿರುವ ಅವರು, ಯಾರನ್ನಾದರೂ ನಿಂದಿಸಲು ಅವರ ಹೆಸರನ್ನು ಬಳಸುವುದು ಅತ್ಯಂತ ಅಜ್ಞಾನದ ಮತ್ತು ಕ್ರೂರ ಮನಸ್ಥಿತಿಯ ಸಂಕೇತವಾಗಿದೆ ಎಂದು ಖಂಡಿಸಿದ್ದಾರೆ.

ಖುಷ್ಬೂ ಹೆಮ್ಮೆಯ ಮಾತು

ತಮ್ಮ ಹದಿನೈದನೇ ವಯಸ್ಸಿನಿಂದಲೇ ಇಂತಹ ನಕಾರಾತ್ಮಕ ಕಾಮೆಂಟ್‌ಗಳನ್ನು ಎದುರಿಸುತ್ತಾ ಬಂದಿರುವುದಾಗಿ ಹೇಳಿರುವ ಆನಂದಿತಾ, ಹೆತ್ತವರು ಸೆಲೆಬ್ರಿಟಿಗಳಾಗಿದ್ದಕ್ಕೆ ಮಕ್ಕಳನ್ನು ಗುರಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಸದ್ಯ ಆನಂದಿತಾ ಅವರ ಈ ಧೈರ್ಯದ ಮಾತುಗಳಿಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮಗಳ ಸಂದರ್ಶನದ ವಿಡಿಯೋವನ್ನು ಹಂಚಿಕೊಂಡಿರುವ ನಟಿ ಖುಷ್ಬೂ, ನನ್ನ ಬೊಮ್ಮಾಯಿ ನಿನ್ನ ಬಗ್ಗೆ ಹೆಮ್ಮೆಯಿದೆ ಎಂದು ಬರೆದುಕೊಂಡು ಮಗಳಿಗೆ ಬೆಂಬಲ ಸೂಚಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ ಮತ ಹಾಕಿ ಉಲ್ಟಾ ಹೊಡೆದ ಬಿಜೆಪಿ, ಜೆಡಿಎಸ್ ಶಾಸಕರು; 5 ಸ್ಥಾನ ಗೆದ್ದ ಕಾಂಗ್ರೆಸ್!5 ನಗರ ಪಾಲಿಕೆಗಳ ರಸ್ತೆಗಳ ಅಭಿವೃದ್ಧಿಗೆ 2000 ಕೋಟಿ ರೂ ವಿಶೇಷ ಅನುದಾನ ಬಿಡುಗಡೆ: ಕೃಷ್ಣಬೈರೇಗೌಡಮೇಕೆದಾಟು ದಕ್ಷಿಣ ಭಾರತದ ಹೃದಯದಂತಹ ಯೋಜನೆ, ಇದರಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಹಿತ ಅಡಗಿದೆ: ಡಿಕೆಶಿBIG NEWS: ‘ಕರ್ತವ್ಯ’ ಆ್ಯಪ್ ನೋಂದಣಿಯಲ್ಲಿ ಶೇ. 70.6 ರಷ್ಟು ಪ್ರಗತಿ ಸಾಧನೆ: ಸರ್ಕಾರ ಸ್ಪಷ್ಟನೆ ​ಮಹಿಷಿ ಉತ್ತರಾಧಿ ಮಠದಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನ ದೋಚಿದ್ದ ಕಳ್ಳ ಅರೆಸ್ಟ್ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ: ನಕಲಿ ವೈದ್ಯ ಮುಕ್ತ ಜಿಲ್ಲೆಯಾಗಿಸಲು ಸೂಚನೆಮನೆಯ ಹೊರಗೆ ಮಲಗಿದ್ದ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ ಪುತ್ರBREAKING NEWS: MLC ಚುನಾವಣೆಯಲ್ಲಿ ಕಾಂಗ್ರೆಸ್ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು, ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಪರಾಭವಮಂಡ್ಯ ಮೇಡಂಗೂ ಟೋಪಿ ಹಾಕಿದ್ರು; ಅವರಿಗಾದರೂ ರಾಜ್ಯಸಭೆ ಟಿಕೆಟ್ ಕೊಟ್ಟಿದ್ರೆ ನಾವೇನು ಬೇಡಾ ಅಂತಿದ್ವಾ? ರೇವಣ್ಣ ಅಚ್ಚರಿ ಹೇಳಿಕೆಮುಖ್ಯಮಂತ್ರಿಯಾಗಿ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ರಣತಂತ್ರಕ್ಕೆ ಬೆಚ್ಚಿದ ‘ದೋಸ್ತಿ’