LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜ್ವರ, ಶೀತಕ್ಕೂ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಮಾಡಬಹುದಾ? ಪಾಲಿಸಿ ಹೊಂದಿರುವವರು ತಪ್ಪದೇ ತಿಳಿಯಿರಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚಗಳು ಗಗನಕ್ಕೇರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆಸ್ಪತ್ರೆಗೆ ಕಾಲಿಟ್ಟರೆ ಸಾಕು ಜೇಬು ಬರಿದಾಗುವ ಪರಿಸ್ಥಿತಿ ಇರುವುದರಿಂದ, ಮಧ್ಯಮ ವರ್ಗದ ಜನರಿಗೆ ಗಂಭೀರ ಕಾಯಿಲೆ ಎದುರಾದರೆ ಸಾಲದ ಸುಳಿಗೆ ಸಿಲುಕುವುದು ಗ್ಯಾರಂಟಿ. ಇಂತಹ ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೆಲ್ತ್ ಇನ್ಶೂರೆನ್ಸ್ (Health Insurance) ಅತ್ಯಗತ್ಯ ಶಸ್ತ್ರವಾಗಿದೆ. ಆದರೆ, ನಮ್ಮಲ್ಲಿ ಬಹುತೇಕರಿಗೆ ಕಾಡುವ ಒಂದು ಕಾಮನ್ ಪ್ರಶ್ನೆಯೆಂದರೆ ಜ್ವರ, ನೆಗಡಿ, ಶೀತದಂತಹ ಸಣ್ಣಪುಟ್ಟ ಕಾಯಿಲೆಗಳಿಗೂ ಹೆಲ್ತ್ ಇನ್ಶೂರೆನ್ಸ್ ಹಣ ಸಿಗುತ್ತಾ? ಇಲ್ಲಿದೆ ನೋಡಿ ಅಸಲಿ ಮಾಹಿತಿ

ಜ್ವರ, ಶೀತಕ್ಕೆ ಹೆಲ್ತ್ ಇನ್ಶೂರೆನ್ಸ್ ಸಿಗುತ್ತಾ? ಅಸಲಿ ನಿಯಮ ಇಲ್ಲಿದೆ

ಸಾಮಾನ್ಯವಾಗಿ ಜ್ವರ ಅಥವಾ ಶೀತ ಬಂದಾಗ ಯಾರೂ ಆಸ್ಪತ್ರೆಗೆ ಅಡ್ಮಿಟ್ ಆಗುವುದಿಲ್ಲ. ಕೇವಲ ಫ್ಯಾಮಿಲಿ ಡಾಕ್ಟರ್ ಬಳಿ ಹೋಗಿ, ಚೀಟಿ ಬರೆಸಿಕೊಂಡು, ಮಾತ್ರೆ ತಂದು ಮನೆಗೆ ಮರಳುತ್ತೇವೆ. ಆದರೆ ನೆನಪಿಡಿ, ನೀವು ತೆಗೆದುಕೊಳ್ಳುವ ಬೇಸಿಕ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ (Basic Health Insurance) ಇಂತಹ ವೆಚ್ಚಗಳು ಕವರ್ ಆಗುವುದಿಲ್ಲ ಏಕೆಂದರೆ ಸಾಮಾನ್ಯ ಪಾಲಿಸಿಗಳು ಕೇವಲ ಆಸ್ಪತ್ರೆಗೆ ದಾಖಲಾದಾಗ (24 ಗಂಟೆಗಳ Hospitalization) ಆಗುವ ಖರ್ಚುಗಳನ್ನು ಮಾತ್ರ ಭರಿಸುತ್ತವೆ.

ಹಾಗಾದರೆ ಸಣ್ಣಪುಟ್ಟ ಕಾಯಿಲೆಗಳಿಗೂ ವಿಮೆ ಸಿಗಬೇಕಾದರೆ ಏನು ಮಾಡಬೇಕು? ಅದಕ್ಕಾಗಿಯೇ ನಿಮ್ಮ ಪಾಲಿಸಿಯೊಂದಿಗೆ ಒಪಿಡಿ ಕವರೇಜ್ (OPD Coverage) ಎಂಬ ಆಡ್-ಆನ್ (Add-on) ಆಯ್ಕೆಯನ್ನು ಸೇರಿಸಿಕೊಳ್ಳಬೇಕಾಗುತ್ತದೆ.

ಏನಿದು ಒಪಿಡಿ (OPD) ಕವರೇಜ್?

OPD ಎಂದರೆ ಔಟ್ ಪೇಷಂಟ್ ಡಿಪಾರ್ಟ್ಮೆಂಟ್ (Out-Patient Department) ಎಂದರ್ಥ. ಅಂದರೆ ಆಸ್ಪತ್ರೆಗೆ ದಾಖಲಾಗದೆ ಕೇವಲ ವೈದ್ಯರನ್ನು ಭೇಟಿ ಮಾಡುವುದು, ಕನ್ಸಲ್ಟೇಷನ್ ಫೀಸ್ ನೀಡುವುದು, ಲ್ಯಾಬ್ ಟೆಸ್ಟ್ ಮಾಡಿಸುವುದು ಮತ್ತು ಔಷಧಿಗಳನ್ನು ಖರೀದಿಸುವುದು ಈ ವಿಭಾಗದ ಅಡಿಗೆ ಬರುತ್ತದೆ.

ನಿಮ್ಮ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ನೀವು ಒಪಿಡಿ ಕವರ್ ಪಡೆದಿದ್ದರೆ, ಜ್ವರ-ಶೀತದಂತಹ ಸಣ್ಣ ಕಾಯಿಲೆಗಳ ಚಿಕಿತ್ಸಾ ವೆಚ್ಚ, ವೈದ್ಯರ ಫೀಸ್ ಮತ್ತು ಮೆಡಿಸಿನ್ ಬಿಲ್‌ಗಳನ್ನು ವಿಮಾ ಕಂಪನಿಯೇ ಭರಿಸುತ್ತದೆ. ಆದರೆ, ಇದಕ್ಕೆ ನೀವು ಸಾಮಾನ್ಯ ಪ್ರೀಮಿಯಂಗಿಂತ ಸ್ವಲ್ಪ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ಒಪಿಡಿ ಕವರೇಜ್ ಯಾರಿಗೆ ಹೆಚ್ಚು ಉಪಯುಕ್ತ?

ದೀರ್ಘಕಾಲದ ಕಾಯಿಲೆ ಇರುವವರಿಗೆ: ಮಧುಮೇಹ (Sugar) ಹಾಗೂ ರಕ್ತದೊತ್ತಡ (BP) ಯಂತಹ ಸಮಸ್ಯೆ ಇದ್ದವರು ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಇಂತವರಿಗೆ ಒಪಿಡಿ ಕವರೇಜ್ ವರ್ಷದ ಬಜೆಟ್‌ನಲ್ಲಿ ಭಾರಿ ಹಣ ಉಳಿಸಲು ಸಹಾಯ ಮಾಡುತ್ತದೆ.

ದಂತ ಮತ್ತು ಫಿಸಿಯೋಥೆರಪಿ ಚಿಕಿತ್ಸೆ: ಕೆಲವು ನಿರ್ದಿಷ್ಟ ಡೆಂಟಲ್ ಟ್ರೀಟ್‌ಮೆಂಟ್‌ ಹಾಗೂ ಫಿಸಿಯೋಥೆರಪಿ ವೆಚ್ಚಗಳಿಗೂ ಈ ಒಪಿಡಿ ಅನ್ವಯಿಸುತ್ತದೆ.

ಆಯುಷ್ ಚಿಕಿತ್ಸೆ (AYUSH): ಇತ್ತೀಚಿನ ದಿನಗಳಲ್ಲಿ ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿಯಂತಹ ಪರ್ಯಾಯ ಚಿಕಿತ್ಸೆಗಳ ಒಪಿಡಿ ವೆಚ್ಚಗಳಿಗೂ ಇದು ಕವರೇಜ್ ಒದಗಿಸುತ್ತದೆ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಮಳೆ ಕೊರತೆಯಿಂದ ಕಂಗಾಲಾದ ಬೆಳಗಾವಿ ರೈತರು: ಮಹಾರಾಷ್ಟ್ರದಲ್ಲಿಯೂ ನೀರಿನ ಅಭಾವವಿರುವುದರಿಂದ ಅಲ್ಲಿಂದ ನೀರು ಬಿಡುವುದು ಕಷ್ಟಕರ ಎಂದ ಸಚಿವ ಸತೀಶ್ ಜಾರಕಿಹೊಳಿಪಿಯುಸಿ, ಪದವೀಧರರಿಗೆ ಉದ್ಯೋಗಾವಕಾಶ: ಜೂ.25 ರಂದು ನೇರ ಸಂದರ್ಶನಬಿಹಾರದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಭರತ್ ತಿವಾರಿ ಎನ್ಕೌಂಟರ್: ಪೊಲೀಸರ ವಿರುದ್ಧ ಎಫ್ಐಆರ್: ನ್ಯಾಯಾಂಗ ತನಿಖೆಗೆ ಆದೇಶ‘ಕೋರ್ಟ್ ನಲ್ಲಿ ಪತ್ನಿಯೊಬ್ಬರು ತನ್ನ ಗಂಡನನ್ನು ಹುಡುಕುತ್ತಿದ್ದಾರೆ’: ಸಿಎಂ ವಿಜಯ್ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ ಉದಯನಿಧಿ ಸ್ಟಾಲಿನ್: ಟಿವಿಕೆ ತಿರುಗೇಟುBREAKING: ಪ್ರಯಾಣಿಕರೇ ಗಮನಿಸಿ: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನಪಿಯು ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣ: 6 ತಿಂಗಳಾದರೂ ಪತ್ತೆಯಾಗದ ಯುವತಿಯರು: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಸಿಐಡಿ ಮನವಿಬಿಡದಿ ಟೌನ್ ಶಿಪ್ ವಿವಾದ: ನಿಖಿಲ್ 5 ಎಕರೆ ಜಾಗ ಕೊಡಲಿ; ‘ನಿಖಿಲ್ ಲೇಔಟ್’ ಎಂದು ಹೆಸರಿಡುತ್ತೇವೆ ಎಂದು ಟಾಂಗ್ ನೀಡಿದ ಹೆಚ್.ಸಿ.ಬಾಲಕೃಷ್ಣರೇಣುಕಾಸ್ವಾಮಿ ಹತ್ಯೆ ಪ್ರಕರಣ: ಕೇಸ್ ನಿಂದ ಹಿಂದೆ ಸರಿದ ನಟ ದರ್ಶನ್ ಪರ ವಕೀಲಬಿಡದಿ ಟೌನ್ ಶಿಪ್ ಕೆಸರೆರಚಾಟ: ಹಣ ಕೊಟ್ಟು ಜನರನ್ನು ಕರೆಸಿ ಪ್ರತಿಭಟನೆ: ಶಾಸಕರಿಗೆ ನಿವೇಶನ; HDK ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದ ಶಾಸಕ ಬಾಲಕೃಷ್ಣ