LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನೆಯಲ್ಲೇ ಮಾಡಿ ದೇವಸ್ಥಾನದ ಶೈಲಿಯ ಪುಳಿಯೋಗರೆ ಗೊಜ್ಜು: ತಯಾರಿಸುವ ಸರಳ ವಿಧಾನ ಇಲ್ಲಿದೆ

ದಕ್ಷಿಣ ಭಾರತದ ಮನೆ ಮನೆಗಳಲ್ಲಿ ವಿಶೇಷ ದಿನಗಳಂದು ಹಾಗೂ ಹಬ್ಬ ಹರಿದಿನಗಳಲ್ಲಿ ಕಡ್ಡಾಯವಾಗಿ ಸ್ಥಾನ ಪಡೆಯುವ ಪ್ರಮುಖ ಖಾದ್ಯವೆಂದರೆ ಅದು ಪುಳಿಯೋಗರೆ. ದೇವಸ್ಥಾನಗಳ ಪ್ರಸಾದದ ರುಚಿಯನ್ನು ನೆನಪಿಸುವ ಈ ಪುಳಿಯೋಗರೆಯನ್ನು ಮನೆಯಲ್ಲಿಯೇ ಅತ್ಯಂತ ಸುಲಭವಾಗಿ ಮತ್ತು ಅಪ್ರತಿಮ ರುಚಿಯೊಂದಿಗೆ ತಯಾರಿಸಬಹುದು. ಒಮ್ಮೆ ಪುಳಿಯೋಗರೆ ಗೊಜ್ಜು ಸಿದ್ಧಪಡಿಸಿ ಇಟ್ಟುಕೊಂಡರೆ, ತಿಂಗಳುಗಳ ಕಾಲ ಕೆಡದಂತೆ ಬಳಸಿ, ಬೇಕಾದಾಗ ತಕ್ಷಣವೇ ಬಿಸಿ ಬಿಸಿ ಅನ್ನದೊಂದಿಗೆ ಕಲಸಿ ಸವಿಯಬಹುದು.

ಬೇಕಾಗುವ ಮುಖ್ಯ ಸಾಮಗ್ರಿಗಳು: ದೊಡ್ಡ ನಿಂಬೆಹಣ್ಣಿನ ಗಾತ್ರದ ಹುಣಿಸೇಹಣ್ಣು, ಅರ್ಧ ಕಪ್ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಅರಿಶಿನ, ಒಣಮೆಣಸಿನಕಾಯಿ, ಕಡಲೆಬೇಳೆ, ಉದ್ದಿನಬೇಳೆ, ಧನಿಯಾ, ಜೀರಿಗೆ, ಮೆಂತ್ಯ, ಬಿಳಿ ಎಳ್ಳು, ಇಂಗು, ಕರಿಬೇವು, ಸಾಸಿವೆ, ಶೇಂಗಾ ಬೀಜ ಮತ್ತು ಮುಕ್ಕಾಲು ಕಪ್ ಅಡುಗೆ ಎಣ್ಣೆ.

ರುಚಿಕರ ಗೊಜ್ಜು ತಯಾರಿಸುವ ಹಂತಗಳು:

  • ಮಸಾಲೆ ಪುಡಿ ತಯಾರಿ: ಮೊದಲು ಒಂದು ಬಾಣಲೆಯಲ್ಲಿ ತಲಾ ಎರಡು ಚಮಚ ಧನಿಯಾ, ಕಡಲೆಬೇಳೆ, ಉದ್ದಿನಬೇಳೆ, ಒಂದು ಚಮಚ ಜೀರಿಗೆ, ಕಾಲು ಚಮಚ ಮೆಂತ್ಯ, ಒಣಮೆಣಸಿನಕಾಯಿ ಹಾಗೂ ಬಿಳಿ ಎಳ್ಳನ್ನು ಎಣ್ಣೆ ಹಾಕದೆ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಇವು ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಎತ್ತಿಟ್ಟುಕೊಳ್ಳಿ.
  • ಹುಣಿಸೇ ರಸದ ತಯಾರಿ: ಹುಣಿಸೇಹಣ್ಣನ್ನು ಬಿಸಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿಟ್ಟು, ನಂತರ ಅದರ ದಪ್ಪನಾದ ರಸವನ್ನು ಹಿಂಡಿ ಬೇರ್ಪಡಿಸಿಟ್ಟುಕೊಳ್ಳಿ.
  • ಒಗ್ಗರಣೆ ಮತ್ತು ಕುದಿಸುವಿಕೆ: ಬಾಣಲೆಗೆ ಮುಕ್ಕಾಲು ಕಪ್ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಶೇಂಗಾ ಬೀಜ, ಒಣಮೆಣಸಿನಕಾಯಿ, ಇಂಗು ಮತ್ತು ಸಾಸಿವೆ ಹಾಕಿ ಹುರಿಯಿರಿ. ಸಾಸಿವೆ ಸಿಡಿದ ತಕ್ಷಣ ಕರಿಬೇವು ಸೇರಿಸಿ.
  • ಗೊಜ್ಜು ಪಾಕ: ಒಗ್ಗರಣೆಗೆ ಸಿದ್ಧಪಡಿಸಿದ ಹುಣಿಸೇಹಣ್ಣಿನ ದಪ್ಪ ರಸವನ್ನು ಸುರಿಯಿರಿ. ಇದಕ್ಕೆ ಅರಿಶಿನ, ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ಹುಣಿಸೇಹಣ್ಣಿನ ಹಸಿ ವಾಸನೆ ಹೋಗಿ, ಎಣ್ಣೆ ಮೇಲಕ್ಕೆ ತೇಲುವ ತನಕ ಮಧ್ಯಮ ಉರಿಯಲ್ಲಿ ಕುದಿಸಬೇಕು.
  • ಅಂತಿಮ ಹಂತ: ಗೊಜ್ಜು ದಪ್ಪಗಾಗುತ್ತಿದ್ದಂತೆ, ನಾವು ಮೊದಲೇ ಸಿದ್ಧಪಡಿಸಿಟ್ಟುಕೊಂಡ ಮಸಾಲೆ ಪುಡಿಯನ್ನು ಸೇರಿಸಿ ಚೆನ್ನಾಗಿ ಕೈಾಡಿಸಿ. ಮಸಾಲೆ ಒಟ್ಟಿಗೆ ಬೆರೆತು, ಗೊಜ್ಜಿನಿಂದ ಎಣ್ಣೆ ಸಂಪೂರ್ಣವಾಗಿ ಬೇರ್ಪಡುವ ತನಕ ಸಣ್ಣ ಉರಿಯಲ್ಲಿ ಐದು ನಿಮಿಷ ಬೇಯಿಸಿ ಒಲೆಯಿಂದ ಇಳಿಸಿ.

ಈಗ ಸಾಂಪ್ರದಾಯಿಕ ಶೈಲಿಯ ಘಮಘಮಿಸುವ ಪುಳಿಯೋಗರೆ ಗೊಜ್ಜು ಸಿದ್ಧವಾಗಿದೆ. ಇದು ಸಂಪೂರ್ಣವಾಗಿ ತಣ್ಣಗಾದ ನಂತರ ಗಾಜಿನ ಸೀಸೆಯಲ್ಲಿ ಸಂಗ್ರಹಿಸಿಟ್ಟರೆ ಮೂರರಿಂದ ನಾಲ್ಕು ತಿಂಗಳುಗಳ ಕಾಲ ತಾಜಾವಾಗಿ ಉಳಿಯುತ್ತದೆ. ಪ್ರವಾಸಕ್ಕೆ ಹೋಗುವಾಗ ಅಥವಾ ಕಚೇರಿಗೆ ಡಬ್ಬಿ ಕೊಂಡೊಯ್ಯಲು ಇದು ಅತ್ಯುತ್ತಮ ಆಹಾರ ಆಯ್ಕೆಯಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಮಳೆ ಕೊರತೆಯಿಂದ ಕಂಗಾಲಾದ ಬೆಳಗಾವಿ ರೈತರು: ಮಹಾರಾಷ್ಟ್ರದಲ್ಲಿಯೂ ನೀರಿನ ಅಭಾವವಿರುವುದರಿಂದ ಅಲ್ಲಿಂದ ನೀರು ಬಿಡುವುದು ಕಷ್ಟಕರ ಎಂದ ಸಚಿವ ಸತೀಶ್ ಜಾರಕಿಹೊಳಿಪಿಯುಸಿ, ಪದವೀಧರರಿಗೆ ಉದ್ಯೋಗಾವಕಾಶ: ಜೂ.25 ರಂದು ನೇರ ಸಂದರ್ಶನಬಿಹಾರದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಭರತ್ ತಿವಾರಿ ಎನ್ಕೌಂಟರ್: ಪೊಲೀಸರ ವಿರುದ್ಧ ಎಫ್ಐಆರ್: ನ್ಯಾಯಾಂಗ ತನಿಖೆಗೆ ಆದೇಶ‘ಕೋರ್ಟ್ ನಲ್ಲಿ ಪತ್ನಿಯೊಬ್ಬರು ತನ್ನ ಗಂಡನನ್ನು ಹುಡುಕುತ್ತಿದ್ದಾರೆ’: ಸಿಎಂ ವಿಜಯ್ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ ಉದಯನಿಧಿ ಸ್ಟಾಲಿನ್: ಟಿವಿಕೆ ತಿರುಗೇಟುBREAKING: ಪ್ರಯಾಣಿಕರೇ ಗಮನಿಸಿ: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನಪಿಯು ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣ: 6 ತಿಂಗಳಾದರೂ ಪತ್ತೆಯಾಗದ ಯುವತಿಯರು: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಸಿಐಡಿ ಮನವಿಬಿಡದಿ ಟೌನ್ ಶಿಪ್ ವಿವಾದ: ನಿಖಿಲ್ 5 ಎಕರೆ ಜಾಗ ಕೊಡಲಿ; ‘ನಿಖಿಲ್ ಲೇಔಟ್’ ಎಂದು ಹೆಸರಿಡುತ್ತೇವೆ ಎಂದು ಟಾಂಗ್ ನೀಡಿದ ಹೆಚ್.ಸಿ.ಬಾಲಕೃಷ್ಣರೇಣುಕಾಸ್ವಾಮಿ ಹತ್ಯೆ ಪ್ರಕರಣ: ಕೇಸ್ ನಿಂದ ಹಿಂದೆ ಸರಿದ ನಟ ದರ್ಶನ್ ಪರ ವಕೀಲಬಿಡದಿ ಟೌನ್ ಶಿಪ್ ಕೆಸರೆರಚಾಟ: ಹಣ ಕೊಟ್ಟು ಜನರನ್ನು ಕರೆಸಿ ಪ್ರತಿಭಟನೆ: ಶಾಸಕರಿಗೆ ನಿವೇಶನ; HDK ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದ ಶಾಸಕ ಬಾಲಕೃಷ್ಣ