LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೈಸೂರು ಚಾಮುಂಡೇಶ್ವರಿ ದೇವಿಗೆ ಸೀರೆ ಹರಕೆ ತೀರಿಸಿದ ಸಿಎಂ ಪತ್ನಿ ಉಷಾ ಶಿವಕುಮಾರ್

ಮೈಸೂರು: ಇಂದು ಆಷಾಡ ಮಾಸದ ಮೊದಲ ಶುಕ್ರವಾರ. ಈ ಹಿನ್ನೆಲೆಯಲ್ಲಿ ನಾಡ ಅದಿದೇವತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ಚಾಮುಂಡಿ ತಾಯಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಹರಕೆ ತೀರಿಸಿದ್ದಾರೆ.

ಪತಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ನಾಡದೇವತೆ ಚಾಮುಂಡೇಶ್ವರಿಗೆ ಉಡಿಸಲು ಸೀರೆ ನೀಡುವುದಾಗಿ ಉಷಾ ಶಿವಕುಮಾರ್ ಅವರು ಈ ಹಿಂದೆ ಹರಕೆ ಹೊತ್ತಿದ್ದರು. ಅದರಂತೆ, ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಅತ್ಯಂತ ಪವಿತ್ರ ದಿನ. ಈ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾವು ಕಾಣಿಕೆಯಾಗಿ ತಂದಿದ್ದ ರೇಷ್ಮೆ ಸೀರೆಯನ್ನು ತಾಯಿಯ ಮೂಲ ವಿಗ್ರಹಕ್ಕೆ ಸಮರ್ಪಿಸಿ ಹರಕೆ ಪೂರೈಸಿದರು.

ಸಿಎಂ ಪತ್ನಿ ಭಕ್ತಿಯಿಂದ ಅರ್ಪಿಸಿದ ಸೀರೆಯನ್ನು ಚಾಮುಂಡಿಬೆಟ್ಟದ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರು ದೇವಿಗೆ ಉಡಿಸಿ, ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಿದ್ದಾರೆ. ಮೊದಲ ಆಷಾಢ ಶುಕ್ರವಾರದ ಸಡಗರದಲ್ಲಿ ಸಿಎಂ ಕುಟುಂಬದ ಈ ವಿಶೇಷ ಸೇವೆ ಭಕ್ತರ ಗಮನ ಸೆಳೆದಿದೆ.

ಮೈಸೂರು ಚಾಮುಂಡೇಶ್ವರಿ ದೇವಿಗೆ ಉಡಿಸಲು ನೀಡುವ ಸೀರೆ ಹರಕೆಯನ್ನು ಭಕ್ತರು ವಿಶೇಷವಾಗಿ ಮದುವೆ, ನಾಮಕರಣ, ಉದ್ಯೋಗ ಅಥವಾ ಇತರೆ ಇಷ್ಟಾರ್ಥಗಳು ನೆರವೇರಿದಾಗ ಮಾಡಿಕೊಳ್ಳುತ್ತಾರೆ. ಈ ಹರಕೆಯನ್ನು ತಲುಪಿಸಲು ದೇವಾಲಯದಲ್ಲಿ ಅಧಿಕೃತ ಸೀರೆ ಹರಕೆ ಸೇವೆ ಲಭ್ಯವಿದೆ.

ಹರಕೆಯಾಗಿ ಅರ್ಪಿಸಲು ಭಕ್ತರು ತಾವೇ ಸ್ವತಃ ಹೊಸ ರೇಷ್ಮೆ ಸೀರೆಯನ್ನು ತಂದು ದೇವಸ್ಥಾನದ ಕಚೇರಿಗೆ ನೀಡಬೇಕು. ದೇವಸ್ಥಾನದ ಇ-ಸೇವಾ ನಿಯಮಾವಳಿಗಳ ಪ್ರಕಾರ, ತಾಯಿಗೆ ಒಂದು ಸೀರೆ ಉಡಿಸಲು ಪ್ರಾಧಿಕಾರವು ನಿಗದಿಪಡಿಸಿರುವ ಸೇವಾ ಶುಲ್ಕ ಅತ್ಯಂತ ಕೈಗೆಟುಕುವಂತಿದ್ದು (ಸುಮಾರು 50 ರಿಂದ 1000 ರ ಆಸುಪಾಸಿನಲ್ಲಿ), ತಿಂಗಳ ಆರಂಭಕ್ಕೆ 5 ದಿನ ಮುಂಚಿತವಾಗಿಯೇ ಇದರ ಆನ್‌ಲೈನ್ ಬುಕಿಂಗ್ ವಿಂಡೋ ತೆರೆಯುತ್ತದೆ.

ಈ ಸೇವೆಯು ಸಾಮಾನ್ಯವಾಗಿ ದೇವಸ್ಥಾನದ ಪೂಜಾ ವೇಳೆಯಲ್ಲಿ ನಡೆಯುತ್ತದೆ. ಭಕ್ತರು ಮುಂಜಾನೆ 7.30 ರಿಂದ ಮಧ್ಯಾಹ್ನ 2.00 ರವರೆಗೆ ಅಥವಾ ಮಧ್ಯಾಹ್ನ 3.30 ರಿಂದ ಸಂಜೆ 6.00 ರವರೆಗೆ ದೇವಸ್ಥಾನದ ಅಧಿಕೃತ ಇ-ಸೇವಾ ಬುಕಿಂಗ್ ಪೋರ್ಟಲ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು.

ಪೂಜೆ ಮುಗಿದ ಬಳಿಕ ದೇವಿಗೆ ಉಡಿಸಿ ಪೂಜಿಸಿದ ಸೀರೆಯ ಜೊತೆಗೆ ದೇವಿಯ ಕುಂಕುಮ, ಬಳೆ ಹಾಗೂ ಇತರ ಪವಿತ್ರ ಪ್ರಸಾದವನ್ನು ಭಕ್ತರಿಗೆ ಗೌರವಪೂರ್ವಕವಾಗಿ ಹಿಂತಿರುಗಿಸಲಾಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ