LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವು

ಬೆಂಗಳೂರು :  ಅರಣ್ಯ ಒತ್ತುವರಿದಾರರಿಗೆ ಸಿಂಹಸ್ವಪ್ನವಾಗಿದ್ದ ಈಶ್ವರ ಖಂಡ್ರೆ, ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಗ್ರಾ.ಪಂ.ಗೆ ಸೇರಿದ ಕೆರೆ ಒತ್ತುವರಿ ತೆರವಿಗೆ ಆದೇಶಿಸಿದ್ದು, ಇಂದು ತುಮಕೂರು, ಹಿರೇಹಳ್ಳಿಯ ಒತ್ತುವರಿ ಪ್ರದೇಶದ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ರಾಜ್ಯದಲ್ಲಿ ಗ್ರಾ.ಪಂ.ಗೆ ಸೇರಿದ 32504 ಕೆರೆಗಳ ಪೈಕಿ ತೆರವಾಗದೆ ಉಳಿದಿರುವ 4828 ಕೆರೆಗಳ 11671 ಎಕರೆ ಒತ್ತುವರಿಯನ್ನು ನಿಯಮಾನುಸಾರ  ತೆರವು ಮಾಡುವಂತೆ ಇತ್ತೀಚೆಗಷ್ಟೇ ಸಚಿವರು ಆದೇಶ ನೀಡಿದ್ದರು. ಬಳಿಕ ಸೆ.5ರಂದು ತುಮಕೂರು ಗ್ರಾಮಾಂತರ ಜಿಲ್ಲೆ ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಕೆರೆ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಒತ್ತುವರಿ ತೆರವಿಗೆ ಸೂಚನೆ ನೀಡಿದ್ದರು.

ಸಚಿವರ ಭೇಟಿ ಹಾಗೂ ಆದೇಶದ ಬೆನ್ನಲ್ಲೆ ಪಂಚಾಯತಿ ಅಧಿಕಾರಿಗಳು,  ಸರ್ವೆ ನಂ.118ರಲ್ಲಿರುವ 17.32 ಎಕರೆ ಕೆರೆ ಅಂಗಳದ ಪೈಕಿ ಒತ್ತುವರಿಯಾಗಿರುವ ಪ್ರದೇಶವನ್ನು ಭೂಮಾಪಕರ ನೆರವಿನಿಂದ ಗುರುತಿಸಿ,  ತೆರವು ಮಾಡಿ, ಗಡಿ ಗುರುತಿಸಿ ಹದ್ದುಬಸ್ತು ಮಾಡಲು ಮುಂದಾಗಿದ್ದಾರೆ.

ಜೆಸಿಬಿ ವಾಹನಗಳ ಜೊತೆ ಕಾರ್ಯಾಚರಣೆಗಿಳಿದಿರುವ ಪಂಚಾಯತಿ ಅಧಿಕಾರಿ, ಸಿಬ್ಬಂದಿ, ಅಕ್ರಮವಾಗಿ ಕೆರೆಗೆ ಮಣ್ಣು ತುಂಬಿ ಒತ್ತುವರಿ ಮಾಡಿದ್ದ ಸುಮಾರು 28 ಗುಂಟೆ ತೆರವು ಮಾಡಿಸಿದ್ದು, ಕೆರೆಯ ಹೆಚ್ಚಿನ ಭೂಮಿ ಸಾರ್ವಜನಿಕ ರಸ್ತೆಯಾಗಿ ಬಳಕೆಯಾಗುತ್ತಿರುವುದನ್ನು ಗುರುತಿಸಿದ್ದಾರೆ. ಕೆರೆಯ ಉಳಿಕೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಸಂಪೂರ್ಣ 17.32 ಎಕರೆ ಕೆರೆಗೂ ಗಡಿ ಗುರುತು ಮಾಡುವ ಕಾರ್ಯ ಪ್ರಗತಿಯಲ್ಲಿದ್ದು,  ಇದು ರಾಜ್ಯದ ಇತರೆ ಕೆರೆ ಒತ್ತುವರಿದಾರರಿಗೂ ಎಚ್ಚರಿಕೆಯ ಗಂಟೆಯಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ನಿಯಮ ಸಡಿಲಿಕೆ : ವಿಶೇಷ ಸದನ ಸಮಿತಿ ಮಧ್ಯಂತರ ವರದಿ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪಗಣೇಶ ಹಬ್ಬದ ಆಚರಣೆ ಮತ್ತು ಮೆರವಣೆಗೆ ವೇಳೆ `DJ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಬೈಕ್ ರ್ಯಾಲಿ ನಿಷೇಧ.!ಜನಸ್ನೇಹಿ ಹಾಗೂ ಪರಿಣಾಮಕಾರಿಯಾಗಿ ‘ಸಹಾಯ 3.0’ ತಂತ್ರಾಂಶ ಅಭಿವೃದ್ಧಿ: ಕೃಷ್ಣ ಬೈರೇಗೌಡಪಿಎಂ-ಕಿಸಾನ್ ಯೋಜನೆ: ರೈತರಿಗೆ ಪ್ರತಿ ವರ್ಷ `ಬಯೋಮೆಟ್ರಿಕ್ ಇ-ಕೆವೈಸಿ’ ಕಡ್ಡಾಯಸಚಿವ ಸತೀಶ್ ಜಾರಕಿಹೊಳಿ ನಿವಾಸಗಳ ಮೇಲಿನ ED ದಾಳಿ ರಾಜಕೀಯ ಪ್ರೇರಿತ: ಸಚಿವ ರಘುಮೂರ್ತಿರಾಜ್ಯದಲ್ಲಿ ಕುಡಿಯುವ ನೀರು, ಮೇವಿನ ಕೊರತೆಗೆ ತಕ್ಷಣ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಇರಬಹುದೇ? ಪ್ರತ್ಯೇಕ ಕಾರ್ಡ್ ಪಡೆಯಲು ಇರುವ ನಿಯಮಗಳಿವು!ಈಶ್ವರ ಖಂಡ್ರೆ ಭೇಟಿ ಬೆನ್ನಲ್ಲೇ ಹಿರೇಹಳ್ಳಿ ಕೆರೆ ಒತ್ತುವರಿ ತೆರವುCM ಡಿ.ಕೆ. ಶಿವಕುಮಾರ್ ಸರ್ಕಾರದ 100 ದಿನಗಳ ಯಶಸ್ವಿ ಆಡಳಿತ : ನಾಳೆ ವಿಧಾಸೌಧದಲ್ಲಿ `ಶತಕದ ಪಥ, ಪ್ರಗತಿಯ ರಥ’ ವಿಶೇಷ ಕಾರ್ಯಕ್ರಮಬ್ಯಾಂಕ್ ಖಾತೆದಾರ ಮೃತಪಟ್ಟರೆ ನಾಮಿನಿ ಇಲ್ಲದಿದ್ದರೂ ಹಣ ಪಡೆಯಬಹುದೇ? ಇಲ್ಲಿದೆ RBI ನಿಯಮ