LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೋಷಿಯಲ್ ಮೀಡಿಯಾದಲ್ಲಿ ವಿದಾಯದ ಪೋಸ್ಟ್ ಹಾಕಿ ಕೊನೆಯುಸಿರೆಳೆದ ಖ್ಯಾತ ಪರ್ಫಾರ್ಮರ್ ಲುಲು ಲವ್‌ಬಾಟಮ್!

ಖ್ಯಾತ ಆನ್‌ಲೈನ್ ಕಂಟೆಂಟ್ ಕ್ರಿಯೇಟರ್ ಹಾಗೂ ಬರ್ಲೆಸ್ಕ್ ಪರ್ಫಾರ್ಮರ್ ಆಗಿ ಗುರುತಿಸಿಕೊಂಡಿದ್ದ ಲುಲು ಲವ್‌ಬಾಟಮ್ ಅಲಿಯಾಸ್ ಹಂಟರ್ ಹಾರ್ಡಿನ್ ತಮ್ಮ 31ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಲಾಸ್ ಏಂಜಲೀಸ್ ಕೌಂಟಿ ಮೆಡಿಕಲ್ ಎಕ್ಸಾಮಿನರ್ ಈ ಸಾವು ಸೆಪ್ಟೆಂಬರ್ 7ರಂದು ಸಂಭವಿಸಿದೆ ಎಂದು ದೃಢಪಡಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ನಿಧನಕ್ಕೂ ಮುನ್ನ ಲುಲು ಲವ್‌ಬಾಟಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಕೊನೆಯವರೆಗೂ ಹೋರಾಡಲು ಸಾಧ್ಯವಾಗದ್ದಕ್ಕೆ ಕ್ಷಮೆ ಕೋರುತ್ತಾ, ಎಲ್ಲರಿಗೂ ಪ್ರೀತಿಯ ವಿದಾಯ ಎಂದು ಬರೆದುಕೊಂಡಿದ್ದರು. ಜೊತೆಗೆ ವೈಯಕ್ತಿಕ ಜೀವನದಲ್ಲಿ ಎದುರಾದ ನೋವಿನ ಬಗ್ಗೆಯೂ ಅವರು ಸುಳಿವು ನೀಡಿದ್ದರು. ಈ ಪೋಸ್ಟ್ ಬೆನ್ನಲ್ಲೇ ಅವರ ಕೊಠಡಿಯಲ್ಲಿದ್ದ ಗೆಳೆಯರು ಪೊಲೀಸರಿಗೆ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಹಂಟರ್ ಹಾರ್ಡಿನ್ ಕೇವಲ ಬರ್ಲೆಸ್ಕ್ ಪರ್ಫಾರ್ಮರ್ ಮಾತ್ರವಲ್ಲದೆ, ತಮ್ಮ ಪ್ರೌಢಶಾಲಾ ದಿನಗಳಲ್ಲಿ ಫುಟ್‌ಬಾಲ್‌ನಲ್ಲಿ ಸ್ಟೇಟ್ ಚಾಂಪಿಯನ್ ಆಗಿ ಪ್ರಶಸ್ತಿ ಗೆದ್ದಿದ್ದರು. ಕ್ರೀಡಾರಂಗದಿಂದ ಗ್ಲಾಮರ್ ಲೋಕಕ್ಕೆ ಹೆಜ್ಜೆ ಇಟ್ಟಿದ್ದ ಇವರು, ಮಾನಸಿಕ ಖಿನ್ನತೆಯ ವಿರುದ್ಧ ಹೋರಾಡಲು ಕ್ರೀಡೆ ತಮಗೆ ನೆರವಾಯಿತು ಎಂದು ಹಿಂದೆ ಹೇಳಿಕೊಂಡಿದ್ದರು. ನಂತರ ಆನ್‌ಲೈನ್ ಲೋಕದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.

ಇವರ ಹಠಾತ್ ಅಗಲಿಕೆಗೆ ಅಭಿಮಾನಿಗಳು ಹಾಗೂ ಆನ್‌ಲೈನ್ ರಂಗದ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಪ್ರೀತಿ ಮತ್ತು ಸಕಾರಾತ್ಮಕತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಗೆಳೆಯನ ಅಗಲಿಕೆ ತೀವ್ರ ದುಃಖ ತಂದಿದೆ ಎಂದು ಅವರ ಆಪ್ತ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಾಧ್ಯಂತ ಗಣೇಶ ಹಬ್ಬಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್: ಜಿಲ್ಲೆಗಳಿಗೆ ಹಿರಿಯ ಅಧಿಕಾರಿಗಳನ್ನು ನಿಯೋಜನೆBIG NEWS: ಜೈಲಲ್ಲಿ ಪ್ರಜ್ವಲ್​​​​ ರೇವಣ್ಣ ಕರೆ ಮಾಡಿದ್ದು ಯಾರಿಗೆ ಗೊತ್ತಾ?ದೇವನಹಳ್ಳಿ ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರದಿಂದ ವರ್ಷಕ್ಕೆ 10,000 ಮಂದಿಗೆ ಆಧುನಿಕ ಕೌಶಲ್ಯ ತರಬೇತಿ: ರೋಹಿಣಿ ಸಿಂಧೂರಿBIG NEWS: ಇದು ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಡಿಕೆಶಿ ನೀಲನಕ್ಷೆ: ಆಡಳಿತದ 100ನೇ ದಿನಕ್ಕೆ 3 ಮಹಾಸಂಕಲ್ಪ, 9 ಯೋಜನೆಗಳ ಘೋಷಣೆಹೇಮಾವತಿ ಕಾಲುವೆಗೆ ಉರುಳಿದ ಅಕ್ಕಿ ಲಾರಿ: ಕ್ಲೀನರ್ ಸಾವು, ಚಾಲಕ ಗಂಭೀರಇದು 100 ದಿನಗಳ ಸಂಭ್ರಮಾಚರಣೆಯಲ್ಲ, ದೃಢ ಕರ್ನಾಟಕದ ಸಂಕಲ್ಪ: ಡಿಸಿಎಂ ಡಾ.ಜಿ.ಪರಮೇಶ್ವರ್BREAKING: ದಕ್ಷಿಣ ಭಾರತದಲ್ಲೂ ನೇಪಾಳದಂತ ದುರಂತ ಮರುಕಳಿಸಲಿದೆ: ಕೋಡಿಮಠ ಶ್ರೀಗಳ ಸ್ಪೋಟಕ ಭವಿಷ್ಯಭಾರತೀಯ ಮೂಲದ ದಂಪತಿಗಳಿಂದ ಅಮೆರಿಕದ ವಿಶ್ವವಿದ್ಯಾಲಯಕ್ಕೆ ₹167 ಕೋಟಿಗೂ ಅಧಿಕ ದೇಣಿಗೆ₹2.5 ಲಕ್ಷ ಸಾಲಕ್ಕೆ ಸಿವಿಲ್ಸ್ ವಿದ್ಯಾರ್ಥಿ ಬಲಿ; 19 ಮಂದಿಯ ಹೆಸರು ಬರೆದಿಟ್ಟು ಆತ್ಮಹತ್ಯೆ20 ದಿನ ಗೆಸ್ಟ್‌ಹೌಸ್‌ನಲ್ಲಿ ವಾಸವಿದ್ದ ನವವಿವಾಹಿತ ಜೋಡಿ ಕೊನೆಗೆ ಶವವಾಗಿ ಪತ್ತೆ! ನಡೆದಿದ್ದೇನು..?