LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗೌರಿ-ಗಣೇಶೋತ್ಸವ ಸಂಭ್ರಮ: ಉತ್ತಮ ಮಳೆ-ಬೆಳೆಗೆ ಶಾಸಕ ಕೆ.ಗೋಪಾಲಯ್ಯ ಪ್ರಾರ್ಥನೆ!

ಬೆಂಗಳೂರು: ರಾಜಧಾನಿಯ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಗೌರಿ-ಗಣೇಶ ಹಬ್ಬದ ಸಂಭ್ರಮಾಚರಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ವಿಶೇಷ ಪೂಜೆ ನೆರವೇರಿಸಿದರು. ನಂತರ ಮಾಧ್ಯಮ ಮಿತ್ರರೊಂದಿಗೆ ಸಹಭೋಜನದಲ್ಲಿ ಭಾಗಿಯಾದ ಅವರು, ಪತ್ರಕರ್ತರಿಗೆ ಹಾಗೂ ಕ್ಲಬ್‌ನ ಆಡಳಿತ ಮಂಡಳಿಗೆ ಹಬ್ಬದ ಶುಭ ಹಾರೈಸಿದರು.

ಬರಗಾಲದ ಆತಂಕ: ಕುಡಿಯುವ ನೀರಿನ ಅಭಾವದ ಎಚ್ಚರಿಕೆ

ಪೂಜಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದರು. "ನಾಲ್ಕೂ ಕಡೆ ಮಳೆಯ ಕೊರತೆಯಿಂದಾಗಿ ಜನರು ಕಂಗಾಲಾಗಿದ್ದು, ಭೀಕರ ಬರದ ಛಾಯೆ ಆವರಿಸಿದೆ. ಮಳೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೆಂಗಳೂರಿನ ನಾಗರಿಕರಿಗೆ ಕುಡಿಯುವ ನೀರಿನ ತತ್ವಾರ ಎದುರಾಗಲಿದೆ. ಅಂತರ್ಜಲ ಕುಸಿದು ಕೊಳವೆಬಾವಿಗಳು ಬತ್ತಿಹೋಗುವ ಅಪಾಯವಿದೆ. ಮನುಷ್ಯರಷ್ಟೇ ಅಲ್ಲದೆ, ಮೂಕ ಪ್ರಾಣಿ-ಪಕ್ಷಿಗಳೂ ನೀರಿಲ್ಲದೆ ಪರಿತಪಿಸುವ ದುಃಸ್ಥಿತಿ ನಿರ್ಮಾಣವಾಗಬಹುದು" ಎಂದು ಕಳವಳ ವ್ಯಕ್ತಪಡಿಸಿದರು.

news_1789385148_0_557.webp

ವಿಘ್ನನಿವಾರಕನಿಗೆ ವಿಶೇಷ ಪ್ರಾರ್ಥನೆ

ನಾಡಿನ ಕಷ್ಟ-ಕಾರ್ಪಣ್ಯಗಳನ್ನು ಕಳೆಯುವಂತೆ ಗಣೇಶನಲ್ಲಿ ಬೇಡಿಕೊಂಡ ಶಾಸಕರು, "ಗೌರಿ-ಗಣೇಶ ಹಬ್ಬದ ಈ ಪುಣ್ಯದಿನದಂದು ನಾಡಿನಾದ್ಯಂತ ಸಮೃದ್ಧ ಮಳೆಯಾಗಲಿ, ಕೆರೆ-ಕಟ್ಟೆಗಳು ಭರ್ತಿಯಾಗಲಿ ಹಾಗೂ ಅನ್ನದಾತನ ಮೊಗದಲ್ಲಿ ನಗು ಮೂಡುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ" ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಸೇರಿದಂತೆ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ಶಿವಮೊಗ್ಗದಲ್ಲಿ ಜಮೀನು ವಿಚಾರಕ್ಕೆ ಸಹೋದರರ ನಡುವೆ ಗಲಾಟೆ: ಚಿಕ್ಕಪ್ಪನಿಗೆ ಅಣ್ಣನ ಮಗನಿಂದ ಚಾಕು ಇರಿತ!!ಚಾಮರಾಜನಗರದಲ್ಲಿ ರೈತನ ಮೇಲೆ ಹುಲಿ ದಾಳಿ, ಕಾಲು ಭಾಗ ತಿಂದ ಸ್ಥಿತಿಯಲ್ಲಿ ಮೃತದೇಹ ಪತ್ತೆ!ಹುಬ್ಬಳ್ಳಿಯಲ್ಲಿ ಬಂಜಾರ ರೈಲ್ವೆ ನೌಕರರ ಬಳಗದಿಂದ ವಿಶಿಷ್ಟ ಗಣೇಶೋತ್ಸವ: ಸೇವಾಲಾಲ್ ಮಂದಿರದಲ್ಲಿ ಸಾಂಸ್ಕೃತಿಕ, ಭಕ್ತಿಯ ಕಲರವ!BIG BREAKING: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ, ನಟ ಓಂ ಪ್ರಕಾಶ್ ರಾವ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲುBIG BREAKING: ಖ್ಯಾತ ನಿರ್ದೇಶಕ, ನಟ ಓಂ ಪ್ರಕಾಶ್ ರಾವ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು'ಸಾಗರ ಪೊಲೀಸ್ ಠಾಣೆ'ಯಲ್ಲಿ ಅಪರೂಪದ ಗಣೇಶೋತ್ಸವ: ಆಚರಣೆ ಹಿಂದಿದೆ 6 ದಶಕಗಳ ರೋಚಕ ಇತಿಹಾಸ!ಗಣೇಶ ಹಬ್ಬದ ರಜೆ ಎಫೆಕ್ಟ್: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್!BREAKING: ಗಣೇಶ ಹಬ್ಬದಂದೇ ಘೋರ ದುರಂತ: ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕ್ಯೂಟ್, ಇಬ್ಬರಿಗೆ ಗಂಭೀರ ಗಾಯರಾಜ್ಯದಲ್ಲಿ ವಿದ್ಯುತ್ ಅಭಾವ: ನಗರಗಳಲ್ಲೂ ಲೋಡ್‌ಶೆಡ್ಡಿಂಗ್ ಸತ್ಯ ಒಪ್ಪಿಕೊಂಡ ಚೆಸ್ಕಾಂ ಅಧ್ಯಕ್ಷ!BREAKING: ಕುವೆಂಪು ವಿವಿಯಲ್ಲಿ ಅಧಿಕಾರಿಯ ಡಿಜಿಟಲ್ ಕೀ ಬಳಸಿ ಅಂಕ ತಿದ್ದಿದ ಇಬ್ಬರ ವಿರುದ್ಧ FIR ದಾಖಲು!