LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್ ಈ ಯೋಜನೆಯಲ್ಲಿ ಇಟ್ಟರೆ ಪ್ರತಿ ತಿಂಗಳು ಕೈಸೇರಲಿದೆ ₹20,000 ಆದಾಯ ಕಂಪ್ಲೀಟ್ ಲೆಕ್ಕಾಚಾರ ಇಲ್ಲಿದೆ

ಬೆಂಗಳೂರು: ನಿವೃತ್ತಿಯ ನಂತರ ಜೀವನ ನಿರ್ವಹಣೆ ಹಾಗೂ ನಿರಂತರ ಖರ್ಚುಗಳಿಗಾಗಿ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಎದುರು ನೋಡುತ್ತಿರುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ಸೂಪರ್ ಧಮಾಕಾ ಯೋಜನೆ ತಂದಿದೆ ಹೌದು, ಕೇಂದ್ರ ಸರ್ಕಾರದ ಪ್ರಮುಖ ಉಳಿತಾಯ ಯೋಜನೆಯಾದ ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme – SCSS) ಮೂಲಕ ಯಾವುದೇ ರಿಸ್ಕ್ ಇಲ್ಲದೆ ಪ್ರತಿ ತಿಂಗಳು ಬರೋಬ್ಬರಿ 20,000 ರೂಪಾಯಿ ನಿಶ್ಚಿತ ಆದಾಯ ಗಳಿಸುವ ಸುವರ್ಣ ಅವಕಾಶ ಇಲ್ಲಿದೆ.

ಪ್ರಸ್ತುತ ಈ ಅತ್ಯಂತ ಸುರಕ್ಷಿತ ಯೋಜನೆಯು ವಾರ್ಷಿಕ ಭಾರಿ ಶೇ. 8.2 ರಷ್ಟು ಬಡ್ಡಿ ದರವನ್ನು ನೀಡುತ್ತಿದ್ದು, ನಿವೃತ್ತರ ಪಾಲಿಗೆ ಇದು ನಿಜಕ್ಕೂ ವರದಾನವಾಗಿದೆ.

ತಿಂಗಳಿಗೆ ₹20,000 ಆದಾಯ ಪಡೆಯುವ ಅಸಲಿ ಲೆಕ್ಕಾಚಾರ ಇಲ್ಲಿದೆ:

SCSS ಯೋಜನೆಯಲ್ಲಿ ಬಡ್ಡಿಯನ್ನು ಪ್ರತಿ ತಿಂಗಳ ಬದಲಿಗೆ ಪ್ರತಿ ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) ನೇರವಾಗಿ ಠೇವಣಿದಾರರ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ. ಮಾಸಿಕ 20 ಸಾವಿರ ರೂಪಾಯಿ ಪಡೆಯಲು ನೀವು ಮಾಡಬೇಕಾದ ಹೂಡಿಕೆಯ ಗಣಿತ ಹೀಗಿದೆ:

ಮಾಸಿಕ ಆದಾಯದ ಗುರಿ: ₹20,000 ರೂಪಾಯಿ

ತ್ರೈಮಾಸಿಕ (3 ತಿಂಗಳಿಗೊಮ್ಮೆ) ಸಿಗುವ ಆದಾಯ: ₹60,000 ರೂಪಾಯಿ

ವಾರ್ಷಿಕ ಒಟ್ಟು ಆದಾಯ: ₹2.4 ಲಕ್ಷ ರೂಪಾಯಿ

ಪ್ರಸ್ತುತ ವಾರ್ಷಿಕ ಬಡ್ಡಿ ದರ: ಶೇ. 8.2

ನೀವು ಮಾಡಬೇಕಾದ ಒಟ್ಟು ಹೂಡಿಕೆ: ಅಂದಾಜು ₹29.27 ಲಕ್ಷ ರೂಪಾಯಿ (ಗಮನಿಸಿ: ಈ ಹೂಡಿಕೆ ಮೊತ್ತವು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಮಿತಿಯಾದ 30 ಲಕ್ಷ ರೂ. ಒಳಗೇ ಇದೆ)

ನಿಮ್ಮ ಖಾತೆಗೆ ಬಡ್ಡಿ ಹಣ ಯಾವಾಗ ಜಮಾ ಆಗುತ್ತದೆ?

ವರ್ಷದಲ್ಲಿ ಒಟ್ಟು 4 ಬಾರಿ ನೇರವಾಗಿ ನಿಮ್ಮ ಬ್ಯಾಂಕ್ ಅಥವಾ ಅಂಚೆ ಕಚೇರಿ ಉಳಿತಾಯ ಖಾತೆಗೆ ಬಡ್ಡಿಯ ಹಣ ಜಮಾ ಆಗುತ್ತದೆ:

ಏಪ್ರಿಲ್ 1 (ಜನವರಿ 1 ರಿಂದ ಮಾರ್ಚ್ 31 ರವರೆಗಿನ ಬಡ್ಡಿ)

ಜುಲೈ 1 (ಏಪ್ರಿಲ್ 1 ರಿಂದ ಜೂನ್ 30 ರವರೆಗಿನ ಬಡ್ಡಿ)

ಅಕ್ಟೋಬರ್ 1 (ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗಿನ ಬಡ್ಡಿ)

ಜನವರಿ 1 (ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗಿನ ಬಡ್ಡಿ)

ಹೂಡಿಕೆ ಮಿತಿ, ತೆರಿಗೆ ವಿನಾಯಿತಿ ಮತ್ತು ನಿಯಮಗಳು:

ಗರಿಷ್ಠ ಹೂಡಿಕೆ ಮಿತಿ: ಒಬ್ಬ ವ್ಯಕ್ತಿಯು ತನ್ನ ಹೆಸರಿನ ಎಲ್ಲಾ SCSS ಖಾತೆಗಳನ್ನು ಸೇರಿಸಿ ಗರಿಷ್ಠ 30 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಅರ್ಹ ದಂಪತಿಗಳು (ಪತಿ-ಪತ್ನಿ) ಪ್ರತ್ಯೇಕವಾಗಿ ಅಥವಾ ಜಂಟಿ ಖಾತೆ ತೆರೆಯಲು ಅವಕಾಶವಿದೆ.

ಅವಧಿ ಮತ್ತು ವಿಸ್ತರಣೆ: ಈ ಯೋಜನೆಯ ಮೆಚ್ಯೂರಿಟಿ ಅವಧಿ 5 ವರ್ಷಗಳು. ಇದಾದ ನಂತರ ಬಯಸಿದರೆ ಮತ್ತೊಂದು 3 ವರ್ಷಗಳವರೆಗೆ ಅವಧಿಯನ್ನು ವಿಸ್ತರಿಸಬಹುದು.

₹1.5 ಲಕ್ಷ ತೆರಿಗೆ ವಿನಾಯಿತಿ: ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80C ಅಡಿಯಲ್ಲಿ ಹಳೆಯ ತೆರಿಗೆ ಪದ್ಧತಿಯಲ್ಲಿ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.

TDS ಕಡಿತದಿಂದ ಬಚಾವ್ ಆಗುವುದು ಹೇಗೆ?: ಈ ಯೋಜನೆಯಿಂದ ಗಳಿಸುವ ಬಡ್ಡಿ ತೆರಿಗೆಗೆ ಒಳಪಡುತ್ತದೆ. ಒಂದು ವೇಳೆ ವಾರ್ಷಿಕ ಬಡ್ಡಿ ಮಿತಿ ಮೀರಿದರೆ ಟಿಡಿಎಸ್ ಕಡಿತವಾಗುವುದನ್ನು ತಪ್ಪಿಸಲು ಹಿರಿಯ ನಾಗರಿಕರು ನಮೂನೆ 15G/15H (Form 15G/15H) ಅನ್ನು ಸಲ್ಲಿಸಬೇಕಾಗುತ್ತದೆ.

ಖಾತೆ ಮುಚ್ಚುವ ನಿಯಮ: 5 ವರ್ಷಗಳ ಅಥವಾ ವಿಸ್ತರಿಸಿದ 3 ವರ್ಷಗಳ ಅವಧಿ ಮುಗಿದ ನಂತರ ಖಾತೆ ಮುಚ್ಚಬಹುದು. ಒಂದು ವೇಳೆ ಖಾತೆದಾರರು ಮೃತಪಟ್ಟರೆ, ಸಾವಿನ ಮರುದಿನದಿಂದ ಖಾತೆಯನ್ನು ಅಂತಿಮವಾಗಿ ಮುಚ್ಚುವವರೆಗೆ ‘ಅಂಚೆ ಕಚೇರಿ ಉಳಿತಾಯ ಖಾತೆಯ’ ಸಾಮಾನ್ಯ ಬಡ್ಡಿ ದರದಲ್ಲಿ ಹಣ ಪಾವತಿಯಾಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ