LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಾರಿಗೆ ಬೆಂಕಿ ತಗುಲಿ 200 ಮೇಕೆಗಳು, ಚಾಲಕ ಸಜೀವ ದಹನ ! ವೀಡಿಯೋ ವೈರಲ್ |WATCH VIDEO

ಮಹಬೂಬ್‌ನಗರ : ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮೇಕೆಗಳನ್ನು ಸಾಗಿಸುತ್ತಿದ್ದ ಡಿಸಿಎಂ ವಾಹನವು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ಭೀಕರ ಘಟನೆಯಲ್ಲಿ ವಾಹನದ ಚಾಲಕ ಸೇರಿದಂತೆ ಸುಮಾರು 200 ಮೇಕೆಗಳು ಸಜೀವ ದಹನವಾಗಿವೆ.

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ

ಅಧಿಕಾರಿಗಳ ಮಾಹಿತಿ ಪ್ರಕಾರ, ಗುರುವಾರ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಭೂತ್‌ಪುರ ಗ್ರಾಮದ ಸಮೀಪ ಈ ದುರ್ಘಟನೆ ನಡೆದಿದೆ. ಸುಮಾರು 150ರಿಂದ 200 ಮೇಕೆಗಳನ್ನು ಸಾಗಿಸುತ್ತಿದ್ದ ಡಿಸಿಎಂ ವಾಹನವು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ವಾಹನದ ಡೀಸೆಲ್ ಟ್ಯಾಂಕ್ ಒಡೆದುಹೋಗಿದ್ದು, ಬಳಿಕ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದ್ದು, ಚಾಲಕ ಸ್ಥಳದಲ್ಲೇ ಸಜೀವ ದಹನವಾಗಿದ್ದಾನೆ. ವಾಹನದಲ್ಲಿದ್ದ ಮೇಕೆಗಳೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿವೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದಿಂದ ಉಂಟಾದ ನಷ್ಟದ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

ಹೈದರಾಬಾದ್‌ನಲ್ಲೂ ಇತ್ತೀಚೆಗೆ ಅಗ್ನಿ ಅವಘಡ

ಇದಕ್ಕೂ ಮುನ್ನ ಆಗಸ್ಟ್ 23ರಂದು ಹೈದರಾಬಾದ್‌ನ ಗುಡಿಮಲ್ಕಾಪುರ ಪ್ರದೇಶದಲ್ಲಿರುವ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಆರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಅದೇ ರೀತಿ ಮೇ 14ರಂದು ಹೈದರಾಬಾದ್‌ನ ಹಯತ್‌ನಗರ ಪ್ರದೇಶದಲ್ಲಿರುವ ಪೀಠೋಪಕರಣಗಳ ಅಂಗಡಿಯೊಂದರಲ್ಲೂ ಬೆಂಕಿ ಕಾಣಿಸಿಕೊಂಡಿತ್ತು. ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಸುದೀರ್ಘ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದವು. ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೆ ವ್ಯಾಪಿಸದಂತೆ ಅಗ್ನಿಶಾಮಕ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಈ ಘಟನೆಯಲ್ಲೂ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

ಸ್ನೇಹಿತರ ನಡುವೆ ಜಗಳ.. ಯುವಕನ ಮೇಲೆ ಆಸಿಡ್ ದಾಳಿ

ತೆಲಂಗಾಣ ; ಯಾದಾದ್ರಿ ಭುವನಗಿರಿ ಜಿಲ್ಲೆಯ ಚೌಟುಪ್ಪಲ್ ಪಟ್ಟಣದಲ್ಲಿ ದಾರುಣ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿದ್ದ ವೇಳೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, 19 ವರ್ಷದ ಯುವಕನ ಮೇಲೆ ಸ್ನೇಹಿತರು ರಾಸಾಯನಿಕ ದ್ರವ ಸುರಿದು ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ಹೈದರಾಬಾದ್‌ನ ಉಸ್ಮಾನಿಯಾ ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಚೌಟುಪ್ಪಲ್ ಪುರಸಭೆ ವ್ಯಾಪ್ತಿಯ ವಲಿಗೊಂಡ ರಸ್ತೆಯ ನಿವಾಸಿ ಹಾಗೂ ಜೆಸಿಬಿ ಚಾಲಕ ಶೇಕ್ ಗೌಸ್ (19) ಅವರನ್ನು ಸೋಮವಾರ (ಸೆಪ್ಟೆಂಬರ್ 7) ಮಧ್ಯಾಹ್ನ 12.30ರ ಸುಮಾರಿಗೆ ಅವರ ಸ್ನೇಹಿತ ಬುಡ್ಡಾ ವಿನಯ್ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಎಲ್ಲರೂ ಮಾರ್ಕಂಡೇಯ ನಗರದ ಗಂಗೋತ್ರಿ ವಾಟರ್ ಪ್ಲಾಂಟ್ ಸಮೀಪ ಮದ್ಯಪಾನ ಮಾಡಿದ್ದಾರೆ.

ಈ ವೇಳೆ ಸ್ನೇಹಿತರ ನಡುವೆ ತೀವ್ರ ಜಗಳ ನಡೆದಿದೆ. ಜಗಳದ ಬಳಿಕ ಗೌಸ್ ಮೇಲೆ ಇತರ ಸ್ನೇಹಿತರು ಮನಬಂದಂತೆ ಹಲ್ಲೆ ನಡೆಸಿದ್ದು, ಬಳಿಕ ಅವರ ಮೇಲೆ ರಾಸಾಯನಿಕ ದ್ರವವನ್ನು ಸುರಿಸಿದ್ದಾರೆ. ಪರಿಣಾಮ ಗೌಸ್‌ಗೆ ದೇಹದ ಹಲವು ಭಾಗಗಳಲ್ಲಿ ಗಂಭೀರ ಸುಟ್ಟ ಗಾಯಗಳಾಗಿವೆ.

ದಾಳಿಯಿಂದ ಗೌಸ್ ಅವರ ಎಡ ಕೆನ್ನೆ, ತಲೆ, ಕಿವಿ, ಎಡಭಾಗದ ಎದೆ, ಭುಜಗಳು, ಎರಡೂ ಕೈಗಳು ಹಾಗೂ ತೊಡೆಗಳಿಗೆ ತೀವ್ರ ಗಾಯಗಳಾಗಿವೆ. ದಾಳಿಯ ಬಳಿಕ ಗಾಯಗೊಂಡಿದ್ದ ಗೌಸ್ ತಮ್ಮ ಸಹೋದರ ಶೇಕ್ ಹೈಮದ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಸಹೋದರ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ತಂದೆ ಹಾಗೂ ಇತರ ಸ್ನೇಹಿತರನ್ನು ತಕ್ಷಣ ಘಟನಾ ಸ್ಥಳಕ್ಕೆ ಕಳುಹಿಸಿದ್ದಾರೆ.

ತೀವ್ರ ಭಯಗೊಂಡಿದ್ದ ಗೌಸ್ ಅಲ್ಲಿಂದ ಓಡಿ, ಕೆಸಿಆರ್ ಕಾಲನಿಯ ಭಾರತ್ ಪೆಟ್ರೋಲ್ ಬಂಕ್ ಸಮೀಪವಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ಅಡಗಿಕೊಂಡಿದ್ದಾರೆ. ಬಳಿಕ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಅವರನ್ನು ಚೌಟುಪ್ಪಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗೌಸ್ ಅವರ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಉಸ್ಮಾನಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.

ಘಟನೆ ಕುರಿತು ಗೌಸ್ ಅವರ ಸಹೋದರ ಶೇಕ್ ಹೈಮದ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೌಟುಪ್ಪಲ್ ಪೊಲೀಸ್ ಇನ್ಸ್‌ಪೆಕ್ಟರ್ ಜಿ. ಮನ್ಮಧ್ ಕುಮಾರ್ ಅವರು ಪ್ರಕರಣದ ಕುರಿತು ಸಮಗ್ರ ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ದಾಳಿಗೆ ಸಂಬಂಧಿಸಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

📄 Official Documents / Supporting Documents

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದುಲೀಪ್ ಟ್ರೋಫಿ ಜಯಿಸಿದ ಈಸ್ಟ್ ಝೋನ್: ಇಶಾನ್ ಕಿಶನ್ ಹಾಗೂ ವೈಭವ್ ಸೂರ್ಯವಂಶಿ ಭರ್ಜರಿ ಡ್ಯಾನ್ಸ್ ವೈರಲ್GOOD NEWS: ಇನ್ಮುಂದೆ 'ವಾಟ್ಸಾಪ್‌'ನಲ್ಲೇ ಸಿಗಲಿದೆ 'KSRTC ಬಸ್' ಟಿಕೆಟ್: ಜಸ್ಟ್ ಹೀಗೆ ಮಾಡಿ ಸಾಕು! | KSRTC Bus TicketSHOCKING: ರಾಜ್ಯದಲ್ಲೊಂದು ಮನಕಲಕುವ ಘಟನೆ: ಮೂರು ವರ್ಷದ ಹೆಣ್ಣುಮಗುವನ್ನು ಬರೆ, ಥಳಿಸಿ ಕೊಂದ ಮಲತಾಯಿGOOD NEWS: 'ಬಸ್-ಮೆಟ್ರೋ'ಗೆ ಒಂದೇ ಡಿಜಿಟಲ್ ವೇದಿಕೆ: 'ನಮ್ಮ BMTC ಮೊಬೈಲ್ ಆಪ್ 2.0' ಲೋಕಾರ್ಪಣೆಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ವಿಜಯ್ ದೇವರಕೊಂಡ ಕರೆ: ಮಣ್ಣಿನ ಗಣಪತಿ ಬಳಸಿ ಎಂದ ನಟ!ವಿನಯ್ ರಾಜ್‌ಕುಮಾರ್ ನಟನೆಯ ‘ಸಿಟಿ ಲೈಟ್ಸ್’ ಚಿತ್ರದ ಟ್ರೇಲರ್ ಸೆಪ್ಟೆಂಬರ್ 13ಕ್ಕೆ ರಿಲೀಸ್!ಏಳು ವರ್ಷಗಳ ಬಳಿಕ ಭಾರತಕ್ಕೆ ಷಿ ಜಿನ್‌ಪಿಂಗ್; ಮೋದಿ–ಷಿ ಮಾತುಕತೆಗೆ ವೇದಿಕೆ ಸಜ್ಜುಐಫೋನ್ ಡ್ಯುಯೊ ದರಕ್ಕೆ ತಂತ್ರಜ್ಞಾನ ಲೋಕ ತಬ್ಬಿಬ್ಬು: ಆಪಲ್ ನಿರ್ಧಾರಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ ಗೀಕಿ ರಂಜಿತ್!ರಾಜ್ಯಾಧ್ಯಂತ ಗಣೇಶ ಹಬ್ಬಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್: ಜಿಲ್ಲೆಗಳಿಗೆ ಹಿರಿಯ ಅಧಿಕಾರಿಗಳನ್ನು ನಿಯೋಜನೆBIG NEWS: ಜೈಲಲ್ಲಿ ಪ್ರಜ್ವಲ್​​​​ ರೇವಣ್ಣ ಕರೆ ಮಾಡಿದ್ದು ಯಾರಿಗೆ ಗೊತ್ತಾ?