LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನಲ್ಲಿ ತುಂಬು ಗರ್ಭಿಣಿಯ ಯೋಗಾಸನ 39 ವಾರದಲ್ಲೂ ಚಕ್ರಾಸನ ಮಾಡಿದ ಮಹಿಳೆ ವಿಡಿಯೋ ವೈರಲ್: ನೆಟ್ಟಿಗರಲ್ಲಿ ಶುರುವಾಯ್ತು ಭಾರಿ ಪರ-ವಿರೋಧ ಫೈಟ್

ಬೆಂಗಳೂರು: ಇಂಟರ್ನೆಟ್ ಜಗತ್ತಿನಲ್ಲಿ ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನ ತುಂಬು ಗರ್ಭಿಣಿ ಮಹಿಳೆಯೊಬ್ಬರ ವಿಡಿಯೋ ಬಿರುಗಾಳಿ ಎಬ್ಬಿಸಿದೆ. 9 ತಿಂಗಳ (39 ವಾರಗಳ) ಪೂರ್ಣ ಗರ್ಭಿಣಿಯಾಗಿರುವ ಬೆಂಗಳೂರಿನ ಮಹಿಳೆಯೊಬ್ಬರು ಅತ್ಯಂತ ಕಠಿಣವಾದ ಯೋಗಾಸನಗಳನ್ನು ಸಲೀಸಾಗಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.ಮಹಾವಸ್ಥೆಯ ಅಂತಿಮ ಹಂತದಲ್ಲೂ ಮಹಿಳೆ ಪ್ರದರ್ಶಿಸಿದ ಅಪ್ರತಿಮ ದೈಹಿಕ ಶಕ್ತಿ ಮತ್ತು ಶಿಸ್ತನ್ನು ಕಂಡು ಲಕ್ಷಾಂತರ ನೆಟ್ಟಿಗರು ಕಣ್ಣರಳಿಸಿದ್ದಾರೆ

https://www.instagram.com/reel/DZEwOSTTfbW/?utm_source=ig_web_copy_link&igsh=NTc4MTIwNjQ2YQ==

ಸೀರೆ ಉಟ್ಟು ‘ಚಕ್ರಾಸನ’ ಮಾಡಿದ ಶಶಿ ಪ್ರಭಾ: ವಿಡಿಯೋಗೆ 21 ಮಿಲಿಯನ್ ವ್ಯೂಸ್

ವೃತ್ತಿಯಲ್ಲಿ ಯೋಗ ಶಿಕ್ಷಕಿಯಾಗಿರುವ ಬೆಂಗಳೂರಿನ ಶಶಿ ಪ್ರಭಾ ದ್ವಿವೇದಿ ಎಂಬುವವರೇ ಈ ಸಾಹಸದ ವಿಡಿಯೋ ಹಂಚಿಕೊಂಡ ಧೀರ ಮಹಿಳೆ. ಅವರು ಸಾಂಪ್ರದಾಯಿಕವಾಗಿ ಸೀರೆ ಉಟ್ಟುಕೊಂಡು, ಗರ್ಭಾವಸ್ಥೆಯ ಅತ್ಯಂತ ಸೂಕ್ಷ್ಮ ಹಾಗೂ ಕೊನೆಯ ಹಂತದಲ್ಲಿ ಅತ್ಯಂತ ಕಠಿಣವಾದ ‘ಚಕ್ರಾಸನ’ ಸೇರಿದಂತೆ ಹಲವು ಯೋಗಾಸನಗಳನ್ನು ಯಾರಿಗೂ ಗಾಬರಿಯಾಗುವಂತೆ ಅತ್ಯಂತ ಸುಲಭವಾಗಿ ಪ್ರದರ್ಶಿಸಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಧೂಳೆಬ್ಬಿಸುತ್ತಿದ್ದು, ಈಗಾಗಲೇ ಬರೋಬ್ಬರಿ 2.1 ಕೋಟಿಗೂ (21 Million) ಹೆಚ್ಚು ವೀಕ್ಷಣೆಗಳನ್ನು (Views) ಪಡೆದುಕೊಂಡು ಮುನ್ನುಗ್ಗುತ್ತಿದೆ.

ಇದು ನನ್ನ ವರ್ಷಗಳ ಪರಿಶ್ರಮ, ದಯವಿಟ್ಟು ಯಾರೂ ಅನುಕರಿಸಬೇಡಿ – ಶಶಿ ಪ್ರಭಾ ಎಚ್ಚರಿಕೆ

ವಿಡಿಯೋ ವೈರಲ್ ಆಗಿ ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಂತೆ ಯೋಗ ಶಿಕ್ಷಕಿ ಶಶಿ ಪ್ರಭಾ ಅವರು ವಿಡಿಯೋದ ಶೀರ್ಷಿಕೆಯಲ್ಲಿ ಸುದೀರ್ಘ ಸ್ಪಷ್ಟನೆ ಹಾಗೂ ವೀಕ್ಷಕರಿಗೆ ಕಠಿಣ ಮುನ್ನೆಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

39 ವಾರಗಳು, 9 ತಿಂಗಳು. ಇದು ನನ್ನ ವಾಸ್ತವ. ಜನ ಕೇವಲ ಆಸನಗಳನ್ನು ನೋಡುತ್ತಾರೆ. ಆದರೆ ಇದರ ಹಿಂದೆ ನನ್ನ ದೇಹವನ್ನು ನಾನು ಸಜ್ಜುಗೊಳಿಸಲು, ಶಕ್ತಿ ಮತ್ತು ತಾಳ್ಮೆ ಬೆಳೆಸಿಕೊಳ್ಳಲು ವರ್ಷಗಟ್ಟಲೆ ನಡೆಸಿದ ಕಠಿಣ ಪರಿಶ್ರಮ ಅವರಿಗೆ ಕಾಣುವುದಿಲ್ಲ. ಗರ್ಭಾವಸ್ಥೆಯು ಯಾರ ಮುಂದೆಯೂ ಏನನ್ನೋ ಸಾಬೀತುಪಡಿಸುವ ಸಮಯವಲ್ಲ. ನನ್ನ ದೇಹಕ್ಕೆ ಆರಾಮದಾಯಕ ಎನಿಸುವ ರೀತಿಯಲ್ಲಿ ನಾನು ಚಟುವಟಿಕೆಯಿಂದ ಇರಲು ಬಯಸುತ್ತೇನೆ. ಪ್ರತಿಯೊಬ್ಬರ ಗರ್ಭಾವಸ್ಥೆಯೂ ಭಿನ್ನವಾಗಿರುತ್ತದೆ. ಆದ್ದರಿಂದ ದಯವಿಟ್ಟು ಯಾರೂ ಇದನ್ನು ಅನುಕರಿಸಬೇಡಿ, ಯಾವುದೇ ವ್ಯಾಯಾಮ ಮಾಡುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ,” ಎಂದು ಅವರು ಬರೆದುಕೊಂಡಿದ್ದಾರೆ.

ನೆಟ್ಟಿಗರ ಭಾರಿ ಆಕ್ರೋಶ ಮತ್ತು ಪರ-ವಿರೋಧ ವಾರ್

ಕಟುವಾಗಿ ಟೀಕಿಸಿದ ವಿರೋಧಿಗಳು (Critics)

ವೀವ್ಸ್ ಕ್ರೇಜ್ ವಿರುದ್ಧ ಆಕ್ರೋಶ: “ಇದು ಮಗುವಿಗೆ ಸುರಕ್ಷಿತವೇ? ಕೇವಲ ಸೋಶಿಯಲ್ ಮೀಡಿಯಾ ವೀವ್ಸ್‌ಗಾಗಿ (Views) ಮತ್ತು ಕಂಟೆಂಟ್‌ಗಾಗಿ ಮುನ್ನೆಚ್ಚರಿಕೆಯನ್ನು ಮರೆತು ಹೀಗೆ ಮಾಡಬೇಡಿ, ಮಗುವಿನ ಜೀವದ ಬಗ್ಗೆ ಯೋಚಿಸಿ,” ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ತೀವ್ರ ಆಕ್ಷೇಪ ಎತ್ತಿದ್ದಾರೆ.

ಸಂಪ್ರದಾಯದ ಪ್ರಶ್ನೆ: ಮತ್ತೊಬ್ಬ ಮಹಿಳೆ ಪ್ರತಿಕ್ರಿಯಿಸಿ, “ನಿಮ್ಮ ಪ್ರತಿಭೆಯನ್ನು ಗೌರವಿಸುತ್ತೇನೆ, ಆದರೆ ಗರ್ಭಾವಸ್ಥೆಯನ್ನು ಜಗತ್ತಿನ ಮುಂದೆ ಹೀಗೆ ಪ್ರದರ್ಶಿಸುವುದು ನಮ್ಮ ಸಂಸ್ಕೃತಿಯಲ್ಲ. ಒಬ್ಬ ಗರ್ಭಿಣಿಯಾಗಿ ನನಗೆ ಇದು ಅಸೌಕರ್ಯ ತಂದಿದೆ,” ಎಂದಿದ್ದಾರೆ.

ಕಾಂಪ್ಲಿಕೇಷನ್ ಭೀತಿ: “ಇಂತಹ ಸಾಹಸಗಳನ್ನು ಟ್ರೆಂಡ್ ನೋಡಿ ಅನುಕರಿಸುವ ಬಹುತೇಕರಿಗೆ ಕೊನೆಯಲ್ಲಿ ಹೆರಿಗೆ ಕಾಂಪ್ಲಿಕೇಟ್ ಆಗುತ್ತದೆ. ದೈಹಿಕ ಆರೋಗ್ಯ ಮುಖ್ಯ, ಆದರೆ ಮಗುವಿನ ಆರೋಗ್ಯಕ್ಕಿಂತ ಹೆಚ್ಚಲ್ಲ,” ಎಂದು ಪ್ರಜ್ಞಾವಂತರು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಬಲಕ್ಕೆ ನಿಂತ ಫಿಟ್‌ನೆಸ್ ಪ್ರೇಮಿಗಳು (Supporters)

ಕಂಫರ್ಟ್ ಮುಖ್ಯ: “ಯೋಗಾಸನಗಳು ಹೊರಗಿನವರಿಗೆ ಕಷ್ಟ ಅನಿಸಿದರೂ, ವರ್ಷಗಳಿಂದ ಅಭ್ಯಾಸ ಇರುವ ಅವರಿಗೆ ಇದು ಸುಲಭವಾಗಿರಬಹುದು. ಗರ್ಭಿಣಿಯರು ತಮಗೆ ಕಂಫರ್ಟಬಲ್ ಎನಿಸುವ ಆಸನಗಳನ್ನು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ,” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ

ಅನುಭವಕ್ಕೆ ಜೈ ಅಂದ ನೆಟ್ಟಿಗರು: “ಅವರು ವೃತ್ತಿಪರ ಯೋಗ ಶಿಕ್ಷಕಿ. ಅನುಭವವಿರುವ ಅಥ್ಲೀಟ್‌ಗಳು ಮತ್ತು ಫಿಟ್‌ನೆಸ್ ವೃತ್ತಿಪರರು ಸೂಕ್ತ ಮಾರ್ಗದರ್ಶನದಲ್ಲಿ 39ನೇ ವಾರದಲ್ಲೂ ವರ್ಕೌಟ್ ಮಾಡುವುದು ಅಥವಾ ವೇಯ್ಟ್ ಲಿಫ್ಟ್ ಮಾಡುವುದು ತೀರಾ ಸಾಮಾನ್ಯ. ಈ ವಿಡಿಯೋದಿಂದ ಹಲವರು ಪ್ರೇರೇಪಿತರಾಗಬಹುದು,” ಎಂದು ಒಬ್ಬರು ಬೆಂಬಲಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ