ಬೆಂಗಳೂರು: ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳನ್ನು ತಳಮಟ್ಟದಿಂದ ಮತ್ತಷ್ಟು ಚುರುಕುಗೊಳಿಸಲು ಮತ್ತು ಬೂತ್ ಮಟ್ಟದವರೆಗೂ ನಿರಂತರ ಸಂಪರ್ಕ ಜಾಲ ರೂಪಿಸಲು ನೂತನ ಪರಿಕಲ್ಪನೆಯ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪಿಸಲಾಗಿದ್ದು, ಈ ಕೇಂದ್ರದ ನಿರ್ವಹಣೆಗೆ ಪ್ರಮುಖ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ದೇಶಾದ್ಯಂತ ಪಕ್ಷವನ್ನು ಬಲಪಡಿಸಲು ಆರಂಭಿಸಿರುವ ‘ಕನೆಕ್ಟ್ ಕಾಂಗ್ರೆಸ್ ಸೆಂಟರ್’ ಮಾದರಿಯಲ್ಲೇ ಕರ್ನಾಟಕದಲ್ಲೂ ಈ ವಿಶೇಷ ಕೇಂದ್ರವನ್ನು ಸಜ್ಜುಗೊಳಿಸಲಾಗಿದೆ.
ರಾಜ್ಯ ಮಟ್ಟದಿಂದ ಹಿಡಿದು ಬೂತ್ ಮಟ್ಟದವರೆಗಿನ ನಾಯಕರೊಂದಿಗೆ ಸೌಹಾರ್ದಯುತ ಸಮನ್ವಯ ಕಾಯ್ದುಕೊಳ್ಳುವುದು, ನಿರಂತರ ಸಂವಹನ ನಡೆಸುವುದು ಹಾಗೂ ಅಗತ್ಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಮುನ್ನಡೆಸುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದೆ.
ನೇಮಕಗೊಂಡ ನೂತನ ಪದಾಧಿಕಾರಿಗಳು:
-
ಅಧ್ಯಕ್ಷರು: ಸಿ. ಬಿ. ಶಶಿಧರ್ (ಟುಡಾ), ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ (ತಿಪಟೂರು, ತುಮಕೂರು ಜಿಲ್ಲೆ)
-
ಸಹ-ಅಧ್ಯಕ್ಷರು: ಕಿರಣ್ ಜಿತ್ ಎಸ್. ಎಂ. (ಡಾಲರ್ಸ್ ಕಾಲೋನಿ, ಬೆಂಗಳೂರು)
-
ಸಂಚಾಲಕರು: ಶ್ರೀಮತಿ ವಸಂತ ಕವಿತ (ಕೆ.ಸಿ.ರೆಡ್ಡಿ) (ಸದಾಶಿವನಗರ, ಬೆಂಗಳೂರು)
-
ಸಂಚಾಲಕರು: ಧ್ರುವ ಜತ್ತಿ (ಸದಾಶಿವನಗರ, ಬೆಂಗಳೂರು ಉತ್ತರ)
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಅನುಮೋದನೆಯೊಂದಿಗೆ ಈ ಆದೇಶ ಹೊರಬಿದ್ದಿದ್ದು, ನೂತನ ತಂಡವು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ನಡುವಿನ ಕೊಂಡಿಯಾಗಿ ಕೆಲಸ ನಿರ್ವಹಿಸಲಿದೆ.
