LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಸೇರಿ : 60ರ ಬಳಿಕ ಪ್ರತಿ ತಿಂಗಳು ₹5,000 ಪಿಂಚಣಿ ಗ್ಯಾರಂಟಿ..!

ಸಾಮಾನ್ಯ ಜನರ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದದ್ದು Atal Pension Yojana (ಅಟಲ್ ಪೆನ್ಷನ್ ಯೋಜನೆ – APY). ಈ ಯೋಜನೆಯ ಮೂಲಕ 60 ವರ್ಷಗಳ ಬಳಿಕ ಪ್ರತಿ ತಿಂಗಳು ₹5,000 ವರೆಗೆ ಪಿಂಚಣಿ ಪಡೆಯುವ ಅವಕಾಶವಿದೆ.

ತಿಂಗಳಿಗೆ ₹5,000 ಪಿಂಚಣಿ

ಅಟಲ್ ಪೆನ್ಷನ್ ಯೋಜನೆಯಲ್ಲಿ ನೀವು ಪಾವತಿಸುವ ಮಾಸಿಕ ಪ್ರೀಮಿಯಂ ಆಧರಿಸಿ ಪಿಂಚಣಿ ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ₹1,000 ರಿಂದ ₹5,000 ವರೆಗೆ ಮಾಸಿಕ ಪಿಂಚಣಿ ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚು ಪಿಂಚಣಿ ಬೇಕಿದ್ದರೆ ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಪ್ರಸ್ತುತ ದೇಶದಾದ್ಯಂತ ಸುಮಾರು 9 ಕೋಟಿಗೂ ಹೆಚ್ಚು ಜನರು ಈ ಯೋಜನೆಯಲ್ಲಿ ಸೇರಿದ್ದಾರೆ. ಈ ಯೋಜನೆಯನ್ನು Pension Fund Regulatory and Development Authority (PFRDA) ನಿರ್ವಹಿಸುತ್ತದೆ.

ಯಾರು ಅರ್ಹರು?

  • 18 ರಿಂದ 40 ವರ್ಷದೊಳಗಿನ ಭಾರತೀಯ ನಾಗರಿಕರು
  • ಉಳಿತಾಯ ಬ್ಯಾಂಕ್ ಖಾತೆ ಹೊಂದಿರಬೇಕು
  • ಸರ್ಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿ ಮೂಲಕ ಅರ್ಜಿ ಸಲ್ಲಿಸಬಹುದು
  • ಆದಾಯ ತೆರಿಗೆ ಪಾವತಿಸುವವರಿಗೆ ಈ ಯೋಜನೆಯಲ್ಲಿ ಸೇರ್ಪಡೆಗೆ ಅವಕಾಶ ಇರುವುದಿಲ್ಲ

ಕುಟುಂಬಕ್ಕೂ ಭದ್ರತೆ

  • ಪಿಂಚಣಿ ಪಡೆಯುತ್ತಿರುವ ವ್ಯಕ್ತಿ ಮೃತಪಟ್ಟರೆ, ಜೀವನ ಸಂಗಾತಿಗೆ ಪಿಂಚಣಿ ಮುಂದುವರಿಯುತ್ತದೆ.
  • ಗಂಡ-ಹೆಂಡತಿ ಇಬ್ಬರೂ ಮೃತಪಟ್ಟರೆ, ನಾಮಿನಿಗೆ ಕಾರ್ಪಸ್ ಮೊತ್ತ ನೀಡಲಾಗುತ್ತದೆ.

ಪ್ರೀಮಿಯಂ ಎಷ್ಟು?

18ನೇ ವಯಸ್ಸಿನಲ್ಲಿ ಸೇರಿದರೆ:

60 ವರ್ಷ ವಯಸ್ಸಿನವರೆಗೆ ಪ್ರೀಮಿಯಂ ಪಾವತಿಸಬೇಕು.

  • ₹1,000 ಪಿಂಚಣಿಗೆ ಕಡಿಮೆ ಪ್ರೀಮಿಯಂ
  • ₹5,000 ಪಿಂಚಣಿಗೆ ತಿಂಗಳಿಗೆ ಸುಮಾರು ₹210 ಪಾವತಿಸಬೇಕು

40ನೇ ವಯಸ್ಸಿನಲ್ಲಿ ಸೇರಿದರೆ:

20 ವರ್ಷಗಳ ಕಾಲ ಪ್ರೀಮಿಯಂ ಪಾವತಿಸಬೇಕು.

  • ₹1,000 ಪಿಂಚಣಿಗೆ ಕಡಿಮೆ ಪ್ರೀಮಿಯಂ
  • ₹5,000 ಪಿಂಚಣಿಗೆ ತಿಂಗಳಿಗೆ ಸುಮಾರು ₹1,454 ಪಾವತಿಸಬೇಕು

ನಾಮಿನಿಗೆ ಸಿಗುವ ಕಾರ್ಪಸ್ ಮೊತ್ತ

  • ₹1,000 ಪಿಂಚಣಿ ಆಯ್ಕೆ ಮಾಡಿದರೆ : ₹1.70 ಲಕ್ಷ
  • ₹2,000 ಪಿಂಚಣಿ ಆಯ್ಕೆ ಮಾಡಿದರೆ : ₹3.40 ಲಕ್ಷ
  • ₹5,000 ಪಿಂಚಣಿ ಆಯ್ಕೆ ಮಾಡಿದರೆ : ₹8.50 ಲಕ್ಷ

ವೃದ್ಧಾಪ್ಯದಲ್ಲಿ ನಿಯಮಿತ ಆದಾಯದ ಭದ್ರತೆ ಬಯಸುವವರಿಗೆ ಅಟಲ್ ಪೆನ್ಷನ್ ಯೋಜನೆ ಉತ್ತಮ ಆಯ್ಕೆಯಾಗಿದೆ. ಕಡಿಮೆ ಪ್ರೀಮಿಯಂ ಪಾವತಿಸಿ, 60 ವರ್ಷಗಳ ಬಳಿಕ ಖಚಿತ ಪಿಂಚಣಿ ಹಾಗೂ ಕುಟುಂಬಕ್ಕೆ ಆರ್ಥಿಕ ರಕ್ಷಣೆ ಪಡೆಯಬಹುದು. ಇದು ಸಾಮಾನ್ಯ ಜನರಿಗಾಗಿ ಕೇಂದ್ರ ಸರ್ಕಾರ ನೀಡಿರುವ ಅತ್ಯಂತ ಉಪಯುಕ್ತ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ