LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : EPF ನಿಯಮಗಳಲ್ಲಿ ಮಹತ್ವದ ಬದಲಾವಣೆ : ವರ್ಷಕ್ಕೆ 2 ಬಾರಿ ಮಾತ್ರ ಹಣ ಹಿಂಪಡೆಯಲು ಅವಕಾಶ

ಉದ್ಯೋಗಿಗಳ ಭವಿಷ್ಯ ನಿಧಿ (EPF), ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಹಾಗೂ ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ (EDLI) ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಹೊಸ ಸಾಮಾಜಿಕ ಭದ್ರತಾ ಸಂಹಿತೆಯ ಭಾಗವಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ-2026, ಉದ್ಯೋಗಿಗಳ ಪಿಂಚಣಿ ಯೋಜನೆ-2026 ಹಾಗೂ ಉದ್ಯೋಗಿಗಳ ಠೇವಣಿ ವಿಮೆ ಯೋಜನೆ-2026 ಅನ್ನು ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಅಧಿಕೃತ ಗಜೆಟ್ ಅಧಿಸೂಚನೆ ಹೊರಡಿಸಿದೆ. ಈ ಹೊಸ ನಿಯಮಗಳ ಪ್ರಕಾರ ಪಿಎಫ್ ಖಾತೆಯಿಂದ ಹಣ ಹಿಂಪಡೆಯುವ (Withdrawal) ಪ್ರಕ್ರಿಯೆಯನ್ನು ಇನ್ನಷ್ಟು ನಿಯಂತ್ರಿತಗೊಳಿಸಲಾಗಿದ್ದು, ಕೆಲವು ಹೊಸ ಷರತ್ತುಗಳನ್ನು ಕಡ್ಡಾಯಗೊಳಿಸಲಾಗಿದೆ.

ವರ್ಷಕ್ಕೆ ಎರಡು ಬಾರಿ ಮಾತ್ರ ಭಾಗಶಃ ಹಣ ಹಿಂಪಡೆಯಲು ಅವಕಾಶ

ಹೊಸ ನಿಯಮಗಳ ಪ್ರಕಾರ, ಪಿಎಫ್ ಖಾತೆಯಿಂದ ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಭಾಗಶಃ (Partial Withdrawal) ಹಣ ಹಿಂಪಡೆಯಲು ಅವಕಾಶ ಇರುತ್ತದೆ. ಇದುವರೆಗೆ ಅನಾರೋಗ್ಯದ ಕಾರಣ ನೀಡಿ ಹಲವು ಬಾರಿ ಹಣ ಪಡೆಯಬಹುದಾಗಿದ್ದರೆ, ಇನ್ನು ಮುಂದೆ ಆ ಅವಕಾಶವನ್ನು ವರ್ಷಕ್ಕೆ ಎರಡು ಬಾರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಬೇರೆ ಅಗತ್ಯಕ್ಕಾಗಿ ಒಮ್ಮೆ ಹಣ ಪಡೆದಿದ್ದರೆ, ಅದೇ ವರ್ಷದಲ್ಲಿ ಅನಾರೋಗ್ಯದ ಹೆಸರಿನಲ್ಲಿ ಮತ್ತೊಮ್ಮೆ ಮಾತ್ರ ಹಣ ಪಡೆಯಲು ಸಾಧ್ಯವಾಗುತ್ತದೆ.

ಆದರೆ, ಉನ್ನತ ಶಿಕ್ಷಣಕ್ಕಾಗಿ ಸೇವಾ ಅವಧಿಯಲ್ಲಿ ಗರಿಷ್ಠ 10 ಬಾರಿ ಹಣ ಹಿಂಪಡೆಯುವ ಅವಕಾಶ ಮುಂದುವರಿದಿದೆ. ಮನೆ ಖರೀದಿ ಅಥವಾ ದುರಸ್ತಿ ಉದ್ದೇಶಕ್ಕಾಗಿ ಇದುವರೆಗೆ 2 ಬಾರಿ ಮಾತ್ರ ಅವಕಾಶ ಇದ್ದರೆ, ಹೊಸ ನಿಯಮದಂತೆ ಅದನ್ನು 5 ಬಾರಿ ವರೆಗೆ ಹೆಚ್ಚಿಸಲಾಗಿದೆ.

ಪಿಎಫ್ ಖಾತೆಯಲ್ಲಿ ಕನಿಷ್ಠ 25% ಮೊತ್ತ ಉಳಿದಿರಬೇಕು

ಇಪಿಎಫ್-2026 ನಿಯಮಗಳ ಪ್ರಕಾರ, ಭಾಗಶಃ ಹಣ ಹಿಂಪಡೆಯುವ ವೇಳೆ ಪಿಎಫ್ ಖಾತೆಯಲ್ಲಿ ಕನಿಷ್ಠ 25% ಮೊತ್ತ ಉಳಿದಿರಬೇಕು. ಈ ಕನಿಷ್ಠ ಮೊತ್ತವನ್ನು ಲೆಕ್ಕ ಹಾಕುವಾಗ ಉದ್ಯೋಗಿಯ ಪಾಲು, ಉದ್ಯೋಗದಾತನ ಪಾಲು ಹಾಗೂ ಅದರ ಮೇಲಿನ ಬಡ್ಡಿ – ಈ ಮೂರನ್ನೂ ಸೇರಿಸಿ ಲೆಕ್ಕಿಸಲಾಗುತ್ತದೆ.

ಒಂದು ವರ್ಷದ ಸೇವೆ ಪೂರ್ಣಗೊಂಡ ಬಳಿಕವೇ ವಿತ್‌ಡ್ರಾ

ಹೊಸ ನಿಯಮದಂತೆ, ಉದ್ಯೋಗಿಯು ಇಪಿಎಫ್ ಸದಸ್ಯನಾಗಿ ಕನಿಷ್ಠ ಒಂದು ವರ್ಷದ ಸೇವೆ ಪೂರ್ಣಗೊಳಿಸಿದ ಬಳಿಕವೇ ಪಿಎಫ್ ಖಾತೆಯಿಂದ ಯಾವುದೇ ರೀತಿಯ ಭಾಗಶಃ ಹಣ ಹಿಂಪಡೆಯಲು ಅರ್ಹನಾಗುತ್ತಾನೆ. ಹೊಸ ಇಪಿಎಫ್-2026 ನಿಯಮಗಳ ಮೂಲಕ ಪಿಎಫ್ ಹಣದ ಬಳಕೆಯನ್ನು ಹೆಚ್ಚು ನಿಯಂತ್ರಿತಗೊಳಿಸುವ ಜೊತೆಗೆ, ನಿವೃತ್ತಿ ಉಳಿತಾಯವನ್ನು ಸುರಕ್ಷಿತವಾಗಿಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ವರ್ಷಕ್ಕೆ ಹಣ ಹಿಂಪಡೆಯುವ ಮಿತಿಯನ್ನು ನಿಗದಿಪಡಿಸುವುದು, ಖಾತೆಯಲ್ಲಿ ಕನಿಷ್ಠ 25% ಮೊತ್ತ ಕಡ್ಡಾಯವಾಗಿ ಉಳಿಯುವಂತೆ ಮಾಡುವುದು ಹಾಗೂ ಒಂದು ವರ್ಷದ ಸೇವೆಯ ನಂತರವೇ ವಿತ್‌ಡ್ರಾಗೆ ಅವಕಾಶ ನೀಡುವುದು ಈ ಹೊಸ ನಿಯಮಗಳ ಪ್ರಮುಖ ಅಂಶಗಳಾಗಿವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಖಾಲಿ ಇರುವ ಮದ್ಯದ ಸನ್ನದುಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಲು ಮುಂದಾದ ಸರ್ಕಾರBIG NEWS : ರಾಜ್ಯದ ದೇವಸ್ಥಾನಗಳಲ್ಲಿ ಸಿನಿಮಾ/ಧಾರಾವಾಹಿ ಶೂಟಿಂಗ್‌’ಗೆ ಶುಲ್ಕ ಎಷ್ಟು ? ಇಲ್ಲಿದೆ ದರಪಟ್ಟಿBREAKING: ಮೈಸೂರು ಹಾಗೂ ಚಿಕ್ಕಮಗಳೂರು ಕೋರ್ಟ್ ಗಳಿಗೆ ಬಾಂಬ್​​ ಬೆದರಿಕೆ: 3 ಗಂಟೆಯೊಳಗೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಕೆವಿಧಾನಪರಿಷತ್ ಅಡ್ಡಮತದಾನ ಕೇವಲ ಚುನಾವಣಾ ಸೋಲಲ್ಲ; ಅದು ಬಿಜೆಪಿ – ಜೆಡಿಎಸ್ ಮೈತ್ರಿಯ ಭವಿಷ್ಯದ ಪ್ರಶ್ನೆ30 ವರ್ಷಗಳ ಬಳಿಕ ಮತ್ತೆ ತೆರೆಗೆ ‘ಅಮೆರಿಕಾ ಅಮೆರಿಕಾ’ ; ನಾಗತಿಹಳ್ಳಿ ಚಂದ್ರಶೇಖರ್‌’ರಿಂದ ಸೀಕ್ವೆಲ್ ಘೋಷಣೆಕಲ್ಲು ಕ್ವಾರಿ ದುರಂತ ಪ್ರಕರಣ: ಕಾರ್ಮಿಕರ ಜೀವ ರಕ್ಷಣೆ ಮಾಲೀಕರ ಕರ್ತವ್ಯ: ನಿಯಮ ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಕಠಿಣ ಕ್ರಮ: ಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆಕನ್ನಡಿಗರಿಗೆ ಗುಡ್ ನ್ಯೂಸ್ ಬೆಂಗಳೂರಿನಿಂದ ಉದಯಪುರಕ್ಕೆ ಆಕಾಸಾ ಏರ್‌ನ ನೇರ ವಿಮಾನ ಸೇವೆ ಆರಂಭ: ಪ್ರಯಾಣ ಇನ್ನಷ್ಟು ಸುಲಭBREAKING: 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಭಾರತಕ್ಕೆ ಜಪಾನ್ ಪ್ರಧಾನಿ ಸನೇ ತಕೈಚಿ ಭೇಟಿ: ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ಸ್ವಾಗತ: ಇಂದು ಮೋದಿ ಜೊತೆ 16ನೇ ವಾರ್ಷಿಕ ಶೃಂಗಸಭೆಪ್ರತಿದಿನ ಒಂದೇ ಇಡ್ಲಿ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಒಮ್ಮೆ ಟ್ರೈ ಮಾಡಿ ಪೌಷ್ಟಿಕಾಂಶಯುಕ್ತ ಸ್ಟಫ್ಡ್ ಪಾಲಕ್ ಇಡ್ಲಿ!