LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING : ಅ.1 ರಿಂದ LPG ಗ್ರಾಹಕರಿಗೆ 'ಆಧಾರ್ ಇ-ಕೆವೈಸಿ' ಕಡ್ಡಾಯ : ಇಲ್ಲದಿದ್ದರೆ ಸಿಗಲ್ಲ ಗ್ಯಾಸ್ ಸಿಲಿಂಡರ್

ಬೆಂಗಳೂರು: ದೇಶಾದ್ಯಂತ ಇರುವ ಎಲ್‌ಪಿಜಿ (LPG) ಸಿಲಿಂಡರ್ ಬಳಕೆದಾರರಿಗೆ ತೈಲ ಕಂಪನಿಗಳು ಪ್ರಮುಖ ಸೂಚನೆಯೊಂದನ್ನು ನೀಡಿದ್ದು, ಅಕ್ಟೋಬರ್ 01 ರಿಂದ ಗ್ಯಾಸ್ ಬುಕ್ಕಿಂಗ್ ಮಾಡಲು ಆಧಾರ್ ಇ-ಕೆವೈಸಿ (e-KYC) ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಬ್ಸಿಡಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಅಕ್ರಮ ಬಳಕೆಗೆ ತಡೆಹಾಕಲು ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

ಕೋಟಿಗಟ್ಟಲೆ ಗ್ರಾಹಕರಿಂದ ಬಾಕಿ ಇದೆ ಇ-ಕೆವೈಸಿ: ವರದಿಗಳ ಪ್ರಕಾರ, ದೇಶದಲ್ಲಿ ಇದುವರೆಗೂ ಒಟ್ಟು 27.43 ಕೋಟಿ ಗ್ರಾಹಕರು ಮಾತ್ರ ತಮ್ಮ ಆಧಾರ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಆದರೆ, ಇನ್ನು ಸುಮಾರು 3.16 ಕೋಟಿ ಜನರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇ-ಕೆವೈಸಿ ಮಾಡಿಸಲು ಗ್ರಾಹಕರಿಗೆ ಅನುಕೂಲವಾಗುವಂತೆ ತೈಲ ಸಂಸ್ಥೆಗಳು ಹಲವು ಸುಲಭ ಆಯ್ಕೆಗಳನ್ನು ಒದಗಿಸಿವೆ.

ಮನೆಯಲ್ಲೇ ಕುಳಿತು ಅಥವಾ ಡೆಲಿವರಿ ಬಾಯ್ ಬಳಿ ಇ-ಕೆವೈಸಿ ಮಾಡಲು ಅವಕಾಶ: ಗ್ರಾಹಕರು ಇ-ಕೆವೈಸಿಗಾಗಿ ಸುಲಭವಾಗಿ ಅನುಸರಿಸಬಹುದಾದ ಮೂರು ಮುಖ್ಯ ಮಾರ್ಗಗಳು ಇಲ್ಲಿವೆ:

  • ಡೆಲಿವರಿ ವೇಳೆ ಸಿಲಿಂಡರ್ ಪೂರೈಕೆದಾರರ ಬಳಿ: ನಿಮ್ಮ ಮನೆಗೆ ಸಿಲಿಂಡರ್ ಡೆಲಿವರಿ ಮಾಡಲು ಬರುವ ವ್ಯಕ್ತಿಯ ಬಳಿ ಇರುವ ಮೊಬೈಲ್ ಆ್ಯಪ್‌ನಲ್ಲಿ ಬೆರಳಚ್ಚು (ಬಯೋಮೆಟ್ರಿಕ್) ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ಕ್ಷಣಾರ್ಧದಲ್ಲಿ ಮುಗಿಸಬಹುದು.

  • ಗ್ಯಾಸ್ ಏಜೆನ್ಸಿಗೆ ನೇರ ಭೇಟಿ: ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ವಿತರಕರ (ಏಜೆನ್ಸಿ) ಕಚೇರಿಗೆ ನೇರವಾಗಿ ತೆರಳಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು.

  • ಮೊಬೈಲ್ ಆ್ಯಪ್ ಮೂಲಕ ಸೆಲ್ಫ್ ಇ-ಕೆವೈಸಿ: ಗ್ರಾಹಕರು ತಮ್ಮ ಮೊಬೈಲ್‌ನಲ್ಲೇ ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದು. ಇಂಡಿಯನ್ ಆಯಿಲ್ ಬಳಕೆದಾರರು ‘Indian Oil One’, ಭಾರತ್ ಗ್ಯಾಸ್ ಬಳಕೆದಾರರು ‘Hello BPCL’ ಹಾಗೂ ಹೆಚ್‌ಪಿ ಬಳಕೆದಾರರು ‘HP Pay’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮನೆಯಲ್ಲೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸಬಹುದು.

ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ರಹಿತ ಮಾರುಕಟ್ಟೆ ದರ ಅನ್ವಯ: ಒಂದು ವೇಳೆ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಗ್ಯಾಸ್ ಪಡೆಯುವುದು ಬೇಡವಾದಲ್ಲಿ, ತಮಗೆ ಮೊಬೈಲ್ ಆ್ಯಪ್ ಅಥವಾ ಬಯೋಮೆಟ್ರಿಕ್ ಇ-ಕೆವೈಸಿ ಅಗತ್ಯವಿಲ್ಲ ಎಂದು ಸ್ವಯಂ ಘೋಷಿಸಬೇಕಾಗುತ್ತದೆ. ಇ-ಕೆವೈಸಿ/ಬಯೋಮೆಟ್ರಿಕ್ ನೀಡದ ಅಥವಾ ಸಬ್ಸಿಡಿ ಬೇಡವೆಂದು ತಿಳಿಸುವ ಗ್ರಾಹಕರು ಇನ್ಮುಂದೆ ಗ್ಯಾಸ್ ಸಿಲಿಂಡರ್‌ಗಳನ್ನು ಸಬ್ಸಿಡಿ ರಹಿತವಾಗಿ, ಸಂಪೂರ್ಣ ಮಾರುಕಟ್ಟೆ ದರದಲ್ಲೇ ಖರೀದಿಸಬೇಕಾಗುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಕಸ್ತೂರಿ ರಂಗನ್ ವರದಿ ವಿರೋಧಿಸಿ 'ಶೃಂಗೇರಿ ಬಂದ್'ಗೆ ಕರೆಮುಪ್ಪಾನೆಯಲ್ಲಿ ಪ್ರವಾಸಿಗರ ಅಕ್ರಮ ಚಟುವಟಿಕೆ: ಈ ಖಡಕ್ ಎಚ್ಚರಿಕೆ ಕೊಟ್ಟ ಕಾರ್ಗಲ್ ವೈಲ್ಟ್ ಲೈಫ್ RFO ನವೀನ್ ಕುಮಾರ್BREAKING : ಡಿಜೆ ಸದ್ದಿಗೆ ಮಗು ಅಸ್ವಸ್ಥ : ರಾಯಚೂರು ಡಿಸಿ ನಿವಾಸದ ಮುಂದೆ ತಂದೆಯಿಂದ ಪ್ರತಿಭಟನೆ!Rain in Karnataka : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ: 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಅರೆಸ್ಟ್ : ವಿಜಯಪುರ ಪೋಲೀಸರ ಆಂಟಿ ರೌಡಿ ಸ್ಕ್ವಾಡ್ ಕಾರ್ಯಾಚರಣೆ ಯಶಸ್ವಿಬೆಂಗಳೂರಲ್ಲಿ ಸುಟ್ಟ ಸ್ಥಿತಿಯಲ್ಲಿ 'KSRP' ಕಾನ್ಸ್ಟೇಬಲ್ ಶವ ಪತ್ತೆ : ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ!ಬೆಂಗಳೂರಲ್ಲಿ 'BDA ಜಾಗ'ದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರೋರಿಗೆ ಗುಡ್ ನ್ಯೂಸ್BIG NEWS : ಬೆಂಗಳೂರಲ್ಲಿ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆದಿದ್ದ ಇಬ್ಬರು ಪುಡಿರೌಡಿಗಳು ಅರೆಸ್ಟ್!BREAKING : ಬೆಂಗಳೂರಲ್ಲಿ ಎಸ್.ಪಿ ಕಚೇರಿಯ 3ನೇ ಮಹಡಿಯಿಂದ ಜಿಗಿದು ಪೋಕ್ಸೋ ಪ್ರಕರಣದ ಆರೋಪಿ ಆತ್ಮಹತ್ಯೆ!BREAKING : ಅ.1 ರಿಂದ LPG ಗ್ರಾಹಕರಿಗೆ 'ಆಧಾರ್ ಇ-ಕೆವೈಸಿ' ಕಡ್ಡಾಯ : ಇಲ್ಲದಿದ್ದರೆ ಸಿಗಲ್ಲ ಗ್ಯಾಸ್ ಸಿಲಿಂಡರ್