LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೋಟ್ಯಂತರ EPF ಸದಸ್ಯರಿಗೆ ಬಂಪರ್ ಗುಡ್ ನ್ಯೂಸ್ ಜುಲೈ 15ಕ್ಕೆ ₹1.44 ಲಕ್ಷ ಕೋಟಿ PF ಬಡ್ಡಿ ಖಾತೆಗೆ ಜಮೆ

ಬೆಂಗಳೂರು: ದೇಶಾದ್ಯಂತ ಇರುವ ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ನಿಗದಿಪಡಿಸಲಾಗಿರುವ ಶೇಕಡಾ 8.25ರಷ್ಟು ಬಡ್ಡಿ ಹಣ ನಿಮ್ಮ ಖಾತೆಗೆ ಯಾವಾಗ ಜಮೆಯಾಗಲಿದೆ ಎಂದು ಕಾಯುತ್ತಿದ್ದವರಿಗೆ ಕೊನೆಗೂ ಅಧಿಕೃತ ಡೇಟ್ ಸಿಕ್ಕಿದೆ. ಜುಲೈ 15ರೊಳಗೆ ದೇಶದ ಸುಮಾರು 34 ಕೋಟಿ ಪಿಎಫ್ ಖಾತೆದಾರರ ಅಕೌಂಟ್‌ಗೆ ಬಡ್ಡಿ ಹಣ ನೇರವಾಗಿ ವರ್ಗಾವಣೆಯಾಗಲಿದೆ

ಈ ಬಾರಿ ಒಟ್ಟು 1.44 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಇಪಿಎಫ್‌ಒ ಬಿಡುಗಡೆ ಮಾಡುತ್ತಿದ್ದು, ಉದ್ಯೋಗಿಗಳಿಗೆ ನೇರ ಲಾಭ ಸಿಗಲಿದೆ. ಇದರೊಂದಿಗೆ ಗ್ರಾಹಕರಿಗೆ ಇನ್ಮುಂದೆ ವೇಗದ ಸೇವೆ ಒದಗಿಸಲು ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು (Centralized IT System) ಜಾರಿಗೆ ತರಲಾಗುತ್ತಿದೆ.

ಪಿಎಫ್ ಬಡ್ಡಿ ಜಮೆಯಾಗಿರುವುದನ್ನು ತಿಳಿಯುವುದು ಹೇಗೆ?

ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ಮನೆಯಲ್ಲೇ ಕುಳಿತು ಪರಿಶೀಲಿಸಲು ಇಪಿಎಫ್‌ಒ ಅತ್ಯಂತ ಸುಲಭವಾದ 4 ವಿಧಾನಗಳನ್ನು ಪರಿಚಯಿಸಿದೆ:

ಉಮಂಗ್ ಆ್ಯಪ್ (UMANG App): ಉಮಂಗ್ ಆ್ಯಪ್ ಓಪನ್ ಮಾಡಿ, ಅಲ್ಲಿ EPFO ವಿಭಾಗಕ್ಕೆ ಹೋಗಿ ನಿಮ್ಮ ಪಿಎಫ್ ಖಾತೆಯ ಸ್ಟೇಟ್‌ಮೆಂಟ್ (Passbook) ಪರಿಶೀಲಿಸಬಹುದು.

ಇಪಿಎಫ್‌ಒ ಪೋರ್ಟಲ್ (EPFO Portal): ಅಧಿಕೃತ ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಯುಎಎನ್ (UAN) ಸಂಖ್ಯೆ ಹಾಗೂ ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗುವ ಮೂಲಕ ಪಾಸ್‌ಬುಕ್ ಸ್ಥಿತಿಯನ್ನು ಚೆಕ್ ಮಾಡಬಹುದು.

ಎಸ್ಎಂಎಸ್ ಸೌಲಭ್ಯ (SMS Service): ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ EPFOHO UAN KAN ಎಂದು ಟೈಪ್ ಮಾಡಿ (ಕೊನೆಯ ಮೂರು ಅಕ್ಷರಗಳು ಕನ್ನಡ ಭಾಷೆಗಾಗಿ) 7738299899 ಸಂಖ್ಯೆಗೆ ಸಂದೇಶ ಕಳುಹಿಸಿದರೆ ಸಾಕು, ನಿಮ್ಮ ಬ್ಯಾಲೆನ್ಸ್ ವಿವರ ಮೊಬೈಲ್‌ಗೆ ಬರುತ್ತದೆ.

ಮಿಸ್ಡ್ ಕಾಲ್ ಸೇವೆ (Missed Call Service): ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ತಿಳಿಯಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ, ತಕ್ಷಣವೇ ನಿಮ್ಮ ಖಾತೆಯ ವಿವರಗಳ ಎಸ್‌ಎಂಎಸ್ ಲಭ್ಯವಾಗುತ್ತದೆ.

ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆ

ಇಪಿಎಫ್‌ಒ ಜಾರಿಗೆ ತರುತ್ತಿರುವ ಈ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ, ದೇಶಾದ್ಯಂತ ಇರುವ ಎಲ್ಲಾ ಪಿಎಫ್ ಖಾತೆಗಳ ಮಾಹಿತಿಯು ಒಂದೇ ಕೇಂದ್ರೀಕೃತ ಡೇಟಾಬೇಸ್‌ನಲ್ಲಿ ಸಂಗ್ರಹವಾಗಲಿದೆ. ಇದರ ದೊಡ್ಡ ಅನುಕೂಲವೆಂದರೆ, ಪಿಎಫ್ ಸದಸ್ಯರು ದೇಶದ ಯಾವುದೇ ಮೂಲೆಯಲ್ಲಿದ್ದರೂ, ಯಾವುದೇ ಇಪಿಎಫ್‌ಒ ಕಚೇರಿಯಿಂದಲಾದರೂ ತಕ್ಷಣವೇ ವೇಗದ ಸೇವೆಗಳನ್ನು ಪಡೆದುಕೊಳ್ಳಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ