LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಲ್ಲು ಅರ್ಜುನ್ ಸಿಗ್ನೇಚರ್ ಸ್ಟೆಪ್ ಇನ್ನು ‘ರಾಕಾ’ ಟೀಮ್ ಸ್ವತ್ತು: ಕಾಪಿ ಮಾಡಿದರೆ ಬೀಳುತ್ತೆ ಕಾನೂನು ಬಲೆ!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ ‘ರಾಕಾ’ (Raaka) ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಈ ನಡುವೆ ಚಿತ್ರತಂಡವು ಒಂದು ವಿನೂತನ ಹೆಜ್ಜೆ ಇರಿಸಿದ್ದು, ಈ ಸಿನಿಮಾದಲ್ಲಿರುವ ಅಲ್ಲು ಅರ್ಜುನ್ ಅವರ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್ಸ್ ಮತ್ತು ವಿಶಿಷ್ಟ ಮ್ಯಾನರಿಸಂಗಳನ್ನು ಅನಧಿಕೃತ ಬಳಕೆಯಿಂದ ರಕ್ಷಿಸಲು ಮುಂದಾಗಿದೆ.

ಏನಿದು ಹೊಸ ತಂತ್ರ? ಸಾಮಾನ್ಯವಾಗಿ ಸಿನಿಮಾದ ಹಾಡು ಅಥವಾ ಕಥೆಯನ್ನು ಕಾಪಿ ಮಾಡದಂತೆ ಹಕ್ಕುಸ್ವಾಮ್ಯ (Copyright) ಪಡೆಯಲಾಗುತ್ತದೆ. ಆದರೆ, ‘ರಾಕಾ’ ಚಿತ್ರತಂಡವು ಒಂದು ಹೆಜ್ಜೆ ಮುಂದೆ ಹೋಗಿ ಅಲ್ಲು ಅರ್ಜುನ್ ಅವರ ನೃತ್ಯದ ಶೈಲಿ ಮತ್ತು ಅವರು ಮಾಡುವ ವಿಶೇಷ ಸಜ್ಞೆಗಳನ್ನು (Gestures) ವಾಣಿಜ್ಯ ಉದ್ದೇಶಕ್ಕಾಗಿ ಯಾರೂ ಬಳಸದಂತೆ ಕಾನೂನು ರಕ್ಷಣೆ ಪಡೆಯಲು ಯೋಜಿಸಿದೆ. ‘ಪುಷ್ಪ’ ಚಿತ್ರದ ಶ್ರೀವಲ್ಲಿ ಸ್ಟೆಪ್ ಮತ್ತು ಗಡ್ಡದ ಕೆಳಗೆ ಕೈ ಸವರುವ ಮ್ಯಾನರಿಸಂ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿತ್ತು. ಇದನ್ನು ಹಲವು ಕಂಪನಿಗಳು ತಮ್ಮ ಜಾಹೀರಾತುಗಳಲ್ಲಿ ಮತ್ತು ಪ್ರಚಾರಗಳಲ್ಲಿ ಬಳಸಿಕೊಂಡಿದ್ದವು. ಇಂತಹ ಘಟನೆಗಳು ಮರುಕಳಿಸಬಾರದು ಎಂಬುದು ಚಿತ್ರತಂಡದ ಉದ್ದೇಶ.

ವ್ಯಕ್ತಿತ್ವದ ಹಕ್ಕುಗಳ ರಕ್ಷಣೆ (Personality Rights) ಈ ನಿರ್ಧಾರದ ಬೆನ್ನಲ್ಲೇ ಅಲ್ಲು ಅರ್ಜುನ್ ಅವರು ಇತ್ತೀಚೆಗೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು, ತಮ್ಮ ವ್ಯಕ್ತಿತ್ವದ ಹಕ್ಕುಗಳಾದ ಧ್ವನಿ, ಮುಖದ ಚಿತ್ರಣ ಮತ್ತು ಗುರುತನ್ನು ಅನಧಿಕೃತವಾಗಿ ಬಳಸದಂತೆ ರಕ್ಷಣೆ ಕೋರಿದ್ದಾರೆ. ಎಐ (AI) ತಂತ್ರಜ್ಞಾನ ಬಳಸಿ ಅವರ ಧ್ವನಿ ಅಥವಾ ಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಈ ಕಾನೂನು ಹೋರಾಟ ಸಹಕಾರಿಯಾಗಲಿದೆ.

ಬ್ರ್ಯಾಂಡಿಂಗ್ ಮೇಲೆ ಕಣ್ಣು ‘ರಾಕಾ’ ಚಿತ್ರದ ಪಾತ್ರದ ಸ್ಟೈಲಿಂಗ್ ಮತ್ತು ಚಲನವಲನಗಳಿಗೆ ಪ್ರತ್ಯೇಕ ಬ್ರ್ಯಾಂಡ್ ಮೌಲ್ಯ ನೀಡಲು ತಂಡ ಮುಂದಾಗಿದೆ. ಅನಧಿಕೃತ ಅಭಿಯಾನಗಳು ಅಥವಾ ಜಾಹೀರಾತುಗಳಲ್ಲಿ ಈ ಸಿಗ್ನೇಚರ್ ಸ್ಟೆಪ್‌ಗಳನ್ನು ಬಳಸಿ ಹಣ ಗಳಿಸುವುದನ್ನು ತಡೆಯುವುದು ಇದರ ಮುಖ್ಯ ಗುರಿ. ಅಟ್ಲಿ ನಿರ್ದೇಶನದ ಈ ಚಿತ್ರವು ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದ್ದು, ಪ್ರಚಾರದ ವಿಷಯದಲ್ಲೂ ಹೊಸ ಹಾದಿ ತುಳಿಯುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ