LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿತ್ರರಂಗದಲ್ಲಿ ವಯಸ್ಸಿನ ತಾರತಮ್ಯದ ಬಗ್ಗೆ ತಾಪ್ಸಿ ಪನ್ನು ಮುಕ್ತ ಮಾತು: ಸೀನಿಯರ್ಸ್ ಜೊತೆ ನಟಿಸಿದರೆ ಕಿರಿಯ ನಟರು ದೂರ ಇರುತ್ತಿದ್ದರು ಎಂದ ನಟಿ

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಅಭಿನಯದ ಮೂಲಕ ಗುರುತಿಸಿಕೊಂಡಿರುವ ನಟಿ ತಾಪ್ಸಿ ಪನ್ನು ಸದಾ ನೇರ ನಡೆ ನುಡಿಗೆ ಹೆಸರಾದವರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿರುವ ವಯಸ್ಸಿನ ತಾರತಮ್ಯದ (Ageism) ಬಗ್ಗೆ ಗಂಭೀರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಸಿನಿ ಪಯಣದ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ತಾಪ್ಸಿ, ಚಿತ್ರರಂಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲೇ ತಮಗೆ ರೋಮ್ಯಾಂಟಿಕ್ ಕಾಮಿಡಿ ಸಿನಿಮಾಗಳಲ್ಲಿ ನಟಿಸಲು ವಯಸ್ಸು ಸಾಲದು ಎಂಬ ಮಾತುಗಳು ಕೇಳಿಬಂದಿದ್ದವು ಎಂದು ಹೇಳಿದ್ದಾರೆ.

ತಾಪ್ಸಿ ಪನ್ನು ಅವರ ಹೇಳಿಕೆಯ ಪ್ರಕಾರ, ಅವರು ತಮ್ಮ ಇಪ್ಪತ್ತರ ಹರೆಯದ ಮಧ್ಯಭಾಗದಲ್ಲಿ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಮೂರ್ನಾಲ್ಕು ವರ್ಷಗಳ ಕಾಲ ಉತ್ತಮ ಪಾತ್ರಗಳಿಗಾಗಿ ಹೋರಾಡಿ, ಚಿತ್ರರಂಗದಲ್ಲಿ ಒಂದು ಸ್ಥಾನವನ್ನು ಕಂಡುಕೊಳ್ಳುವಷ್ಟರಲ್ಲಿ ಅವರಿಗೆ 30 ವರ್ಷ ದಾಟಿತ್ತು. ಈ ಹಂತ ತಲುಪಿದ ತಕ್ಷಣ, ಪ್ರೇಮಕಥೆ ಆಧಾರಿತ ಸಿನಿಮಾಗಳಿಗೆ ನಾಯಕಿಯಾಗಲು ವಯಸ್ಸು ಹೆಚ್ಚಾಯಿತು ಎಂಬ ಕಾರಣ ನೀಡಿ ಅವಕಾಶಗಳಿಂದ ದೂರ ಇಡಲಾಗುತ್ತಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪುರುಷ ನಟರಿಗೆ ಇಲ್ಲದ ನಿಯಮ ನಟಿಯರಿಗೆ ಮಾತ್ರ ಏಕೆ?

ಚಿತ್ರರಂಗದಲ್ಲಿ ವಯಸ್ಸಿನ ವಿಚಾರವಾಗಿ ಕೇವಲ ಮಹಿಳಾ ಕಲಾವಿದರನ್ನು ಮಾತ್ರ ಗುರಿ ಮಾಡಲಾಗುತ್ತದೆ ಎಂದು ತಾಪ್ಸಿ ಆಕ್ಷೇಪಿಸಿದ್ದಾರೆ. ಕೆಲವು ಪಾತ್ರಗಳಿಗೆ ಕಿರಿಯ ವಯಸ್ಸಿನ ನಟಿಯರ ಅಗತ್ಯವಿಲ್ಲದಿದ್ದರೂ, ಚಿತ್ರತಂಡಗಳು ಕಿರಿಯರನ್ನೇ ಹುಡುಕುತ್ತವೆ. ಆದರೆ ಇದೇ ನಿಯಮ ಪುರುಷ ನಟರಿಗೆ ಅನ್ವಯಿಸುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದ ಅನುಭವ ಬಿಚ್ಚಿಟ್ಟ ನಟಿ

ಹಿಂದಿ ಚಿತ್ರರಂಗದ ಜೊತೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿರುವ ತಾಪ್ಸಿ, ಅಲ್ಲೂ ವಿಭಿನ್ನ ರೀತಿಯ ತಾರತಮ್ಯವನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಸೌತ್ ಸಿನಿಮಾಗಳಲ್ಲಿ ಒಮ್ಮೆ ಹಿರಿಯ ನಟರ ಜೊತೆ ನಟಿಸಿದರೆ, ಕಿರಿಯ ನಟರು ತಮ್ಮೊಂದಿಗೆ ಸ್ಕ್ರೀನ್ ಶೇರ್ ಮಾಡಲು ಹಿಂಜರಿಯುತ್ತಿದ್ದರು. ಸೀನಿಯರ್ ನಟರ ಜೊತೆ ನಟಿಸಿದ ನಾಯಕಿಯ ಜೊತೆ ನಟಿಸಲು ಯುವ ನಟರು ಸಿದ್ಧರಿರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರೊಂದಿಗೆ ‘ಡಂಕಿ’ ಸಿನಿಮಾದಲ್ಲಿ ನಟಿಸಿದ ಅನುಭವವನ್ನು ಹಂಚಿಕೊಂಡ ಅವರು, ಹಿಂದಿ ಚಿತ್ರರಂಗದಲ್ಲಿ ಶಾರುಖ್ ಅವರಂತಹ ಹಿರಿಯ ನಟರ ಜೊತೆ ನಟಿಸಿದರೆ ನಟಿಯರ ವೃತ್ತಿಜೀವನವೇ ಬದಲಾಗುತ್ತದೆ. ಆದರೆ ದಕ್ಷಿಣದಲ್ಲಿ ಹಿರಿಯ ನಟರ ಜೊತೆ ನಟಿಸಿದರೆ ಕಿರಿಯ ನಟರು ದೂರ ಇಡುತ್ತಿದ್ದರು ಎಂಬ ತಾರತಮ್ಯದ ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗಷ್ಟೇ ಅನುಭವ್ ಸಿನ್ಹಾ ನಿರ್ದೇಶನದ ‘ಅಸ್ಸಿ’ ಚಿತ್ರದಲ್ಲಿ ಕನಿ ಕುಸ್ರುತಿ, ರೇವತಿ, ಮನೋಜ್ ಪಹ್ವಾ ಮುಂತಾದ ಹೆಸರಾಂತ ಕಲಾವಿದರ ಜೊತೆ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ