LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸತತ ಏರಿಕೆಯ ಬೆನ್ನಲ್ಲೇ ಆಭರಣ ಪ್ರಿಯರಿಗೆ ಸಿಕ್ತು ಬಿಗ್ ರಿಲೀಫ್; ಅಪರಂಜಿ ಚಿನ್ನದ ಇಂದಿನ ಲೇಟೆಸ್ಟ್ ದರಪಟ್ಟಿ ಇಲ್ಲಿದೆ

ಬೆಂಗಳೂರು: ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಸತತವಾಗಿ ಮೂರು ದಿನಗಳ ಕಾಲ ರಾಕೆಟ್ ವೇಗದಲ್ಲಿ ಏರಿಕೆ ಕಂಡು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದ ಬಂಗಾರದ ದರಕ್ಕೆ ಮಂಗಳವಾರ ಕೊನೆಗೂ ಕೊಂಚ ಬ್ರೇಕ್ ಬಿದ್ದಿದೆ ಕಳೆದ ಮೂರೇ ಸೆಷನ್‌ಗಳಲ್ಲಿ ಸುಮಾರು ₹8,000 ರಷ್ಟು ದುಬಾರಿಯಾಗಿದ್ದ ಹಳದಿ ಲೋಹವು, ಇವತ್ತು ದಿಢೀರ್ ಆಗಿ ಅಲ್ಪ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಕೊಂಚ ನಿರಾಳ ತಂದಿದೆ

ಆದರೆ ಜಾಗತಿಕ ಮಾರುಕಟ್ಟೆ ಹಾಗೂ ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆ ಇನ್ನೂ ಭರ್ಜರಿ ಏರಿಕೆಯ ಹಾದಿಯಲ್ಲೇ ಸಾಗುತ್ತಿದೆ ಇನ್ನೊಂದೆಡೆ, ಸದಾ ಹಾವೇಣಿಯಂತೆ ಏರಿಳಿತ ಕಾಣುತ್ತಿದ್ದ ಬೆಳ್ಳಿ ಬೆಲೆಯಲ್ಲಿ ಇವತ್ತು ಯಾವುದೇ ರೀತಿಯ ಮಹತ್ತರ ವ್ಯತ್ಯಯ ಕಂಡುಬಂದಿಲ್ಲ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಕಂಪ್ಲೀಟ್ ಗೋಲ್ಡ್ & ಸಿಲ್ವರ್ ದರಪಟ್ಟಿ ಇಲ್ಲಿದೆ ನೋಡಿ

ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ? (Gold Rates Per 10 Grams)

ಮೂರು ದಿನಗಳಲ್ಲಿ ಒಟ್ಟು ₹500 ಕ್ಕೂ ಹೆಚ್ಚು ರೂಪಾಯಿಗಳಷ್ಟು (ಪ್ರತಿ ಗ್ರಾಮ್‌ಗೆ) ಭಾರಿ ಜಿಗಿತ ಕಂಡಿದ್ದ ಬಂಗಾರದ ದರ, ಇವತ್ತು ಪ್ರತಿ ಗ್ರಾಮ್‌ಗೆ ₹15 ರಷ್ಟು ತಗ್ಗಿದೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ಯದ ಅಧಿಕೃತ ದರಗಳು ಹೀಗಿವೆ:

22 ಕ್ಯಾರಟ್ ಆಭರಣ ಚಿನ್ನ: ಸದ್ಯ ದೇಶದಲ್ಲಿ 10 ಗ್ರಾಮ್‌ನ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ₹1,38,750 ಆಗಿದೆ

24 ಕ್ಯಾರಟ್ ಅಪರಂಜಿ ಚಿನ್ನ (Pure Gold): ಹೂಡಿಕೆದಾರರ ನೆಚ್ಚಿನ 24 ಕ್ಯಾರಟ್ ಪರಿಶುದ್ಧ ಚಿನ್ನದ ಬೆಲೆ 10 ಗ್ರಾಮ್‌ಗೆ ಬರೋಬ್ಬರಿ ₹1,51,370 ತಲುಪಿದೆ .

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ರೇಟ್ ಏನು?

ಬೆಂಗಳೂರು (Bengaluru): ರಾಜಧಾನಿ ಬೆಂಗಳೂರಿನಲ್ಲಿ ಇಂದು 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ₹1,38,750 ರಲ್ಲೇ ಮುಂದುವರಿದಿದೆ .ಆಭರಣ ಮಾರುಕಟ್ಟೆಯ ಇಂದಿನ ಈ ಅಲ್ಪ ಇಳಿಕೆಯು ಮುಂಬರುವ ಮದುವೆ ಸೀಸನ್‌ಗಾಗಿ ಚಿನ್ನ ಖರೀದಿಸಲು ಪ್ಲಾನ್ ಮಾಡುತ್ತಿದ್ದ ಮಧ್ಯಮ ವರ್ಗದ ಜನರಿಗೆ ಕೊಂಚ ನೆಮ್ಮದಿ ನೀಡಿದೆ

ಬೆಳ್ಳಿ ಮಾರುಕಟ್ಟೆ ಹೇಗಿದೆ?

ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದ್ದರೂ, ಬೆಳ್ಳಿ ದರ ಸ್ಥಿರತೆಯನ್ನ ಕಾಯ್ದುಕೊಂಡಿದೆ.ಬೆಂಗಳೂರು ಹಾಗೂ ದೇಶಾದ್ಯಂತ ಇಂದು 100 ಗ್ರಾಮ್ ಬೆಳ್ಳಿಯ ಬೆಲೆ ₹26,500 ರಲ್ಲೇ ಮುಂದುವರಿದಿದೆ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು ₹1,51,370

ನಾಗ್ಪುರ ₹1,51,370

ಮುಂಬೈ ₹1,51,370

ಚೆನ್ನೈ ₹1,53,380

ಕೋಲ್ಕತ್ತಾ ₹1,51,370

ಪಾಟ್ನಾ ₹1,51,420

ಸೂರತ್‌ ₹1,51,420

ಚಂಡೀಗಢ ₹1,51,520

ಲಕ್ನೋ ₹1,51,520

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ