LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆನ್ನಿನ ಮೇಲಿನ ಗಣೇಶನ ಟ್ಯಾಟೂ ವಿವಾದ “ಟ್ಯಾಟೂ ಹಾಕೋಕು ನಿಮ್ಮ ಪರ್ಮಿಷನ್ ಬೇಕಾ?” ಅಂತ ಟ್ರೋಲರ್ಸ್‌ಗೆ ಕಿಚ್ಚನ ಮಗಳು ಸಾನ್ವಿ ಸುದೀಪ್ ಫುಲ್ ಫೈರ್

ಬೆಂಗಳೂರು: ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಅವರ ಪುತ್ರಿ, ಉದಯೋನ್ಮುಖ ಗಾಯಕಿ ಸಾನ್ವಿ ಸುದೀಪ್ (Sanvi Sudeep) ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಮಗೆ ಟ್ರೋಲ್ ಮಾಡಿದ ನೆಟ್ಟಿಗರ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ ತಮ್ಮ ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡ ವಿಚಾರ ಹಾಗೂ ತಂದೆಯನ್ನು ಓಲ್ಡ್ ಮ್ಯಾನ್ ಎಂದು ಕರೆದಿದ್ದಕ್ಕೆ ತಗಾದೆ ತೆಗೆದಿದ್ದ ಟ್ರೋಲರ್ಸ್‌ಗಳಿಗೆ ಸಾನ್ವಿ ತಮ್ಮ ನಡೆಯನ್ನು ಭರ್ಜರಿಯಾಗಿ ಸಮರ್ಥಿಸಿಕೊಂಡು ಬಿಗ್ ಶಾಕ್ ನೀಡಿದ್ದಾರೆ.ತಮ್ಮ ಖಾಸಗಿ ಬದುಕಿನ ವಿಚಾರಕ್ಕೆ ಮೂಗು ತೂರಿಸಿ ವಿಕೃತ ಆನಂದ ಪಡುತ್ತಿದ್ದ ಟ್ರೋಲರ್ಸ್‌ಗಳ ಬೆಂಡೆತ್ತಿದ ಕಿಚ್ಚನ ಮಗಳು ಸಾನ್ವಿ ಸುದೀಪ್ ಬಿಚ್ಚಿಟ್ಟಿರುವ ಆಕ್ರೋಶದ ಮಾಹಿತಿ ಇಲ್ಲಿದೆ

“ಟ್ಯಾಟೂ ಹಾಕೋಕು ನಿಮ್ಮ ಪರ್ಮಿಷನ್ ಬೇಕಾ?” – ಸಾನ್ವಿ ಖಡಕ್ ಪ್ರಶ್ನೆ

ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿತ್ತು. ಇದಕ್ಕೆ ನೇರವಾಗಿ ಟ್ರೋಲರ್ಸ್ ತಲೆಗೆ ಹೊಡೆದಂತೆ ಉತ್ತರಿಸಿರುವ ಸಾನ್ವಿ, “ನಿಮ್ಮಿಂದ ಪರ್ಮಿಷನ್ ತೆಗೆದುಕೊಂಡು ನನ್ನ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಕಾ? ನನ್ನ ಪ್ರತಿ ನಿರ್ಧಾರಕ್ಕೂ ನಿಮ್ಮ ಅನುಮತಿ ಪಡೆಯಬೇಕಾ?” ಎಂದು ನೆಟ್ಟಿಗರನ್ನ ತರಾಟೆಗೆ ತಗೊಂಡಿದ್ದಾರೆ

“ನೀವೇನೇ ಕಾಮೆಂಟ್ ಮಾಡಿದರೂ ನಾನು ಕೇರ್ ಮಾಡಲ್ಲ. ಆದರೆ ನನ್ನೊಬ್ಬಳ ಬಗ್ಗೆ ಟ್ರೋಲ್ ಮಾಡಲು ಅದೆಷ್ಟು ಎನರ್ಜಿ ವೇಸ್ಟ್ ಮಾಡುತ್ತಿದ್ದೀರಲ್ಲಾ, ಅದು ಶೋಚನೀಯ” ಎಂದು ಟೀಕಾಕಾರರ ಮುಖಭಂಗ ಮಾಡಿದ್ದಾರೆ

“ನನ್ನ ಪಾಲಿಗೆ ಅವರು ಯಾವತ್ತೂ ಓಲ್ಡ್ ಮ್ಯಾನ್

ಕೆಲ ದಿನಗಳ ಹಿಂದೆ ಸಾನ್ವಿ ತಮ್ಮ ತಂದೆ ಸುದೀಪ್ ಅವರನ್ನು ಓಲ್ಡ್ ಮ್ಯಾನ್ ಎಂದು ಕರೆದಿದ್ದಕ್ಕೆ ಒಂದಿಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಗಲಾಟೆ ಎಬ್ಬಿಸಿದ್ದರು ಅದಕ್ಕೂ ಖಡಕ್ ಆಗಿ ಉತ್ತರಿಸಿರುವ ಸಾನ್ವಿ, “ನಾನು ಸುದೀಪ್ ಮಗಳು. ನನ್ನ ಪಾಲಿಗೆ ಅವರು ಯಾವತ್ತೂ ಓಲ್ಡ್ ಮ್ಯಾನ್ ಆಗಿರುತ್ತಾರೆ. ದ್ವೇಷಿಸಲು ನಿಮಗೊಂದು ಸಣ್ಣ ಕಾರಣ ಸಿಕ್ಕರೂ ಸಾಕಾಗುತ್ತದೆ. ಹೀಗೆ ಸಮಯ ವ್ಯರ್ಥ ಮಾಡುವ ಬದಲು ಒಳ್ಳೆ ಕೆಲಸಗಳಿಗೆ ನಿಮ್ಮ ಸಮಯ ವಿನಿಯೋಗಿಸಿ” ಎಂದು ಕ್ಲಾಸ್ ತಗೊಂಡಿದ್ದಾರೆ .

“ತೆರೆಯ ಹಿಂದೆ ಅವಿತು ಕುಳಿತು ಮಾತನಾಡುವ ಹೇಡಿಗಳು – ಭಾವುಕರಾದ ಕಿಚ್ಚನ ಮಗಳು

ತಮ್ಮ ಬದುಕಿನ ಕಷ್ಟಗಳನ್ನ ಬಿಚ್ಚಿಡುತ್ತಾ ಸಾನ್ವಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ:

https://www.instagram.com/p/DWint7aGjLF/?utm_source=ig_web_copy_link&igsh=NTc4MTIwNjQ2YQ==

ಅಪ್ಪನ ಬರ್ತ್‌ಡೇಗೂ ಬರಕ್ಕಾಗಲ್ಲ: “ನಿಮ್ಮ ಟ್ರೋಲ್ ಮತ್ತು ಕಿರುಕುಳದಿಂದಾಗಿ ನಮಗೆ ಅಪ್ಪನ ಹುಟ್ಟುಹಬ್ಬ ಆಚರಿಸಲು ಅಥವಾ ನಮ್ಮ ಆಪ್ತರ ಕೊನೆಯ ಕ್ಷಣಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಕುಟುಂಬವನ್ನು ನಿಮ್ಮ ಮನರಂಜನೆಗೆ ಬಳಸಿಕೊಂಡಿದ್ದೀರಿ” ಎಂದು ಬೇಸರ ಹೊರಹಾಕಿದ್ದಾರೆ

ಫೋಟೋ ಕೇಳೋರು ನೀವೇ ತಾನೇ?: “ನೀವ್ಯಾರು ಅಂತ ನನಗೆ ಗೊತ್ತಿಲ್ಲ ಅನ್ಕೋಬೇಡಿ. ತೆರೆಯ ಹಿಂದೆ ಹೇಡಿಗಳ ರೀತಿ ಅವಿತು ಕುಳಿತು ಮಾತನಾಡುವ ನೀವೇ ಅನೇಕ ಬಾರಿ ನನ್ನನ್ನು ಭೇಟಿಯಾಗಿ ನಮ್ಮ ಜೊತೆ ಫೋಟೋ ತೆಗಿಸಿಕೊಳ್ಳಲು ಕೇಳ್ತೀರಿ, ಸೋ ಸ್ಯಾಡ್” ಎಂದು ಕಾಲೆಳೆದಿದ್ದಾರೆ

ಸಾಧನೆ ಬಗ್ಗೆ ಟೀಕಿಸುವವರಿಗೆ ಉತ್ತರ: “ನಾನು ಇನ್ನೂ ಏನನ್ನೂ ಸಾಧಿಸಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ, ಆದರೆ ಅನಾಮಧೇಯ ಪ್ರೊಫೈಲ್‌ಗಳ ಹಿಂದೆ ಅಡಗಿಕೊಳ್ಳುವವರಿಗಿಂತ ನಾನು ಪ್ರಾೂಮಾಣಿಕವಾಗಿದ್ದೇನೆ” ಎಂದಿದ್ದಾರೆ

ಗಾಯಕಿಯಾಗಿ ಸಿನಿಮಾ ರಂಗದಲ್ಲಿ ಸಾನ್ವಿ ಕ್ರೇಜ್

ಯಾರು ಏನೇ ಟ್ರೋಲ್ ಮಾಡಿದ್ರೂ ಸಾನ್ವಿ ಸುದೀಪ್ ತಮ್ಮ ಗಾಯನದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗುತ್ತಿದ್ದಾರೆ.

ಹಿಟ್ ಸಾಂಗ್ಸ್: ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಸಾಂಗ್ ಹಾಡಿ ಮೋಡಿ ಮಾಡಿದ್ದ ಸಾನ್ವಿ, ಇದೀಗ ‘ಮ್ಯಾಂಗೋ ಪಚ್ಚ’ ಚಿತ್ರದ ‘ಅರಗಿಣಿಯೇ’ ಹಾಡಿಗೂ ದನಿಯಾಗಿದ್ದಾರೆ

ನಟನೆಗೆ ಎಂಟ್ರಿ?: ನಿಧಾನವಾಗಿ ಒಂದೊಂದೇ ಅವಕಾಶಗಳು ಹುಡುಕಿ ಬರುತ್ತಿದ್ದು, ಸಾನ್ವಿ ಶೀಘ್ರದಲ್ಲೇ ಬೆಳ್ಳಿಪರದೆ ಮೇಲೆ ನಟಿಯಾಗಿ ಚಿತ್ರರಂಗ ಪ್ರವೇಶಿಸುವ ಸಾಧ್ಯತೆಯೂ ದಟ್ಟವಾಗಿದೆ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ